ETV Bharat / city

ಪುತ್ತೂರು ಗ್ಯಾಂಗ್​ ರೇಪ್​ ಪ್ರಕರಣ: ಐವರ ಪೈಕಿ ಓರ್ವನಿಗೆ ಜಾಮೀನು - gang-rape case'

ಅತ್ಯಾಚಾರವೆಸಗಿ, ಜೊತೆಗೆ ಕೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಾಗೂ ದಲಿತ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಪುತ್ತೂರು ಕಾಲೇಜೊಂದರ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಹೈಕೋರ್ಟ್​​ ಜಾಮೀನು ನೀಡಿದೆ.

Accused in rape case
ಐವರ ಪೈಕಿ ಒಬ್ಬನಿಗೆ ಜಾಮೀನು
author img

By

Published : Nov 28, 2019, 7:14 PM IST

ಮಂಗಳೂರು: ವಿದ್ಯಾರ್ಥಿನಿವೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಜೊತೆಗೆ ಈ ದುಷ್ಕೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಹಾಗೂ ದಲಿತ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪುತ್ತೂರು ಕಾಲೇಜೊಂದರ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಇಂದು ಹೈಕೋರ್ಟ್​​ ಜಾಮೀನು ನೀಡಿದೆ.

ಬಜತ್ತೂರು ಗ್ರಾಮದ ಗುರುನಂದನ್ (19), ಪೆರ್ನೆಯ ಪ್ರಜ್ವಲ್ (19), ಪೆರ್ನೆ ಕಿಶನ್ (19), ಆರ್ಯಾಪು ಗ್ರಾಮದ ಸುನಿಲ್ (19) ಮತ್ತು ಬಂಟ್ವಾಳದ ಪ್ರಖ್ಯಾತ್ (19) ಈ ಪ್ರಕರಣದ ಆರೋಪಿಗಳು. ಈಗ ಪ್ರಜ್ವಲ್​ಗೆ ಜಾಮೀನು ದೊರೆತಿದೆ.

ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಜುಲೈ 5ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಆರೋಪಿ ಪರ ವಕೀಲ ಕಜೆ ಲಾ ಚೇಂಬರ್ಸ್​​ನ ಮಹೇಶ್ ಕಜೆ ವಾದಿಸಿದರು. ಪ್ರಕರಣದಲ್ಲಿ ಇನ್ನುಳಿದ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ.

ಮಾರ್ಚ್ ತಿಂಗಳಲ್ಲಿ ಎಸಗಿದ್ದ ಈ ದುಷ್ಕೃತ್ಯದ ವಿಡಿಯೋವನ್ನು ಜುಲೈನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕೃತ್ಯವು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಕಠಾರ ಎಂಬಲ್ಲಿ ಸಂಭವಿಸಿದೆ ಎಂದು ಸಂತ್ರಸ್ತ ಯುವತಿ ನೀಡಿದ ದೂರಿನ ಆಧರಿಸಿ ಪ್ರಕರಣ ದಾಖಲಾಗಿತ್ತು.

ಕಾಲೇಜಿನಿಂದ ಮನೆಗೆ ಹೊರಟ್ಟಿದ ಯುವತಿಯನ್ನು ಪುತ್ತೂರಿನಲ್ಲಿ ತಡೆದು ನೋಟ್ಸ್​​ ಬೇಕು ಎಂದು ಕೇಳಿ, ಬಳಿಕ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕಲಂ 341, 376, (ಡಿ) 34 ಐಪಿಸಿ ಮತ್ತು 3(1), (1)(11), 3(2) ವಿ ಎಸ್ಸಿ/ಎಸ್ಟಿ ಪಿಎ ಅಮೆಂಡ್‌ಮೆಂಟ್ ಆ್ಯಕ್ಟ್ 2015ರಂತೆ ಮತ್ತು 66ಇ, 67ಎ ವಿಧಿಯಡಿ ಪ್ರಕರಣ ದಾಖಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ನ್ಯಾಯಾಲಯ ಕಳೆದ ತಿಂಗಳು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅರೋಪಿಗಳು ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.

