ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಈ ಸೀಸನ್ ಆರಂಭವಾದಾಗಿನಿಂದಲೂ ಸಂಗೀತಾ - ಕಾರ್ತಿಕ್ - ತನಿಷಾ ಬಹಳ ಆತ್ಮೀಯರಾಗಿ ಗುರುತಿಸಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭಗಳಲ್ಲಿ ಮೂವರೂ ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಂತಿದ್ದಾರೆ. ಪ್ರತಿಸ್ಪರ್ಧಿಗಳನ್ನು ಧೈರ್ಯವಾಗಿ, ಒಟ್ಟಾಗಿ ಎದುರಿಸಿದ್ದಾರೆ. ಸಂಗೀತಾ ಕಳಪೆ ಪಟ್ಟ ಹೊತ್ತು ಬಿಗ್ ಬಾಸ್ ಮನೆಯಲ್ಲಿರುವ ಜೈಲಿಗೆ ಹೋದ ಸಂದರ್ಭದಲ್ಲಂತೂ ಕಾರ್ತಿಕ್, 'ನಾವು ಮೂವರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್ಗೆ ತೊಂದರೆಯಾದಾಗ ಅವರೊಟ್ಟಿಗಿರುವುದು, ಪ್ರೋತ್ಸಾಹಿಸುವುದು ನನ್ನ ಕರ್ತವ್ಯ. ಅವರ ಜೊತೆ ನಾನು ನಿಂತೇ ನಿಲ್ಲುತ್ತೇನೆ' ಎಂದು ಒತ್ತಿ ಹೇಳಿದ್ದರು. ಆದ್ರೀಗ ಮೂವರ ಸ್ನೇಹದಲ್ಲಿ ಕೊಂಚ ಬಿರುಕು ಮೂಡಿದಂತೆ ತೋರುತ್ತಿದೆ. ಇದರ ಸೂಚನೆ ಹೊಸದಾಗಿ ರಿವೀಲ್ ಆಗಿರುವ ಪ್ರೋಮೋದಲ್ಲಿ ಸಿಕ್ಕಿದೆ.
ನಿನ್ನೆಯ ಎಲಿಮಿನೇಷನ್ನ ಲೂಡೋ ಟಾಸ್ಕ್ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾ ಅವರಿಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಇಬ್ಬರೂ ವರ್ತೂರು ಸಂತೋಷ್ ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ ಅವರು ತಮ್ಮನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದದ್ದೇ ಬೇರೆ. ತನಿಷಾ ಅವರು, ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತಾ, ಕುಣಿದಾಡುತ್ತಿದ್ದ ಸಂಗೀತಾ ಅವರ ಮುಖದಲ್ಲಿ ಒಮ್ಮೆಲೆ ಅಸಮಾಧಾನ ಕಾಣಿಸಿಕೊಂಡಿತು.
-
ಠೂ ಠೂ ಠೂ.. ಆನೆ ಮೇಲೆ ಠೂ ಠೂ ಠೂ.. ಒಂಟೆ ಮೇಲೆ ಠೂ ಠೂ ಠೂ.. P.S: ಆ ಆನೆ ಅಲ್ಲಪ್ಪಾ
— Colors Kannada (@ColorsKannada) November 16, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #colorskannada pic.twitter.com/MBs6KDKgmY
">ಠೂ ಠೂ ಠೂ.. ಆನೆ ಮೇಲೆ ಠೂ ಠೂ ಠೂ.. ಒಂಟೆ ಮೇಲೆ ಠೂ ಠೂ ಠೂ.. P.S: ಆ ಆನೆ ಅಲ್ಲಪ್ಪಾ
— Colors Kannada (@ColorsKannada) November 16, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #colorskannada pic.twitter.com/MBs6KDKgmYಠೂ ಠೂ ಠೂ.. ಆನೆ ಮೇಲೆ ಠೂ ಠೂ ಠೂ.. ಒಂಟೆ ಮೇಲೆ ಠೂ ಠೂ ಠೂ.. P.S: ಆ ಆನೆ ಅಲ್ಲಪ್ಪಾ
— Colors Kannada (@ColorsKannada) November 16, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #colorskannada pic.twitter.com/MBs6KDKgmY
ಮೇಲ್ನೋಟಕ್ಕೆ ಆ ಕ್ಷಣದಲ್ಲಿ ವಿಷಯ ಮಗಿದು ಹೋದಂತೆ ಕಂಡರೂ, ಸಂಗೀತಾ ಮನಸ್ಸಲ್ಲಿ ಹಲವು ವಿಷಯಗಳು ಬೆಳಯುತ್ತಲೇ ಇದೆ ಎಂಬಂತೆ ತೋರುತ್ತಿದೆ. ಇಂದಿನ ಪ್ರೋಮೋದಲ್ಲಿ ಸಂಗೀತಾ ಮತ್ತು ತನಿಷಾ ಪರಸ್ಪರ ವಾದ ಮಾಡಿಕೊಳ್ಳುತ್ತಿದ್ದಾರೆ. ಕೊನೆಯಲ್ಲಿ ಸಂಗೀತಾ, 'ಕಿರುಚಬೇಡಿ ತನಿಷಾ' ಎಂದು ಗಟ್ಟಿಯಾಗಿ ಹೇಳಿರೋದು ಕಂಡುಬರುತ್ತದೆ. ಒಂದೆಡೆ ಸಂಗೀತಾ ಕಾರ್ತಿಕ್ ಬಳಿ, 'ನಿಮ್ಮ ಕೈಯಲ್ಲಿ ನನ್ನನ್ನು ಸೇವ್ ಮಾಡುವ ಚಾನ್ಸ್ ಇತ್ತು' ಎಂದು ಹೇಳಿದ್ದಾರೆ. ಇನ್ನೊಂದೆಡೆಗೆ ತನಿಷಾ ಬಳಿ, 'ನೀವು ನನ್ನನ್ನ ಸೇವ್ ಮಾಡ್ಲಿಲ್ಲ' ಎಂದೂ ಹೇಳಿದ್ದಾರೆ.
