ETV Bharat / entertainment

ಬಿಗ್​​ ಬಾಸ್ ಮನೆಯಲ್ಲಿ ಹೊಸಬರು ಹಳಬರ ನಡುವೆ ಪಿರಮಿಡ್ ಆಟ.. ಗೆಲುವು ಯಾರಿಗೆ?

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಮಾಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಚೆಂಡುಗಳನ್ನು ತ್ರಿಕೋನಾಕಾರಾದ ಹಲಗೆಯ ಮೇಲೆ ಪಿರಮಿಡ್ ಆಕಾರದಲ್ಲಿ ಜೋಡಿಸಬೇಕು ಎನ್ನುವ ಟಾಸ್ಕ್ ನೀಡಿದೆ.

author img

By

Published : Sep 27, 2022, 12:34 PM IST

new promo of bigg boss kannada show
ಬಿಗ್​​ ಬಾಸ್ ಪ್ರೋಮೋ

ಬಿಗ್​​ ಬಾಸ್ ಎಂಬ ದೊಡ್ಮನೆಯಲ್ಲಿ ಕಾಳಗ ಶುರುವಾಗಿದೆ. ಕೊಂಚ ಆಟ, ಕೊಂಚ ವಾದ ವಿವಾದ, ಮತ್ತೊಂದಿಷ್ಟು ಖುಷಿಯ ಸಮಯ. ಪ್ರತೀ ಕ್ಷಣವೂ ತಂತ್ರ ಮರೆಯದ ಸ್ಪರ್ಧಿಗಳು. ಬಿಗ್​ ಬಾಸ್​ ಸ್ಪರ್ಧಿಗಳಿಗೆ ದಿನೇ ದಿನೇ ಹೊಸ ಹೊಸ ಟಾಸ್ಕ್ ಎಂಬ ಪರೀಕ್ಷೆ ನೀಡುವ ಮೂಲಕ ಅವರ ಸಾಮರ್ಥ್ಯ, ಪ್ರತಿಭೆ ಜೊತೆಗೆ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಮಾಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಚೆಂಡುಗಳನ್ನು ತ್ರಿಕೋನಾಕಾರಾದ ಹಲಗೆಯ ಮೇಲೆ ಪಿರಮಿಡ್ ಆಕಾರದಲ್ಲಿ ಜೋಡಿಸಬೇಕು ಎನ್ನುವ ಟಾಸ್ಕ್ ನೀಡಿದೆ. ನಾಲ್ವರು ಸ್ಪರ್ಧಿಗಳು ಎರಡು ತಂಡಗಳಾಗಿ ಆಟಕ್ಕಿಳಿದಿದ್ದಾರೆ. ಈ ಎರಡೂ ತಂಡ ಚೆಂಡುಗಳನ್ನು ಪಿರಮಿಡ್ ಆಕಾರದಲ್ಲಿ ಜೋಡಿಸುವಲ್ಲಿ ಕೊಂಚ ಹಿನ್ನೆಡೆ ಕಂಡಿದ್ದಾರೆ. ಈ ವೇಳೆ ಮನೆಮಂದಿ ಪರಸ್ಪರ ಹಾಸ್ಯಭರಿತ ಮಾತಿನಲ್ಲಿ ತೊಡಗಿರುವುದನ್ನು ಪ್ರೋಮೋದಲ್ಲಿ ವೀಕ್ಷಿಸಬಹುದಾಗಿದೆ. ಇನ್ನು, ಗೆಲ್ಲೋದ್ಯಾರು ಎಂಬುದು ಇಂದಿನ ಸಂಪೂರ್ಣ ಸಂಚಿಕೆ ವೀಕ್ಷಿಸಿದ ಬಳಿಕವಷ್ಟೇ ತಿಳಿಯಲಿದೆ.

ಇದು ಬಿಗ್​​ ಬಾಸ್​ ಶೋನ ಮೊದಲ ವಾರ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಇನ್ನೂ ಆಟ ಶುರುವಾದ ಮೊದಲ ದಿನವೇ ನಾಮಿನೇಷನ್​ ಪ್ರಕ್ರಿಯೆ ನಡೆದಿತ್ತು. ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ, ಪ್ರಶಾಂತ್​ ಸಂಬರಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ರಾಜಣ್ಣ, ಕಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ. ವಾರಾಂತ್ಯಕ್ಕೆ ಕಿಚ್ಚ ಸುದೀಪ್​ ಅವರ ಕಾರ್ಯಕ್ರಮದಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ವಾತಾವರಣ..

