ETV Bharat / city

ಶಾಸಕ ಶ್ರೀಮಂತ್​ ಪಾಟೀಲ್-ಲಕ್ಷ್ಮಣ ಸವದಿ ಪೋಟೋ ವೈರಲ್.. ಇಬ್ಬರ ಭೇಟಿ ಹಿಂದಿನ ಗುಟ್ಟೇನು? - undefined

ಕಾಗವಾಡ ಹಾಗೂ ಅಥಣಿ ಮತಕ್ಷೇತ್ರದ ಜನರಲ್ಲಿ ಶ್ರೀಮಂತ್​ ಪಾಟೀಲ್​ ಹಾಗೂ ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಹೇಳಿಕೆಗಳನ್ನು ಕೊಡುತ್ತಾ ಬಂದಿದ್ರು. ಆದರೆ, ಇವರಿಬ್ಬರೂ ಕೂಡಿ ಮುಂಬೈಗೆ ಯಾಕೆ ಹೋದರು ಎನ್ನುವ ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಮೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಶ್ರೀಮಂತ್​ ಪಾಟೀಲ್​ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಒಟ್ಟಿಗೆ ಇರುವ ಪೋಟೋಗಳು ವೈರಲ್ ಆಗಿವೆ.

ಶ್ರೀಮಂತ್​ ಪಾಟೀಲ್, ಲಕ್ಷ್ಮಣ ಸವದಿ
author img

By

Published : Jul 19, 2019, 2:18 PM IST

ಚಿಕ್ಕೋಡಿ : ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆ ಎಂಬ ಮಾತುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಅವರ ಪಿಎಗಳೂ ಮೊಬೈಲ್‌ಗಳನ್ನ ಸ್ವಿಚ್​ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ (ಬುಧವಾರ) ರಾತ್ರಿ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಎದೆ ನೋವಿನ ಕಾರಣ ನೀಡಿ, ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆೆ ಪಡೆಯುತ್ತಿರುವ ಫೋಟೋಗಳೂ ಕೂಡ ವೈರಲಾಗಿದ್ದವು. ಆದರೆ, ಈ ಹಿಂದೆಯೇ ಅತೃಪ್ತ ಶಾಸಕರ ಪಟ್ಟಿಯಲ್ಲಿ ಶ್ರೀಮಂತ್‌ ಪಾಟೀಲ್ ಹೆಸರೂ ಕೂಡ ಇತ್ತು ಎನ್ನಲಾಗಿದೆ. ಆದರೆ, ಮೊದಲು ಶ್ರೀಮಂತ್‌ ಪಾಟೀಲ್ ಅದನ್ನು ನಿರಾಕರಿಸಿದ್ದರಂತೆ.‌

Srimant Patil and Lakshmana Savadi
ಶ್ರೀಮಂತ್​ ಪಾಟೀಲ್-ಲಕ್ಷ್ಮಣ ಸವದಿ ಭೇಟಿಯಾದ ಫೋಟೋ..

ಈಗ ಮತ್ತೆ ಹಲವಾರು ಸಂಶಯಗಳು ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಅದರಂತೆ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಅಪಹರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಶ್ರೀಮಂತ್​ ಪಾಟೀಲ್​ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಒಟ್ಟಿಗೆ ಇರುವ ಪೋಟೋಗಳೂ ವೈರಲ್ ಆಗುತ್ತಿವೆ.

ಈಗಾಗಲೇ ಕಾಗವಾಡ ಹಾಗೂ ಅಥಣಿ ಮತಕ್ಷೇತ್ರದ ಜನರಲ್ಲಿ ಪಾಟೀಲ್​ ಹಾಗೂ ಸವದಿ ಚುನಾವಣೆಯಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಹೇಳಿಕೆಗಳನ್ನು ಕೊಡುತ್ತಾ ಬಂದವರು. ಈಗ ಇವರಿಬ್ಬರೂ ಕೂಡಿ ಮುಂಬೈಗೆ ಯಾಕೆ ಹೋದರು ಎನ್ನುವ ಪ್ರಶ್ನೆಗಳು ಮೂಡಿವೆ. ಅದರಂತೆ ಶ್ರೀಮಂತ್​ ಪಾಟೀಲ್​ ಎದೆ ನೋವಿನ ತೊಂದರೆಯಿಂದ ಮುಂಬೈಗೆ ಹೋದ್ರೆ, ವಿಮಾನ ನಿಲ್ದಾಣದಲ್ಲಿ ಏಕೆ ಲಕ್ಷ್ಮಣ ಸವದಿಯನ್ನು ಭೇಟಿಯಾದರು. ಭೇಟಿಯಾದ ಬಳಿಕ ಅವರ ಜೊತೆ ಮುಂಬೈಗೆ ಹೋಗುವ ಅವಶ್ಯಕತೆ ಏನಿತ್ತು ಎಂಬ ಹತ್ತು ಹಲವಾರು ಪ್ರಶ್ನೆಗಳ ಕುರಿತು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಚಿಕ್ಕೋಡಿ : ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆ ಎಂಬ ಮಾತುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಅವರ ಪಿಎಗಳೂ ಮೊಬೈಲ್‌ಗಳನ್ನ ಸ್ವಿಚ್​ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ (ಬುಧವಾರ) ರಾತ್ರಿ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಎದೆ ನೋವಿನ ಕಾರಣ ನೀಡಿ, ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆೆ ಪಡೆಯುತ್ತಿರುವ ಫೋಟೋಗಳೂ ಕೂಡ ವೈರಲಾಗಿದ್ದವು. ಆದರೆ, ಈ ಹಿಂದೆಯೇ ಅತೃಪ್ತ ಶಾಸಕರ ಪಟ್ಟಿಯಲ್ಲಿ ಶ್ರೀಮಂತ್‌ ಪಾಟೀಲ್ ಹೆಸರೂ ಕೂಡ ಇತ್ತು ಎನ್ನಲಾಗಿದೆ. ಆದರೆ, ಮೊದಲು ಶ್ರೀಮಂತ್‌ ಪಾಟೀಲ್ ಅದನ್ನು ನಿರಾಕರಿಸಿದ್ದರಂತೆ.‌

