ETV Bharat / entertainment

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ: ಕನ್ನಡದಲ್ಲಿ ಬಂತು 'ಹನುಮಾನ್ ಚಾಲಿಸಾ'

author img

By ETV Bharat Karnataka Team

Published : Jan 9, 2024, 12:10 PM IST

Updated : Jan 9, 2024, 6:18 PM IST

ಕನ್ನಡದಲ್ಲೊಂದು 'ಹನುಮಾನ್ ಚಾಲಿಸಾ' ನಿರ್ಮಾಣಗೊಂಡಿದ್ದು, ಜನಪ್ರಿಯ ಗಾಯಕ ವಿಜಯ್​ ಪ್ರಕಾಶ್​ ದನಿಯಾಗಿದ್ದಾರೆ.

Hanuman Chalisa in Kannada
ಕನ್ನಡದಲ್ಲಿ 'ಹನುಮಾನ್ ಚಾಲಿಸಾ'
ಗಾಯಕ ವಿಜಯ್​ ಪ್ರಕಾಶ್​

ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಪ್ರಸ್ತುತ ದೇಶಾದ್ಯಂತ ರಾಮನ ಜಪ ಜೋರಾಗಿದೆ‌. ಕೋಟ್ಯಂತರ ಭಾರತೀಯರು ಕಾತರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಲು ಸಜ್ಜಾಗಿದೆ.

ಈಗಾಗಲೇ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಹನುಮಾನ್ ಚಾಲಿಸಾ ಲಭ್ಯವಿದ್ದು, ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಭಕ್ತಿಗೀತೆ ಇದಾಗಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹನುಮಾನ್ ಚಾಲಿಸಾ ಮೂಡಿ ಬರುತ್ತಿದೆ. ಭಾರತದ ಜನಪ್ರಿಯ ಗಾಯಕ, ನಮ್ಮ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರು ಸುಶ್ರಾವ್ಯವಾಗಿ, ಭಕ್ತಿ ಪರವಶರಾಗಿ ಈ ಹನುಮಾನ್​ ಚಾಲಿಸಾವನ್ನು ಹಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿರುವ ಲೋಕಿ ತವಸ್ಯ ಈ ಹನುಮಾನ್ ಚಾಲಿಸಾಗೆ ಸಂಗೀತದ ಸ್ಪರ್ಶ ನೀಡಿದ್ದಾರೆ.

Hanuman Chalisa in Kannada
ಕನ್ನಡದಲ್ಲಿ ಬಂತು 'ಹನುಮಾನ್ ಚಾಲಿಸಾ'

ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಹನುಮಾನ್ ಚಾಲಿಸಾವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಒಂದು ಆಲ್ಬಂ ತಯಾರಿಸಲಾಗಿದೆ. ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತರಾದ ಶ್ರೀ ವೆಂಕಟೇಶ್ ಉತ್ತರಹಳ್ಳಿ ಅವರು ಮಾಡಿದ್ದಾರೆ. ಇವರು ಬಹಳ ಶ್ರದ್ಧೆ ವಹಿಸಿ, ತನು ಮನ ಧನವ ಸಮರ್ಪಿಸಿ, ಲಕ್ಷ್ಮಿ ವೆಂಕಟೇಶ್ವರ ಆರ್​ಜಿ510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ. ಕನ್ನಡಕ್ಕೆ ತರ್ಜುಮೆ ಮಾಡಿರುವ ಹನುಮಾನ್ ಚಾಲಿಸಾ ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ರೋಮಾಂಚಕ 'ದೇವರ' ಗ್ಲಿಂಪ್ಸ್: ಹೆಚ್ಚಿತು ಜೂ. ಎನ್‌ಟಿಆರ್ ಸಿನಿಮಾ ಮೇಲಿನ ಕುತೂಹಲ

ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗಿ ಉದ್ಘಾಟನೆ ಆಗುತ್ತಿರುವ ಈ ಸಂದರ್ಭದಲ್ಲಿ ಕನ್ನಡದಲ್ಲಿ ಹನುಮಾನ್​ ಚಾಲಿಸಾ ಬರುತ್ತಿರುವುದು ಖುಷಿಯ ವಿಚಾರವೇ ಆಗಿದೆ. ಇನ್ನು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಆಗಮಿಸಿ ಪ್ರತಿಷ್ಠಿತ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ . ಜನವರಿ 16ರಂದೇ ವಿಧಿ ವಿಧಾನಗಳು ಆರಂಭವಾಗಲಿವೆ.

