ಹುಬ್ಬಳ್ಳಿ: ಗಣೇಶ ಚತುರ್ಥಿ ನಿಮಿತ್ತ ಅಡಕೆಯಲ್ಲಿ ಗಣೇಶ ಚಿತ್ರವನ್ನು ಮುದ್ರಿಸಿ ಸಾರ್ವಜನಿಕರು ಮತ್ತು ಗಜಾನನ ಸಮಿತಿಗಳಿಗೆ ಕಡಿಮೆ ಬೆಲೆಯಲ್ಲಿ ಆಶೀರ್ವಾದ ಗಣೇಶಗಳನ್ನು ವಿತರಿಸಲಿದ್ದೇವೆ ಎಂದು ಅಡಿಕೆ ವ್ಯಾಪಾರಸ್ಥ ಶ್ರೀನಿವಾಸ ಎಕಬೋಟೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಎಂದರೆ ಗಣಪತಿ. ಅಂತಹ ಅಡಕೆಯಲ್ಲಿ ಗಣೇಶನ ಅಚ್ಚನ್ನು ಹಾಕಲಾಗಿದ್ದು, ಇದು ಭಕ್ತರು ಪೂಜೆಗೆ ಬಹಳ ಸೂಕ್ತವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಿತಿಗಳು ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸುತ್ತವೆ. ಅಲ್ಲಿಗೆ ಬರುವ ಭಕ್ತರ ಒತ್ತಾಯದ ಮೇರೆಗೆ ಈ ಕಾರ್ಯದಲ್ಲಿ ತೊಡಗಿದ್ದೆವು. ಅಲ್ಲದೆ, ಅತಿ ಕಡಿಮೆ ದರದಲ್ಲಿ ಒದಗಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಯಾರಿಗಾದರೂ ಈ ಆಶೀರ್ವಾದ ಗಣೇಶಗಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.