ETV Bharat / city

ಕೇಂದ್ರ ಸರ್ವೇ ಅಧಿಕಾರಿಗಳ ಕ್ರಮಕ್ಕೆ ಟಪಾಲ್ ಗಣೇಶ್​ ತೀವ್ರ ವಿರೋಧ

author img

By

Published : Feb 10, 2021, 12:44 PM IST

ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ತಂಡ ಕೇವಲ 1896 ರ ನಕಾಶೆ ಆಧಾರದಲ್ಲಿ ಗಡಿ ಗುರುತಿಸಿದ್ದಾರೆ. ಈ ನಕಾಶೆ ಸರಿ ಇಲ್ಲ. ಗಣಿ ಅಕ್ರಮವನ್ನು ಸಕ್ರಮಗೊಳಿಸಲು ಸರ್ವೇ ಆಫ್ ಇಂಡಿಯಾ ಅಧಿಕಾರಿ ವರ್ಗ ಮುಂದಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಆರೊಪಿಸಿದ್ದಾರೆ.

ಟಪಾಲ್ ಗಣೇಶ್​
ಟಪಾಲ್ ಗಣೇಶ್​

ಬಳ್ಳಾರಿ: ಗಣಿ ಅಕ್ರಮವನ್ನು ಸಕ್ರಮಗೊಳಿಸಲು ಸರ್ವೇ ಆಫ್ ಇಂಡಿಯಾ ಅಧಿಕಾರಿ ವರ್ಗ ಮುಂದಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಆರೊಪಿಸಿದ್ದಾರೆ.

ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಗಡಿ ರೇಖೆ ಕುರಿತು ಸಂಪೂರ್ಣ ಮಾಹಿತಿಯಿದೆ. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ತಂಡ ಕೇವಲ 1896 ರ ನಕಾಶೆ ಆಧಾರದಲ್ಲಿ ಗಡಿ ಗುರುತಿಸಿದ್ದಾರೆ. ಈ ನಕಾಶೆ ಸರಿ ಇಲ್ಲ ಎಂದು ಈ ಹಿಂದೆ ಪರಿಣತರು ಹೇಳಿದ್ದಾರೆ ಎಂದು ಟಪಾಲ್ ಗಣೇಶ್​ ತಿಳಿಸಿದರು.

ಸ್ವರ್ಣ ಸುಬ್ಬರಾವ್, ದೀಪಕ್ ಶರ್ಮಾ 1896ರ ನಕಾಶೆ ಸರಿ ಇಲ್ಲ ಎಂದು ಹೇಳಿದ್ದಾರೆ. ಸಮೀಕ್ಷೆ ಮಾಡಿದ ಕುರಿತು ಯಾವುದೇ ದಾಖಲೆ ಇಲ್ಲ. ಆದರೆ, ಇದೇ ನಕ್ಷೆ ಹಿಡಿದುಕೊಂಡು ಸರ್ವೇ ನಡೆಸಿದ್ದಾರೆ.‌ ಆ ವರದಿಯನ್ನು ಈಗ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಇದನ್ನು ಜಿಲ್ಲಾಡಳಿತ ಒಪ್ಪಬಾರದು. ಜಿಲ್ಲಾಡಳಿತ ಇದನ್ನು ವಿರೋಧಿಸಬೇಕು. ಈ ಕುರಿತು ಅಧಿಕಾರಿಗಳು ಮೌನ ವಹಿಸಿದ್ದು, ನಿಜಕ್ಕೂ ಇದು ಆಘಾತಕಾರಿ ಎಂದು ಅವರು ಕಿಡಿಕಾರಿದರು.

ಬಳ್ಳಾರಿ: ಗಣಿ ಅಕ್ರಮವನ್ನು ಸಕ್ರಮಗೊಳಿಸಲು ಸರ್ವೇ ಆಫ್ ಇಂಡಿಯಾ ಅಧಿಕಾರಿ ವರ್ಗ ಮುಂದಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಆರೊಪಿಸಿದ್ದಾರೆ.

ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಗಡಿ ರೇಖೆ ಕುರಿತು ಸಂಪೂರ್ಣ ಮಾಹಿತಿಯಿದೆ. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ತಂಡ ಕೇವಲ 1896 ರ ನಕಾಶೆ ಆಧಾರದಲ್ಲಿ ಗಡಿ ಗುರುತಿಸಿದ್ದಾರೆ. ಈ ನಕಾಶೆ ಸರಿ ಇಲ್ಲ ಎಂದು ಈ ಹಿಂದೆ ಪರಿಣತರು ಹೇಳಿದ್ದಾರೆ ಎಂದು ಟಪಾಲ್ ಗಣೇಶ್​ ತಿಳಿಸಿದರು.

ಸ್ವರ್ಣ ಸುಬ್ಬರಾವ್, ದೀಪಕ್ ಶರ್ಮಾ 1896ರ ನಕಾಶೆ ಸರಿ ಇಲ್ಲ ಎಂದು ಹೇಳಿದ್ದಾರೆ. ಸಮೀಕ್ಷೆ ಮಾಡಿದ ಕುರಿತು ಯಾವುದೇ ದಾಖಲೆ ಇಲ್ಲ. ಆದರೆ, ಇದೇ ನಕ್ಷೆ ಹಿಡಿದುಕೊಂಡು ಸರ್ವೇ ನಡೆಸಿದ್ದಾರೆ.‌ ಆ ವರದಿಯನ್ನು ಈಗ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಇದನ್ನು ಜಿಲ್ಲಾಡಳಿತ ಒಪ್ಪಬಾರದು. ಜಿಲ್ಲಾಡಳಿತ ಇದನ್ನು ವಿರೋಧಿಸಬೇಕು. ಈ ಕುರಿತು ಅಧಿಕಾರಿಗಳು ಮೌನ ವಹಿಸಿದ್ದು, ನಿಜಕ್ಕೂ ಇದು ಆಘಾತಕಾರಿ ಎಂದು ಅವರು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.