ETV Bharat / city

ಗುರೂಜಿ ಹತ್ಯೆಯಾದ ಪ್ರೆಸಿಡೆಂಟ್​ ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ, ಪರಿಶೀಲನೆ

author img

By

Published : Jul 7, 2022, 5:30 PM IST

Updated : Jul 7, 2022, 6:55 PM IST

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹತ್ಯೆಗೈದ ಆರೋಪಿಗಳನ್ನು ಪೊಲೀಸರು, ಪ್ರಕರಣ ನಡೆದು ನಾಲ್ಕು ತಾಸಿನಲ್ಲೇ ಬಂಧಿಸಿದ್ದರು.

ಎಡಿಜಿಪಿ ಅಲೋಕ್ ಕುಮಾರ್
ಎಡಿಜಿಪಿ ಅಲೋಕ್ ಕುಮಾರ್

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಯಾದ ನಗರದ ಪ್ರೆಸಿಡೆಂಟ್ ಹೋಟೆಲ್​​ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೋಟೆಲ್​​ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್​ನಿಂದ ಪ್ರಕರಣದ ಕುರಿತು ಮಾಹಿತಿ ಪಡೆದರು.

ಇಂತಹ ದೊಡ್ಡ ಹೋಟೆಲ್​ನಲ್ಲಿ ಮೆಟಲ್ ಡಿಟೆಕ್ಟರ್ ಇಟ್ಟುಕೊಂಡಿಲ್ವಾ ಎಂದು ಹೋಟೆಲ್​ ಸಿಬ್ಬಂದಿಗೆ ಇದೇ ವೇಳೆ ಎಡಿಜಿಪಿ ಪ್ರಶ್ನಿಸಿದರು. ಅಲೋಕ್ ಕುಮಾರ್ ಜೊತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಕೂಡ ಇದ್ದರು.

ಜುಲೈ 5 ರಂದು ಚಂದ್ರಶೇಖರ್ ಗುರೂಜಿ ತಂಗಿದ್ದ ಹೋಟೆಲ್​ಗೆ ಬಂದಿದ್ದ ಆರೋಪಿಗಳು, ಗುರೂಜಿ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ರಾಮದುರ್ಗದಲ್ಲಿ ಆರೋಪಿಗಳಾದ ಕಲಘಟಗಿ ತಾಲೂಕಿನ ಮಂಜುನಾಥ್ ಮತ್ತು ಮಹಾಂತೇಶ ಸಿಕ್ಕಿಬಿದ್ದಿದ್ದಾರೆ.

ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

(ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಅಂತಿಮ ದರ್ಶನದ ವೇಳೆ ಕಂಬನಿ‌ ಮಿಡಿದ ಶ್ವಾನ)

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಯಾದ ನಗರದ ಪ್ರೆಸಿಡೆಂಟ್ ಹೋಟೆಲ್​​ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೋಟೆಲ್​​ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್​ನಿಂದ ಪ್ರಕರಣದ ಕುರಿತು ಮಾಹಿತಿ ಪಡೆದರು.

ಇಂತಹ ದೊಡ್ಡ ಹೋಟೆಲ್​ನಲ್ಲಿ ಮೆಟಲ್ ಡಿಟೆಕ್ಟರ್ ಇಟ್ಟುಕೊಂಡಿಲ್ವಾ ಎಂದು ಹೋಟೆಲ್​ ಸಿಬ್ಬಂದಿಗೆ ಇದೇ ವೇಳೆ ಎಡಿಜಿಪಿ ಪ್ರಶ್ನಿಸಿದರು. ಅಲೋಕ್ ಕುಮಾರ್ ಜೊತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಕೂಡ ಇದ್ದರು.

ಜುಲೈ 5 ರಂದು ಚಂದ್ರಶೇಖರ್ ಗುರೂಜಿ ತಂಗಿದ್ದ ಹೋಟೆಲ್​ಗೆ ಬಂದಿದ್ದ ಆರೋಪಿಗಳು, ಗುರೂಜಿ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ರಾಮದುರ್ಗದಲ್ಲಿ ಆರೋಪಿಗಳಾದ ಕಲಘಟಗಿ ತಾಲೂಕಿನ ಮಂಜುನಾಥ್ ಮತ್ತು ಮಹಾಂತೇಶ ಸಿಕ್ಕಿಬಿದ್ದಿದ್ದಾರೆ.

ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

(ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಅಂತಿಮ ದರ್ಶನದ ವೇಳೆ ಕಂಬನಿ‌ ಮಿಡಿದ ಶ್ವಾನ)

Last Updated : Jul 7, 2022, 6:55 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.