ETV Bharat / city

ಮಲೆನಾಡಿನಲ್ಲಿ ತಗ್ಗಿದ ಮಂಗನಕಾಯಿಲೆ... ಈ ವರ್ಷ ಶೂನ್ಯ ಕೇಸ್

author img

By

Published : Feb 8, 2021, 7:40 PM IST

ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಮಲೆನಾಡಿನ ಜನ ಮನೆಯಿಂದ ಹೊರಬರಲು ಹೆದರುವಂಥ ಸ್ಥಿತಿಯನ್ನು ಮಂಗನಕಾಯಿಲೆ ತಂದಿಡುತ್ತಿತ್ತು. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿ ಮೇ ಜೂನ್‌ವರೆಗೂ ಇರುತ್ತಿದ್ದ ಕೆಎಫ್​ಡಿ, ಮಾರ್ಚ್ ಏಪ್ರಿಲ್‌ ನಲ್ಲಿ ತೀವ್ರ ಮಟ್ಟದಲ್ಲಿರುತ್ತಿತ್ತು. 2018-19ರಲ್ಲಿ ನವೆಂಬರ್ ಮೂರನೇ ವಾರದಲ್ಲಿ ಕಾಣಿಸಿ ಕೊಂಡು ಅದೇ ವರ್ಷ ಇತಿಹಾಸದಲ್ಲೇ ಅತಿ ಹೆಚ್ಚು ಮರಣ ಪ್ರಮಾಣ ದಾಖಲಾಗಿತ್ತು.

decreased-monkey-fever-disease-in-shivamogga-district
ಮಂಗನಕಾಯಿಲೆ

ಶಿವಮೊಗ್ಗ: ಮಲೆನಾಡನ್ನು ಪ್ರತಿವರ್ಷ ಆತಂಕದ ಕೂಪಕ್ಕೆ ತಳ್ಳುತ್ತಿದ್ದ ಮಂಗನಕಾಯಿಲೆ ಆರ್ಭಟ ಈ ವರ್ಷ ತಣ್ಣಗಾಗಿದೆ. ಪ್ರತಿ ವರ್ಷ ಮಂಗನಕಾಯಿಲೆಯಿಂದ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವರ್ಷ ಆರೋಗ್ಯ ಇಲಾಖೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಫಲವಾಗಿ ಪೆಡಂಭೂತವಾಗಿ ಜನರನ್ನು ಕಾಡುತ್ತಿದ್ದ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಈ ಬಾರಿ ಮಂಕಾಗಿದ್ದು, ಎರಡೂ ತಿಂಗಳಾದರೂ ಒಂದೂ ಪ್ರಕರಣ ದಾಖಲಾಗಿಲ್ಲ.

ಮಲೆನಾಡಿನಲ್ಲಿ ತಗ್ಗಿದ ಮಂಗನಕಾಯಿಲೆ

ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಮಲೆನಾಡಿನ ಜನರ ಮನೆಯಿಂದ ಹೊರಬರಲು ಹೆದರುವಂಥ ಸ್ಥಿತಿಯನ್ನು ಮಂಗನಕಾಯಿಲೆ ತಂದಿಡುತ್ತಿತ್ತು. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿ ಮೇ ಜೂನ್‌ವರೆಗೂ ಇರುತ್ತಿದ್ದ ಕೆಎಫ್​ಡಿ, ಮಾರ್ಚ್ ಏಪ್ರಿಲ್ಲ್​ನಲ್ಲಿ ತೀವ್ರ ಮಟ್ಟದಲ್ಲಿರುತ್ತಿತ್ತು. 2018-19ರಲ್ಲಿ ನವೆಂಬರ್ ಮೂರನೇ ವಾರದಲ್ಲಿ ಕಾಣಿಸಿಕೊಂಡು ಅದೇ ವರ್ಷ ಇತಿಹಾಸದಲ್ಲೇ ಅತಿ ಹೆಚ್ಚು ಮರಣ ಪ್ರಮಾಣ ದಾಖಲಾಗಿತ್ತು.

