ETV Bharat / city

ನೂತನ ಸಚಿವರಿಗೆ ಸೋಮವಾರ ಖಾತೆ ಭಾಗ್ಯ; ಶಿಕ್ಷಣ ಬಿಟ್ಟು ಅಬಕಾರಿಯತ್ತ ನಾಗೇಶ್ ಕಣ್ಣು?

author img

By

Published : Jun 15, 2019, 8:12 PM IST

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಜೊತೆಗೆ ಅಬಕಾರಿ ಖಾತೆಯೂ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ಬಳಿಯೇ ಇದ್ದು, ಇದರಲ್ಲಿ ಯಾವುದನ್ನು ಬಿಟ್ಟುಕೊಟ್ಟರೂ, ಅವರಿಗೆ ನಷ್ಟವಿಲ್ಲ. ಆದರೆ ಸಿಎಂ ತಮ್ಮ ಬಳಿಯಿರುವ ಅಬಕಾರಿ ಖಾತೆ ಬಿಟ್ಟುಕೊಡುವುದು ಬಹುತೇಕ ಅನುಮಾನ ಎನ್ನುವ ಮಾತಿದೆ.

ಪ್ರಮಾಣ ವಚನ ಸ್ವೀಕರಿಸಿದ ನಾಗೇಶ್​, ಆರ್​.ಶಂಕರ್​, ಸಿಎಂ ಎಚ್​.ಡಿ.ಕುಮಾರಸ್ವಾಮಿ, ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ಡಿಸಿಎಂ ಜಿ.ಪರಮೇಶ್ವರ ಇದ್ದಾರೆ.

ಬೆಂಗಳೂರು: ಸಚಿವ ಸಂಪುಟದಲ್ಲಿ ಖಾಲಿಯಿದ್ದ ಮೂರರಲ್ಲಿ ಎರಡು ಸ್ಥಾನ ತುಂಬಿರುವ ಮೈತ್ರಿ ಸರ್ಕಾರ 24 ಗಂಟೆ ಕಳೆದರೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಲ್ಲ. ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಬರುವ ಸೋಮವಾರದವರೆಗೂ ಖಾತೆ ಹಂಚಿಕೆ ಆಗಲ್ಲ ಎನ್ನುವ ಮಾಹಿತಿ ಇದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸದ್ಯ ದಿಲ್ಲಿಯಲ್ಲಿದ್ದಾರೆ. ಇಂದು ಪ್ರಧಾನಿ ಭೇಟಿ ಹಾಗೂ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ‍್ಳಲು ತೆರಳಿರುವ ಹಿನ್ನೆಲೆಯಲ್ಲಿ ಇಂದು ಆಗಬೇಕಿದ್ದ ಖಾತೆ ಹಂಚಿಕೆ ಸೋಮವಾರ ಆಗುವ ಸಾಧ್ಯತೆ ಇದೆ.

ಇನ್ನು ನಿರೀಕ್ಷೆಯಂತೆ ಕಾಂಗ್ರೆಸ್ ಕಡೆಯಿಂದ ಸಚಿವರಾಗಿರುವ ಆರ್.ಶಂಕರ್​​ಗೆ ಹಿಂದೆ ಅವರಿಗೆ ನೀಡಿದ್ದ ಅರಣ್ಯ ಖಾತೆ ಸಿಗುವುದು ಅನುಮಾನ. ಬದಲಾಗಿ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಪೌರಾಡಳಿತ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಕಡೆಯಿಂದ ಸಚಿವರಾದ ನಾಗೇಶ್​​ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನೀಡಲು ನಿರ್ಧರಿಸಲಾಗಿದೆ. ಈ ಖಾತೆಯನ್ನು ಜೆಡಿಎಸ್-ಬಿಎಸ್​ಪಿ ಬೆಂಬಲಿತ ಶಾಸಕ ಎನ್.ಮಹೇಶ್ ಅವರು ನಿಭಾಯಿಸಿದ್ದರು. ಅವರ ರಾಜೀನಾಮೆ ನಂತರ ಖಾತೆಯನ್ನು ಸಿ.ಎಂ ಎಚ್​ಡಿಕೆ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದರು. ಆದರೆ, ಇದೀಗ ಈ ಖಾತೆಯನ್ನು ನಾಗೇಶ್​ಗೆ ನೀಡಲು ಮುಂದಾಗಿದ್ದಾರೆ.

ಅಬಕಾರಿಗೆ ಪಟ್ಟು ಎಚ್.ನಾಗೇಶ್‌ ಪಟ್ಟು?

ಮುಳಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವ ಸ್ಥಾನ ಒಲಿದು ಬಂದಿರುವುದೇ ಭಾಗ್ಯ ಅಂದುಕೊಳ್ಳುವ ಸ್ಥಿತಿ ಇರುವಾಗ ಎಚ್.ನಾಗೇಶ್ ತಮಗೆ ನೀಡಲು ಉದ್ದೇಶಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಬದಲಿಗೆ ಅಬಕಾರಿ ಖಾತೆಗೆ ಕಣ್ಣಿಟ್ಟಿದ್ದಾರೆ. ಆ ಖಾತೆಯೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಮಾಹಿತಿ ಇದೆ.

ಬೆಂಗಳೂರು: ಸಚಿವ ಸಂಪುಟದಲ್ಲಿ ಖಾಲಿಯಿದ್ದ ಮೂರರಲ್ಲಿ ಎರಡು ಸ್ಥಾನ ತುಂಬಿರುವ ಮೈತ್ರಿ ಸರ್ಕಾರ 24 ಗಂಟೆ ಕಳೆದರೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಲ್ಲ. ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಬರುವ ಸೋಮವಾರದವರೆಗೂ ಖಾತೆ ಹಂಚಿಕೆ ಆಗಲ್ಲ ಎನ್ನುವ ಮಾಹಿತಿ ಇದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸದ್ಯ ದಿಲ್ಲಿಯಲ್ಲಿದ್ದಾರೆ. ಇಂದು ಪ್ರಧಾನಿ ಭೇಟಿ ಹಾಗೂ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ‍್ಳಲು ತೆರಳಿರುವ ಹಿನ್ನೆಲೆಯಲ್ಲಿ ಇಂದು ಆಗಬೇಕಿದ್ದ ಖಾತೆ ಹಂಚಿಕೆ ಸೋಮವಾರ ಆಗುವ ಸಾಧ್ಯತೆ ಇದೆ.

ಇನ್ನು ನಿರೀಕ್ಷೆಯಂತೆ ಕಾಂಗ್ರೆಸ್ ಕಡೆಯಿಂದ ಸಚಿವರಾಗಿರುವ ಆರ್.ಶಂಕರ್​​ಗೆ ಹಿಂದೆ ಅವರಿಗೆ ನೀಡಿದ್ದ ಅರಣ್ಯ ಖಾತೆ ಸಿಗುವುದು ಅನುಮಾನ. ಬದಲಾಗಿ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಪೌರಾಡಳಿತ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಕಡೆಯಿಂದ ಸಚಿವರಾದ ನಾಗೇಶ್​​ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನೀಡಲು ನಿರ್ಧರಿಸಲಾಗಿದೆ. ಈ ಖಾತೆಯನ್ನು ಜೆಡಿಎಸ್-ಬಿಎಸ್​ಪಿ ಬೆಂಬಲಿತ ಶಾಸಕ ಎನ್.ಮಹೇಶ್ ಅವರು ನಿಭಾಯಿಸಿದ್ದರು. ಅವರ ರಾಜೀನಾಮೆ ನಂತರ ಖಾತೆಯನ್ನು ಸಿ.ಎಂ ಎಚ್​ಡಿಕೆ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದರು. ಆದರೆ, ಇದೀಗ ಈ ಖಾತೆಯನ್ನು ನಾಗೇಶ್​ಗೆ ನೀಡಲು ಮುಂದಾಗಿದ್ದಾರೆ.

ಅಬಕಾರಿಗೆ ಪಟ್ಟು ಎಚ್.ನಾಗೇಶ್‌ ಪಟ್ಟು?

ಮುಳಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವ ಸ್ಥಾನ ಒಲಿದು ಬಂದಿರುವುದೇ ಭಾಗ್ಯ ಅಂದುಕೊಳ್ಳುವ ಸ್ಥಿತಿ ಇರುವಾಗ ಎಚ್.ನಾಗೇಶ್ ತಮಗೆ ನೀಡಲು ಉದ್ದೇಶಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಬದಲಿಗೆ ಅಬಕಾರಿ ಖಾತೆಗೆ ಕಣ್ಣಿಟ್ಟಿದ್ದಾರೆ. ಆ ಖಾತೆಯೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಮಾಹಿತಿ ಇದೆ.

