ETV Bharat / entertainment

ಫಿಟ್ನೆಸ್​ ಕಾಪಾಡಿಕೊಳ್ಳುವುದರಲ್ಲಿ ಮಹೇಶ್​ ಬಾಬು ಪರ್ಫೆಕ್ಟ್​: ಅವರ ಬ್ರೇಕ್​ಫಾಸ್ಟ್​ನಲ್ಲಿ ಏನಿರುತ್ತೆ ಗೊತ್ತಾ? - ಗುಂಟೂರು ಖಾರಂ

ಟಾಲಿವುಡ್​ ಸ್ಟಾರ್​ ನಟ ಮಹೇಶ್​​ ಬಾಬು ಇನ್​ಸ್ಟಾ ಸ್ಟೋರಿ ಮೂಲಕ ತಮ್ಮ ದೇಹವನ್ನು ಫಿಟ್​ ಆಗಿ ಇಡಲು ಸೇವಿಸುವ ಆಹಾರದ ಬಗ್ಗೆ ತಿಳಿಸಿದ್ದಾರೆ.

Mahesh Babu
ಮಹೇಶ್​ ಬಾಬು
author img

By

Published : Jul 18, 2023, 3:47 PM IST

'ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ' ಎಂಬ ಮಾತಿಗೆ ಟಾಲಿವುಡ್​ ಸ್ಟಾರ್​ ನಟ ಮಹೇಶ್​​ ಬಾಬು ಉತ್ತಮ ಉದಾಹರಣೆ. 47 ವರ್ಷ ವಯಸ್ಸಾಗಿದ್ದರೂ, ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದಿದ್ದಾರೆ. ಇವರ ಇತ್ತೀಚಿನ ಫೋಟೋಗಳನ್ನು ನೋಡಿದರೆ, ನಿಮಗೆ ತಿಳಿಯಬಹುದು. ಇದೀಗ ಮತ್ತೊಂದು ಇನ್​ಸ್ಟಾ ಸ್ಟೋರಿಯನ್ನು ನಟ ಹಂಚಿಕೊಂಡಿದ್ದಾರೆ. ಅವರು ತಮ್ಮ ದೇಹವನ್ನು ಫಿಟ್​ ಆಗಿ ಇಡಲು ಸೇವಿಸುವ ಆಹಾರದ ಬಗ್ಗೆ ತಿಳಿಸಿದ್ದಾರೆ.

"ನಿತ್ಯ ಪೋಷಕಾಂಶಯುಕ್ತ ಆಹಾರ ಸೇವನೆ. ರಾತ್ರಿ ನೆನೆಸಿದ ಓಟ್ಸ್ ಮತ್ತು ಬೀಜಗಳ ಸರಳ ಮಿಶ್ರಣ. ಮುಂದಿನ ಒಂದೆರಡು ಗಂಟೆಗಳಲ್ಲಿ ನನಗೆ ಶಕ್ತಿಯ ಅಗತ್ಯವಿದೆ! #ಉಪಹಾರ" ಎಂದು ಸ್ಟೋರಿ ಕ್ಯಾಪ್ಶನ್​ ಹಾಕಿಕೊಂಡಿದ್ದಾರೆ. ಸೌತ್​ ಸೂಪರ್​ಸ್ಟಾರ್​ ಫಿಟ್ನೆಸ್​ ಫ್ರೀಕ್​ ಮತ್ತು ಊಟದ ವಿಚಾರವಾಗಿ ಹೆಚ್ಚು ಗಮನ ವಹಿಸುತ್ತಾರೆ. ಆಹಾರದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವ ಅವಕಾಶವನ್ನು ಅವರು ಎಂದಿಗೂ ಕಳೆದುಕೊಳ್ಳುವುದಿಲ್ಲ.

