ETV Bharat / city

ಬೆಂಗಳೂರಲ್ಲಿ ಜಗಳ ಬಿಡಿಸಲು ಬಂದವ ಹೆಣವಾದ... ಆರೋಪಿಗಳು ಅಂದರ್

ಹಣ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಅಮಾಯಕ ಜೀವವೊಂದು ಬಲಿಯಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

author img

By

Published : Jun 8, 2019, 12:14 PM IST

ಆರೋಪಿಗಳು

ಬೆಂಗಳೂರು: ಹಣ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋಗಿದ್ದ ಸಿಗ್ಮಾತ್​ ಎಂಬಾತನಿಗೆ ಚಾಕು ಇರಿದು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ.

ಬುಡೇನ್, ಸಾಧಿಕ್, ಬೇಬಿ ಶೋಯೆಬ್, ಮುಬಾರಾಕ್ ಬಂಧಿತ ಆರೊಪಿಗಳು. ರಂಜಾನ್ ಪ್ರಯುಕ್ತ ನ್ಯಾಷನಲ್ ಚಿಕನ್ ಅಂಗಡಿಯ ವ್ಯಾಪಾರದಲ್ಲಿ ಬಂದ ಟಿಪ್ಸ್ ಹಣದಲ್ಲಿ ನಾಲ್ವರು ಸಮನಾಗಿ ಹಂಚಿಕೊಳ್ಳಬೇಕಿತ್ತು. ಬಂದ ಹಣದಲ್ಲಿ ನನಗೆ ಅಧಿಕ ಪಾಲು ಬೇಕು ಎಂದು ಒಬ್ಬೊರಿಗೊಬ್ಬರು ಗಲಾಟೆ ಆರಂಭಿಸಿದ್ದರು. ಅಲ್ಲದೇ ನಾಲ್ವರು ಕಂಠಪೂರ್ತಿ ಕುಡಿದಿದ್ದರು.

ಆರೋಪಿಗಳು

ಆಗ ಅಲ್ಲೇ ಕೆಲಸ ಮಾಡುತ್ತಿದ್ದ ಸಿಗ್ಮಾತ್ ಜಗಳ ಬಿಡಿಸಲು ಬಂದು, ಸುಮ್ಮನೆ ಯಾಕೆ ಜಗಳ ಮಾಡಿಕೊಳ್ಳುತ್ತಿದ್ದೀರಾ ಬಂದಿರುವ ಹಣವನ್ನು ಸಮನಾಗಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು. ಆದರೆ, ಕೋಪದಲ್ಲಿದ್ದ ಆರೋಪಿಗಳು ನಮ್ಮ ಜಗಳದ ನಡುವೆ ನಿಂದೇನೋ ಎಂದು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಗ್ಮಾತ್​ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ವಶಕ್ಕೆ ಪಡೆದ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್​ ಹೇಳಿದರು.

ಬೆಂಗಳೂರು: ಹಣ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋಗಿದ್ದ ಸಿಗ್ಮಾತ್​ ಎಂಬಾತನಿಗೆ ಚಾಕು ಇರಿದು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ.

ಬುಡೇನ್, ಸಾಧಿಕ್, ಬೇಬಿ ಶೋಯೆಬ್, ಮುಬಾರಾಕ್ ಬಂಧಿತ ಆರೊಪಿಗಳು. ರಂಜಾನ್ ಪ್ರಯುಕ್ತ ನ್ಯಾಷನಲ್ ಚಿಕನ್ ಅಂಗಡಿಯ ವ್ಯಾಪಾರದಲ್ಲಿ ಬಂದ ಟಿಪ್ಸ್ ಹಣದಲ್ಲಿ ನಾಲ್ವರು ಸಮನಾಗಿ ಹಂಚಿಕೊಳ್ಳಬೇಕಿತ್ತು. ಬಂದ ಹಣದಲ್ಲಿ ನನಗೆ ಅಧಿಕ ಪಾಲು ಬೇಕು ಎಂದು ಒಬ್ಬೊರಿಗೊಬ್ಬರು ಗಲಾಟೆ ಆರಂಭಿಸಿದ್ದರು. ಅಲ್ಲದೇ ನಾಲ್ವರು ಕಂಠಪೂರ್ತಿ ಕುಡಿದಿದ್ದರು.

