ETV Bharat / entertainment

ಸಾಹಸ ದೃಶ್ಯಗಳ ಶೂಟಿಂಗ್​ ವೇಳೆ ಅಕ್ಷಯ್‌ ಕುಮಾರ್‌ಗೆ ಗಾಯ

author img

By

Published : Mar 24, 2023, 1:03 PM IST

'ಬಡೆ ಮಿಯಾನ್ ಚೋಟೆ ಮಿಯಾನ್' ಸಿನಿಮಾ ಶೂಟಿಂಗ್​​ ವೇಳೆ ನಟ ಅಕ್ಷಯ್​ ಕುಮಾರ್​ ಗಾಯಗೊಂಡಿದ್ದಾರೆ.

Akshay Kumar suffers from knee injuries
ಗಾಯಗೊಂಡ ಅಕ್ಷಯ್​ ಕುಮಾರ್

ಚಲನಚಿತ್ರಗಳಲ್ಲಿ ವಿಶಿಷ್ಟ ಆ್ಯಕ್ಷನ್​​ ಸೀನ್​ಗಳನ್ನು ಪ್ರದರ್ಶಿಸುವ ಮೂಲಕ ಹೆಸರುವಾಸಿಯಾಗಿರುವ ಬಾಲಿವುಡ್​​ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್. ಒಂದು ಕಾಲದಲ್ಲಿ ಸೂಪರ್​ ಹಿಟ್​ ಚಿತ್ರಗಳನ್ನೇ ಕೊಟ್ಟ ಈ ಬಹುಬೇಡಿಕೆಯ ನಟ ಇತ್ತೀಚೆಗೆ ಸತತ ಸೋಲುಗಳನ್ನು ಅನುಭವಿಸುತ್ತಿದ್ದಾರೆ. ಗೆಲ್ಲುವ ಆತ್ಮವಿಶ್ವಾಸಗೊಂದಿಗೆ 'ಬಡೆ ಮಿಯಾನ್ ಚೋಟೆ ಮಿಯಾನ್' ಸಿನಿಮಾ ಶೂಟಿಂಗ್​​ ಆರಂಭಿಸಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಮೊಣಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ.

ಬಡೆ ಮಿಯಾನ್ ಚೋಟೆ ಮಿಯಾನ್ ಚಿತ್ರವನ್ನು ಜಾಕಿ ಭಗ್ನಾನಿಯವರ ಪೂಜಾ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿಸುತ್ತಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ಶೂಟಿಂಗ್​ ಮಾಡುವ ವೇಳೆ ಬಾಲಿವುಡ್ ಕಿಲಾಡಿ ಗಾಯಗೊಂಡಿದ್ದಾರೆ. ಗಾಯ ಗಂಭೀರ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಚಿತ್ರೀಕರಣ ಮುಂದುವರಿಸಲಾಗಿದೆ.

ಅಕ್ಷಯ್ ಕುಮಾರ್​ ಅವರು ಟೈಗರ್ ಶ್ರಾಫ್ ಅವರೊಂದಿಗೆ ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ನಿರ್ದಿಷ್ಟ ಸಾಹಸ ಸೀನ್​ ವೇಳೆ ಘಟನೆ ಸಂಭವಿಸಿದೆ. ಅದಕ್ಕೆ ಬೇಕಾದ ಚಿಕಿತ್ಸೆ ಪಡೆದಿದ್ದಾರೆ. ಮೂಲಗಳ ಪ್ರಕಾರ, ಸ್ಕಾಟ್ಲೆಂಡ್ ಶೂಟಿಂಗ್​​ ವೇಳಾಪಟ್ಟಿಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಸಲುವಾಗಿ ಅಕ್ಷಯ್​ ಕುಮಾರ್​ ಪ್ರಸ್ತುತ ಅವರ ಕ್ಲೋಸ್ ಅಪ್‌ ಸೀನ್​ಗಳ ಚಿತ್ರೀಕರಣದಲ್ಲಿದ್ದಾರೆ. ಆದರೆ ಸಾಹಸ ದೃಶ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ಅಮಿತಾಭ್​​ ಬಚ್ಚನ್ ಮತ್ತು ಗೋವಿಂದ ಅಭಿನಯದ ಕಾಮಿಡಿ ಡ್ರಾಮಾ ಸೂಪರ್​ ಹಿಟ್​​​ ಚಿತ್ರ 'ಬಡೆ ಮಿಯಾನ್ ಚೋಟೆ ಮಿಯಾನ್'. ಆದ್ರೆ ಅಕ್ಷಯ್​ ಟೈಗರ್​ ಕಾಂಬೋದ ಈ ಚಿತ್ರಕ್ಕೂ 1998ರಲ್ಲಿ ತೆರೆಕಂಡ ಅಮಿತಾಭ್​ ಅವರ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಈ ಹಿಂದಿನ ಸಂದರ್ಶನದಲ್ಲಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ಹೃದಯಾಘಾತದ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ

ಅಕ್ಷಯ್ ಕುಮಾರ್ ವಿಭಿನ್ನ ಪಾತ್ರ, ಅತ್ಯುತ್ತಮ ನಟನೆ, ಆರೋಗ್ಯಕರ ಜೀವನಶೈಲಿ, ಫಿಟ್​ನೆಸ್​​ ವಿಚಾರಗಳಿಂದ ಹೆಸರುವಾಸಿ. ತಮ್ಮ ಪ್ರಭಾವಶಾಲಿ ಅಭಿನಯದಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಇವರು ಇತ್ತೀಚಿನ ದಿನಗಳಲ್ಲಿ ಹಿನ್ನಡೆ ಕಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು 'ತಮ್ಮ ಚಿತ್ರದ ಸೋಲಿಗೆ ತಾನೇ ಕಾರಣ'ವೆಂದು ಇತ್ತೀಚಿನ ಸಂದರ್ಶನದಲ್ಲಿ​ ಹೇಳಿಕೊಂಡಿದ್ದರು. "ಕುಳಿತು ಯೋಚಿಸುವ ಮತ್ತು ತನ್ನನ್ನು ತಾನು ಬದಲಾಯಿಸಿಕೊಳ್ಳುವ ಸಮಯ ಇದು" ಎಂದು ಹೇಳಿಕೊಂಡಿದ್ದ ಅವರು, ತಮ್ಮ ಚಿತ್ರಗಳ ಸೋಲಿನ ಹೊಣೆಯನ್ನೂ ಸಹ ತಾವೇ ಹೊತ್ತುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆಗಳು ಬದಲಾಗುತ್ತಿದೆ. ಹಾಗಾಗಿ ನಮ್ಮ ನಟನೆಯಲ್ಲಿ ಸುಧಾರಣೆ ತರುವ, ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದ್ದರು. ಸೆಲ್ಫಿ ಸಿನಿಮಾ ಸೋಲಿನ ಬಳಿಕ ಬಡೆ ಮಿಯಾನ್ ಚೋಟೆ ಮಿಯಾನ್ ಚಿತ್ರಕ್ಕೆ ಸಂಪೂರ್ಣ ಶ್ರಮ ಹಾಕುತ್ತಿದ್ದು, ಈ ಚಿತ್ರದ ಮೂಲಕ ಅಕ್ಷಯ್​ ಗೆಲುವಿನ ನಗೆ ಬೀರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2023: ಉದ್ಘಾಟನಾ ಸಮಾರಂಭದಲ್ಲಿ ಮಿಂಚು ಹರಿಸಲಿದ್ದಾರೆ ರಶ್ಮಿಕಾ ಮಂದಣ್ಣ, ತಮನ್ನಾ

ಚಲನಚಿತ್ರಗಳಲ್ಲಿ ವಿಶಿಷ್ಟ ಆ್ಯಕ್ಷನ್​​ ಸೀನ್​ಗಳನ್ನು ಪ್ರದರ್ಶಿಸುವ ಮೂಲಕ ಹೆಸರುವಾಸಿಯಾಗಿರುವ ಬಾಲಿವುಡ್​​ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್. ಒಂದು ಕಾಲದಲ್ಲಿ ಸೂಪರ್​ ಹಿಟ್​ ಚಿತ್ರಗಳನ್ನೇ ಕೊಟ್ಟ ಈ ಬಹುಬೇಡಿಕೆಯ ನಟ ಇತ್ತೀಚೆಗೆ ಸತತ ಸೋಲುಗಳನ್ನು ಅನುಭವಿಸುತ್ತಿದ್ದಾರೆ. ಗೆಲ್ಲುವ ಆತ್ಮವಿಶ್ವಾಸಗೊಂದಿಗೆ 'ಬಡೆ ಮಿಯಾನ್ ಚೋಟೆ ಮಿಯಾನ್' ಸಿನಿಮಾ ಶೂಟಿಂಗ್​​ ಆರಂಭಿಸಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಮೊಣಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ.

ಬಡೆ ಮಿಯಾನ್ ಚೋಟೆ ಮಿಯಾನ್ ಚಿತ್ರವನ್ನು ಜಾಕಿ ಭಗ್ನಾನಿಯವರ ಪೂಜಾ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿಸುತ್ತಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ಶೂಟಿಂಗ್​ ಮಾಡುವ ವೇಳೆ ಬಾಲಿವುಡ್ ಕಿಲಾಡಿ ಗಾಯಗೊಂಡಿದ್ದಾರೆ. ಗಾಯ ಗಂಭೀರ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಚಿತ್ರೀಕರಣ ಮುಂದುವರಿಸಲಾಗಿದೆ.