Mahesh Babu
ನಟ ಮಹೇಶ್​​ ಬಾಬು ಇನ್​ಸ್ಟಾ ಸ್ಟೋರಿ

ನಟ ಹಂಚಿಕೊಂಡ ಫೋಟೋ ಇಂಟರ್ನೆಟ್​ಗೆ ಕಿಚ್ಚು ಹಚ್ಚಿದೆ. ಮನಮೋಹಕ ನೋಟದಿಂದ ಎಲ್ಲರ ಮನಸ್ಸು ಕದ್ದಿದ್ದಾರೆ. ಚಿತ್ರದಲ್ಲಿ ಮಹೇಶ್​ ಬಾಬು, ಬೂದು ಬಣ್ಣದ ಜಾಕೆಟ್​ನೊಂದಿಗೆ ನೀಲಿ ಬಣ್ಣದ ಟೀ ಶರ್ಟ್​ ಅನ್ನು ಧರಿಸಿದ್ದಾರೆ. ನಟ ಸನ್​ಗ್ಲಾಸ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮುನ್ನ ನಟ ಒಂದು ಸೆಲ್ಫಿಯನ್ನು ಪೋಸ್ಟ್​ ಮಾಡಿದ್ದರು. ಅದಕ್ಕೆ 'ಶೀಘ್ರದಲ್ಲೇ ಬರಲಿದೆ' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಇದನ್ನು ನೆಟಿಜನ್​ಗಳು ಅವರು ತಮ್ಮ ಮುಂದಿನ ಚಿತ್ರ 'ಗುಂಟೂರು ಖಾರಂ' ಬಗ್ಗೆ ಹೇಳಿರುವುದಾಗಿ ಅರ್ಥೈಸಿಕೊಂಡರು.

ಇದನ್ನೂ ಓದಿ: OMG 2 ಸಾಂಗ್​ ರಿಲೀಸ್​​: ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಸಿನಿಮಾ ಯಾವುದು ಗೊತ್ತಾ?

ಇನ್ನೂ ಮಹೇಶ್​ ಬಾಬು ಸಿನಿಮಾ ವಿಚಾರವಾಗಿ ಹೇಳುವುದಾದರೆ, ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸದ್ಯ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಅವರ 'ಗುಂಟೂರು ಖಾರಂ'ನಲ್ಲಿ ನಟಿಸುತ್ತಿದ್ದಾರೆ. ಇದು ಮಹೇಶ್​ ಬಾಬು ಅವರು 28ನೇ ಸಿನಿಮಾವಾಗಿದ್ದು, 2024ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮೀನಾಕ್ಷಿ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಗುಂಟೂರು ಖಾರಂ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

ಇದರ ಹೊರತಾಗಿ ಆರ್​ಆರ್​ಆರ್​ ಖ್ಯಾತಿಯ ಎಸ್​ಎಸ್​ ರಾಜಮೌಳಿ ಜೊತೆಗೆ ಮಹೇಶ್​ ಬಾಬು ಕೈ ಜೋಡಿಸಲಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ. ರಾಜಮೌಳಿ ಜೊತೆಗಿನ ಮಹೇಶ್​ ಬಾಬು ಅವರ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ. ಜೊತೆಗೆ ಇದೊಂದು ಆ್ಯಕ್ಷನ್​ ಅಡ್ವೆಂಚರ್​ ಸಿನಿಮಾ ಎನ್ನಲಾಗಿದೆ.

ಇದನ್ನೂ ಓದಿ: 'Guntur Kaaram' ಶೂಟಿಂಗ್​ ಪೂರ್ಣಗೊಳಿಸಿದ ಮೀನಾಕ್ಷಿ ಚೌಧರಿ.. ಮಹೇಶ್​ ಬಾಬು ಬಗ್ಗೆ ನಟಿ ಹೇಳಿದ್ದೇನು?

'ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ' ಎಂಬ ಮಾತಿಗೆ ಟಾಲಿವುಡ್​ ಸ್ಟಾರ್​ ನಟ ಮಹೇಶ್​​ ಬಾಬು ಉತ್ತಮ ಉದಾಹರಣೆ. 47 ವರ್ಷ ವಯಸ್ಸಾಗಿದ್ದರೂ, ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದಿದ್ದಾರೆ. ಇವರ ಇತ್ತೀಚಿನ ಫೋಟೋಗಳನ್ನು ನೋಡಿದರೆ, ನಿಮಗೆ ತಿಳಿಯಬಹುದು. ಇದೀಗ ಮತ್ತೊಂದು ಇನ್​ಸ್ಟಾ ಸ್ಟೋರಿಯನ್ನು ನಟ ಹಂಚಿಕೊಂಡಿದ್ದಾರೆ. ಅವರು ತಮ್ಮ ದೇಹವನ್ನು ಫಿಟ್​ ಆಗಿ ಇಡಲು ಸೇವಿಸುವ ಆಹಾರದ ಬಗ್ಗೆ ತಿಳಿಸಿದ್ದಾರೆ.