ಇದನ್ನೂ ಓದಿ: 200 ಕೋಟಿಯತ್ತ ಸಲ್ಮಾನ್ ಕತ್ರಿನಾ ನಟನೆಯ 'ಟೈಗರ್ 3': ಕಲೆಕ್ಷನ್ ಡೀಟೆಲ್ಸ್ ಇಲ್ಲಿದೆ
ಈ ಚರ್ಚೆಯಲ್ಲಿ ತನಿಷಾ, 'ವರ್ತೂರು ಅವರು ಸಂಗೀತಾರನ್ನು ಸೇವ್ ಮಾಡೋದು ಬೇಡ ಅಂತ ಹೇಳಿದ್ರು' ಎಂದು ಹೇಳಿದ್ದಾರೆ. ಸಂಗೀತಾ ನೇರವಾಗಿ ವರ್ತೂರ್ ಬಳಿ ವಿಚಾರಿಸಿದಾಗ, 'ಸಂಗೀತಾ ಅನ್ನೋ ಹೆಸರೇ ಬಂದಿರಲಿಲ್ಲ' ಎಂದಿದ್ದಾರೆ. ಅಲ್ಲಿಗೆ ಸಂಗೀತಾರಿಗೆ ತನಿಷಾ ಸುಳ್ಳು ಹೇಳಿದ್ದಾರೆ ಎಂಬುದು ಗೊತ್ತಾಗಿದೆ. ನಮ್ಮಲ್ಲೊಂದು ಸ್ನೇಹ ಇತ್ತು. ಒಂದು ನಂಬಿಕೆ ಇತ್ತು. ಆ ನಂಬಿಕೆ ಬ್ರೇಕ್ ಆಗಿದೆ ಎಂದು ಹೇಳಿ ತನಿಷಾ ಮತ್ತು ಕಾರ್ತಿಕ್ ಜೊತೆಗಿನ ಫ್ರೆಂಡ್ಷಿಪ್ ಅನ್ನು ಕೊನೆಗೊಳಿಸಿರುವಂತೆ ಇಂದು ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಕಂಡುಬಂದಿದೆ.
ಇದನ್ನೂ ಓದಿ: 'ನಿಜವಾಗಿಯೂ ನೀವು ದೇವರ ಮಗು': ಪತಿ ವಿರಾಟ್ ಕೊಹ್ಲಿಯನ್ನು ಮನಸಾರೆ ಹೊಗಳಿದ ಅನುಷ್ಕಾ ಶರ್ಮಾ
ಯಾವಾಗಲೂ ಒಬ್ಬರಿಗೊಬ್ಬರು ಗಟ್ಟಿಯಾಗಿ ನಿಂತಿದ್ದ ಈ ಮೂವರ ಸ್ನೇಹ ಇಲ್ಲಿಗೆ ಕೊನೆಗೊಳ್ಳುತ್ತಾ?. ಹಾಗಾದ್ರೆ ಇಡೀ ಮನೆಯ ವಾತಾವರಣದಲ್ಲಿ ಬದಲಾವಣೆ ಆಗುವ ಸಾಧ್ಯತೆಯಂತೂ ಇದ್ದೇ ಇದೆ. ಹಾಗಾದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನಾಗಬಹುದು? ಸ್ನೇಹಿತರನ್ನು ಕಳೆದುಕೊಂಡ ಸಂಗೀತಾ ಪುಟಿದೇಳುತ್ತಾರಾ? ಅಥವಾ ಕುಸಿದುಹೋಗುತ್ತಾರಾ? ಇಷ್ಟು ದಿನ ಒಟ್ಟಿಗಿದ್ದ ಸ್ನೇಹಿತೆಯನ್ನು ತನಿಷಾ ಮತ್ತು ಕಾರ್ತಿಕ್ ಅಷ್ಟು ಸುಲಭಕ್ಕೆ ಬಿಟ್ಟುಕೊಡುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಜಿಯೋ ಸಿನಿಮಾದಲ್ಲಿ 24ಗಂಟೆ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡವನ್ನು ವೀಕ್ಷಿಸಿ. ಪ್ರತಿದಿನದ ಎಪಿಸೋಡ್ಗಳು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತವೆ.