ETV Bharat / city

ನೀರು ಕುಡಿದಿದ್ದೇನೆ, ನೀರು ಕುಡಿಸುತ್ತೇನೆ: ಡಿಕೆಶಿ - ಹು-ಧಾ ಮಹಾನಗರ ಕಾಂಗ್ರೆಸ್ ಘಟಕ

ನೋವು ಕೊಟ್ಟವರೇ ಮಾರ್ಗದರ್ಶಕರು, ಕಷ್ಟ ಕೊಟ್ಟವರೇ ಹಿತೈಷಿಗಳು, ಕಾಲು ಎಳೆದು ದೂರ ತಳ್ಳಿದವರೇ ನಮ್ಮ ಬಂಧುಗಳು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.

ಡಿಕೆಶಿ
author img

By

Published : Nov 21, 2019, 7:31 PM IST

ಹುಬ್ಬಳ್ಳಿ: ನೋವು ಕೊಟ್ಟವರೇ ಮಾರ್ಗದರ್ಶಕರು, ಕಷ್ಟ ಕೊಟ್ಟವರೇ ಹಿತೈಷಿಗಳು, ಕಾಲು ಎಳೆದು ದೂರ ತಳ್ಳಿದವರೇ ನಮ್ಮ ಬಂಧುಗಳು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಕಾಂಗ್ರೆಸ್ ಶಕ್ತಿ ಪ್ರದರ್ಶನ

ಹು-ಧಾ ಮಹಾನಗರ ಕಾಂಗ್ರೆಸ್ ಘಟಕ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದಿಂದ ನಗರದ ಗೋಕುಲ ಗಾರ್ಡನ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಯಿಂದ ಹುಬ್ಬಳ್ಳಿಗೆ ಬಂದಿಲ್ಲ. ನನ್ನ ಹಿಂದಿನ ಗುಟ್ಟು, ಈಗಿನ ಗುಟ್ಟು ಹಾಗೂ ಮುಂದಿನ ಗುಟ್ಟನ್ನು ಜನರಿಗೆ ತಿಳಿಸುವುದು ಬಾಕಿ ಇದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಯಾರ್ಯಾರು ಏನು ಹೇಳಿದ್ದಾರೆ ಎಂಬ ಅರಿವಿದೆ. ಅವರಿಗೆಲ್ಲಾ ಉತ್ತರ ಕೊಡುವ ಶಕ್ತಿ ನನಲ್ಲಿ ಇದೆ ಎಂದರು.

ನನ್ನ ಬಂಧನದ ಮುಂಚೆ ತಂದೆಯ ಪೂಜೆ ಇದ್ದಾಗ ಕಣ್ಣೀರು ಹಾಕಿದ್ದಕ್ಕೆ ಹಲವು ಜನ ವಿವಿಧ ವ್ಯಾಖ್ಯಾನ ನೀಡಿದ್ದಾರೆ. ಅದರಲ್ಲಿ ಕೆಲವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತ ಹೇಳಿದ್ದಾರೆ. ನಿಜಾ, ಉಪ್ಪು ತಿನಿಸುತ್ತೇನೆ, ಅಲ್ಲದೇ ನೀರು ಕೂಡ ಕುಡಿಸುವೆ ಎಂದರು.

ಇನ್ನು ತಿಹಾರ್ ಜೈಲಿನಲ್ಲಿ ಇದ್ದಾಗ ರಾಜ್ಯದ ಎಲ್ಲಾ ಅಭಿಮಾನಿಗಳು, ಕಾರ್ಯಕರ್ತರು ನನ್ನ ನೋವನ್ನು ತಮ್ಮ ನೋವು ಎಂದು ತಿಳಿದು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೇ ನನ್ನನ್ನು ತಮ್ಮ ಕುಟುಂಬದ ಸದಸ್ಯ ಎಂದು ತಿಳಿದು ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವೇ ಇದೀಗ ಬಿಡುಗಡೆಯಾಗಿದ್ದೇನೆ. ಆಗ ನನ್ನ ಬಗ್ಗೆ ಹೇಳಿಕೆ ಕೊಟ್ಟವರ ಕುರಿತು ಗಮನಿಸಿದ್ದೇನೆ. ಚದುರಂಗದ ಆಟದ ಬಗ್ಗೆ ಅರಿವಿದೆ.‌ ಇವರಿಗೆಲ್ಲಾ ಉತ್ತರ ಕೊಟ್ಟೇ ಕೊಡುವೆ. ಮಾತಿಗೆ ಒಂದು ಅರ್ಥ ಇದ್ದರೆ, ಮೌನಕ್ಕೆ ನೂರಾರು ಅರ್ಥ. ಹಾಗಾಗಿ ಹೆಚ್ಚಿಗೆ ಮಾತನಾಡುವುದನ್ನು ಬಿಟ್ಟು ಕೆಲಸ ಹೆಚ್ಚಿಗೆ ಮಾಡಬೇಕು ಎಂದರು.

