ETV Bharat / city

ಪಿಎಸ್ಐ ಅಕ್ರಮ: ಪರೀಕ್ಷೆ‌ ಮುಗಿದ ನಾಲ್ಕೇ ದಿನಕ್ಕೆ ಒಎಂಆರ್ ಶೀಟ್‌ ತಿದ್ದಿದ ಪೊಲೀಸರು

author img

By

Published : Jul 29, 2022, 10:05 AM IST

ಪಿಎಸ್​ಐ ಅಕ್ರಮ ಪ್ರಕರಣದ ತನಿಖೆ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಆರೋಪಿಗಳ ಬಣ್ಣ ಬಯಲಾಗುತ್ತಲೇ ಇದೆ. ಕೆಲವು ಪೊಲೀಸ್ ಸಿಬ್ಬಂದಿ ಪರೀಕ್ಷೆ‌ ಮುಗಿದ ನಾಲ್ಕನೇ‌ ದಿನಕ್ಕೆ ಸ್ಟ್ರಾಂಗ್ ರೂಮ್​ಗೆ ನುಗ್ಗಿ ಒಎಂಆರ್ ಶೀಟ್ ತಿದ್ದಿರುವುದು ಬೆಳಕಿಗೆ ಬಂದಿದೆ.

arrested policeman edit to the OMR sheet, PSI Scam case, PSI Scam case 2022, CID investigation over PSI Scam case,  ಬಂಧಿತ ಪೊಲೀಸರಿಂದ ಓಎಂಆರ್ ಶೀಟ್‌ ತಿದ್ದುಪಡಿ, ಪಿಎಸ್‌ಐ ಹಗರಣ ಪ್ರಕರಣ, ಪಿಎಸ್‌ಐ ಹಗರಣ ಪ್ರಕರಣ 2022, ಪಿಎಸ್‌ಐ ಹಗರಣ ಪ್ರಕರಣದ ಕುರಿತು ಸಿಐಡಿ ತನಿಖೆ,
ಪಿಎಸ್ಐ ಅಕ್ರಮ ಪ್ರಕರಣ

ಬೆಂಗಳೂರು: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್ಐ) ಪರೀಕ್ಷಾ ಮುಗಿದ ನಾಲ್ಕು ದಿನಗಳ ಅಂತರದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರಿದ್ದ ಪೊಲೀಸ್ ಸಿಬ್ಬಂದಿಯ ತಂಡವು ಸ್ಟ್ರಾಂಗ್ ರೂಮ್‌ ಒಳನುಗ್ಗಿ 22 ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆ ಎಂದು ಸಿಐಡಿ ಸಲ್ಲಿಸಿದ ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿದೆ.

ಬಂಧಿತ ಆರೋಪಿಗಳು ಮೂರು ಬಾರಿ ಪ್ರತ್ಯೇಕ ದಿನಗಳಲ್ಲಿ ಹೋಗಿ ಒಎಂಆರ್ ಶೀಟ್ ತಿದ್ದಿದ್ದಾರೆ.‌ ಕಳೆದ ವರ್ಷ ಅಕ್ಟೋಬರ್ 7, 8 ಹಾಗೂ 16 ರಂದು ಬೆಳಗ್ಗೆ 6 ರಿಂದ 9.30 ವರೆಗೆ ಉತ್ತರಪತ್ರಿಕೆಗಳ‌ ಟ್ಯಾಂಪರಿಂಗ್ ಕಾರ್ಯ ನಡೆದಿದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ ಅಕ್ಟೋಬರ್ 3 ರಂದು ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆ ನಡೆಸಿತ್ತು.‌ ಪರೀಕ್ಷೆ ಮುಗಿದ ನಂತರ ಉತ್ತರಪತ್ರಿಕೆಗಳನ್ನು ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್​ನಲ್ಲಿ‌ 'ಭದ್ರ'ವಾಗಿಡಲಾಗಿತ್ತು. ಇದರ ಉಸ್ತುವಾರಿಯನ್ನು ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವಹಿಸಿದ್ದರು. ಹೀಗಾಗಿ ಸ್ಟ್ರಾಂಗ್ ರೂಮ್ ಕೀ ಅವರ ಅಧೀನದಲ್ಲಿತ್ತು.