ಅಕ್ಷಯ್ ಕುಮಾರ್​ ಅವರು ಟೈಗರ್ ಶ್ರಾಫ್ ಅವರೊಂದಿಗೆ ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ನಿರ್ದಿಷ್ಟ ಸಾಹಸ ಸೀನ್​ ವೇಳೆ ಘಟನೆ ಸಂಭವಿಸಿದೆ. ಅದಕ್ಕೆ ಬೇಕಾದ ಚಿಕಿತ್ಸೆ ಪಡೆದಿದ್ದಾರೆ. ಮೂಲಗಳ ಪ್ರಕಾರ, ಸ್ಕಾಟ್ಲೆಂಡ್ ಶೂಟಿಂಗ್​​ ವೇಳಾಪಟ್ಟಿಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಸಲುವಾಗಿ ಅಕ್ಷಯ್​ ಕುಮಾರ್​ ಪ್ರಸ್ತುತ ಅವರ ಕ್ಲೋಸ್ ಅಪ್‌ ಸೀನ್​ಗಳ ಚಿತ್ರೀಕರಣದಲ್ಲಿದ್ದಾರೆ. ಆದರೆ ಸಾಹಸ ದೃಶ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ಅಮಿತಾಭ್​​ ಬಚ್ಚನ್ ಮತ್ತು ಗೋವಿಂದ ಅಭಿನಯದ ಕಾಮಿಡಿ ಡ್ರಾಮಾ ಸೂಪರ್​ ಹಿಟ್​​​ ಚಿತ್ರ 'ಬಡೆ ಮಿಯಾನ್ ಚೋಟೆ ಮಿಯಾನ್'. ಆದ್ರೆ ಅಕ್ಷಯ್​ ಟೈಗರ್​ ಕಾಂಬೋದ ಈ ಚಿತ್ರಕ್ಕೂ 1998ರಲ್ಲಿ ತೆರೆಕಂಡ ಅಮಿತಾಭ್​ ಅವರ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಈ ಹಿಂದಿನ ಸಂದರ್ಶನದಲ್ಲಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ಹೃದಯಾಘಾತದ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ

ಅಕ್ಷಯ್ ಕುಮಾರ್ ವಿಭಿನ್ನ ಪಾತ್ರ, ಅತ್ಯುತ್ತಮ ನಟನೆ, ಆರೋಗ್ಯಕರ ಜೀವನಶೈಲಿ, ಫಿಟ್​ನೆಸ್​​ ವಿಚಾರಗಳಿಂದ ಹೆಸರುವಾಸಿ. ತಮ್ಮ ಪ್ರಭಾವಶಾಲಿ ಅಭಿನಯದಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಇವರು ಇತ್ತೀಚಿನ ದಿನಗಳಲ್ಲಿ ಹಿನ್ನಡೆ ಕಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು 'ತಮ್ಮ ಚಿತ್ರದ ಸೋಲಿಗೆ ತಾನೇ ಕಾರಣ'ವೆಂದು ಇತ್ತೀಚಿನ ಸಂದರ್ಶನದಲ್ಲಿ​ ಹೇಳಿಕೊಂಡಿದ್ದರು. "ಕುಳಿತು ಯೋಚಿಸುವ ಮತ್ತು ತನ್ನನ್ನು ತಾನು ಬದಲಾಯಿಸಿಕೊಳ್ಳುವ ಸಮಯ ಇದು" ಎಂದು ಹೇಳಿಕೊಂಡಿದ್ದ ಅವರು, ತಮ್ಮ ಚಿತ್ರಗಳ ಸೋಲಿನ ಹೊಣೆಯನ್ನೂ ಸಹ ತಾವೇ ಹೊತ್ತುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆಗಳು ಬದಲಾಗುತ್ತಿದೆ. ಹಾಗಾಗಿ ನಮ್ಮ ನಟನೆಯಲ್ಲಿ ಸುಧಾರಣೆ ತರುವ, ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದ್ದರು. ಸೆಲ್ಫಿ ಸಿನಿಮಾ ಸೋಲಿನ ಬಳಿಕ ಬಡೆ ಮಿಯಾನ್ ಚೋಟೆ ಮಿಯಾನ್ ಚಿತ್ರಕ್ಕೆ ಸಂಪೂರ್ಣ ಶ್ರಮ ಹಾಕುತ್ತಿದ್ದು, ಈ ಚಿತ್ರದ ಮೂಲಕ ಅಕ್ಷಯ್​ ಗೆಲುವಿನ ನಗೆ ಬೀರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2023: ಉದ್ಘಾಟನಾ ಸಮಾರಂಭದಲ್ಲಿ ಮಿಂಚು ಹರಿಸಲಿದ್ದಾರೆ ರಶ್ಮಿಕಾ ಮಂದಣ್ಣ, ತಮನ್ನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.