ETV Bharat / city

ಕಠಿಣ ಲಾಕ್​ಡೌನ್​ ನಡುವೆಯೂ ಅನಗತ್ಯ ವಾಹನ ಸಂಚಾರ : ಲಾಠಿ ಏಟು, ಬಸ್ಕಿ, ವಚನ ಬೋಧನೆ ಶಿಕ್ಷೆ

author img

By

Published : May 10, 2021, 5:06 PM IST

ವಿಕ್ಟೋರಿಯಾ ಮಾರ್ಚರಿ ಬಳಿ ವ್ಯಕ್ತಿಯೊಬ್ಬ ಪತ್ರಕರ್ತ ಎಂದು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದ. ವಿಚಾರಿಸಿದಾಗ ಅವನು ನಕಲಿ ಪತ್ರಕರ್ತ ಎಂದು ತಿಳಿದು ಬಂದಿತ್ತು. ಸದ್ಯ ಕಮೀಷನ್​​ ವಾಹನ ಸೀಜ್​ ಮಾಡಲು ಹೇಳಿದ್ದಾರೆ..

vehicle-rider-braking-lock-down-rules-in-bangalore
ಅನಗತ್ಯ ವಾಹನ ಸಂಚಾರ

ಬೆಂಗಳೂರು : ನಗರದಲ್ಲಿ ಕಠಿಣ ಲಾಕ್​ಡೌನ್​ ಜಾರಿಯಾಗಿದ್ದರೂ ಸಹ ಅಲ್ಲಲ್ಲಿ ನಿಯಮ ಉಲ್ಲಂಘಟನೆಯಂತಹ ಘಟನೆ ನಡೆದಿವೆ. ಬೀದಿಗಿಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನು ಸೀಜ್​​ ಮಾಡಿದ್ದಾರೆ.

ಡಿಸಿಪಿ ಪ್ರಮಾಣ ವಚನ ಬೋಧನೆ : ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಪಾನಿಧಿ ಸರ್ಕಲ್‌ನಲ್ಲಿ ಲಾಕ್ಡೌ್ನ್‌ ನಿಯಮ ಉಲ್ಲಂಘನೆ ಮಾಡಿದವರಿಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಇನ್ನು ಮುಂದೆ ಕೋವಿಡ್​​ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿದರು.

ಕಠಿಣ ಲಾಕ್​ಡೌನ್​ ನಡುವೆಯೂ ಅನಗತ್ಯ ವಾಹನ ಸಂಚಾರ

ಆಟೋ ಚಾಲಕರಿಗೆ ಬಸ್ಕಿ ಶಿಕ್ಷೆ : ಅನಗತ್ಯವಾಗಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಮಾರ್ಕೆಟ್​ ಪೊಲೀಸರು ಬಸ್ಕಿ ಹೊಡಿಸಿದರು. ಈ ಸಂದರ್ಭದಲ್ಲಿ ನಾಳೆಯಿಂದ ಆಟೋ ಹೊರಗೆ ತೆಗೆಯಲ್ಲ ಸರ್​ ಎಂದು ಕಿವಿ ಹಿಡಿದು ಆಟೋ ಚಾಲಕರು ಪೊಲೀಸರಲ್ಲಿ ಮನವಿ ಮಾಡಿದರು. ನಂತರ ಪೊಲೀಸರು ಆಟೋಗಳನ್ನು ಬಿಟ್ಟು ಕಳುಹಿಸಿದ್ದಾರೆ.

ನಕಲಿ ಪತ್ರಕರ್ತನ ವಾಹನ ಸೀಜ್ :​​ ವಿಕ್ಟೋರಿಯಾ ಮಾರ್ಚರಿ ಬಳಿ ವ್ಯಕ್ತಿಯೊಬ್ಬ ಪತ್ರಕರ್ತ ಎಂದು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದ. ವಿಚಾರಿಸಿದಾಗ ಅವನು ನಕಲಿ ಪತ್ರಕರ್ತ ಎಂದು ತಿಳಿದು ಬಂದಿತ್ತು. ಸದ್ಯ ಕಮೀಷನ್​​ ವಾಹನ ಸೀಜ್​ ಮಾಡಲು ಹೇಳಿದ್ದಾರೆ.