ಆರೋಪಿಗಳ ಪೂರ್ವಸಂಚಿನಂತೆ ಪರೀಕ್ಷೆ‌ ಮುಗಿದ ನಾಲ್ಕು ದಿನಗಳ ಬಳಿಕ ಅಂದರೆ ಅ.5ರಂದು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಪೌಲ್ ಅವರ ಕಚೇರಿಯ ಕೊಠಡಿಗೆ ಹೋಗಿ ಕಪಾಟಿನಲ್ಲಿದ್ದ ಸ್ಟ್ರಾಂಗ್ ರೂಮ್‌ ಬೀಗದ ಕೀ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 6 ಮಹಾಲಯ ಅಮಾವಾಸ್ಯೆಯಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇದ್ದುದರಿಂದ ಅ.7ರಂದು ಮುಂಜಾನೆ 6.30 ಕ್ಕೆ ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎಗಳಾದ ಹರ್ಷ, ಶ್ರೀನಿವಾಸ್ ಹಾಗೂ ಕಾನ್ ಸ್ಟೇಬಲ್ ಶ್ರೀಧರ್ ಸಿಐಡಿ ಕಚೇರಿಗೆ ಹೋಗಿದ್ದರು.

ಕೃತ್ಯದ ಬಗ್ಗೆ ತಿಳಿಯದಂತೆ ಮೊದಲಿಗೆ ಸ್ಟ್ರಾಂಗ್ ರೂಂ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿದ್ದಾರೆ. ಶ್ರೀನಿವಾಸ್ ಹಾಗೂ ಶ್ರೀಧರ್ ಒಳಹೋದರೆ ಸ್ಟ್ರಾಂಗ್ ರೂಮ್ ಬಾಗಿಲು ಬಳಿ ಹರ್ಷ ಕಾವಲು ಕಾದಿದ್ದ. ಮುಂಜಾನೆ 6.30ರಿಂದ 9.30ರವರೆಗೆ ಹಣ ನೀಡಿದ ಆಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿದ್ದಾರೆ. ಅದೇ ರೀತಿ ಅ.8 ಹಾಗೂ 16 ರಂದು ಇದೇ ಅವಧಿಯಲ್ಲಿ ಉತ್ತರಪತ್ರಿಕೆಗಳ ಟ್ಯಾಂಪರಿಂಗ್ ಮಾಡಿದ್ದಾರೆ. ನಗರ ವ್ಯಾಪ್ತಿಯ 7 ಪರೀಕ್ಷಾ ಕೇಂದ್ರಗಳಲ್ಲಿ‌‌‌ ಪರೀಕ್ಷೆ ಬರೆದಿದ್ದ 22 ಪಿಎಸ್ಐ ಆಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಲ್ಲಿ ರುಜುವಾತಾಗಿದೆ ಎಂದು‌ ಆರೋಪಪಟ್ಟಿಯಲ್ಲಿ ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

