ETV Bharat / city

ರಾಜಕಾರಣಿಗಳ ಭಾಷಣದಿಂದ ಸಮಾಜ ಉದ್ದಾರವಾಗಲ್ಲ: ಕೇಂದ್ರ ಸಚಿವ ಸದಾನಂದಗೌಡ - ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಭೈರೇಗೌಡ

ನಮ್ಮ ಹಿರಿಯರ ಮನಸ್ಸಿನ ಕಲ್ಪನೆಯ ಭಾರತ ಇನ್ನೂ ರೂಪಗೊಂಡಿಲ್ಲ. ಭವಿಷ್ಯವನ್ನು ತಾನೇ ನಿರೂಪಿಸಿಕೊಂಡು ಇತರರ ಏಳಿಗೆಗಾಗಿ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಕೇಂದ್ರ ಸಚಿವ ಡಿ.ವಿ ಸದಾನಂದಗೌಡ
author img

By

Published : Jul 27, 2019, 11:52 PM IST

ಬೆಂಗಳೂರು: ರಾಜಕಾರಣಿಗಳು ಭಾಷಣ ಮಾಡಬಹುದು, ಘೋಷಣೆ ಕೂಗಬಹುದು, ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು. ಆದ್ರೆ ಯಾವ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಂಡು ಇತರರ ಏಳಿಗೆಗೆ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಯಲಹಂಕ ಬಳಿಯ ನವರತ್ನ ಅಗ್ರಹಾರದ ಶಾಲೆ ಉದ್ಘಾಟನೆ

ಯಲಹಂಕ ಬಳಿಯ ನವರತ್ನ ಅಗ್ರಹಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರಸ್ತಾಪಿತ ಪ್ರೌಢ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಆಚಾರ, ವಿಚಾರ, ಸಂಸ್ಕೃತಿ ಪರಂಪರೆಗಳಲ್ಲಿ ಭವಿಷ್ಯವನ್ನು ಕಟ್ಟಬೇಕು ಎಂಬ ಭಾವನೆಯಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಪ್ರಾಣಾರ್ಪಣೆ ಮಾಡಿದ್ದರು. ಆದರೆ ನಮ್ಮ ಹಿರಿಯರ ಮನಸ್ಸಿನ ಕಲ್ಪನೆಯ ಭಾರತ ರೂಪಗೊಂಡಿಲ್ಲ. ಭವಿಷ್ಯವನ್ನು ತಾನೇ ನಿರೂಪಿಸಿಕೊಂಡು ಇತರರ ಏಳಿಗೆಗಾಗಿ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಜನರಿಗೆ ನಾನು ಮತ್ತು ನನ್ನ ಕುಟುಂಬ ಚೆನ್ನಾಗಿ ಇರಬೇಕೆಂಬ ಸೀಮಿತ ಭಾವನೆ ಇದೆ. ಅದನ್ನು ಮೀರಿ ನಡೆದಾಗ ಮಾತ್ರ ದೇಶದ ನಿರ್ಮಾಣ ಸಾಧ್ಯವಾಗುತ್ತದೆ. ಸರ್ಕಾರದಿಂದ ಯಾವುದೇ ಸಮಾಜ, ರಾಜ್ಯ, ರಾಷ್ಟ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಮನುಷ್ಯ ತಾನು ಬೆಳೆಯುವುದರ ಜೊತೆಗೆ ಭವಿಷ್ಯದಲ್ಲಿ ಇತರರಿಗೂ ಸಹಾಯ ಮಾಡುವಂತಹ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಶ್ರದ್ಧೆ ಹಣಕ್ಕಿಂತ ಉತ್ತಮ. ಹಣ ಇದ್ದವರೆಲ್ಲರಿಗೂ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ತಮ್ಮ ಸ್ವಂತ ದುಡಿಮೆಯ 3 ಕೋಟಿ ರೂ.ಗಳನ್ನು ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟ ರೊನಾಲ್ಡ್ ಕೊಲಾಸೊ ಅವರಲ್ಲಿ ಹೃದಯ ಶ್ರೀಮಂತಿಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.

