ETV Bharat / city

ಕೊಲೆ ಮಾಡಿ ಆತ್ಮಹತ್ಯೆ ಕಂಪ್ಲೆಂಟ್ ಕೊಟ್ರು, ವರ್ಷವಾದ ಮೇಲೆ ತಗಲಾಕೊಂಡ್ರು!

author img

By

Published : Nov 30, 2019, 10:47 AM IST

ಸರಿ ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್​ ಸಿಕ್ಕಿದೆ. ಈ ಪ್ರಕರಣ ಭೇದಿಸಿರುವ ಪೊಲೀಸರು ಇದೊಂದು ಕೊಲೆ ಎಂದು ಪತ್ತೆ ಹಚ್ಚಿದ್ದಾರೆ. ಸದ್ಯ ಧಾರವಾಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ.

wdswdd
ಕೊಲೆಗೈದು ಆತ್ಮಹತ್ಯೆ ಕಂಪ್ಲೆಂಟ್ ಕೊಟ್ರು,ವರ್ಷವಾದ ಮೇಲೆ ಪೊಲೀಸರಿಗೆ ತಗಲಾಕ್ಕೊಂಡ್ರು!

ಧಾರವಾಡ: ಆತ್ಮಹತ್ಯೆ ಎಂದು ಮುಚ್ಚಿ ಹೋಗಿದ್ದ ಪ್ರಕರಣವೊಂದು ಕೊಲೆಯೆಂದು ಸಾಬೀತಾಗಿ ಆರೋಪಿಗಳಿಬ್ಬನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕಮಲಾಪೂರ ಜೋಗತ್ಯಾರಬಾವಿಯಲ್ಲಿ 2018ರ ಅಕ್ಟೋಬರ್ 14 ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ತಾಯಿ ಮತ್ತು ಮಗ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ಸಹ ನೀಡಿದ್ದರು. ಇದು ಆತ್ಮಹತ್ಯೆ ಪ್ರಕರಣ ಎಂದು ಉಪ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರದಲ್ಲಿ ಶಾಂತವ್ವಳ ಸಾವಿನಲ್ಲಿ ಸಂಶಯವಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬೆಳಕಿಗೆ ಬಂದಿದೆ.

ವೈಯಕ್ತಿಕ ದ್ವೇಷದಿಂದ ಕಮಲಾಪುರದ ಶಾಂತವ್ವನನ್ನು ಜಾನಾಬಾಯಿ ಗುರ್ಲಹೊಸೂರು (50) ಹಾಗೂ ಆಕೆಯ ಪುತ್ರ ಸದಾನಂದ ಗುರ್ಲಹೊಸೂರು (20) ಕತ್ತು ಹಿಸುಕಿ ಕೊಲೆ ಮಾಡಿ ನಂತರ ಬಾವಿಯಲ್ಲಿ ಎಸೆದು ತಾವೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಧಾರವಾಡ: ಆತ್ಮಹತ್ಯೆ ಎಂದು ಮುಚ್ಚಿ ಹೋಗಿದ್ದ ಪ್ರಕರಣವೊಂದು ಕೊಲೆಯೆಂದು ಸಾಬೀತಾಗಿ ಆರೋಪಿಗಳಿಬ್ಬನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕಮಲಾಪೂರ ಜೋಗತ್ಯಾರಬಾವಿಯಲ್ಲಿ 2018ರ ಅಕ್ಟೋಬರ್ 14 ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ತಾಯಿ ಮತ್ತು ಮಗ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ಸಹ ನೀಡಿದ್ದರು. ಇದು ಆತ್ಮಹತ್ಯೆ ಪ್ರಕರಣ ಎಂದು ಉಪ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರದಲ್ಲಿ ಶಾಂತವ್ವಳ ಸಾವಿನಲ್ಲಿ ಸಂಶಯವಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬೆಳಕಿಗೆ ಬಂದಿದೆ.

ವೈಯಕ್ತಿಕ ದ್ವೇಷದಿಂದ ಕಮಲಾಪುರದ ಶಾಂತವ್ವನನ್ನು ಜಾನಾಬಾಯಿ ಗುರ್ಲಹೊಸೂರು (50) ಹಾಗೂ ಆಕೆಯ ಪುತ್ರ ಸದಾನಂದ ಗುರ್ಲಹೊಸೂರು (20) ಕತ್ತು ಹಿಸುಕಿ ಕೊಲೆ ಮಾಡಿ ನಂತರ ಬಾವಿಯಲ್ಲಿ ಎಸೆದು ತಾವೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:ಧಾರವಾಡ: ಇದು ಆತ್ಮಹತ್ಯೆ ಎಂದು ಮುಚ್ಚಿ ಹೋದ ಪ್ರಕರಣ ತಿರುವು ಪಡೆದುಕೊಂಡು ಅಂತಿಮವಾಗಿ ಆರೋಪಿಗಳಿಬ್ಬರು ಪೊಲೀಸರಿಗೆ ಅತಿಥಿಯಾದ ಘಟನೆ ಉಪನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಧಾರವಾಡದ ಕಮಲಾಪೂರ ಜೋಗತ್ಯಾರಬಾವಿಯಲ್ಲಿ ೨೦೧೮ರ ಅಕ್ಟೋಬರ್ ೧೪ ರಂದು ಮಹಿಳೆಯ ಶವ ಪತ್ತೆಯಾಗಿತ್ತು. ಕೊಲೆ ಮಾಡಿದ ತಾಯಿ ಹಾಗೂ ಮಗ ಬಾವಿಯಲ್ಲಿ ಆತ್ಮಹತ್ಯೆ ಪ್ರಕರಣ ಸಂಭವಿಸಿದೆ ಎಂದು ಪೊಲೀಸರಿಗೆ ದೂರು ಸಹ ನೀಡಿದ್ದರು.

ಇದು ಆತ್ಮಹತ್ಯೆ ಪ್ರಕರಣ ಎಂದು ಉಪ ನಗರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ತದನಂತರದಲ್ಲಿ ಶಾಂತವ್ವಳ ಸಾವಿನಲ್ಲಿ ಸಂಶಯವಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬೆಳಕಿಗೆ ಬಂದಿದೆ...Body:ವೈಯಕ್ತಿಕ ದ್ವೇಷದಿಂದ ಕಮಲಾಪೂರದ ಶಾಂತವ್ವ ಎಂಬುವರನ್ನು ಜಾನಾಬಾಯಿ ಗುರ್ಲಹೊಸೂರ (೫೦) ಹಾಗೂ ಆಕೆಯ ಪುತ್ರ ಸದಾನಂದ ಗುರ್ಲಹೊಸೂರ (೨೦) ಕತ್ತು ಹಿಸುಕಿ ಕೊಲೆ ಮಾಡಿ ಬಾವಿಯಲ್ಲಿ ಎಸೆದು ತಾವೇ ಪೊಲೀಸರಿಗೂ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಆರೋಪಿಗಳನ್ನು ನ. ೨೭ ರಂದು ಬಂಧಿಸಿ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ ಆಯುಕ್ತರ ಪ್ರಕಟಣೆ ತಿಳಿಸಿದೆ...

(ಸರ್ ಆರೋಪಿಗಳ ಫೋಟೋ ಇನ್ನೂ ಸಿಕ್ಕಿಲ್ಲಾ ಸಿಕ್ಕಮೇಲೆ ಫೋಟೋ ಕಳಿಸುತ್ತೇನೆ ಈ ಸುದ್ದಿಗೆ ಪೈಲ್ ಶಾಟ್ ಬಳಸಿಕೊಳ್ಳಿ)....Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.