ಮಹದಾಯಿ ವಿಚಾರದಲ್ಲಿ ಮತದಿಂದ ಉತ್ತರ ಕೊಡಿ:

ಉತ್ತರ ಕರ್ನಾಟಕ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆ ಆಗಿರುವ ಮಹದಾಯಿ ವಿಚಾರವಾಗಿ ಬಿಜೆಪಿಯ ಈ ಭಾಗದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಸಂಸದ ಸುರೇಶ್​ ಅಂಗಡಿ ಸೇರಿದಂತೆ ಹಲವಾರು ನಾಯಕರು ಅಧಿಕಾರದಲ್ಲಿ ಇದ್ದಾರೆ. ಅವರು ಐದು ನಿಮಿಷಗಳಲ್ಲಿ ಗೆಜೆಟ್ ನೋಟಿಫೀಕೇಶನ್ ಹೊರಡಿಸಬೇಕಿತ್ತು. ಆದರೆ ನೂರು ದಿನ ಕಳೆದರೂ‌‌ ಕೂಡ ಯಾರೊಬ್ಬರು ಈ ಬಗ್ಗೆ ಕಾಳಜಿ ತೋರಿಲ್ಲ. ಹೀಗಾಗಿ ಜನರು ತಮ್ಮ ಮತಗಳ ಮೂಲಕ ಈ ಭಾಗದ ನಾಯಕರಿಗೆ ಉತ್ತರ ಕೊಡಬೇಕು ಎಂದರು.

ಕಾಂಗ್ರೆಸ್​ ಅನರ್ಹ ಶಾಸಕರನ್ನು 30, 40 ವರ್ಷಗಳಿಂದ ಸಾಕಿ ದೊಡ್ಡವರನ್ನಾಗಿ ಮಾಡಿ, ಶಾಸಕರನ್ನಾಗಿ ಮಾಡಿದ್ದರೂ ಕೂಡ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಇನ್ನು ಬಿಜೆಪಿಯವರನ್ನು ಬಿಡುತ್ತಾರಾ? ಸರ್ಕಾರದ ಅಂತ್ಯದ ಬಗ್ಗೆ ಮಾತಾಡಲ್ಲ. ಆದ್ರೆ ಚಕ್ರ ತಿರುಗಿಸುವುದು ಗೊತ್ತಿದೆ ಎಂದರು.

ಹುಬ್ಬಳ್ಳಿ: ನೋವು ಕೊಟ್ಟವರೇ ಮಾರ್ಗದರ್ಶಕರು, ಕಷ್ಟ ಕೊಟ್ಟವರೇ ಹಿತೈಷಿಗಳು, ಕಾಲು ಎಳೆದು ದೂರ ತಳ್ಳಿದವರೇ ನಮ್ಮ ಬಂಧುಗಳು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಕಾಂಗ್ರೆಸ್ ಶಕ್ತಿ ಪ್ರದರ್ಶನ

ಹು-ಧಾ ಮಹಾನಗರ ಕಾಂಗ್ರೆಸ್ ಘಟಕ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದಿಂದ ನಗರದ ಗೋಕುಲ ಗಾರ್ಡನ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಯಿಂದ ಹುಬ್ಬಳ್ಳಿಗೆ ಬಂದಿಲ್ಲ. ನನ್ನ ಹಿಂದಿನ ಗುಟ್ಟು, ಈಗಿನ ಗುಟ್ಟು ಹಾಗೂ ಮುಂದಿನ ಗುಟ್ಟನ್ನು ಜನರಿಗೆ ತಿಳಿಸುವುದು ಬಾಕಿ ಇದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಯಾರ್ಯಾರು ಏನು ಹೇಳಿದ್ದಾರೆ ಎಂಬ ಅರಿವಿದೆ. ಅವರಿಗೆಲ್ಲಾ ಉತ್ತರ ಕೊಡುವ ಶಕ್ತಿ ನನಲ್ಲಿ ಇದೆ ಎಂದರು.