ಇದನ್ನೂ ಓದಿ: ರಾಜಮೌಳಿಯವ್ರಿಗೆ ಕರೆ ಮಾಡಿದ್ರೆ ಫೋನ್​​ ಸ್ವಿಚ್ ಆಫ್: ಎಂ ಎಂ ಕೀರವಾಣಿ ಹೀಗಂದಿದ್ದೇಕೆ

ಗಾಯಕ ವಿಜಯ್​ ಪ್ರಕಾಶ್​

ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಪ್ರಸ್ತುತ ದೇಶಾದ್ಯಂತ ರಾಮನ ಜಪ ಜೋರಾಗಿದೆ‌. ಕೋಟ್ಯಂತರ ಭಾರತೀಯರು ಕಾತರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಲು ಸಜ್ಜಾಗಿದೆ.

ಈಗಾಗಲೇ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಹನುಮಾನ್ ಚಾಲಿಸಾ ಲಭ್ಯವಿದ್ದು, ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಭಕ್ತಿಗೀತೆ ಇದಾಗಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹನುಮಾನ್ ಚಾಲಿಸಾ ಮೂಡಿ ಬರುತ್ತಿದೆ. ಭಾರತದ ಜನಪ್ರಿಯ ಗಾಯಕ, ನಮ್ಮ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರು ಸುಶ್ರಾವ್ಯವಾಗಿ, ಭಕ್ತಿ ಪರವಶರಾಗಿ ಈ ಹನುಮಾನ್​ ಚಾಲಿಸಾವನ್ನು ಹಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿರುವ ಲೋಕಿ ತವಸ್ಯ ಈ ಹನುಮಾನ್ ಚಾಲಿಸಾಗೆ ಸಂಗೀತದ ಸ್ಪರ್ಶ ನೀಡಿದ್ದಾರೆ.

Hanuman Chalisa in Kannada
ಕನ್ನಡದಲ್ಲಿ ಬಂತು 'ಹನುಮಾನ್ ಚಾಲಿಸಾ'

ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಹನುಮಾನ್ ಚಾಲಿಸಾವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಒಂದು ಆಲ್ಬಂ ತಯಾರಿಸಲಾಗಿದೆ. ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತರಾದ ಶ್ರೀ ವೆಂಕಟೇಶ್ ಉತ್ತರಹಳ್ಳಿ ಅವರು ಮಾಡಿದ್ದಾರೆ. ಇವರು ಬಹಳ ಶ್ರದ್ಧೆ ವಹಿಸಿ, ತನು ಮನ ಧನವ ಸಮರ್ಪಿಸಿ, ಲಕ್ಷ್ಮಿ ವೆಂಕಟೇಶ್ವರ ಆರ್​ಜಿ510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ. ಕನ್ನಡಕ್ಕೆ ತರ್ಜುಮೆ ಮಾಡಿರುವ ಹನುಮಾನ್ ಚಾಲಿಸಾ ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ರೋಮಾಂಚಕ 'ದೇವರ' ಗ್ಲಿಂಪ್ಸ್: ಹೆಚ್ಚಿತು ಜೂ. ಎನ್‌ಟಿಆರ್ ಸಿನಿಮಾ ಮೇಲಿನ ಕುತೂಹಲ

ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗಿ ಉದ್ಘಾಟನೆ ಆಗುತ್ತಿರುವ ಈ ಸಂದರ್ಭದಲ್ಲಿ ಕನ್ನಡದಲ್ಲಿ ಹನುಮಾನ್​ ಚಾಲಿಸಾ ಬರುತ್ತಿರುವುದು ಖುಷಿಯ ವಿಚಾರವೇ ಆಗಿದೆ. ಇನ್ನು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಆಗಮಿಸಿ ಪ್ರತಿಷ್ಠಿತ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ . ಜನವರಿ 16ರಂದೇ ವಿಧಿ ವಿಧಾನಗಳು ಆರಂಭವಾಗಲಿವೆ.

ಇದನ್ನೂ ಓದಿ: ರಾಜಮೌಳಿಯವ್ರಿಗೆ ಕರೆ ಮಾಡಿದ್ರೆ ಫೋನ್​​ ಸ್ವಿಚ್ ಆಫ್: ಎಂ ಎಂ ಕೀರವಾಣಿ ಹೀಗಂದಿದ್ದೇಕೆ

Last Updated : Jan 9, 2024, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.