ಮಂಗಳೂರು: ವಿದ್ಯಾರ್ಥಿನಿವೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಜೊತೆಗೆ ಈ ದುಷ್ಕೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಹಾಗೂ ದಲಿತ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪುತ್ತೂರು ಕಾಲೇಜೊಂದರ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಇಂದು ಹೈಕೋರ್ಟ್​​ ಜಾಮೀನು ನೀಡಿದೆ.

ಬಜತ್ತೂರು ಗ್ರಾಮದ ಗುರುನಂದನ್ (19), ಪೆರ್ನೆಯ ಪ್ರಜ್ವಲ್ (19), ಪೆರ್ನೆ ಕಿಶನ್ (19), ಆರ್ಯಾಪು ಗ್ರಾಮದ ಸುನಿಲ್ (19) ಮತ್ತು ಬಂಟ್ವಾಳದ ಪ್ರಖ್ಯಾತ್ (19) ಈ ಪ್ರಕರಣದ ಆರೋಪಿಗಳು. ಈಗ ಪ್ರಜ್ವಲ್​ಗೆ ಜಾಮೀನು ದೊರೆತಿದೆ.

ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಜುಲೈ 5ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಆರೋಪಿ ಪರ ವಕೀಲ ಕಜೆ ಲಾ ಚೇಂಬರ್ಸ್​​ನ ಮಹೇಶ್ ಕಜೆ ವಾದಿಸಿದರು. ಪ್ರಕರಣದಲ್ಲಿ ಇನ್ನುಳಿದ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ.

ಮಾರ್ಚ್ ತಿಂಗಳಲ್ಲಿ ಎಸಗಿದ್ದ ಈ ದುಷ್ಕೃತ್ಯದ ವಿಡಿಯೋವನ್ನು ಜುಲೈನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕೃತ್ಯವು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಕಠಾರ ಎಂಬಲ್ಲಿ ಸಂಭವಿಸಿದೆ ಎಂದು ಸಂತ್ರಸ್ತ ಯುವತಿ ನೀಡಿದ ದೂರಿನ ಆಧರಿಸಿ ಪ್ರಕರಣ ದಾಖಲಾಗಿತ್ತು.

ಕಾಲೇಜಿನಿಂದ ಮನೆಗೆ ಹೊರಟ್ಟಿದ ಯುವತಿಯನ್ನು ಪುತ್ತೂರಿನಲ್ಲಿ ತಡೆದು ನೋಟ್ಸ್​​ ಬೇಕು ಎಂದು ಕೇಳಿ, ಬಳಿಕ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕಲಂ 341, 376, (ಡಿ) 34 ಐಪಿಸಿ ಮತ್ತು 3(1), (1)(11), 3(2) ವಿ ಎಸ್ಸಿ/ಎಸ್ಟಿ ಪಿಎ ಅಮೆಂಡ್‌ಮೆಂಟ್ ಆ್ಯಕ್ಟ್ 2015ರಂತೆ ಮತ್ತು 66ಇ, 67ಎ ವಿಧಿಯಡಿ ಪ್ರಕರಣ ದಾಖಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ನ್ಯಾಯಾಲಯ ಕಳೆದ ತಿಂಗಳು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅರೋಪಿಗಳು ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.

Intro:Body:ಪುತ್ತೂರಿನ ಕಾಲೇಜೊಂದರ ಐವರು ವಿದ್ಯಾರ್ಥಿಗಳು ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಜೊತೆಗೆ ಅತ್ಯಾಚಾರ ಕೃತ್ಯದ ವಿಡೀಯೊ ಚಿತ್ರಿಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಆರೋಪ ಹಾಗೂ ದಲಿತ ದೌರ್ಜನ್ಯ ಪ್ರಕರಣ ಎದುರಿಸುತ್ತಿದ್ದು, ಈ ಐವರು ಆರೋಪಿಗಳ ಪೈಕಿ ಒಬ್ಬನಿಗೆ ಇಂದು ರಾಜ್ಯ ಉಚ್ಚ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ.

