ETV Bharat / city

ಬೈಕ್ ಸವಾರನ ಸುಲಿಗೆ: ಮಂಗಳಮುಖಿಯ ಬಂಧನ

ಮಂಗಳೂರಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನದ ಸರ ಸುಲಿಗೆ ಮಾಡಿದ್ದ ಮಂಗಳಮುಖಿಯನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Nov 30, 2021, 5:30 AM IST

ಮಂಗಳಮುಖಿಯ ಬಂಧನ,Third Gender arrested in mangaluru
ಮಂಗಳಮುಖಿಯ ಬಂಧನ

ಮಂಗಳೂರು: ಬೈಕ್ ಸವಾರನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಇಜಿಪುರದಲ್ಲಿ ವಾಸವಿರುವ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ ಬಂಧಿತ ಆರೋಪಿ. ಮಂಗಳೂರಿನ ನಂತೂರು ಪದವು ಬಳಿ ಇರುವ ಬಿಎಸ್​ಎನ್​ಎಲ್ ಎಕ್ಸ್ ಚೇಂಜ್ ಬಳಿ ಬೈಕ್​​ನಲ್ಲಿ ಬರುತ್ತಿದ್ದ ಗಣೇಶ್ ಶೆಟ್ಟಿ ಎಂಬಾತನನ್ನು ತಡೆದು ಮುಖಕ್ಕೆ ಪೆಪ್ಪರ್ ಸ್ಪ್ರೆ ಬಳಸಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಆರೋಪಿ ಸುಲಿಗೆ ಮಾಡಿದ್ದ.

ಈ ಬಗ್ಗೆ ಗಣೇಶ್ ಶೆಟ್ಟಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಭಿಷೇಕ್​ನನ್ನು ಬಂಧಿಸಿದ್ದಾರೆ. ಆರೋಪಿಯು ಮೂರು ಚಿನ್ನದ ಸರ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಆತನಿಂದ 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ಬೈಕ್ ಸವಾರನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಇಜಿಪುರದಲ್ಲಿ ವಾಸವಿರುವ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ ಬಂಧಿತ ಆರೋಪಿ. ಮಂಗಳೂರಿನ ನಂತೂರು ಪದವು ಬಳಿ ಇರುವ ಬಿಎಸ್​ಎನ್​ಎಲ್ ಎಕ್ಸ್ ಚೇಂಜ್ ಬಳಿ ಬೈಕ್​​ನಲ್ಲಿ ಬರುತ್ತಿದ್ದ ಗಣೇಶ್ ಶೆಟ್ಟಿ ಎಂಬಾತನನ್ನು ತಡೆದು ಮುಖಕ್ಕೆ ಪೆಪ್ಪರ್ ಸ್ಪ್ರೆ ಬಳಸಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಆರೋಪಿ ಸುಲಿಗೆ ಮಾಡಿದ್ದ.

ಈ ಬಗ್ಗೆ ಗಣೇಶ್ ಶೆಟ್ಟಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಭಿಷೇಕ್​ನನ್ನು ಬಂಧಿಸಿದ್ದಾರೆ. ಆರೋಪಿಯು ಮೂರು ಚಿನ್ನದ ಸರ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಆತನಿಂದ 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.