ಹುಬ್ಬಳ್ಳಿ: ಕೊರೊನಾ ಮಹಾಮಾರಿ ವಿರುದ್ದ ದೇಶವೇ ಹೋರಾಟ ನಡೆಸಿದೆ. ವೈದ್ಯರು ಕೂಡ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಆಯುರ್ವೇದ ವೈದ್ಯ ಡಾ.ಬಸವರಾಜ ಸಂಕನಗೌಡರ ಅವರು, ಕೊವಿಡ್-19 ಸೇವೆಗಾಗಿ "ಹೋಟಲ್ ಮೆಟ್ರೊ ಪೊಲೀಸ್" ಕ್ವಾರಂಟೈನ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಈ ಮೂಲಕ ಕ್ವಾರಂಟೈನ್ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಪ್ರಪ್ರಥಮ ಖಾಸಗಿ ಆಯುರ್ವೇದ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಎಫ್ಐ ಸಂಸ್ಥೆಗೂ ಮತ್ತು ಸದರಿ ವೈದ್ಯರಿಗೂ ಅಭಿನಂದನೆಗಳು ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸಂಗಮೇಶ ಕಲಹಾಳ ತಿಳಿಸಿದ್ದಾರೆ.