ಪುತ್ತೂರು ನಗರ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಜು.5 ರಂದು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಅದರಲ್ಲಿ ಪ್ರಖ್ಯಾತ್ (19ವ) ಎಂಬಾತನಿಗೆ ಇದೀಗ ಜಾಮೀನು ಮಂಜೂರಾಗಿದೆ. ಆರೋಪಿ ಪರ ಹೈ ಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ಪುತ್ತೂರು ಹಾಗೂ ಕಜೆ ಲಾ ಚೆಂಬರ್ಸ್ ನ ಮಹೇಶ್ ಕಜೆ ವಾದಿಸಿದರು. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇನ್ನುಳಿದ ನಾಲ್ಕು ಆರೋಪಿಗಳ ಜಾಮೀನು ಅರ್ಜಿ ಮುಂದಿನವಾರ ವಿಚಾರಣೆಗೆ ಬರಲಿದೆ.

ಬಜತ್ತೂರು ಗ್ರಾಮದ ಗಾಣದಮೂಲೆ ನಿವಾಸಿ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್ (19ವ), ಪೆರ್ನೆ ರಾಜಶ್ರೀ ಕೃಪಾದ ನಾಗೇಶ್ ನಾಯ್ಕ್ ಎಂಬವರ ಪುತ್ರ ಪ್ರಜ್ವಲ್ (19ವ), ಪೆರ್ನೆ ಕಡಂಬು ನಿವಾಸಿ ಸದಾಶಿವ ಎಂಬವರ ಪುತ್ರ ಕಿಶನ್ (19ವ), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಕಾಂತಪ್ಪ ಗೌಡರವರ ಪುತ್ರ ಸುನಿಲ್ (19ವ) ಮತ್ತು ಬಂಟ್ವಾಳ ಬರಿಮಾರು ಗ್ರಾಮದ ಬಲ್ಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಖ್ಯಾತ್ (19ವ) ಇವರುಗಳು ಪ್ರಕರಣದ ಆರೋಪಿಗಳಾಗಿದ್ದರು. ಇವರ ಪೈಕಿ ಪ್ರಖ್ಯಾತ್ ಗೆ ರಾಜ್ಯ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ಸಾಲಿನ ಮಾರ್ಚ್ ತಿಂಗಳಲ್ಲಿ ಕೃತ್ಯ ಎಸಗಲಾಗಿದ್ದು ಜುಲೈ ತಿಂಗಳ ಆರಂಭದಲ್ಲಿ ವಿಡೀಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಇದು ರಾಜ್ಯ ಮಟ್ಟದ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿ ಸಂಚಲನ ಮೂಡಿಸಿತ್ತು. ಕೃತ್ಯವು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಕಠಾರ ಎಂಬಲ್ಲಿ ಸಂಭವಿಸಿದೆ ಎಂದು ಸಂತೃಸ್ತ ಯುವತಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಲೇಜಿನಿಂದ ಮನೆಗೆ ಹೊರಟ್ಟಿದ ಸಂತೃಸ್ತ ಯುವತಿಯನ್ನು ಪುತ್ತೂರಿನಲ್ಲಿ ತಡೆದು ನೋಟ್ಸ್ ಬೇಕು ಎಂದು ಕೇಳಿ, ಬಳಿಕ ತಮ್ಮ ಕಾರಿನಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದಂತೆ, ಕಲಂ 341, 376, (ಡಿ) ಆರ್/ಡಬ್ಲ್ಯೂ 34 ಐಪಿಸಿ ಮತ್ತು 3(1)ಡಬ್ಲ್ಯೂ (1)(11), 3(2)ವಿ ಎಸ್ಸಿ/ಎಸ್ಟಿ ಪಿ.ಎ ಎಮೆಂಡ್‌ಮೆಂಟ್ ಆಕ್ಟ್ 2015ರಂತೆ ಮತ್ತು ಆರ್‌ಡಬ್ಲ್ಯೂ 66 ಇ, 67 ಎ, ಐಟಿ ಆಕ್ಟ್‌ನಂತೆ ಕೇಸು ದಾಖಲಿಸಿಕೊಂಡಿದ್ದರು.

ಕಳೆದ ನವೆಂಬರ್ ತಿಂಗಳಿನಲ್ಲಿ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು. ಕಳೆದ ತಿಂಗಳು ಪುತ್ತೂರು ಸತ್ರ ಜಿಲ್ಲಾ ನ್ಯಾಯಲಯವು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಬಳಿಕ ಅರೋಪಿಗಳು ಇದನ್ನು ಪ್ರಶ್ನಿಸಿ ಉಚ್ಚ ನ್ಯಾಯಲಯದ ಮೊರೆ ಹೋಗಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.