ETV Bharat / city

ಬಿಬಿಎಂಪಿ ಮೇಯರ್ ವಿರುದ್ಧ ಕೇಳಿ ಬಂತು ಈ ಆರೋಪ - BBMP mayor Gowtham Kumar

ಬಿಬಿಎಂಪಿಯ ಹೊಸ ಆಡಳಿತ ಆರಂಭವಾಗಿ ಮೂರು ತಿಂಗಳಾದ್ರೂ ಜನರ ಪಾಲಿಗೆ ಪಾಲಿಕೆ ಇದ್ದೂ ಇಲ್ಲದಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

mayor Gowtham Kumar
mayor Gowtham Kumar
author img

By

Published : Dec 28, 2019, 7:20 AM IST

ಬೆಂಗಳೂರು: ಬಿಬಿಎಂಪಿಯ ಹೊಸ ಆಡಳಿತ ಆರಂಭವಾಗಿ ಮೂರು ತಿಂಗಳಾದ್ರೂ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಬಿಬಿಎಂಪಿ ಮೇಯರ್ ವಿರುದ್ಧ ಆರೋಪ

ಹೌದು, ಜನರ ಕಷ್ಟ ಕೇಳಬೇಕಾದ ಮೇಯರ್, ಪಾಲಿಕೆಯತ್ತ ಮುಖ ಮಾಡಿ ಅದೆಷ್ಟು ದಿನಗಳೇ ಕಳೆದಿದೆ ಎನ್ನಲಾಗಿದೆ. ಪ್ರತಿ ನಿತ್ಯ ಬಡವರು, ರೋಗಿಗಳು, ಜನಸಾಮಾನ್ಯರು ಬಂದು ಮೇಯರ್ ಸಿಗದ ಕಾರಣ ಹಿಡಿ ಶಾಪ ಹಾಕಿಕೊಂಡು ಹೋಗ್ತಿದ್ದಾರೆ.

ಮೇಯರ್ ಗೌತಮ್ ಕುಮಾರ್ ಜನರ ಸಮಸ್ಯೆ ಆಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನಲಾಗಿದೆ. ಈ ವರೆಗೆ ಉಪಚುನಾವಣೆ ನೆಪ ಹೇಳುತ್ತಿದ್ದ ಮೇಯರ್, ಇದೀಗ ಕುಟುಂಬದ ಪೂಜೆ ಹಿನ್ನೆಲೆಯಲ್ಲಿ ಬರಲಾಗುತ್ತಿಲ್ಲ, ನಾಳೆ ಮೇಯರ್ ಬರಲಿದ್ದಾರೆ. ಇನ್ನು ಮುಂದೆ ಜನರಿಗೆ ಮೂರು ಗಂಟೆಗಳ ಕಾಲ ಸಿಗಲಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೇಳುತ್ತಿದ್ದಾರೆ.

ಬೆಂಗಳೂರು: ಬಿಬಿಎಂಪಿಯ ಹೊಸ ಆಡಳಿತ ಆರಂಭವಾಗಿ ಮೂರು ತಿಂಗಳಾದ್ರೂ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಬಿಬಿಎಂಪಿ ಮೇಯರ್ ವಿರುದ್ಧ ಆರೋಪ

ಹೌದು, ಜನರ ಕಷ್ಟ ಕೇಳಬೇಕಾದ ಮೇಯರ್, ಪಾಲಿಕೆಯತ್ತ ಮುಖ ಮಾಡಿ ಅದೆಷ್ಟು ದಿನಗಳೇ ಕಳೆದಿದೆ ಎನ್ನಲಾಗಿದೆ. ಪ್ರತಿ ನಿತ್ಯ ಬಡವರು, ರೋಗಿಗಳು, ಜನಸಾಮಾನ್ಯರು ಬಂದು ಮೇಯರ್ ಸಿಗದ ಕಾರಣ ಹಿಡಿ ಶಾಪ ಹಾಕಿಕೊಂಡು ಹೋಗ್ತಿದ್ದಾರೆ.

ಮೇಯರ್ ಗೌತಮ್ ಕುಮಾರ್ ಜನರ ಸಮಸ್ಯೆ ಆಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನಲಾಗಿದೆ. ಈ ವರೆಗೆ ಉಪಚುನಾವಣೆ ನೆಪ ಹೇಳುತ್ತಿದ್ದ ಮೇಯರ್, ಇದೀಗ ಕುಟುಂಬದ ಪೂಜೆ ಹಿನ್ನೆಲೆಯಲ್ಲಿ ಬರಲಾಗುತ್ತಿಲ್ಲ, ನಾಳೆ ಮೇಯರ್ ಬರಲಿದ್ದಾರೆ. ಇನ್ನು ಮುಂದೆ ಜನರಿಗೆ ಮೂರು ಗಂಟೆಗಳ ಕಾಲ ಸಿಗಲಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೇಳುತ್ತಿದ್ದಾರೆ.

