ETV Bharat / city

'ಎಲ್ಲಾ ಯೋಜನೆಗಳನ್ನು ಉತ್ತರ ಭಾರತಕ್ಕೆ ಕೊಡಬೇಡಿ, ದಕ್ಷಿಣ ಭಾರತ ಕೂಡ ಇದೆ' - ಚಿತ್ರದುರ್ಗದಲ್ಲಿ ಸಿಎಸ್ ಸೆಂಟರ್

ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಉತ್ತರ ಭಾರತಕ್ಕೆ ಮಾತ್ರ ನೀಡಬೇಡಿ, ದಕ್ಷಿಣ ಭಾರತಕ್ಕೂ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

Minister A. Narayanaswamy
ನಾರಾಯಣಸ್ವಾಮಿ
author img

By

Published : Aug 19, 2021, 1:10 PM IST

Updated : Aug 19, 2021, 1:19 PM IST

ದಾವಣಗೆರೆ: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಉತ್ತರ ಭಾರತಕ್ಕೆ ಮಾತ್ರ ನೀಡಬೇಡಿ, ಇಲ್ಲಿ ದಕ್ಷಿಣ ಭಾರತ ಕೂಡ ಇದೆ ಎಂದು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.

ದಾವಣಗೆರೆಯಲ್ಲಿರುವ ಸಿಆರ್​ಸಿ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಸಿಎಸ್ ಸೆಂಟರ್ ನಿರ್ಮಾಣ ಮಾಡಲು ಜಮೀನು ನೋಡುತ್ತಿದ್ದೇವೆ. ಜೊತೆಗೆ ಕಾಂಪೋನೆಂಟ್ ತಯಾರು ಮಾಡುವ ಕಾರ್ಖಾನೆ ಕೂಡ ಮಾಡಬೇಕೆಂಬ ಯೋಜನೆ ಇದೆ. 36 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ಟೆಂಡರ್ ಕರೆಯಬೇಕು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ

ಸಾಮಾಜಿಕ ನ್ಯಾಯ ಹಾಗು ಸಬಲೀಕರಣ ಇಲಾಖೆ ಇಡೀ ದೇಶದಲ್ಲಿ ಅನೇಕ ಯೋಜನೆಗಳನ್ನು ತಂದಿದೆ‌‌. ದಿವ್ಯಾಂಗರಿಗೆ ಚಿಕಿತ್ಸೆ ನೀಡಲು, ಪಿಹೆಚ್​ಡಿ ಮಾಡುವವರಿಗೆ ತರಬೇತಿ ನೀಡಲು ಸಿಆರ್​ಸಿ ಸೆಂಟರ್ ಇದೆ. ಈ ಸಿಆರ್​ಸಿ ಕೇಂದ್ರ ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ ಬಿಟ್ಟರೆ ದಾವಣಗೆರೆಯಲ್ಲಿ ಮಾತ್ರ ಇದೆ. ಈ ಎರಡು ಕೇಂದ್ರಗಳಲ್ಲಿ ದಿವ್ಯಾಂಗರಿಗೆ ಬೇಕಾಗುವ ಚಿಕಿತ್ಸೆ ನೀಡುವ ಜೊತೆಗೆ ತರಬೇತಿ ಹಾಗೂ ಸಂಶೋಧನೆ ಮಾಡಲು ಬರುವ ಅಭ್ಯರ್ಥಿಗಳಿಗೆ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದರು.

ಇನ್ನು ಜಿಲ್ಲೆಯಲ್ಲಿ ಎಷ್ಟು ಜನ ವಿಶೇಷ ಚೇತನರಿದ್ದಾರೆ ಎಂಬ ಸಚಿವ ಪ್ರಶ್ನೆಗೆ ಸಿಆರ್​ಸಿ ಕೇಂದ್ರದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವರು ಗರಂ ಆದರು.

ದಾವಣಗೆರೆ: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಉತ್ತರ ಭಾರತಕ್ಕೆ ಮಾತ್ರ ನೀಡಬೇಡಿ, ಇಲ್ಲಿ ದಕ್ಷಿಣ ಭಾರತ ಕೂಡ ಇದೆ ಎಂದು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.

ದಾವಣಗೆರೆಯಲ್ಲಿರುವ ಸಿಆರ್​ಸಿ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಸಿಎಸ್ ಸೆಂಟರ್ ನಿರ್ಮಾಣ ಮಾಡಲು ಜಮೀನು ನೋಡುತ್ತಿದ್ದೇವೆ. ಜೊತೆಗೆ ಕಾಂಪೋನೆಂಟ್ ತಯಾರು ಮಾಡುವ ಕಾರ್ಖಾನೆ ಕೂಡ ಮಾಡಬೇಕೆಂಬ ಯೋಜನೆ ಇದೆ. 36 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ಟೆಂಡರ್ ಕರೆಯಬೇಕು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ

ಸಾಮಾಜಿಕ ನ್ಯಾಯ ಹಾಗು ಸಬಲೀಕರಣ ಇಲಾಖೆ ಇಡೀ ದೇಶದಲ್ಲಿ ಅನೇಕ ಯೋಜನೆಗಳನ್ನು ತಂದಿದೆ‌‌. ದಿವ್ಯಾಂಗರಿಗೆ ಚಿಕಿತ್ಸೆ ನೀಡಲು, ಪಿಹೆಚ್​ಡಿ ಮಾಡುವವರಿಗೆ ತರಬೇತಿ ನೀಡಲು ಸಿಆರ್​ಸಿ ಸೆಂಟರ್ ಇದೆ. ಈ ಸಿಆರ್​ಸಿ ಕೇಂದ್ರ ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ ಬಿಟ್ಟರೆ ದಾವಣಗೆರೆಯಲ್ಲಿ ಮಾತ್ರ ಇದೆ. ಈ ಎರಡು ಕೇಂದ್ರಗಳಲ್ಲಿ ದಿವ್ಯಾಂಗರಿಗೆ ಬೇಕಾಗುವ ಚಿಕಿತ್ಸೆ ನೀಡುವ ಜೊತೆಗೆ ತರಬೇತಿ ಹಾಗೂ ಸಂಶೋಧನೆ ಮಾಡಲು ಬರುವ ಅಭ್ಯರ್ಥಿಗಳಿಗೆ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದರು.

ಇನ್ನು ಜಿಲ್ಲೆಯಲ್ಲಿ ಎಷ್ಟು ಜನ ವಿಶೇಷ ಚೇತನರಿದ್ದಾರೆ ಎಂಬ ಸಚಿವ ಪ್ರಶ್ನೆಗೆ ಸಿಆರ್​ಸಿ ಕೇಂದ್ರದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವರು ಗರಂ ಆದರು.

Last Updated : Aug 19, 2021, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.