ETV Bharat / crime

One Sided Love: ಯುವತಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ನೇಣಿಗೆ ಶರಣಾದ ಪ್ರೇಮಿ

author img

By

Published : Jul 1, 2021, 8:47 AM IST

ಯುವತಿ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ ಪಾಗಲ್​ ಪ್ರೇಮಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

ಚುರು (ರಾಜಸ್ಥಾನ): ತಾನು ಪ್ರೀತಿಸುತ್ತಿದ್ದ ಯುವತಿಗೆ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಯುವಕ ಆಕೆ ಮೇಲೆ ಕತ್ತಿಯಿಂದ ಬರ್ಬರವಾಗಿ ಹಲ್ಲೆ ನಡೆಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಯುವತಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಹಿನ್ನೆಲೆ

ಚುರು ಜಿಲ್ಲೆಯ ಕುನ್ಸಿಸಾರ್ ಗ್ರಾಮದ ಯುವತಿಯನ್ನು ಜಗದೀಶ್ ಸಿಂಗ್ ರಾಥೋಡ್ ಎಂಬಾತ ಪ್ರೀತಿಸುತ್ತಿದ್ದ. ಆದರೆ, ಇವರ ಪ್ರೇಮ ನಿವೇದನೆಯನ್ನು ಯುವತಿ ತಿರಸ್ಕರಿಸಿದ್ದಳು. ಯುವತಿ ಹಾಗೂ ಆಕೆಯ ಸಹೋದರಿ ಇಬ್ಬರಿಗೂ ಜುಲೈ 18 ರಂದು ಮದುವೆ ಫಿಕ್ಸ್ ಆಗಿದ್ದು, ಸ್ನೇಹಿತರೊಬ್ಬರ ಮನೆಗೆ ತೆರಳಿ ವಿವಾಹಕ್ಕೆ ಆಮಂತ್ರಣ ನೀಡಿ ಬರುವ ವೇಳೆ ಬೈಕ್​ನಲ್ಲಿ ಬಂದ ಜಗದೀಶ್ ಸಿಂಗ್ ರಾಥೋಡ್ ಇವರನ್ನು ಅಡ್ಡಗಟ್ಟಿದ್ದಾನೆ. ಯುವತಿ ಮೇಲೆ ನಿರ್ದಯವಾಗಿ ಹಲವಾರು ಬಾರಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.

ಯುವತಿ ಮೇಲೆ ಹಲ್ಲೆ

ಇದನ್ನೂ ಓದಿ: ಉರುಳಾದ ಜೋಕಾಲಿ : ಇಬ್ಬರು ಮಕ್ಕಳ‌ ದಾರುಣ ಅಂತ್ಯ

ಯುವತಿಯ ಮೂರು ಕೈ ಬೆರಳುಗಳು ತುಂಡರಿಸಿದ್ದು, ಕುತ್ತಿಗೆ ಹಾಗೂ ಬೆನ್ನಿಗೆ ಬಲವಾದ ಏಟು ಬಿದ್ದಿದೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಆಕೆಯನ್ನು ಸಹೋದರಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಆರೋಪಿಯು ಅಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದನು.

ಇನ್ನು ಆರೋಪಿಯ ಸ್ನೇಹಿತನ ತಂಗಿ ಹಾಗೂ ಸಂತ್ರಸ್ತೆ ಇಬ್ಬರೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದು, ಈ ಹಿಂದೆ ಇವರ ನಡುವೆ ಜಗಳ ನಡೆದಿತ್ತು. ಆಗ ಕೂಡ ಯುವತಿಯನ್ನು ಕೊಲ್ಲುವುದಾಗಿ ಆರೋಪಿ ಹೇಳಿದ್ದನು ಎಂದು ಹೇಳಲಾಗಿದೆ

ಚುರು (ರಾಜಸ್ಥಾನ): ತಾನು ಪ್ರೀತಿಸುತ್ತಿದ್ದ ಯುವತಿಗೆ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಯುವಕ ಆಕೆ ಮೇಲೆ ಕತ್ತಿಯಿಂದ ಬರ್ಬರವಾಗಿ ಹಲ್ಲೆ ನಡೆಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಯುವತಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಹಿನ್ನೆಲೆ

ಚುರು ಜಿಲ್ಲೆಯ ಕುನ್ಸಿಸಾರ್ ಗ್ರಾಮದ ಯುವತಿಯನ್ನು ಜಗದೀಶ್ ಸಿಂಗ್ ರಾಥೋಡ್ ಎಂಬಾತ ಪ್ರೀತಿಸುತ್ತಿದ್ದ. ಆದರೆ, ಇವರ ಪ್ರೇಮ ನಿವೇದನೆಯನ್ನು ಯುವತಿ ತಿರಸ್ಕರಿಸಿದ್ದಳು. ಯುವತಿ ಹಾಗೂ ಆಕೆಯ ಸಹೋದರಿ ಇಬ್ಬರಿಗೂ ಜುಲೈ 18 ರಂದು ಮದುವೆ ಫಿಕ್ಸ್ ಆಗಿದ್ದು, ಸ್ನೇಹಿತರೊಬ್ಬರ ಮನೆಗೆ ತೆರಳಿ ವಿವಾಹಕ್ಕೆ ಆಮಂತ್ರಣ ನೀಡಿ ಬರುವ ವೇಳೆ ಬೈಕ್​ನಲ್ಲಿ ಬಂದ ಜಗದೀಶ್ ಸಿಂಗ್ ರಾಥೋಡ್ ಇವರನ್ನು ಅಡ್ಡಗಟ್ಟಿದ್ದಾನೆ. ಯುವತಿ ಮೇಲೆ ನಿರ್ದಯವಾಗಿ ಹಲವಾರು ಬಾರಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.

ಯುವತಿ ಮೇಲೆ ಹಲ್ಲೆ

ಇದನ್ನೂ ಓದಿ: ಉರುಳಾದ ಜೋಕಾಲಿ : ಇಬ್ಬರು ಮಕ್ಕಳ‌ ದಾರುಣ ಅಂತ್ಯ

ಯುವತಿಯ ಮೂರು ಕೈ ಬೆರಳುಗಳು ತುಂಡರಿಸಿದ್ದು, ಕುತ್ತಿಗೆ ಹಾಗೂ ಬೆನ್ನಿಗೆ ಬಲವಾದ ಏಟು ಬಿದ್ದಿದೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಆಕೆಯನ್ನು ಸಹೋದರಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಆರೋಪಿಯು ಅಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದನು.

ಇನ್ನು ಆರೋಪಿಯ ಸ್ನೇಹಿತನ ತಂಗಿ ಹಾಗೂ ಸಂತ್ರಸ್ತೆ ಇಬ್ಬರೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದು, ಈ ಹಿಂದೆ ಇವರ ನಡುವೆ ಜಗಳ ನಡೆದಿತ್ತು. ಆಗ ಕೂಡ ಯುವತಿಯನ್ನು ಕೊಲ್ಲುವುದಾಗಿ ಆರೋಪಿ ಹೇಳಿದ್ದನು ಎಂದು ಹೇಳಲಾಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.