ಆರೋಪಿಗಳು

ಆಗ ಅಲ್ಲೇ ಕೆಲಸ ಮಾಡುತ್ತಿದ್ದ ಸಿಗ್ಮಾತ್ ಜಗಳ ಬಿಡಿಸಲು ಬಂದು, ಸುಮ್ಮನೆ ಯಾಕೆ ಜಗಳ ಮಾಡಿಕೊಳ್ಳುತ್ತಿದ್ದೀರಾ ಬಂದಿರುವ ಹಣವನ್ನು ಸಮನಾಗಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು. ಆದರೆ, ಕೋಪದಲ್ಲಿದ್ದ ಆರೋಪಿಗಳು ನಮ್ಮ ಜಗಳದ ನಡುವೆ ನಿಂದೇನೋ ಎಂದು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಗ್ಮಾತ್​ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ವಶಕ್ಕೆ ಪಡೆದ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್​ ಹೇಳಿದರು.

Intro:ಜಗಳದ ನಡುವೆ ನಿಂದೇನೋ ಎಂದು ಚಾಕು‌ ‌ಇರಿತ
ಇದೀಗ ಆರೋಪಿಗಳು‌ ಅಂದರ್

ಭವ್ಯ

ಹಣ ಹಂಚಿಕೊಳ್ಳುವ ವಿಚಾರದಲ್ಲಿ ಸಿಗ್ಮಾತ್ ಎಂಬಾತನನ್ನ ಕೊಲೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಜೆಜೆನಗರ ಪೊಲೀಸ್ರು ಬಂಧಿಸಿದ್ದಾರೆ. ಬುಡೇನ್, ಸಾಧಿಕ್, ಬೇಬಿ ಶೋಯೆಬ್, ಮುಬಾರಾಕ್ ಬಂಧಿತ ಆರೊಪಿಗಳು.
ರಂಜಾನ್ ಪ್ರಯುಕ್ತ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ವ್ಯಾಪಾರ ದಲ್ಲಿ ಬಂದ ಟಿಪ್ಸ್ ಹಣದಲ್ಲಿ ನಾಲ್ವರು ಆರೋಪಿಗಳು ಸಮನಾಗಿಯೇ ಹಂಚಿಕೊಳ್ಳಬೇಕಿತ್ತು. ಈ ವೇಳೆ ಒಬ್ಬರಿಗೊಬ್ಬರ ನಡುವೆ ಜಗಳವಾಗಿತ್ತು. ಅಲ್ಲದೇ ನಾಲ್ವರು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಅಲ್ಲೇ ಕೆಕಸ ಮಾಡ್ತಿದ್ದ ಸಿಗ್ಮಾತ್ ಯಾಕೆ ಜಗಳ ಮಾಡ್ತಿದ್ದೀರಾ ಎಲ್ಲಾ ಸಮನಾಗಿ ಹಂಚಿಕೊಳ್ಳಿ ಎಂದು ಜಗಳ ಬಿಡಿಸಲು ಹೋಗಿದ್ದ.

ನಮ್ಮ ಜಗಳದ ನಡುವೆ ನಿಂದೇನೋ ಎಂದು ಚಾಕುವಿನಿಂದ ಇರಿದಿದ್ದಾರೆ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಗ್ಮಾತ್ ನನ್ನ ಆಸ್ಪತ್ರೆಗೆ ಸೇರಿಸಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಜೆಜೆ ನಗರ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.

Body:KN_BNG_10_7_JJNAGR MURDER_7204498_BHAVYAConclusion:KN_BNG_10_7_JJNAGR MURDER_7204498_BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.