Intro:NEWSBody:ನೂತನ ಸಚಿವರಿಗೆ ಸೋಮವಾರವೇ ಖಾತೆ ಭಾಗ್ಯ; ಶಿಕ್ಷಣ ಬಿಟ್ಟು ಅಬಕಾರಿಯತ್ತ ನಾಗೇಶ್ ಕಣ್ಣು!?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಖಾಲಿ ಇದ್ದ ಮೂರಲ್ಲಿ ಎರಡು ಸ್ಥಾನ ತುಂಬಿಕೊಂಡು 24 ಗಂಟೆ ಕಳೆದರೂ ಸಚಿವರಿಗೆ ಖಾತೆ ಹಂಚಿಕೆ ಆಗಿಲ್ಲ. ಸೋಮವಾರದವರೆಗೂ ಖಾತೆ ಹಂಚಿಕೆ ಆಗಲ್ಲ ಎನ್ನುವ ಮಾಹಿತಿ ಇದೆ.
ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸದ್ಯ ದಿಲ್ಲಿಯಲ್ಲಿದ್ದಾರೆ. ಇಂದು ಪ್ರಧಾನಿ ಭೇಟಿ ಹಾಗೂ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ‍್ಳಲು ಇವರು ತೆರಳಿರುವ ಹಿನ್ನೆಲೆ ಇಂದು ಆಗಬೇಕಿದ್ದ ಖಾತೆ ಹಂಚಿಕೆ ಸೋಮವಾರ ಆಗುವ ಸಾಧ್ಯತೆ ಇದೆ.
ಇನ್ನು ನಿರೀಕ್ಷೆಯಂತೆ ಕಾಂಗ್ರೆಸ್ ಕಡೆಯಿಂದ ಸಚಿವರಾಗಿರುವ ಆರ್. ಶಂಕರ್ಗೆ ಹಿಂದೆ ಅವರಿಗೆ ನೀಡಿದ್ದ ಅರಣ್ಯ ಖಾತೆ ಸಿಗುವುದು ಅನುಮಾನ. ಬದಲಾಗಿ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ನಿಧನದಿಂದ ಖಾಲಿಯಾಗಿರುವ ಪೌರಾಡಳಿತ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆ. ಇನ್ನು ಜೆಡಿಎಸ್ ಕಡೆಯಿಂದ ಸಚಿವರಾಗಿರುವ ನಾಗೇಶ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನೀಡಲು ನಿರ್ಧರಿಸಲಾಗಿದೆ. ಈ ಖಾತೆಯನ್ನು ಜೆಡಿಎಸ್-ಬಿಎಸ್ಪಿ ಬೆಂಬಲಿತ ಶಾಸಕ ಎನ್. ಮಹೇಶ್ ಸಚಿವರಾಗಿ ನಿಭಾಯಿಸಿದ್ದರು. ಅವರ ರಾಜೀನಾಮೆ ನಂತರ ಖಾತೆಯನ್ನು ಸಿಎಂ ಎಚ್ಡಿಕೆ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದರು. ಆದರೆ ಇದೀಗ ಈ ಖಾತೆಯನ್ನು ನಾಗೇಶ್ಗೆ ನೀಡಲು ಮುಂದಾಗಿದ್ದಾರೆ.
ಅಬಕಾರಿಗೆ ಪಟ್ಟು?!
ಮುಳಬಾಗಿಲಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಒಂದೆಡೆ ಸಚಿವ ಸ್ಥಾನ ಒಲಿದು ಬಂದಿರುವುದೇ ಭಾಗ್ಯ ಅಂದುಕೊಳ್ಳುವ ಸ್ಥಿತಿ ಇರುವಾಗ ಎಚ್. ನಾಗೇಶ್ ತಮಗೆ ನೀಡಲು ಉದ್ದೇಶಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬದಲು ಅಬಕಾರಿ ಖಾತೆಗೆ ಕಣ್ಣು ಹಾಕಿದ್ದಾರೆ. ಅದೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಮಾಹಿತಿ ಇದೆ.
ಎರಡೂ ಖಾತೆಗಳೂ ಸಿಎಂ ಎಚ್,ಡಿ. ಕುಮಾರಸ್ವಾಮಿ ಬಳಿಯೇ ಇದ್ದು, ಇದರಲ್ಲಿ ಯಾವುದನ್ನು ಬಿಟ್ಟುಕೊಟ್ಟರೂ, ಅವರಿಗೆ ನಷ್ಟವಿಲ್ಲ. ಆದರೆ ಸಿಎಂ ತಮ್ಮ ಬಳಿಯಿರುವ ಅಬಕಾರಿ ಖಾತೆ ಬಿಟ್ಟುಕೊಡುವುದು ಬಹುತೇಕ ಅನುಮಾನ ಅನ್ನುವ ಮಾತಿದೆ.

Conclusion:NEWS
ETV Bharat Logo

Copyright © 2024 Ushodaya Enterprises Pvt. Ltd., All Rights Reserved.