ಆ ವರ್ಷ ಇಡೀ ರಾಜ್ಯದಲ್ಲಿ 445 ಪ್ರಕರಣಗಳು ವರದಿಯಾಗಿ ಅದರಲ್ಲಿ 15 ಮಂದಿ ಮೃತಪಟ್ಟಿದ್ದರು. ಶಿವಮೊಗ್ಗದ ಅರಳಗೋಡು ಗ್ರಾಮವೊಂದರಲ್ಲೇ 12 ಮಂದಿ ಸಾವಿಗೀಡಾಗಿದ್ದರು. ಅತಿ ಹೆಚ್ಚು ಪಾಸಿಟಿವ್ ಕೇಸ್‌ಗಳು ಶಿವಮೊಗ್ಗದಲ್ಲೇ ವರದಿಯಾದವು. ಆ ಘಟನೆ ನಂತರ ವ್ಯಾಕ್ಸಿನೇಷನ್​ಗೆ ಹೆಚ್ಚು ಮಹತ್ವ ನೀಡಲಾಗಿ 2019-20 ರಲ್ಲಿ 255 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಕಾಣಿಸಿಕೊಂಡು 5 ಮಂದಿ ಮೃತಪಟ್ಟಿದ್ದರು. ಆದರೆ ಈ ವರ್ಷ ಫೆಬ್ರವರಿ ಮೊದಲ ವಾರದವರೆಗೂ ಯಾವುದೇ ಕೇಸ್‌ಗಳು ಕಾಣಿಸಿಕೊಳ್ಳದಿರುವುದು ಇಲಾಖೆಯ ಕ್ರಮಗಳು ಫಲ ನೀಡುತ್ತಿವೆ ಎಂಬ ವಿಶ್ವಾಸ ಮೂಡಿದೆ.

ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಜಿಲ್ಲೆಗಳಿಗೂ ವ್ಯಾಪಿಸಲಾರಂಭಿಸಿತ್ತು. ಇದು ಶಿವಮೊಗ್ಗಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಜನರ ಆತಂಕಕ್ಕೂ ಕಾರಣವಾಗಿತ್ತು. ಆದರೆ ಈ ವರ್ಷ ಸಮಯಕ್ಕೆ ಸರಿಯಾಗಿ ಮಲೆನಾಡು ಭಾಗದ ಜನರಿಗೆ ವ್ಯಾಕ್ಸಿನೇಷನ್ ನೀಡಿದ್ದರಿಂದಾಗಿ ಮಂಗನಕಾಯಿಲೆ ನಿಯಂತ್ರಣಕ್ಕೆ ಬಂದಿದೆ.

ಈವರೆಗೆ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಉಡುಪಿಯ 1400 ಮಂದಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು ಯಾರಲ್ಲೂ ಪಾಸಿಟಿವ್ ಕಾಣಿಸಿಕೊಂಡಿಲ್ಲ. ಕೆಎಫ್‌ಡಿ ಬಾಧಿತ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಮೂರು ಹಂತಗಳಲ್ಲಿ ಎರಡು ಡೋಸ್ ವ್ಯಾಕ್ಸಿನೇಷನ್ ನಂತರ ಒಂದು ಬೂಸ್ಟರ್ ನೀಡಲಾಗಿದ್ದು, ಪರಿಣಾಮಕಾರಿಯಾಗಿದೆ. ಜೊತೆಗೆ 2020ರಲ್ಲಿ ಮೊದಲ ಬಾರಿಗೆ ಕಾಡಿನಿಂದ ಮನೆಗಳಿಗೆ ಉಣುಗುಗಳನ್ನು ಹೊತ್ತು ತರುತ್ತಿದ್ದ 8 ಸಾವಿರ ದನಕರುಗಳಿಗೂ ಡೋರಾಮೆಕ್ಷನ್ ಚುಚ್ಚುಮದ್ದು ನೀಡಲಾಗಿದ್ದು, ಇದು ಸಹ ಕೆಎಫ್​ಡಿ ನಿಯಂತ್ರಣದಲ್ಲಿ ಫಲ ನೀಡಿದೆ.