ಇನ್ನು, ದೊಡ್ಮನೆಯಲ್ಲಿ ಕಾಮಿಡಿ ಜೋರಾಗಿಯೇ ಇದೆ. 18 ಸ್ಪರ್ಧಿಗಳು ಸಹ ಸಕ್ರಿಯರಾಗಿದ್ದು, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಅರುಣ್​ ಸಾಗರ್​ ಎಂಟರ್​​ಟೈನ್​ಮೆಂಟ್​​ ಜೋರಾಗಿಯೇ ಇದೆ. ನಿನ್ನೆಯ ಎಪಿಸೋಡ್​ನಲ್ಲಿ ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು ಹಾಕಿದ್ದ ಸನ್ನಿವೇಶ ಮನೆ ಮಂದಿ ಜೊತೆಗೆ ಕನ್ನಡಿಗರ ಮೊಗದಲ್ಲಿ ನಗು ತರಿಸಿದೆ.

ಬಿಗ್​​ ಬಾಸ್ ಎಂಬ ದೊಡ್ಮನೆಯಲ್ಲಿ ಕಾಳಗ ಶುರುವಾಗಿದೆ. ಕೊಂಚ ಆಟ, ಕೊಂಚ ವಾದ ವಿವಾದ, ಮತ್ತೊಂದಿಷ್ಟು ಖುಷಿಯ ಸಮಯ. ಪ್ರತೀ ಕ್ಷಣವೂ ತಂತ್ರ ಮರೆಯದ ಸ್ಪರ್ಧಿಗಳು. ಬಿಗ್​ ಬಾಸ್​ ಸ್ಪರ್ಧಿಗಳಿಗೆ ದಿನೇ ದಿನೇ ಹೊಸ ಹೊಸ ಟಾಸ್ಕ್ ಎಂಬ ಪರೀಕ್ಷೆ ನೀಡುವ ಮೂಲಕ ಅವರ ಸಾಮರ್ಥ್ಯ, ಪ್ರತಿಭೆ ಜೊತೆಗೆ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಮಾಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಚೆಂಡುಗಳನ್ನು ತ್ರಿಕೋನಾಕಾರಾದ ಹಲಗೆಯ ಮೇಲೆ ಪಿರಮಿಡ್ ಆಕಾರದಲ್ಲಿ ಜೋಡಿಸಬೇಕು ಎನ್ನುವ ಟಾಸ್ಕ್ ನೀಡಿದೆ. ನಾಲ್ವರು ಸ್ಪರ್ಧಿಗಳು ಎರಡು ತಂಡಗಳಾಗಿ ಆಟಕ್ಕಿಳಿದಿದ್ದಾರೆ. ಈ ಎರಡೂ ತಂಡ ಚೆಂಡುಗಳನ್ನು ಪಿರಮಿಡ್ ಆಕಾರದಲ್ಲಿ ಜೋಡಿಸುವಲ್ಲಿ ಕೊಂಚ ಹಿನ್ನೆಡೆ ಕಂಡಿದ್ದಾರೆ. ಈ ವೇಳೆ ಮನೆಮಂದಿ ಪರಸ್ಪರ ಹಾಸ್ಯಭರಿತ ಮಾತಿನಲ್ಲಿ ತೊಡಗಿರುವುದನ್ನು ಪ್ರೋಮೋದಲ್ಲಿ ವೀಕ್ಷಿಸಬಹುದಾಗಿದೆ. ಇನ್ನು, ಗೆಲ್ಲೋದ್ಯಾರು ಎಂಬುದು ಇಂದಿನ ಸಂಪೂರ್ಣ ಸಂಚಿಕೆ ವೀಕ್ಷಿಸಿದ ಬಳಿಕವಷ್ಟೇ ತಿಳಿಯಲಿದೆ.

ಇದು ಬಿಗ್​​ ಬಾಸ್​ ಶೋನ ಮೊದಲ ವಾರ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಇನ್ನೂ ಆಟ ಶುರುವಾದ ಮೊದಲ ದಿನವೇ ನಾಮಿನೇಷನ್​ ಪ್ರಕ್ರಿಯೆ ನಡೆದಿತ್ತು. ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ, ಪ್ರಶಾಂತ್​ ಸಂಬರಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ರಾಜಣ್ಣ, ಕಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ. ವಾರಾಂತ್ಯಕ್ಕೆ ಕಿಚ್ಚ ಸುದೀಪ್​ ಅವರ ಕಾರ್ಯಕ್ರಮದಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ವಾತಾವರಣ..

ಇನ್ನು, ದೊಡ್ಮನೆಯಲ್ಲಿ ಕಾಮಿಡಿ ಜೋರಾಗಿಯೇ ಇದೆ. 18 ಸ್ಪರ್ಧಿಗಳು ಸಹ ಸಕ್ರಿಯರಾಗಿದ್ದು, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಅರುಣ್​ ಸಾಗರ್​ ಎಂಟರ್​​ಟೈನ್​ಮೆಂಟ್​​ ಜೋರಾಗಿಯೇ ಇದೆ. ನಿನ್ನೆಯ ಎಪಿಸೋಡ್​ನಲ್ಲಿ ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು ಹಾಕಿದ್ದ ಸನ್ನಿವೇಶ ಮನೆ ಮಂದಿ ಜೊತೆಗೆ ಕನ್ನಡಿಗರ ಮೊಗದಲ್ಲಿ ನಗು ತರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.