ETV Bharat / entertainment

ಕನ್ನಡದ ಹಾಸ್ಯನಟ, ವಸ್ತ್ರ ವಿನ್ಯಾಸಕ ಗಂಡಸಿ ನಾಗರಾಜ್ ನಿಧನ - ಗಂಡಸಿ ನಾಗರಾಜ್

ಕನ್ನಡದಲ್ಲಿ 1,000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಗಂಡಸಿ ನಾಗರಾಜ್ ಭಾನುವಾರ ಮೃತಪಟ್ಟರು.

ಗಂಡಸಿ ನಾಗರಾಜ್ ನಿಧನ
ಗಂಡಸಿ ನಾಗರಾಜ್ ನಿಧನ
author img

By

Published : Dec 12, 2022, 3:36 PM IST

ಬೆಂಗಳೂರು: ಜನಪ್ರಿಯ ವಸ್ತ್ರ ವಿನ್ಯಾಸಕ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್(65) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ 10.30ಕ್ಕೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದ 1,000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗುಂಡನ ಮದುವೆ, ರಾಯರ ಮಗ, ಹಬ್ಬ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಸ್ತ್ರ ವಿನ್ಯಾಸಕರಾಗಿ ಚಿತ್ರರಂಗ ಪ್ರವೇಶಿಸಿದ ಇವರು ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರರಾಗಿದ್ದರು. ಇದೇ ಪ್ರೇರಣೆಯಲ್ಲಿ ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ ಮತ್ತು ರಾಜ ಹುಲಿ ಚಿತ್ರದಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳನ್ನು ಮುಟ್ಟುವ ಕಾಮುಕರಿಗೆ ತಕ್ಕ ಪಾಠವಾಗಬೇಕು: ನಟ ದರ್ಶನ್​

ಕೆ3 ಇವರ ನಟನೆಯ ಕೊನೆಯ ಚಿತ್ರ. ರಂಗಭೂಮಿ ಹಿನ್ನೆಲೆ ಹೊಂದಿದ್ದ ನಾಗರಾಜ್ ಚಿತ್ರದಲ್ಲಿ ಅಭಿನಯಿಸುವ ಮಹದಾಸೆ ಹೊಂದಿದ್ದರು. ಅವಕಾಶ ಸಿಗದೇ ಟೈಲರಿಂಗ್ ವೃತ್ತಿ ನೆಚ್ಚಿಕೊಂಡಿದ್ದರು. ಚಿತ್ರರಂಗದಲ್ಲಿ 40 ವರ್ಷ ವಸ್ತ್ರವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. 2020ರಲ್ಲೇ ತಮ್ಮ ಎರಡೂ ಕಿಡ್ನಿ ಕಳೆದುಕೊಂಡಿದ್ದ ನಾಗರಾಜ್, ಇತ್ತೀಚೆಗೆ ಸಮಸ್ಯೆ ಉಲ್ಬಣಿಸಿ ಹಾಸಿಗೆ ಹಿಡಿದಿದ್ದರು. ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಗಂಡಸಿ ನಾಗರಾಜ್‌, ಪದ್ಮನಾಭನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬೆಂಗಳೂರು: ಜನಪ್ರಿಯ ವಸ್ತ್ರ ವಿನ್ಯಾಸಕ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್(65) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ 10.30ಕ್ಕೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದ 1,000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗುಂಡನ ಮದುವೆ, ರಾಯರ ಮಗ, ಹಬ್ಬ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಸ್ತ್ರ ವಿನ್ಯಾಸಕರಾಗಿ ಚಿತ್ರರಂಗ ಪ್ರವೇಶಿಸಿದ ಇವರು ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರರಾಗಿದ್ದರು. ಇದೇ ಪ್ರೇರಣೆಯಲ್ಲಿ ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ ಮತ್ತು ರಾಜ ಹುಲಿ ಚಿತ್ರದಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳನ್ನು ಮುಟ್ಟುವ ಕಾಮುಕರಿಗೆ ತಕ್ಕ ಪಾಠವಾಗಬೇಕು: ನಟ ದರ್ಶನ್​

ಕೆ3 ಇವರ ನಟನೆಯ ಕೊನೆಯ ಚಿತ್ರ. ರಂಗಭೂಮಿ ಹಿನ್ನೆಲೆ ಹೊಂದಿದ್ದ ನಾಗರಾಜ್ ಚಿತ್ರದಲ್ಲಿ ಅಭಿನಯಿಸುವ ಮಹದಾಸೆ ಹೊಂದಿದ್ದರು. ಅವಕಾಶ ಸಿಗದೇ ಟೈಲರಿಂಗ್ ವೃತ್ತಿ ನೆಚ್ಚಿಕೊಂಡಿದ್ದರು. ಚಿತ್ರರಂಗದಲ್ಲಿ 40 ವರ್ಷ ವಸ್ತ್ರವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. 2020ರಲ್ಲೇ ತಮ್ಮ ಎರಡೂ ಕಿಡ್ನಿ ಕಳೆದುಕೊಂಡಿದ್ದ ನಾಗರಾಜ್, ಇತ್ತೀಚೆಗೆ ಸಮಸ್ಯೆ ಉಲ್ಬಣಿಸಿ ಹಾಸಿಗೆ ಹಿಡಿದಿದ್ದರು. ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಗಂಡಸಿ ನಾಗರಾಜ್‌, ಪದ್ಮನಾಭನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.