ನನ್ನ ಬಂಧನದ ಮುಂಚೆ ತಂದೆಯ ಪೂಜೆ ಇದ್ದಾಗ ಕಣ್ಣೀರು ಹಾಕಿದ್ದಕ್ಕೆ ಹಲವು ಜನ ವಿವಿಧ ವ್ಯಾಖ್ಯಾನ ನೀಡಿದ್ದಾರೆ. ಅದರಲ್ಲಿ ಕೆಲವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತ ಹೇಳಿದ್ದಾರೆ. ನಿಜಾ, ಉಪ್ಪು ತಿನಿಸುತ್ತೇನೆ, ಅಲ್ಲದೇ ನೀರು ಕೂಡ ಕುಡಿಸುವೆ ಎಂದರು.

ಇನ್ನು ತಿಹಾರ್ ಜೈಲಿನಲ್ಲಿ ಇದ್ದಾಗ ರಾಜ್ಯದ ಎಲ್ಲಾ ಅಭಿಮಾನಿಗಳು, ಕಾರ್ಯಕರ್ತರು ನನ್ನ ನೋವನ್ನು ತಮ್ಮ ನೋವು ಎಂದು ತಿಳಿದು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೇ ನನ್ನನ್ನು ತಮ್ಮ ಕುಟುಂಬದ ಸದಸ್ಯ ಎಂದು ತಿಳಿದು ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವೇ ಇದೀಗ ಬಿಡುಗಡೆಯಾಗಿದ್ದೇನೆ. ಆಗ ನನ್ನ ಬಗ್ಗೆ ಹೇಳಿಕೆ ಕೊಟ್ಟವರ ಕುರಿತು ಗಮನಿಸಿದ್ದೇನೆ. ಚದುರಂಗದ ಆಟದ ಬಗ್ಗೆ ಅರಿವಿದೆ.‌ ಇವರಿಗೆಲ್ಲಾ ಉತ್ತರ ಕೊಟ್ಟೇ ಕೊಡುವೆ. ಮಾತಿಗೆ ಒಂದು ಅರ್ಥ ಇದ್ದರೆ, ಮೌನಕ್ಕೆ ನೂರಾರು ಅರ್ಥ. ಹಾಗಾಗಿ ಹೆಚ್ಚಿಗೆ ಮಾತನಾಡುವುದನ್ನು ಬಿಟ್ಟು ಕೆಲಸ ಹೆಚ್ಚಿಗೆ ಮಾಡಬೇಕು ಎಂದರು.

ಮಹದಾಯಿ ವಿಚಾರದಲ್ಲಿ ಮತದಿಂದ ಉತ್ತರ ಕೊಡಿ:

ಉತ್ತರ ಕರ್ನಾಟಕ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆ ಆಗಿರುವ ಮಹದಾಯಿ ವಿಚಾರವಾಗಿ ಬಿಜೆಪಿಯ ಈ ಭಾಗದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಸಂಸದ ಸುರೇಶ್​ ಅಂಗಡಿ ಸೇರಿದಂತೆ ಹಲವಾರು ನಾಯಕರು ಅಧಿಕಾರದಲ್ಲಿ ಇದ್ದಾರೆ. ಅವರು ಐದು ನಿಮಿಷಗಳಲ್ಲಿ ಗೆಜೆಟ್ ನೋಟಿಫೀಕೇಶನ್ ಹೊರಡಿಸಬೇಕಿತ್ತು. ಆದರೆ ನೂರು ದಿನ ಕಳೆದರೂ‌‌ ಕೂಡ ಯಾರೊಬ್ಬರು ಈ ಬಗ್ಗೆ ಕಾಳಜಿ ತೋರಿಲ್ಲ. ಹೀಗಾಗಿ ಜನರು ತಮ್ಮ ಮತಗಳ ಮೂಲಕ ಈ ಭಾಗದ ನಾಯಕರಿಗೆ ಉತ್ತರ ಕೊಡಬೇಕು ಎಂದರು.