"ನಿತ್ಯ ಪೋಷಕಾಂಶಯುಕ್ತ ಆಹಾರ ಸೇವನೆ. ರಾತ್ರಿ ನೆನೆಸಿದ ಓಟ್ಸ್ ಮತ್ತು ಬೀಜಗಳ ಸರಳ ಮಿಶ್ರಣ. ಮುಂದಿನ ಒಂದೆರಡು ಗಂಟೆಗಳಲ್ಲಿ ನನಗೆ ಶಕ್ತಿಯ ಅಗತ್ಯವಿದೆ! #ಉಪಹಾರ" ಎಂದು ಸ್ಟೋರಿ ಕ್ಯಾಪ್ಶನ್​ ಹಾಕಿಕೊಂಡಿದ್ದಾರೆ. ಸೌತ್​ ಸೂಪರ್​ಸ್ಟಾರ್​ ಫಿಟ್ನೆಸ್​ ಫ್ರೀಕ್​ ಮತ್ತು ಊಟದ ವಿಚಾರವಾಗಿ ಹೆಚ್ಚು ಗಮನ ವಹಿಸುತ್ತಾರೆ. ಆಹಾರದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವ ಅವಕಾಶವನ್ನು ಅವರು ಎಂದಿಗೂ ಕಳೆದುಕೊಳ್ಳುವುದಿಲ್ಲ.

Mahesh Babu
ನಟ ಮಹೇಶ್​​ ಬಾಬು ಇನ್​ಸ್ಟಾ ಸ್ಟೋರಿ

ನಟ ಹಂಚಿಕೊಂಡ ಫೋಟೋ ಇಂಟರ್ನೆಟ್​ಗೆ ಕಿಚ್ಚು ಹಚ್ಚಿದೆ. ಮನಮೋಹಕ ನೋಟದಿಂದ ಎಲ್ಲರ ಮನಸ್ಸು ಕದ್ದಿದ್ದಾರೆ. ಚಿತ್ರದಲ್ಲಿ ಮಹೇಶ್​ ಬಾಬು, ಬೂದು ಬಣ್ಣದ ಜಾಕೆಟ್​ನೊಂದಿಗೆ ನೀಲಿ ಬಣ್ಣದ ಟೀ ಶರ್ಟ್​ ಅನ್ನು ಧರಿಸಿದ್ದಾರೆ. ನಟ ಸನ್​ಗ್ಲಾಸ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮುನ್ನ ನಟ ಒಂದು ಸೆಲ್ಫಿಯನ್ನು ಪೋಸ್ಟ್​ ಮಾಡಿದ್ದರು. ಅದಕ್ಕೆ 'ಶೀಘ್ರದಲ್ಲೇ ಬರಲಿದೆ' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಇದನ್ನು ನೆಟಿಜನ್​ಗಳು ಅವರು ತಮ್ಮ ಮುಂದಿನ ಚಿತ್ರ 'ಗುಂಟೂರು ಖಾರಂ' ಬಗ್ಗೆ ಹೇಳಿರುವುದಾಗಿ ಅರ್ಥೈಸಿಕೊಂಡರು.

ಇದನ್ನೂ ಓದಿ: OMG 2 ಸಾಂಗ್​ ರಿಲೀಸ್​​: ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಸಿನಿಮಾ ಯಾವುದು ಗೊತ್ತಾ?

ಇನ್ನೂ ಮಹೇಶ್​ ಬಾಬು ಸಿನಿಮಾ ವಿಚಾರವಾಗಿ ಹೇಳುವುದಾದರೆ, ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸದ್ಯ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಅವರ 'ಗುಂಟೂರು ಖಾರಂ'ನಲ್ಲಿ ನಟಿಸುತ್ತಿದ್ದಾರೆ. ಇದು ಮಹೇಶ್​ ಬಾಬು ಅವರು 28ನೇ ಸಿನಿಮಾವಾಗಿದ್ದು, 2024ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮೀನಾಕ್ಷಿ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಗುಂಟೂರು ಖಾರಂ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

ಇದರ ಹೊರತಾಗಿ ಆರ್​ಆರ್​ಆರ್​ ಖ್ಯಾತಿಯ ಎಸ್​ಎಸ್​ ರಾಜಮೌಳಿ ಜೊತೆಗೆ ಮಹೇಶ್​ ಬಾಬು ಕೈ ಜೋಡಿಸಲಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ. ರಾಜಮೌಳಿ ಜೊತೆಗಿನ ಮಹೇಶ್​ ಬಾಬು ಅವರ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ. ಜೊತೆಗೆ ಇದೊಂದು ಆ್ಯಕ್ಷನ್​ ಅಡ್ವೆಂಚರ್​ ಸಿನಿಮಾ ಎನ್ನಲಾಗಿದೆ.

ಇದನ್ನೂ ಓದಿ: 'Guntur Kaaram' ಶೂಟಿಂಗ್​ ಪೂರ್ಣಗೊಳಿಸಿದ ಮೀನಾಕ್ಷಿ ಚೌಧರಿ.. ಮಹೇಶ್​ ಬಾಬು ಬಗ್ಗೆ ನಟಿ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.