ಒಟ್ಟಾರೆ, ಪ್ರತಿ ವರ್ಷ ಮಲೆನಾಡು ಜನರ ನಿದ್ದೆಗೆಡಿಸುತ್ತಿದ್ದ ಮಹಾಮಾರಿ ಮಂಗನಕಾಯಿಲೆ ಗಣನೀಯವಾಗಿ ತಗ್ಗಿರುವುದು ಮಲೆನಾಡು ಜನರಲ್ಲಿ ಸಂತಸ ತಂದಿದೆ. ಆರೋಗ್ಯ ಇಲಾಖೆ ಇದೇ ರೀತಿ ಮುಂಜಾಗ್ರತಾ ಕ್ರಮಕೈಗೊಂಡು, ಮಲೆನಾಡನ್ನು ಮಂಗನಕಾಯಿಲೆ ಮುಕ್ತವನ್ನಾಗಿಸಲಿ ಎಂಬುದು ನಮ್ಮ ಆಶಯ.

ಶಿವಮೊಗ್ಗ: ಮಲೆನಾಡನ್ನು ಪ್ರತಿವರ್ಷ ಆತಂಕದ ಕೂಪಕ್ಕೆ ತಳ್ಳುತ್ತಿದ್ದ ಮಂಗನಕಾಯಿಲೆ ಆರ್ಭಟ ಈ ವರ್ಷ ತಣ್ಣಗಾಗಿದೆ. ಪ್ರತಿ ವರ್ಷ ಮಂಗನಕಾಯಿಲೆಯಿಂದ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವರ್ಷ ಆರೋಗ್ಯ ಇಲಾಖೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಫಲವಾಗಿ ಪೆಡಂಭೂತವಾಗಿ ಜನರನ್ನು ಕಾಡುತ್ತಿದ್ದ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಈ ಬಾರಿ ಮಂಕಾಗಿದ್ದು, ಎರಡೂ ತಿಂಗಳಾದರೂ ಒಂದೂ ಪ್ರಕರಣ ದಾಖಲಾಗಿಲ್ಲ.

ಮಲೆನಾಡಿನಲ್ಲಿ ತಗ್ಗಿದ ಮಂಗನಕಾಯಿಲೆ

ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಮಲೆನಾಡಿನ ಜನರ ಮನೆಯಿಂದ ಹೊರಬರಲು ಹೆದರುವಂಥ ಸ್ಥಿತಿಯನ್ನು ಮಂಗನಕಾಯಿಲೆ ತಂದಿಡುತ್ತಿತ್ತು. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿ ಮೇ ಜೂನ್‌ವರೆಗೂ ಇರುತ್ತಿದ್ದ ಕೆಎಫ್​ಡಿ, ಮಾರ್ಚ್ ಏಪ್ರಿಲ್ಲ್​ನಲ್ಲಿ ತೀವ್ರ ಮಟ್ಟದಲ್ಲಿರುತ್ತಿತ್ತು. 2018-19ರಲ್ಲಿ ನವೆಂಬರ್ ಮೂರನೇ ವಾರದಲ್ಲಿ ಕಾಣಿಸಿಕೊಂಡು ಅದೇ ವರ್ಷ ಇತಿಹಾಸದಲ್ಲೇ ಅತಿ ಹೆಚ್ಚು ಮರಣ ಪ್ರಮಾಣ ದಾಖಲಾಗಿತ್ತು.

ಆ ವರ್ಷ ಇಡೀ ರಾಜ್ಯದಲ್ಲಿ 445 ಪ್ರಕರಣಗಳು ವರದಿಯಾಗಿ ಅದರಲ್ಲಿ 15 ಮಂದಿ ಮೃತಪಟ್ಟಿದ್ದರು. ಶಿವಮೊಗ್ಗದ ಅರಳಗೋಡು ಗ್ರಾಮವೊಂದರಲ್ಲೇ 12 ಮಂದಿ ಸಾವಿಗೀಡಾಗಿದ್ದರು. ಅತಿ ಹೆಚ್ಚು ಪಾಸಿಟಿವ್ ಕೇಸ್‌ಗಳು ಶಿವಮೊಗ್ಗದಲ್ಲೇ ವರದಿಯಾದವು. ಆ ಘಟನೆ ನಂತರ ವ್ಯಾಕ್ಸಿನೇಷನ್​ಗೆ ಹೆಚ್ಚು ಮಹತ್ವ ನೀಡಲಾಗಿ 2019-20 ರಲ್ಲಿ 255 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಕಾಣಿಸಿಕೊಂಡು 5 ಮಂದಿ ಮೃತಪಟ್ಟಿದ್ದರು. ಆದರೆ ಈ ವರ್ಷ ಫೆಬ್ರವರಿ ಮೊದಲ ವಾರದವರೆಗೂ ಯಾವುದೇ ಕೇಸ್‌ಗಳು ಕಾಣಿಸಿಕೊಳ್ಳದಿರುವುದು ಇಲಾಖೆಯ ಕ್ರಮಗಳು ಫಲ ನೀಡುತ್ತಿವೆ ಎಂಬ ವಿಶ್ವಾಸ ಮೂಡಿದೆ.

ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಜಿಲ್ಲೆಗಳಿಗೂ ವ್ಯಾಪಿಸಲಾರಂಭಿಸಿತ್ತು. ಇದು ಶಿವಮೊಗ್ಗಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಜನರ ಆತಂಕಕ್ಕೂ ಕಾರಣವಾಗಿತ್ತು. ಆದರೆ ಈ ವರ್ಷ ಸಮಯಕ್ಕೆ ಸರಿಯಾಗಿ ಮಲೆನಾಡು ಭಾಗದ ಜನರಿಗೆ ವ್ಯಾಕ್ಸಿನೇಷನ್ ನೀಡಿದ್ದರಿಂದಾಗಿ ಮಂಗನಕಾಯಿಲೆ ನಿಯಂತ್ರಣಕ್ಕೆ ಬಂದಿದೆ.

ಈವರೆಗೆ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಉಡುಪಿಯ 1400 ಮಂದಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು ಯಾರಲ್ಲೂ ಪಾಸಿಟಿವ್ ಕಾಣಿಸಿಕೊಂಡಿಲ್ಲ. ಕೆಎಫ್‌ಡಿ ಬಾಧಿತ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಮೂರು ಹಂತಗಳಲ್ಲಿ ಎರಡು ಡೋಸ್ ವ್ಯಾಕ್ಸಿನೇಷನ್ ನಂತರ ಒಂದು ಬೂಸ್ಟರ್ ನೀಡಲಾಗಿದ್ದು, ಪರಿಣಾಮಕಾರಿಯಾಗಿದೆ. ಜೊತೆಗೆ 2020ರಲ್ಲಿ ಮೊದಲ ಬಾರಿಗೆ ಕಾಡಿನಿಂದ ಮನೆಗಳಿಗೆ ಉಣುಗುಗಳನ್ನು ಹೊತ್ತು ತರುತ್ತಿದ್ದ 8 ಸಾವಿರ ದನಕರುಗಳಿಗೂ ಡೋರಾಮೆಕ್ಷನ್ ಚುಚ್ಚುಮದ್ದು ನೀಡಲಾಗಿದ್ದು, ಇದು ಸಹ ಕೆಎಫ್​ಡಿ ನಿಯಂತ್ರಣದಲ್ಲಿ ಫಲ ನೀಡಿದೆ.

ಒಟ್ಟಾರೆ, ಪ್ರತಿ ವರ್ಷ ಮಲೆನಾಡು ಜನರ ನಿದ್ದೆಗೆಡಿಸುತ್ತಿದ್ದ ಮಹಾಮಾರಿ ಮಂಗನಕಾಯಿಲೆ ಗಣನೀಯವಾಗಿ ತಗ್ಗಿರುವುದು ಮಲೆನಾಡು ಜನರಲ್ಲಿ ಸಂತಸ ತಂದಿದೆ. ಆರೋಗ್ಯ ಇಲಾಖೆ ಇದೇ ರೀತಿ ಮುಂಜಾಗ್ರತಾ ಕ್ರಮಕೈಗೊಂಡು, ಮಲೆನಾಡನ್ನು ಮಂಗನಕಾಯಿಲೆ ಮುಕ್ತವನ್ನಾಗಿಸಲಿ ಎಂಬುದು ನಮ್ಮ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.