ಕಾಂಗ್ರೆಸ್​ ಅನರ್ಹ ಶಾಸಕರನ್ನು 30, 40 ವರ್ಷಗಳಿಂದ ಸಾಕಿ ದೊಡ್ಡವರನ್ನಾಗಿ ಮಾಡಿ, ಶಾಸಕರನ್ನಾಗಿ ಮಾಡಿದ್ದರೂ ಕೂಡ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಇನ್ನು ಬಿಜೆಪಿಯವರನ್ನು ಬಿಡುತ್ತಾರಾ? ಸರ್ಕಾರದ ಅಂತ್ಯದ ಬಗ್ಗೆ ಮಾತಾಡಲ್ಲ. ಆದ್ರೆ ಚಕ್ರ ತಿರುಗಿಸುವುದು ಗೊತ್ತಿದೆ ಎಂದರು.

Intro:HubliBody:ಸ್ಲಗ್:- ನೀರು ಕುಡಿದಿದ್ದೆನೆ! ನೀರು ಕುಡಿಸುತ್ತೆನೆ! ಡಿಕೆಶಿ ವಾಗ್ದಾಳಿ...


ಹುಬ್ಬಳ್ಳಿ:- ನೋವು ಕೊಟ್ಟವರೇ ಮಾರ್ಗ ದರ್ಶನಕರು, ಗುರುಗಳು, ಕಷ್ಟ ಕೊಟ್ಟೋರೆ ಹಿತೈಷಿಗಳು, ಕಾಲು ಎಳೆದವರು, ದೂರ ತಳಿದವರೇ ನಮ್ಮ ಬಂಧುಗಳು, ಪ್ರೀತಿ ಕೊಟ್ಟೋರೆ ದೇವರುಗಳು ಇದು ಮಾಜಿ ಸಚಿವ ಡಿ.ಕೆ.ಶಿವಕುಮಾರ ಹೇಳಿದರು
ಹು-ಧಾ ಮಹಾನಗರ ಕಾಂಗ್ರೆಸ್ ಘಟಕ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದಿಂದ ನಗರದಗೋಕುಲ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಶಕ್ತಿ ಪ್ರದರ್ಶನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು ಅಧಿಕಾರದ ಹುಬ್ಬಳ್ಳಿಗೆ ಬಂದಿಲ್ಲಾ. ನನ್ನ ಹಿಂದಿನ ಗುಟ್ಟು ಇಗೀನ ಗುಟ್ಟು ಹಾಗೂ ಮುಂದಿನ ಗುಟ್ಟನ್ನು ಜನರಿಗೆ ತಿಳಿಸುವುದು ಇದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಯಾರ್ಯಾರು ಏನೂ ಹೇಳಿದ್ದಾರೆ ಎಂಬ ಅರಿವಿದೆ. ಅವರಿಗೆಲ್ಲಾ ಉತ್ತರ ಕೊಡುವ ಶಕ್ತಿ ನನಲ್ಲಿ ಇದೆ. ಅದು ಇತಿಹಾಸದಲ್ಲಿ ದಾಖಲೆಯಾಗುವ ಉತ್ತರ ಕೊಡುವಷ್ಟು, ನನ್ನ ಬಂಧನದ ಮುಂಚಿತವಾಗಿ ತಂದೆಯ ಕ್ರೀಯೆ ಇದ್ದಾಗ ಕಣ್ಣಿರು ಹಾಕಿದ್ದಕ್ಕೆ ಹಲವಾರು ಜನ ವಿವಿಧ ವ್ಯಾಖ್ಯಾನ ನೀಡಿದ್ದಾರೆ. ಅದರಲ್ಲಿ ಕೆಲವರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂತಾ ಹೇಳಿದ್ದಾರೆ. ನಿಜಾ ಉಪ್ಪು ತಿನಿಸುತ್ತೇನೆ ಅಲ್ಲದೇ ನೀರು ಕೂಡಾ ಕುಡಿಸುವೆ ಎಂದರು.