ಪಿಎಸ್ಐ ಜಾಲದಲ್ಲಿ ಇದುವರೆಗೆ 8 ಮಂದಿ ಪೊಲೀಸರನ್ನು ಬಂಧಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಡಿವೈಎಸ್ಪಿ ಶಾಂತಕುಮಾರ್, ಸಬ್ ಇನ್ಸ್‌ಪೆಕ್ಟರ್ ಹರೀಶ್, ಕೆಎಸ್ಆರ್​ಪಿ ಇನ್ಸ್​ಪೆಕ್ಟರ್​ ಮಧು, ಗುರುವ ಬಸವರಾಜ್, ಕಾನ್‌ಸ್ಟೇಬಲ್​ಗಳಾದ ಶ್ರೀಧರ್, ಲೊಕೇಶಪ್ಪ, ಶ್ರೀನಿವಾಸ್ ಹಾಗೂ ಎಫ್​ಡಿಎ ಹರ್ಷ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸಿಐಡಿ ಪತ್ರ ಬರೆದಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಸಿಐಡಿ ಚಾರ್ಜ್​ಶೀಟ್ ಸಲ್ಲಿಸಿತು. 3,065 ಪುಟಗಳ ಚಾರ್ಜ್‌ಶೀಟ್​ನಲ್ಲಿ 202 ಸಾಕ್ಷಿಗಳು ಹಾಗೂ 330 ದಾಖಲಾತಿಗಳನ್ನು 30 ಮಂದಿ ಆರೋಪಿಗಳ ವಿರುದ್ಧ ಸಲ್ಲಿಸಲಾಗಿದೆ.

ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಹಗರಣ.. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ

ಬೆಂಗಳೂರು: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್ಐ) ಪರೀಕ್ಷಾ ಮುಗಿದ ನಾಲ್ಕು ದಿನಗಳ ಅಂತರದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರಿದ್ದ ಪೊಲೀಸ್ ಸಿಬ್ಬಂದಿಯ ತಂಡವು ಸ್ಟ್ರಾಂಗ್ ರೂಮ್‌ ಒಳನುಗ್ಗಿ 22 ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆ ಎಂದು ಸಿಐಡಿ ಸಲ್ಲಿಸಿದ ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿದೆ.

ಬಂಧಿತ ಆರೋಪಿಗಳು ಮೂರು ಬಾರಿ ಪ್ರತ್ಯೇಕ ದಿನಗಳಲ್ಲಿ ಹೋಗಿ ಒಎಂಆರ್ ಶೀಟ್ ತಿದ್ದಿದ್ದಾರೆ.‌ ಕಳೆದ ವರ್ಷ ಅಕ್ಟೋಬರ್ 7, 8 ಹಾಗೂ 16 ರಂದು ಬೆಳಗ್ಗೆ 6 ರಿಂದ 9.30 ವರೆಗೆ ಉತ್ತರಪತ್ರಿಕೆಗಳ‌ ಟ್ಯಾಂಪರಿಂಗ್ ಕಾರ್ಯ ನಡೆದಿದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ ಅಕ್ಟೋಬರ್ 3 ರಂದು ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆ ನಡೆಸಿತ್ತು.‌ ಪರೀಕ್ಷೆ ಮುಗಿದ ನಂತರ ಉತ್ತರಪತ್ರಿಕೆಗಳನ್ನು ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್​ನಲ್ಲಿ‌ 'ಭದ್ರ'ವಾಗಿಡಲಾಗಿತ್ತು. ಇದರ ಉಸ್ತುವಾರಿಯನ್ನು ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವಹಿಸಿದ್ದರು. ಹೀಗಾಗಿ ಸ್ಟ್ರಾಂಗ್ ರೂಮ್ ಕೀ ಅವರ ಅಧೀನದಲ್ಲಿತ್ತು.

ಆರೋಪಿಗಳ ಪೂರ್ವಸಂಚಿನಂತೆ ಪರೀಕ್ಷೆ‌ ಮುಗಿದ ನಾಲ್ಕು ದಿನಗಳ ಬಳಿಕ ಅಂದರೆ ಅ.5ರಂದು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಪೌಲ್ ಅವರ ಕಚೇರಿಯ ಕೊಠಡಿಗೆ ಹೋಗಿ ಕಪಾಟಿನಲ್ಲಿದ್ದ ಸ್ಟ್ರಾಂಗ್ ರೂಮ್‌ ಬೀಗದ ಕೀ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 6 ಮಹಾಲಯ ಅಮಾವಾಸ್ಯೆಯಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇದ್ದುದರಿಂದ ಅ.7ರಂದು ಮುಂಜಾನೆ 6.30 ಕ್ಕೆ ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎಗಳಾದ ಹರ್ಷ, ಶ್ರೀನಿವಾಸ್ ಹಾಗೂ ಕಾನ್ ಸ್ಟೇಬಲ್ ಶ್ರೀಧರ್ ಸಿಐಡಿ ಕಚೇರಿಗೆ ಹೋಗಿದ್ದರು.

