ETV Bharat / city

ಫಿಲಿಪೈನ್ಸ್​ನಿಂದ ಬಂದ ಮಗನ ನೋಡಿ ತಾಯಿ ಕಣ್ಣಲ್ಲಿ ಆನಂದಬಾಷ್ಪ - ಬೆಂಗಳೂರು ತಾಯಿ ಮಗನ ಸಂಬಂಧ ನ್ಯೂಸ್​

ಎಂಬಿಬಿಎಸ್ ಮಾಡಲು ಫಿಲಿಪೈನ್ಸ್​​​ಗೆ ತೆರಳಿದ್ದ ಮಗ ಆರು ತಿಂಗಳ ನಂತರ ಇಂದು ಬೆಂಗಳೂರಿಗೆ ಬಂದಿದ್ದು, ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದರು.

ಮಗನನ್ನು ನೋಡಿ ಸಂತಸ ವ್ಯಕ್ತಪಡಿಸಿದ ತಾಯಿ
ಮಗನನ್ನು ನೋಡಿ ಸಂತಸ ವ್ಯಕ್ತಪಡಿಸಿದ ತಾಯಿ
author img

By

Published : May 26, 2020, 3:36 PM IST

ಬೆಂಗಳೂರು/ದೇವನಹಳ್ಳಿ: ಎಂಬಿಬಿಎಸ್ ಮಾಡಲು ಫಿಲಿಪೈನ್ಸ್​​​ಗೆ ತೆರಳಿದ್ದ ಮಗನನ್ನು ನೋಡಲು ತಿರುಪತಿ ತಿಮ್ಮಪ್ಪನಿಗೆ ತಾಯಿಯೊಬ್ಬಳು ಹರಕೆ ಹೂತ್ತಿದ್ದರು. ಆರು ತಿಂಗಳ ನಂತರ ಇಂದು ಊರಿಗೆ ಮರಳಿದ ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದ ಘಟನೆ ಕಂಡು ಬಂದಿತು.

ಮಗನನ್ನು ನೋಡಿ ಸಂತಸ ವ್ಯಕ್ತಪಡಿಸಿದ ತಾಯಿ

ಬೆಂಗಳೂರಿನ ಕೋರಮಂಗಲದ ಜಯಶ್ರೀ ಬಾಲಾಜಿ ಎನ್ನುವವರ ಮಗ ಸಚಿನ್ ಬಾಲಾಜಿ ಮೂರು ವರ್ಷಗಳ ಹಿಂದೆ ಎಂಬಿಬಿಎಸ್ ಓದಲು ಫಿಲಿಪೈನ್ಸ್​​ಗೆ ಹೋಗಿದ್ದ. ಡಿಸೆಂಬರ್​ನಲ್ಲಿ ರಜೆಯ ಮೇಲೆ ಬೆಂಗಳೂರಿಗೆ ಬಂದು ಹೋಗಿದ್ದ. ಆರು ತಿಂಗಳ ನಂತರ ಇಂದು ಮಗ ಬೆಂಗಳೂರಿಗೆ ಬಂದಿದ್ದು, ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದರು.

ಮಾರ್ಚ್​ 18ರಂದು ಸಚಿನ್ ಬೆಂಗಳೂರಿಗೆ ಬರಲು ಟಿಕೆಟ್​ ಬುಕ್ ಆಗಿತ್ತು. ಆದರೆ ಲಾಕ್​ಡೌನ್​ನಿಂದ ಟಿಕೆಟ್ ರದ್ದಾಗಿತ್ತು. ಕೊನೆಗೆ ಮಗ ಕ್ಷೇಮವಾಗಿ ಬರಲೆಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಮಗನ ಬರುವಿಕೆಗಾಗಿ ಎದುರು ನೋಡುತ್ತಿದ್ದೆ. ಇದೀಗ ಮಗ ರಾಜ್ಯಕ್ಕೆ ಬಂದಿದ್ದು ನನಗೆ ಸಂತಸ ತಂದಿದೆ ಎಂದು ಜಯಶ್ರೀ ಬಾಲಾಜಿ ತಿಳಿಸಿದರು.

ಬೆಂಗಳೂರು/ದೇವನಹಳ್ಳಿ: ಎಂಬಿಬಿಎಸ್ ಮಾಡಲು ಫಿಲಿಪೈನ್ಸ್​​​ಗೆ ತೆರಳಿದ್ದ ಮಗನನ್ನು ನೋಡಲು ತಿರುಪತಿ ತಿಮ್ಮಪ್ಪನಿಗೆ ತಾಯಿಯೊಬ್ಬಳು ಹರಕೆ ಹೂತ್ತಿದ್ದರು. ಆರು ತಿಂಗಳ ನಂತರ ಇಂದು ಊರಿಗೆ ಮರಳಿದ ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದ ಘಟನೆ ಕಂಡು ಬಂದಿತು.

ಮಗನನ್ನು ನೋಡಿ ಸಂತಸ ವ್ಯಕ್ತಪಡಿಸಿದ ತಾಯಿ

ಬೆಂಗಳೂರಿನ ಕೋರಮಂಗಲದ ಜಯಶ್ರೀ ಬಾಲಾಜಿ ಎನ್ನುವವರ ಮಗ ಸಚಿನ್ ಬಾಲಾಜಿ ಮೂರು ವರ್ಷಗಳ ಹಿಂದೆ ಎಂಬಿಬಿಎಸ್ ಓದಲು ಫಿಲಿಪೈನ್ಸ್​​ಗೆ ಹೋಗಿದ್ದ. ಡಿಸೆಂಬರ್​ನಲ್ಲಿ ರಜೆಯ ಮೇಲೆ ಬೆಂಗಳೂರಿಗೆ ಬಂದು ಹೋಗಿದ್ದ. ಆರು ತಿಂಗಳ ನಂತರ ಇಂದು ಮಗ ಬೆಂಗಳೂರಿಗೆ ಬಂದಿದ್ದು, ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದರು.

ಮಾರ್ಚ್​ 18ರಂದು ಸಚಿನ್ ಬೆಂಗಳೂರಿಗೆ ಬರಲು ಟಿಕೆಟ್​ ಬುಕ್ ಆಗಿತ್ತು. ಆದರೆ ಲಾಕ್​ಡೌನ್​ನಿಂದ ಟಿಕೆಟ್ ರದ್ದಾಗಿತ್ತು. ಕೊನೆಗೆ ಮಗ ಕ್ಷೇಮವಾಗಿ ಬರಲೆಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಮಗನ ಬರುವಿಕೆಗಾಗಿ ಎದುರು ನೋಡುತ್ತಿದ್ದೆ. ಇದೀಗ ಮಗ ರಾಜ್ಯಕ್ಕೆ ಬಂದಿದ್ದು ನನಗೆ ಸಂತಸ ತಂದಿದೆ ಎಂದು ಜಯಶ್ರೀ ಬಾಲಾಜಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.