ETV Bharat / entertainment

ತಮಿಳು ಹಿರಿಯ ಸಿನಿ ನಿರ್ಮಾಪಕ ಮುರುಳೀಧರನ್​ ಇನ್ನಿಲ್ಲ

ಕಮಲ್​ ಹಾಸನ್​, ವಿಜಯ್​ಕಾಂತ್​, ವಿಜಯ್​, ಅಜಿತ್​, ಧನುಶ್​ ಮತ್ತು ಇತರ ಅನೇಕ ದೊಡ್ಡ ಸ್ಟಾರ್​ಗಳ ಜೊತೆ ಮುರುಳೀಧರನ್​ ಕಾರ್ಯ ನಿರ್ವಹಿಸಿದ್ದಾರೆ.

author img

By

Published : Dec 2, 2022, 5:00 PM IST

ಹಿರಿಯ ಸಿನಿ ನಿರ್ಮಾಪಕ ಮುರುಳೀಧರನ್​ ಇನ್ನಿಲ್ಲ
http://10.10.50.85:6060/reg-lowres/02-December-2022/17083978_thumbnail_3x2_muralidharan_0212newsroom_1669976789_104.png

ಚೆನ್ನೈ: ತಮಿಳು ಚಿತ್ರೋದ್ಯಮದ ಪ್ರಖ್ಯಾತ ನಿರ್ಮಾಪಕ, ಲಕ್ಷ್ಮೀ ಮೂವಿ ಮೇಕರ್​ ಪ್ರೊಡಕ್ಷನ್​ ಸಂಸ್ಥೆಯ ಕಾರ್ಯದರ್ಶಿಯಲ್ಲೊಬ್ಬರಾಗಿರುವ ಕೆ ಮುರುಳೀಧರನ್​(65) ಹೃದಾಯಘಾತದಿಂದ ಸಾವನ್ನಪ್ಪಿದ್ದಾರೆ. ಗುರುವಾರ ಅವರು ಕುಂಭಕೋಣಂನ ನಚಿಯಾರ್​ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಮುರಳೀಧರ್​ ಪ್ರಮುಖ ನಿರ್ಮಾಪಕರಾಗಿದ್ದರು. 'ಅನ್ಬೆ ಶಿವಂ' ಮತ್ತು 'ಪಧುಪೆಟ್ಟಾಯಿ'ಯಂತಹ ಅನೇಕ ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 1944ರಲ್ಲಿ ತಮ್ಮ ನಿರ್ಮಾಣ ವೃತ್ತಿ ಆರಂಭಿಸಿದ ಅವರು, ಮೊದಲಿಗೆ ಅರ್ನಂನಯಿ ಕವಾಲನ್​ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ವೇಣುಗೋಪಾಲ್​ ಮತ್ತು ಸ್ವಾಮಿನಾಥನ್​ ಜೊತೆ ಇವರು ಕೂಡ ಲಕ್ಷ್ಮಿ ಮೂವಿ ಮೇಕರ್​ ಪ್ರೊಡಕ್ಷನ್​ ಸಂಸ್ಥೆ ಪಾಲುದಾರರಾಗಿದ್ದರು. ಕಮಲ್​ ಹಾಸನ್​ ಜೊತೆ 'ಅನ್ಬೆ ಶಿವಂ', ಧನುಶ್​ ಜೊತೆ 'ಪುಧುಪೆಟ್ಟಾಯಿ', ಕಾರ್ತಿಕ್​ ಜೊತೆ 'ಗೋಕುಲತೈಲ್​ ಸೆಥೈ' ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದರು.

ಕಮಲ್​ ಹಾಸನ್​, ವಿಜಯ್​ಕಾಂತ್​, ವಿಜಯ್​, ಅಜಿತ್​, ಧನುಶ್​ ಮತ್ತು ಇತರೆ ಅನೇಕ ದೊಡ್ಡ ಸ್ಟಾರ್​ಗಳ ಜೊತೆ ಮುರುಳೀಧರನ್​ ಕಾರ್ಯ ನಿರ್ವಹಿಸಿದ್ದಾರೆ. ಮುರಳೀಧರನ್​ ಸಾವಿಗೆ ಚಿತ್ರತಂಡ, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಒಡಿಯಾ ನಟಿ ಜರಾನಾ ದಾಸ್ ನಿಧನ

ಚೆನ್ನೈ: ತಮಿಳು ಚಿತ್ರೋದ್ಯಮದ ಪ್ರಖ್ಯಾತ ನಿರ್ಮಾಪಕ, ಲಕ್ಷ್ಮೀ ಮೂವಿ ಮೇಕರ್​ ಪ್ರೊಡಕ್ಷನ್​ ಸಂಸ್ಥೆಯ ಕಾರ್ಯದರ್ಶಿಯಲ್ಲೊಬ್ಬರಾಗಿರುವ ಕೆ ಮುರುಳೀಧರನ್​(65) ಹೃದಾಯಘಾತದಿಂದ ಸಾವನ್ನಪ್ಪಿದ್ದಾರೆ. ಗುರುವಾರ ಅವರು ಕುಂಭಕೋಣಂನ ನಚಿಯಾರ್​ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಮುರಳೀಧರ್​ ಪ್ರಮುಖ ನಿರ್ಮಾಪಕರಾಗಿದ್ದರು. 'ಅನ್ಬೆ ಶಿವಂ' ಮತ್ತು 'ಪಧುಪೆಟ್ಟಾಯಿ'ಯಂತಹ ಅನೇಕ ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 1944ರಲ್ಲಿ ತಮ್ಮ ನಿರ್ಮಾಣ ವೃತ್ತಿ ಆರಂಭಿಸಿದ ಅವರು, ಮೊದಲಿಗೆ ಅರ್ನಂನಯಿ ಕವಾಲನ್​ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ವೇಣುಗೋಪಾಲ್​ ಮತ್ತು ಸ್ವಾಮಿನಾಥನ್​ ಜೊತೆ ಇವರು ಕೂಡ ಲಕ್ಷ್ಮಿ ಮೂವಿ ಮೇಕರ್​ ಪ್ರೊಡಕ್ಷನ್​ ಸಂಸ್ಥೆ ಪಾಲುದಾರರಾಗಿದ್ದರು. ಕಮಲ್​ ಹಾಸನ್​ ಜೊತೆ 'ಅನ್ಬೆ ಶಿವಂ', ಧನುಶ್​ ಜೊತೆ 'ಪುಧುಪೆಟ್ಟಾಯಿ', ಕಾರ್ತಿಕ್​ ಜೊತೆ 'ಗೋಕುಲತೈಲ್​ ಸೆಥೈ' ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದರು.

ಕಮಲ್​ ಹಾಸನ್​, ವಿಜಯ್​ಕಾಂತ್​, ವಿಜಯ್​, ಅಜಿತ್​, ಧನುಶ್​ ಮತ್ತು ಇತರೆ ಅನೇಕ ದೊಡ್ಡ ಸ್ಟಾರ್​ಗಳ ಜೊತೆ ಮುರುಳೀಧರನ್​ ಕಾರ್ಯ ನಿರ್ವಹಿಸಿದ್ದಾರೆ. ಮುರಳೀಧರನ್​ ಸಾವಿಗೆ ಚಿತ್ರತಂಡ, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಒಡಿಯಾ ನಟಿ ಜರಾನಾ ದಾಸ್ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.