Intro:ಬಿಬಿಎಂಪಿ ಕಡೆ ಮುಖ ಮಾಡದ ಮೇಯರ್ ಗೌತಮ್ ಕುಮಾರ್
ಬೆಂಗಳೂರು: ಬಿಬಿಎಂಪಿಯ ಹೊಸ ಆಡಳಿತ ಆರಂಭವಾಗಿ ಮೂರು ತಿಂಗಳಾದ್ರೂ ಜನರ ಪಾಲಿಗೆ ಬಿಬಿಎಂಪಿ ಇದ್ದೂ ಇಲ್ಲದಂತಾಗಿದೆ.. ಜನರ ಕಷ್ಟ ಕೇಳಬೇಕಾದ ಪ್ರಥಮ ಪ್ರಜೆ ಮೇಯರ್, ಪಾಲಿಕೆಯತ್ತ ಮುಖ ಮಾಡಿ ಅದೆಷ್ಟು ದಿನಗಳೇ ಕಳೆದಿದೆ.. ಪ್ರತಿ ನಿತ್ಯ ಬಡವರು, ರೋಗಿಗಳು, ಜನಸಾಮಾನ್ಯರು ಬಂದು, ಮೇಯರ್ ಸಿಗದ ಕಾರಣ ಹಿಡಿ ಶಾಪ ಹಾಕಿಕೊಂಡು ಹೋಗ್ತಿದ್ದಾರೆ..
ಬೆಂಗಳೂರಿಗೆ ಪ್ರಥಮ ಪ್ರಜೆಯಾಗಿರೋ ಮೇಯರ್ ಗೌತಮ್ ಕುಮಾರ್, ಜನರ ಸಮಸ್ಯೆ ಆಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.. ಈ ವರೆಗೆ ಉಪಚುನಾವಣೆ ನೆಪ ಹೇಳುತ್ತಿದ್ದ ಮೇಯರ್, ಇದೀಗ ಕುಟುಂಬದ ಪೂಜೆ ಹಿನ್ನಲೆ ಬರಲಾಗುತ್ತಿಲ್ಲ.ನಾಳೆಯೇ ಮೇಯರ್ ಬರಲಿದ್ದಾರೆ. ಇನ್ನು ಮುಂದೆ ಜನರಿಗೆ ಮೂರು ಗಂಟೆಗಲಕ ಕಾಲ ಸಿಗಲಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೊಸ ಸಬೂಬು ಹೇಳತೊಡಗಿದ್ದಾರೆ.
ನಾಲ್ಕು ವರ್ಷಗಳ ಮೈತ್ರಿ ಮುರಿದು, ಬಿಬಿಎಂಪಿ ಚುಕ್ಕಾಣಿ ಹಿಡಿದ ಬಿಜೆಪಿ.. ಬಿಬಿಎಂಪಿ ಮೇಯರ್ ಫೈಟ್‌ನಲ್ಲಿ ಸಂಘಪರಿವಾರದ ಕಟ್ಟಾಳು ಅಂತ, ಗೌತಮ್ ಕುಮಾರ್ ಜೈನ್ ಅವರನ್ನ ಮೇಯರ್ ಮಾಡಲಾಯ್ತು.. ಆದ್ರೆ, ನಿರೀಕ್ಷೆಯಂತೆ ಜನರ ಜೊತೆ ಬೆರೆಯದೆ, ಜನರ ಕಷ್ಟಕ್ಕೆ ಸ್ಪಂದಿಸದೆ ಮೇಯರ್ ಗೌತಮ್ ಕುಮಾರ್ ತಮ್ಮ ವೈಯಕ್ತಿಕ ಕೆಲಸಗಳಲ್ಲೇ ಬ್ಯುಸಿ ಆಗಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಮೇಯರ್ ಆದವರು ಕನಿಷ್ಟ ಸಾರ್ವಜನಿಕ ಭೇಟಿ ವೇಳೆಯಲ್ಲಾದ್ರೂ ಸಿಗಬೇಕು.. ಒಂದು ದಿನ ತಪ್ಪಬಹುದು ಅಥವಾ ಎರಡು ದಿನ ತಪ್ಪಬಹುದು.. ಆದ್ರೆ ವಾರಗಟ್ಟಲೆ ಸಿಗದಿದ್ರೆ ಏನನ್ನಬೇಕು.. ಸಿಸಿ ಕ್ಯಾಮೆರಾ ವೀಡಿಯೋ ನೋಡಿದಾಗಲೂ ಮೇಯರ್ ಕೇವಲ ಹದಿನೈದು ದಿನ ಬಂದಿರೋದು ಗೊತ್ತಾಗಿದೆ.. ಇನ್ನಾದ್ರೂ ಸಾರ್ವಜನಿಕರ ಅಹವಾಲು ಕೇಳಲು ಮೇಯರ್ ಸಿದ್ಧರಿದ್ದಾರಾ ಎಂದು ಕಾದುನೋಡಬೇಕಿದೆ.




ಸೌಮ್ಯಶ್ರೀ
Kn_bng_06_mayor_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.