ಬೆಂಗಳೂರು: ರಾಜಕಾರಣಿಗಳು ಭಾಷಣ ಮಾಡಬಹುದು, ಘೋಷಣೆ ಕೂಗಬಹುದು, ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು. ಆದ್ರೆ ಯಾವ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಂಡು ಇತರರ ಏಳಿಗೆಗೆ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಯಲಹಂಕ ಬಳಿಯ ನವರತ್ನ ಅಗ್ರಹಾರದ ಶಾಲೆ ಉದ್ಘಾಟನೆ

ಯಲಹಂಕ ಬಳಿಯ ನವರತ್ನ ಅಗ್ರಹಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರಸ್ತಾಪಿತ ಪ್ರೌಢ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಆಚಾರ, ವಿಚಾರ, ಸಂಸ್ಕೃತಿ ಪರಂಪರೆಗಳಲ್ಲಿ ಭವಿಷ್ಯವನ್ನು ಕಟ್ಟಬೇಕು ಎಂಬ ಭಾವನೆಯಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಪ್ರಾಣಾರ್ಪಣೆ ಮಾಡಿದ್ದರು. ಆದರೆ ನಮ್ಮ ಹಿರಿಯರ ಮನಸ್ಸಿನ ಕಲ್ಪನೆಯ ಭಾರತ ರೂಪಗೊಂಡಿಲ್ಲ. ಭವಿಷ್ಯವನ್ನು ತಾನೇ ನಿರೂಪಿಸಿಕೊಂಡು ಇತರರ ಏಳಿಗೆಗಾಗಿ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಜನರಿಗೆ ನಾನು ಮತ್ತು ನನ್ನ ಕುಟುಂಬ ಚೆನ್ನಾಗಿ ಇರಬೇಕೆಂಬ ಸೀಮಿತ ಭಾವನೆ ಇದೆ. ಅದನ್ನು ಮೀರಿ ನಡೆದಾಗ ಮಾತ್ರ ದೇಶದ ನಿರ್ಮಾಣ ಸಾಧ್ಯವಾಗುತ್ತದೆ. ಸರ್ಕಾರದಿಂದ ಯಾವುದೇ ಸಮಾಜ, ರಾಜ್ಯ, ರಾಷ್ಟ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಮನುಷ್ಯ ತಾನು ಬೆಳೆಯುವುದರ ಜೊತೆಗೆ ಭವಿಷ್ಯದಲ್ಲಿ ಇತರರಿಗೂ ಸಹಾಯ ಮಾಡುವಂತಹ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಶ್ರದ್ಧೆ ಹಣಕ್ಕಿಂತ ಉತ್ತಮ. ಹಣ ಇದ್ದವರೆಲ್ಲರಿಗೂ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ತಮ್ಮ ಸ್ವಂತ ದುಡಿಮೆಯ 3 ಕೋಟಿ ರೂ.ಗಳನ್ನು ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟ ರೊನಾಲ್ಡ್ ಕೊಲಾಸೊ ಅವರಲ್ಲಿ ಹೃದಯ ಶ್ರೀಮಂತಿಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.

