ETV Bharat / entertainment

ನನ್ನ ಸೆಕ್ಸ್​ ಲೈಫ್​ ಆಸಕ್ತಿದಾಯಕವಾಗಿಲ್ಲ.. ನಟಿ ತಾಪ್ಸಿ ಪನ್ನು ಹೀಗೆ ಹೇಳಿದ್ದೇಕೆ?

author img

By

Published : Aug 9, 2022, 7:29 AM IST

ಕಾಫಿ ವಿತ್​ ಕರಣ್​ ಶೋ ವಿವಾದಗಳಿಗೆ ಫೇಮಸ್​. ಈವರೆಗೂ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ನಟಿ ತಾಪ್ಸಿ ಪನ್ನು ಇಂಟರೆಸ್ಟಿಂಗ್​ ಕಾರಣವನ್ನು ನೀಡಿದ್ದಾರೆ.

taapsee-pannu
ನಟಿ ತಾಪ್ಸಿ ಪನ್ನು

ವಿವಾದಗಳಿಂದಲೇ ಸದ್ದು ಮಾಡುವ ಶೋ ಅಂದ್ರೆ ಅದು "ಕಾಫಿ ವಿತ್​ ಕರಣ್​". ಇದನ್ನು ನಡೆಸುವ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್​ ಕಾರ್ಯಕ್ರಮಕ್ಕೆ ಬರುವ ನಟ, ನಟಿಯರ ವೈಯಕ್ತಿಕ ಜೀವನ, ಲೈಂಗಿಕ ಆಸಕ್ತಿ​ ಬಗ್ಗೆ ಪ್ರಶ್ನೆ ಕೇಳಿ ಮುಜುಗರ ಉಂಟು ಮಾಡುತ್ತಾರೆ. ಜೊತೆಗೆ ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಸುದ್ದಿ ಮಾಡುವುದು ಕರಣ್​ರ ಹಳೆಯ ಚಾಳಿ.

ಹೊಸದಾಗಿ ಆರಂಭವಾಗಿರುವ ಕಾಫಿ ವಿತ್​ ಕರಣ್​ 7ನೇ ಚರಣದಲ್ಲಿಯೂ ಹಳೆಯ ಚಾಳಿ ಮುಂದುವರಿಸಿರುವ ಬಾಲಿವುಡ್​ ನಿರ್ಮಾಪಕ ಟೀಕೆಗೆ ಗುರಿಯಾಗಿದ್ದಾರೆ. ಶೋಗೆ ಬಂದ ನಟ ಅಮೀರ್ ಖಾನ್​ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕರಣ್​ರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೋಬಾರಾ ಸಿನಿಮಾ ಪ್ರಚಾರದ ವೇಳೆ ಬಾಲಿವುಡ್​ ನಟಿ ತಾಪ್ಸಿ ಪನ್ನು ಕರಣ್​ ಶೋಗೆ ನಿಮ್ಮನ್ನು ಏಕೆ ಆಹ್ವಾನಿಸಿಲ್ಲ ಎಂಬ ಪ್ರಶ್ನೆ ಕೇಳಲಾಗಿದೆ. ನಟಿ ಇದಕ್ಕೆ ಉತ್ತರವಾಗಿ "ನನ್ನ ಸೆಕ್ಸ್​ ಲೈಫ್​ ಕರಣ್​ಗೆ ಆಹ್ವಾನಿಸುವಷ್ಟು ಆಸಕ್ತಿದಾಯಕವಾಗಿಲ್ಲ" ಎಂದು ಹೇಳಿದ್ದಾರೆ.

"ಕರಣ್ ತನ್ನ ಕಾರ್ಯಕ್ರಮದಲ್ಲಿ ಇಂಥಹದ್ದೇ ಪ್ರಶ್ನೆಗಳನ್ನು ಕೇಳುತ್ತಾರೆ. ನನ್ನ ಲೈಂಗಿಕ ಜೀವನ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸುವಷ್ಟು ವರ್ಣರಂಜಿತವಾಗಿಲ್ಲ. ಹಾಗಾಗಿ ಅವರು ನನ್ನನ್ನು ಈವರೆಗೂ ಕರೆದಿಲ್ಲ" ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

ಕಾಫಿ ವಿತ್​ ಕರಣ್​ 7ನೇ ಚರಣ ಜುಲೈ 1 ರಿಂದ ಆರಂಭವಾಗಿದೆ. ಅನನ್ಯ ಪಾಂಡೆ, ವಿಜಯ್ ದೇವರಕೊಂಡ, ಜಾನ್ವಿ ಕಪೂರ್ ಸಾರಾ ಅಲಿ ಖಾನ್, ಕರೀನಾ ಕಪೂರ್ ಮತ್ತು ಅಮೀರ್ ಖಾನ್ ಸೇರಿದಂತೆ ವಿವಿಧ ಬಾಲಿವುಡ್​ ಸ್ಟಾರ್ಸ್​ ಭಾಗವಹಿಸಿದ್ದಾರೆ. ಈಚೆಗಷ್ಟೇ ವಿವಾಹವಾದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರಿಗೆ ಕಾರ್ಯಕ್ರಮದಲ್ಲಿ ಕರಣ್​ ಲೈಂಗಿಕ ​ ಜೀವನದ ಬಗ್ಗೆ ಕೇಳಿದ್ದರು.

