ETV Bharat / city

ಭಾರಿ ಮಳೆಗೆ ಸಂಕ್ಲಿಪುರ-ಮುಕ್ತೇನಹಳ್ಳಿ ರಸ್ತೆ ಮುಳುಗಡೆ: ಭತ್ತದ ಗದ್ದೆಗಳು ಜಲಾವೃತ

ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ನೂರಾರು ಎಕರೆ ಭತ್ತದ ಗದ್ದೆ ಹಾಗೂ ನೀರಿನ ಮೋಟಾರ್​​ಗಳು ಮುಳುಗಡೆಯಾಗಿವೆ.

author img

By

Published : Oct 7, 2021, 4:02 PM IST

davanagere
ಭಾರೀ ಮಳೆಗೆ ಸಂಕ್ಲಿಪುರ-ಮುಕ್ತೇನಹಳ್ಳಿ ರಸ್ತೆ ಮುಳುಗಡೆ

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಳ್ಳ, ಕೊಳ್ಳಗಳು ಸಂಪೂರ್ಣ ಭರ್ತಿಯಾಗಿದ್ದು, ಕೆಲ ಭಾಗದಲ್ಲಿ ರಸ್ತೆಗಳು ಬಂದ್ ಆಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಭಾರೀ ಮಳೆಗೆ ನೆಲಕಚ್ಚಿದ ಭತ್ತ..

ಜಿಲ್ಲೆಯ ಹರಿಹರ ತಾಲೂಕಿನ ಸಂಕ್ಲಿಪುರ ಹಾಗೂ ಮುಕ್ತೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಮಳೆ‌ ನೀರಿನಿಂದ ಜಲಾವೃತವಾಗಿದೆ. ಸಂಕ್ಲಿಪುರ ಗ್ರಾಮ ಹರಿಹರ ಹಾಗೂ ಹೊನ್ನಾಳಿ ತಾಲೂಕುಗಳ ಗಡಿ ಭಾಗದಲ್ಲಿದ್ದು, ಪ್ರತಿ ವರ್ಷ ಕೂಡ ಇದೇ ರೀತಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನಿರಂತರ ಮಳೆಯಿಂದ ನೂರಾರು ಎಕರೆ ಭತ್ತದ ಗದ್ದೆ ಹಾಗೂ ನೀರಿನ ಮೋಟರ್​​ ಕೂಡ ಮುಳುಗಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅನ್ನದಾತರ ನೆರವಿಗೆ ಬರಬೇಕಿದೆ.

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಳ್ಳ, ಕೊಳ್ಳಗಳು ಸಂಪೂರ್ಣ ಭರ್ತಿಯಾಗಿದ್ದು, ಕೆಲ ಭಾಗದಲ್ಲಿ ರಸ್ತೆಗಳು ಬಂದ್ ಆಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಭಾರೀ ಮಳೆಗೆ ನೆಲಕಚ್ಚಿದ ಭತ್ತ..

ಜಿಲ್ಲೆಯ ಹರಿಹರ ತಾಲೂಕಿನ ಸಂಕ್ಲಿಪುರ ಹಾಗೂ ಮುಕ್ತೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಮಳೆ‌ ನೀರಿನಿಂದ ಜಲಾವೃತವಾಗಿದೆ. ಸಂಕ್ಲಿಪುರ ಗ್ರಾಮ ಹರಿಹರ ಹಾಗೂ ಹೊನ್ನಾಳಿ ತಾಲೂಕುಗಳ ಗಡಿ ಭಾಗದಲ್ಲಿದ್ದು, ಪ್ರತಿ ವರ್ಷ ಕೂಡ ಇದೇ ರೀತಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನಿರಂತರ ಮಳೆಯಿಂದ ನೂರಾರು ಎಕರೆ ಭತ್ತದ ಗದ್ದೆ ಹಾಗೂ ನೀರಿನ ಮೋಟರ್​​ ಕೂಡ ಮುಳುಗಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅನ್ನದಾತರ ನೆರವಿಗೆ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.