ಇನ್ನೂ ತಿಹಾರ್ ಜೈಲಿನಲ್ಲಿ ಇದ್ದಾಗ ರಾಜ್ಯದ ಎಲ್ಲಾ ಅಭಿಮಾನಿಗಳು, ಕಾರ್ಯಕರ್ತರು ನನ್ನ ನೋವನ್ನು ತಮ್ಮ ನೋವು ಎಂದು ತಿಳಿದು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೇ ನನನ್ನು ತಮ್ಮ ಕುಟುಂಬದ ಸದಸ್ಯ ಎಂದು ತಿಳಿದು ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವೇ ಇದೀಗ ಬಿಡುಗಡೆಯಾಗಿದ್ದೆನೆ. ಆಗ ನನ್ನ ಬಗ್ಗೆ ಹೇಳಿಕೆ ಕೊಟ್ಟವರ ಕುರಿತು ಗಮನಿಸಿದ್ದೇನೆ. ಚದುರಂಗದ ಆಟದ ಬಗ್ಗೆ ಅರಿವಿದೆ.‌ ಅಲ್ಲದೇ ಈ ಹಿಂದೆ ಜೈಲು ಮಂತ್ರಿ ಆಗಿದವನು ಇವರಿಗೆಲ್ಲಾ ಉತ್ತರ ಕೊಟ್ಟೇ ಕೊಡುವೆ. ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ನೂರಾರು ಅರ್ಥ. ಹಾಗಾಗಿ ಹೆಚ್ಚಿಗೆ ಮಾತನಾಡುವುದನ್ನು ಬಿಟ್ಟು ಕೆಲಸ ಹೆಚ್ಚಿಗೆ ಮಾಡಬೇಕು ಎಂದರು.
+ಮಹದಾಯಿ ವಿಚಾರದಲ್ಲಿ ಮತದಿಂದ ಉತ್ತರ ಕೊಡಿ:)ಉತ್ತರ ಕರ್ನಾಟಕ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆ ಆಗಿರುವ ಮಹದಾಯಿ ವಿಚಾರವಾಗಿ ಬಿಜೆಪಿಯ ಈ ಭಾಗದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಸಂಸದ ಸುರೇಶ ಅಂಗಡಿ ಸೇರಿದಂತೆ ಹಲವಾರು ನಾಯಕರು ಅಧಿಕಾರದಲ್ಲಿ ಇದ್ದಾರೆ ಅವರು ಐದು ನಿಮಿಷಗಳಲ್ಲಿ ಗೆಜೆಟ್ ನೋಟಿಫೀಕೇಶನ್ ಹೊರಡಿಸಬೇಕಿತ್ತು. ಆದರೆ ನೂರು ದಿನಗಳು ಕಳೆದರೂ‌‌ ಕೂಡಾ ಯಾವೊಬ್ಬರು ಈ ಬಗ್ಗೆ ಕಾಳಜಿ ತೋರಿಲ್ಲಾ. ಹೀಗಾಗಿ ಜನರು ತಮ್ಮ ಮತಗಳ ಮೂಲಕ ಈ ಭಾಗದ ನಾಯಕರಿಗೆ ಉತ್ತರ ಕೊಡಬೇಕು ಎಂದರು.
(ಬಿವೈಎಸ್ ನ ಚಡ್ಡಿ ಬನ್ನಿಯನ ಕೂಡಾ ಬಿಡಲ್ಲಾ:)ಕಾಂಗ್ರೆಸ್ ನಲ್ಲಿ ಅನರ್ಹ ಶಾಸಕರನ್ನು 30 , 40 ವರ್ಷಗಳಿಂದ ಸಾಕಿ ದೊಡ್ಡವರನ್ನಾಗಿ ಮಾಡಿ ಶಾಸಕರನ್ನು ಮಾಡಿದ್ದರೂ ಕೂಡಾ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಅಂತಹ ಸಂದರ್ಭದಲ್ಲಿ ಬಿಜೆಪಿಯವರನ್ನು ಬಿಡುತ್ತಾರಾ. ಸಿಎಂ ಯಡಿಯೂರಪ್ಪ ಅವರ ಚಡ್ಡಿ, ಬನ್ನಿಯನ್ ಸಮೇತ ಕಿತ್ತು ಹಾಕತ್ತಾರೆ. ಸರ್ಕಾರದ ಅಂತ್ಯದ ಬಗ್ಗೆ ಮಾತಾಡಲ್ಲಾ. ಆದರೆ ಚಕ್ರ ತಿರುಗಿಸುವುದು ಗೊತ್ತಿದೆ ಎಂದರು.....!

ಬೈಟ್:- ಡಿಕೆ ಶಿವಕುಮಾರ್ ಮಾಜಿ ಸಚಿವ...

_______________________________


Yallappa kundagol

Hubli Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.