ETV Bharat / city

ಕುಡಿದು ವಾಹನ ಚಲಾಯಿಸಿ ಅಪಘಾತ: ಇಬ್ಬರು ಪೊಲೀಸರ ಅಮಾನತು

author img

By

Published : Mar 28, 2022, 9:25 AM IST

ಹೋಳಿ ಹಬ್ಬದ ದಿನದಂದು ಕರ್ತವ್ಯದ ವೇಳೆ ಕುಡಿದು ಇಲಾಖೆಯ ವಾಹನವನ್ನು ಚಲಾಯಿಸಿಕೊಂಡು ಹೋಗಿ ಬ್ಯಾರಿಕೇಡ್​ಗೆ ಗುದ್ದಿ ಗಾಯ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

police-suspended
ಪೊಲೀಸರು ಅಮಾನತು

ಹುಬ್ಬಳ್ಳಿ: ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ದಂಡ​ ಹಾಕಬೇಕಾದ ಪೊಲೀಸರೇ ಇಲಾಖೆಯ ವಾಹನವನ್ನು ಕುಡಿದ ಮತ್ತಿನಲ್ಲಿ ಬ್ಯಾರಿಕೇಡ್​ಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಉತ್ತರ ಸಂಚಾರಿ ಠಾಣೆಯ ಎಎಸ್​ಐ ಉದಯ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಅಮಾನತಾದ ಪೊಲೀಸರು. ಹೋಳಿ ಹಬ್ಬದ ದಿನದಂದು ಭದ್ರತೆ ನೀಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಣೆ ಬಳಿಕ ಮುತ್ತು ಮಾಗಿ, ಉದಯ ದೊಡ್ಡಮನಿ ಹೈವೇ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ತೆರಳಿದ್ದರು.

ಈ ವೇಳೆ ವಾಹನ ಚಲಾಯಿಸುತ್ತಿದ್ದ ಮುತ್ತುಮಾಗಿ ಕುಡಿದ ಮತ್ತಿನಲ್ಲಿ ವಾಹನವನ್ನು ಬ್ಯಾರಿಕೇಡ್​ಗೆ ಗುದ್ದಿದ್ದ. ಇದರಿಂದ ಮುತ್ತುಮಾಗಿ ಮತ್ತು ಉದಯ್​ ದೊಡ್ಡಮನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳು, ಈ ಇಬ್ಬರು ಪೊಲೀಸರು ಕರ್ತವ್ಯಲೋಪ ಎಸಗಿದ್ದು ಗೊತ್ತಾಗಿದೆ. ಇದರಿಂದಾಗಿ ಇಬ್ಬರನ್ನೂ ಅಮಾನತು ಮಾಡಿ ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.

ಓದಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ರೀಡೆಗಳ ಕಲರವ

ಹುಬ್ಬಳ್ಳಿ: ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ದಂಡ​ ಹಾಕಬೇಕಾದ ಪೊಲೀಸರೇ ಇಲಾಖೆಯ ವಾಹನವನ್ನು ಕುಡಿದ ಮತ್ತಿನಲ್ಲಿ ಬ್ಯಾರಿಕೇಡ್​ಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಉತ್ತರ ಸಂಚಾರಿ ಠಾಣೆಯ ಎಎಸ್​ಐ ಉದಯ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಅಮಾನತಾದ ಪೊಲೀಸರು. ಹೋಳಿ ಹಬ್ಬದ ದಿನದಂದು ಭದ್ರತೆ ನೀಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಣೆ ಬಳಿಕ ಮುತ್ತು ಮಾಗಿ, ಉದಯ ದೊಡ್ಡಮನಿ ಹೈವೇ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ತೆರಳಿದ್ದರು.

ಈ ವೇಳೆ ವಾಹನ ಚಲಾಯಿಸುತ್ತಿದ್ದ ಮುತ್ತುಮಾಗಿ ಕುಡಿದ ಮತ್ತಿನಲ್ಲಿ ವಾಹನವನ್ನು ಬ್ಯಾರಿಕೇಡ್​ಗೆ ಗುದ್ದಿದ್ದ. ಇದರಿಂದ ಮುತ್ತುಮಾಗಿ ಮತ್ತು ಉದಯ್​ ದೊಡ್ಡಮನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳು, ಈ ಇಬ್ಬರು ಪೊಲೀಸರು ಕರ್ತವ್ಯಲೋಪ ಎಸಗಿದ್ದು ಗೊತ್ತಾಗಿದೆ. ಇದರಿಂದಾಗಿ ಇಬ್ಬರನ್ನೂ ಅಮಾನತು ಮಾಡಿ ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.

ಓದಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ರೀಡೆಗಳ ಕಲರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.