ಓದಿ: ಸಿನಿಮಾ ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ: ನಟ ಅಕ್ಷಯ್ ಕುಮಾರ್

ವಿವಾದಗಳಿಂದಲೇ ಸದ್ದು ಮಾಡುವ ಶೋ ಅಂದ್ರೆ ಅದು "ಕಾಫಿ ವಿತ್​ ಕರಣ್​". ಇದನ್ನು ನಡೆಸುವ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್​ ಕಾರ್ಯಕ್ರಮಕ್ಕೆ ಬರುವ ನಟ, ನಟಿಯರ ವೈಯಕ್ತಿಕ ಜೀವನ, ಲೈಂಗಿಕ ಆಸಕ್ತಿ​ ಬಗ್ಗೆ ಪ್ರಶ್ನೆ ಕೇಳಿ ಮುಜುಗರ ಉಂಟು ಮಾಡುತ್ತಾರೆ. ಜೊತೆಗೆ ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಸುದ್ದಿ ಮಾಡುವುದು ಕರಣ್​ರ ಹಳೆಯ ಚಾಳಿ.

ಹೊಸದಾಗಿ ಆರಂಭವಾಗಿರುವ ಕಾಫಿ ವಿತ್​ ಕರಣ್​ 7ನೇ ಚರಣದಲ್ಲಿಯೂ ಹಳೆಯ ಚಾಳಿ ಮುಂದುವರಿಸಿರುವ ಬಾಲಿವುಡ್​ ನಿರ್ಮಾಪಕ ಟೀಕೆಗೆ ಗುರಿಯಾಗಿದ್ದಾರೆ. ಶೋಗೆ ಬಂದ ನಟ ಅಮೀರ್ ಖಾನ್​ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕರಣ್​ರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೋಬಾರಾ ಸಿನಿಮಾ ಪ್ರಚಾರದ ವೇಳೆ ಬಾಲಿವುಡ್​ ನಟಿ ತಾಪ್ಸಿ ಪನ್ನು ಕರಣ್​ ಶೋಗೆ ನಿಮ್ಮನ್ನು ಏಕೆ ಆಹ್ವಾನಿಸಿಲ್ಲ ಎಂಬ ಪ್ರಶ್ನೆ ಕೇಳಲಾಗಿದೆ. ನಟಿ ಇದಕ್ಕೆ ಉತ್ತರವಾಗಿ "ನನ್ನ ಸೆಕ್ಸ್​ ಲೈಫ್​ ಕರಣ್​ಗೆ ಆಹ್ವಾನಿಸುವಷ್ಟು ಆಸಕ್ತಿದಾಯಕವಾಗಿಲ್ಲ" ಎಂದು ಹೇಳಿದ್ದಾರೆ.

"ಕರಣ್ ತನ್ನ ಕಾರ್ಯಕ್ರಮದಲ್ಲಿ ಇಂಥಹದ್ದೇ ಪ್ರಶ್ನೆಗಳನ್ನು ಕೇಳುತ್ತಾರೆ. ನನ್ನ ಲೈಂಗಿಕ ಜೀವನ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸುವಷ್ಟು ವರ್ಣರಂಜಿತವಾಗಿಲ್ಲ. ಹಾಗಾಗಿ ಅವರು ನನ್ನನ್ನು ಈವರೆಗೂ ಕರೆದಿಲ್ಲ" ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

ಕಾಫಿ ವಿತ್​ ಕರಣ್​ 7ನೇ ಚರಣ ಜುಲೈ 1 ರಿಂದ ಆರಂಭವಾಗಿದೆ. ಅನನ್ಯ ಪಾಂಡೆ, ವಿಜಯ್ ದೇವರಕೊಂಡ, ಜಾನ್ವಿ ಕಪೂರ್ ಸಾರಾ ಅಲಿ ಖಾನ್, ಕರೀನಾ ಕಪೂರ್ ಮತ್ತು ಅಮೀರ್ ಖಾನ್ ಸೇರಿದಂತೆ ವಿವಿಧ ಬಾಲಿವುಡ್​ ಸ್ಟಾರ್ಸ್​ ಭಾಗವಹಿಸಿದ್ದಾರೆ. ಈಚೆಗಷ್ಟೇ ವಿವಾಹವಾದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರಿಗೆ ಕಾರ್ಯಕ್ರಮದಲ್ಲಿ ಕರಣ್​ ಲೈಂಗಿಕ ​ ಜೀವನದ ಬಗ್ಗೆ ಕೇಳಿದ್ದರು.

ಓದಿ: ಸಿನಿಮಾ ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ: ನಟ ಅಕ್ಷಯ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.