ಕೃತ್ಯದ ಬಗ್ಗೆ ತಿಳಿಯದಂತೆ ಮೊದಲಿಗೆ ಸ್ಟ್ರಾಂಗ್ ರೂಂ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿದ್ದಾರೆ. ಶ್ರೀನಿವಾಸ್ ಹಾಗೂ ಶ್ರೀಧರ್ ಒಳಹೋದರೆ ಸ್ಟ್ರಾಂಗ್ ರೂಮ್ ಬಾಗಿಲು ಬಳಿ ಹರ್ಷ ಕಾವಲು ಕಾದಿದ್ದ. ಮುಂಜಾನೆ 6.30ರಿಂದ 9.30ರವರೆಗೆ ಹಣ ನೀಡಿದ ಆಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿದ್ದಾರೆ. ಅದೇ ರೀತಿ ಅ.8 ಹಾಗೂ 16 ರಂದು ಇದೇ ಅವಧಿಯಲ್ಲಿ ಉತ್ತರಪತ್ರಿಕೆಗಳ ಟ್ಯಾಂಪರಿಂಗ್ ಮಾಡಿದ್ದಾರೆ. ನಗರ ವ್ಯಾಪ್ತಿಯ 7 ಪರೀಕ್ಷಾ ಕೇಂದ್ರಗಳಲ್ಲಿ‌‌‌ ಪರೀಕ್ಷೆ ಬರೆದಿದ್ದ 22 ಪಿಎಸ್ಐ ಆಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಲ್ಲಿ ರುಜುವಾತಾಗಿದೆ ಎಂದು‌ ಆರೋಪಪಟ್ಟಿಯಲ್ಲಿ ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

ಪಿಎಸ್ಐ ಜಾಲದಲ್ಲಿ ಇದುವರೆಗೆ 8 ಮಂದಿ ಪೊಲೀಸರನ್ನು ಬಂಧಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಡಿವೈಎಸ್ಪಿ ಶಾಂತಕುಮಾರ್, ಸಬ್ ಇನ್ಸ್‌ಪೆಕ್ಟರ್ ಹರೀಶ್, ಕೆಎಸ್ಆರ್​ಪಿ ಇನ್ಸ್​ಪೆಕ್ಟರ್​ ಮಧು, ಗುರುವ ಬಸವರಾಜ್, ಕಾನ್‌ಸ್ಟೇಬಲ್​ಗಳಾದ ಶ್ರೀಧರ್, ಲೊಕೇಶಪ್ಪ, ಶ್ರೀನಿವಾಸ್ ಹಾಗೂ ಎಫ್​ಡಿಎ ಹರ್ಷ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸಿಐಡಿ ಪತ್ರ ಬರೆದಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಸಿಐಡಿ ಚಾರ್ಜ್​ಶೀಟ್ ಸಲ್ಲಿಸಿತು. 3,065 ಪುಟಗಳ ಚಾರ್ಜ್‌ಶೀಟ್​ನಲ್ಲಿ 202 ಸಾಕ್ಷಿಗಳು ಹಾಗೂ 330 ದಾಖಲಾತಿಗಳನ್ನು 30 ಮಂದಿ ಆರೋಪಿಗಳ ವಿರುದ್ಧ ಸಲ್ಲಿಸಲಾಗಿದೆ.

ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಹಗರಣ.. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.