Intro:ಚಪ್ಪಾಳೆ ಭಾಷಣಗಳಿಂದ ಸಮಾಜ ಉದ್ದಾರವಾಗಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಬೆಂಗಳೂರು: ರಾಜಕಾರಣಿಗಳು ಭಾಷಣ ಮಾಡಬಹುದು, ಘೋಷಣೆ ಕೂಗಬಹುದು. ಕೈಚಪ್ಪಾಳೆ ಗಿಟ್ಟಿಸಬಹುದು. ಆದರೆ, ಸರ್ಕಾರ ಮಾಡುವುದಕ್ಕಿಂತ ಹೆಚ್ಚಿನ ಭಾಗ ಸಮಾಜದಿಂದ ಬಂದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಯಲಹಂಕ ಬಳಿಯ ನವರತ್ನ ಅಗ್ರಹಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರಸ್ತಾಪಿತ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದ ಅವರು, ಭಾರತ ದೇಶದ ಆಚಾರ,ವಿಚಾರ, ಸಂಸ್ಕೃತಿ ಪರಂಪರೆಗಳಲ್ಲಿ ಭವಿಷ್ಯವನ್ನು ಕಟ್ಟಬೇಕು ಎಂಬ ಭಾವನೆಯಿಂದ ಸ್ವಾತಂತ್ರ್ಯಪೂರ್ವದಲ್ಲಿ ಹಿರಿಯರು ಪ್ರಾಣಾರ್ಪಣೆ ಮಾಡಿದ್ದರು. ಆದರೆ ನಮ್ಮ ಹಿರಿಯರ ಮನಸ್ಸಿನ ಕಲ್ಪನೆಯ ಭಾರತ ರೂಪಗೊಂಡಿಲ್ಲ. ಭವಿಷ್ಯವನ್ನು ತಾನೇ ನಿರೂಪಿಸಿಕೊಂಡು ಇತರರ ಏಳಿಗೆಗಾಗಿ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಜನರಿಗೆ ನಾನು ಮತ್ತು ನನ್ನ ಕುಟುಂಬ ಚೆನ್ನಾಗಿ ಇರಬೇಕೆಂಬ ಸೀಮಿತ ಭಾವನೆ ಇದೆ. ಅದನ್ನು ಮೀರಿ ನಡೆದಾಗ ಮಾತ್ರ ದೇಶ ನಿರ್ಮಾಣ ಸಾಧ್ಯವಾಗುತ್ತದೆ. ಸರ್ಕಾರದಿಂದ ಯಾವುದೇ ಸಮಾಜ, ರಾಜ್ಯ, ರಾಷ್ಟ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಮನುಷ್ಯ ತಾನು ಬೆಳೆಯುವುದರ ಜೊತೆಗೆ ಭವಿಷ್ಯದಲ್ಲಿ ಇತರರಿಗೂ ಸಹಾಯ ಮಾಡುವಂತಹ ವ್ಯಕ್ತಿತ್ವ ಬೆಳೆಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


Body:ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಶ್ರದ್ಧೆ ಹಣಕ್ಕಿಂತ ಉತ್ತಮ. ಹಣ ಇದ್ದವರೆಲ್ಲರಿಗೂ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ತಮ್ಮ ಸ್ವಂತ ದುಡಿಮೆಯ 3 ಕೋಟಿ ರೂ.ಗಳನ್ನು ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟ ರೊನಾಲ್ಡ್ ಕೊಲಾಸೊ ಅವರಲ್ಲಿ ಹೃದಯ ಶ್ರೀಮಂತಿಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.

ಸರ್ಕಾರಿ ಶಾಲೆಗಳನ್ನೇ ಉನ್ನತ ಮಟ್ಟಕ್ಕೆ ಏರಿಸಿದರೆ ನಮ್ಮ ಪೋಷಕರಿಗೆ ಇರುವ ಖಾಸಗಿ ಶಾಲೆಗಳ ಸೆಳೆತ ಕಡಿಮೆ ಮಾಡಬಹುದು. ಆದರೆ, ಪೋಷಕರ ಇಂಗ್ಲೀಷ್ ಮೇಲಿನ ವ್ಯಾಮೋಹವನ್ನೇ ಲಾಭವಾಗಿ ಪರಿವರ್ತಿಸಿಕೊಂಡಿರುವ ಖಾಸಗಿ ಶಾಲೆಗಳು ಹಣ ಕೀಳುವ ಕಾರ್ಯದಲ್ಲಿ ತೊಡಗಿವೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮವ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಖಾಸಗಿ ಶಾಲೆಗಳಿಗಿಂತ ಹೆಚ್ಚು ಸಂಬಳ ಕೊಡಲಾಗುತ್ತದೆ ಎಂದು ಹೇಳಿದರು.

Conclusion:ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ದೊಡ್ಡಜಾಲ ಗ್ರಾಪಂ ಅಧ್ಯಕ್ಷ ಎಸ್.ಕೆ.ಮಹೇಶ್‌ಕುಮಾರ್, ಆಲ್ ಇಂಡಿಯಾ ಆಲ್ ಕಾಲೇಜ್ ಪ್ರಿನ್ಸಿಪಾಲ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ, ದಾನಿ ರೊನಾಲ್ಡ್ ಕೊಲಾಸೊ, ನವರತ್ನ ಅಗ್ರಹಾರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎ.ಸಿ.ಗೋವಿಂದರಾಜು ಸೇರಿ ಪ್ರಮುಖರು ಉಪಸ್ಥಿತರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.