ಪೊಲೀಸ್ ಜೊತೆ ವಾಗ್ದಾದಕ್ಕಿಳಿದ ಬೈಕ್​ ಸವಾರ : ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದರು. ವ್ಯಕ್ತಿಯೊಬ್ಬ ಬೈಕ್​ ಸವಾರಿ ಮಾಡಿಕೊಂಡು ಬಂದಿದ್ದ. ಅವನನ್ನು ತಡೆದ ಪೊಲೀಸರು ಪ್ರಶ್ನಿಸಿದಾಗ ಯುವಕ ವಾಗ್ವಾದಕ್ಕಿಳಿದ್ದಾನೆ. ಸದ್ಯ ಬೈಕ್​ ಸೀಜ್​ ಮಾಡಿರುವ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು : ನಗರದಲ್ಲಿ ಕಠಿಣ ಲಾಕ್​ಡೌನ್​ ಜಾರಿಯಾಗಿದ್ದರೂ ಸಹ ಅಲ್ಲಲ್ಲಿ ನಿಯಮ ಉಲ್ಲಂಘಟನೆಯಂತಹ ಘಟನೆ ನಡೆದಿವೆ. ಬೀದಿಗಿಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನು ಸೀಜ್​​ ಮಾಡಿದ್ದಾರೆ.

ಡಿಸಿಪಿ ಪ್ರಮಾಣ ವಚನ ಬೋಧನೆ : ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಪಾನಿಧಿ ಸರ್ಕಲ್‌ನಲ್ಲಿ ಲಾಕ್ಡೌ್ನ್‌ ನಿಯಮ ಉಲ್ಲಂಘನೆ ಮಾಡಿದವರಿಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಇನ್ನು ಮುಂದೆ ಕೋವಿಡ್​​ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿದರು.

ಕಠಿಣ ಲಾಕ್​ಡೌನ್​ ನಡುವೆಯೂ ಅನಗತ್ಯ ವಾಹನ ಸಂಚಾರ

ಆಟೋ ಚಾಲಕರಿಗೆ ಬಸ್ಕಿ ಶಿಕ್ಷೆ : ಅನಗತ್ಯವಾಗಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಮಾರ್ಕೆಟ್​ ಪೊಲೀಸರು ಬಸ್ಕಿ ಹೊಡಿಸಿದರು. ಈ ಸಂದರ್ಭದಲ್ಲಿ ನಾಳೆಯಿಂದ ಆಟೋ ಹೊರಗೆ ತೆಗೆಯಲ್ಲ ಸರ್​ ಎಂದು ಕಿವಿ ಹಿಡಿದು ಆಟೋ ಚಾಲಕರು ಪೊಲೀಸರಲ್ಲಿ ಮನವಿ ಮಾಡಿದರು. ನಂತರ ಪೊಲೀಸರು ಆಟೋಗಳನ್ನು ಬಿಟ್ಟು ಕಳುಹಿಸಿದ್ದಾರೆ.

ನಕಲಿ ಪತ್ರಕರ್ತನ ವಾಹನ ಸೀಜ್ :​​ ವಿಕ್ಟೋರಿಯಾ ಮಾರ್ಚರಿ ಬಳಿ ವ್ಯಕ್ತಿಯೊಬ್ಬ ಪತ್ರಕರ್ತ ಎಂದು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದ. ವಿಚಾರಿಸಿದಾಗ ಅವನು ನಕಲಿ ಪತ್ರಕರ್ತ ಎಂದು ತಿಳಿದು ಬಂದಿತ್ತು. ಸದ್ಯ ಕಮೀಷನ್​​ ವಾಹನ ಸೀಜ್​ ಮಾಡಲು ಹೇಳಿದ್ದಾರೆ.

ಪೊಲೀಸ್ ಜೊತೆ ವಾಗ್ದಾದಕ್ಕಿಳಿದ ಬೈಕ್​ ಸವಾರ : ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದರು. ವ್ಯಕ್ತಿಯೊಬ್ಬ ಬೈಕ್​ ಸವಾರಿ ಮಾಡಿಕೊಂಡು ಬಂದಿದ್ದ. ಅವನನ್ನು ತಡೆದ ಪೊಲೀಸರು ಪ್ರಶ್ನಿಸಿದಾಗ ಯುವಕ ವಾಗ್ವಾದಕ್ಕಿಳಿದ್ದಾನೆ. ಸದ್ಯ ಬೈಕ್​ ಸೀಜ್​ ಮಾಡಿರುವ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.