Srimant Patil and Lakshmana Savadi
ಶ್ರೀಮಂತ್​ ಪಾಟೀಲ್-ಲಕ್ಷ್ಮಣ ಸವದಿ ಭೇಟಿಯಾದ ಫೋಟೋ..

ಈಗ ಮತ್ತೆ ಹಲವಾರು ಸಂಶಯಗಳು ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಅದರಂತೆ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಅಪಹರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಶ್ರೀಮಂತ್​ ಪಾಟೀಲ್​ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಒಟ್ಟಿಗೆ ಇರುವ ಪೋಟೋಗಳೂ ವೈರಲ್ ಆಗುತ್ತಿವೆ.

ಈಗಾಗಲೇ ಕಾಗವಾಡ ಹಾಗೂ ಅಥಣಿ ಮತಕ್ಷೇತ್ರದ ಜನರಲ್ಲಿ ಪಾಟೀಲ್​ ಹಾಗೂ ಸವದಿ ಚುನಾವಣೆಯಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಹೇಳಿಕೆಗಳನ್ನು ಕೊಡುತ್ತಾ ಬಂದವರು. ಈಗ ಇವರಿಬ್ಬರೂ ಕೂಡಿ ಮುಂಬೈಗೆ ಯಾಕೆ ಹೋದರು ಎನ್ನುವ ಪ್ರಶ್ನೆಗಳು ಮೂಡಿವೆ. ಅದರಂತೆ ಶ್ರೀಮಂತ್​ ಪಾಟೀಲ್​ ಎದೆ ನೋವಿನ ತೊಂದರೆಯಿಂದ ಮುಂಬೈಗೆ ಹೋದ್ರೆ, ವಿಮಾನ ನಿಲ್ದಾಣದಲ್ಲಿ ಏಕೆ ಲಕ್ಷ್ಮಣ ಸವದಿಯನ್ನು ಭೇಟಿಯಾದರು. ಭೇಟಿಯಾದ ಬಳಿಕ ಅವರ ಜೊತೆ ಮುಂಬೈಗೆ ಹೋಗುವ ಅವಶ್ಯಕತೆ ಏನಿತ್ತು ಎಂಬ ಹತ್ತು ಹಲವಾರು ಪ್ರಶ್ನೆಗಳ ಕುರಿತು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Intro:ಕೈ ಗೆ ಕೈ ಕೊಟ್ಟರಾ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್?
Body:
ಚಿಕ್ಕೋಡಿ : 
ಸ್ಟೋರಿ

ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆಯೇ? ಎಂಬ ಮಾತುಗಳು ಈಗಾಗಲೇ ಎಲ್ಲಡೇ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು ಅವರ ಪಿಎ ಗಳು ಕೂಡಾ ಮೊಬೈಲ್ ಸ್ವಿಚ್ಡ್ ಆಫ್ ಬರತ್ತಿವೆ.

ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ (ಬುಧವಾರ) ರಾತ್ರಿ ದಿಢೀರ್ ಮುಂಬಯಿಗೆ ಪ್ರಯಾಣ ಬೆಳೆಸಿದ್ದು, ಎದೆನೋವಿನ ಕಾರಣ ನೀಡಿ ಅಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಮೇಶ್ ಜಾರಕಿಹೊಳಿ ಬೆಂಬಲಿಗರೂ ಆಗಿರುವ ಶ್ರೀಮಂತ್ ಪಾಟೀಲ್ ಹೆಸರೂ ಈ ಹಿಂದೆ ಅತೃಪ್ತ ಶಾಸಕರ ಪಟ್ಟಿಯಲ್ಲಿತ್ತು. ಆದರೆ, ಅವರು ಅದನ್ನು ನಿರಾಕರಿಸಿದ್ದರು.‌ ಈಗ ಮತ್ತೇ ಹಲವಾರು ಸಂಶೆಯಗಳಿಗೆ ಈ ಒಂದು ಘಟನೆ ಕಾರಣವಾಯಿತಾ ಎಂಬ ಪ್ರಶ್ನೆಗಳು ಎಲ್ಲಡೇ ಹರಿದಾಡುತ್ತಿದೆ.

ಅದರಂತೇ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಅಪಹರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿ ಒಟ್ಟಿಗೆ ಇರುವ ಪೋಟೋಗಳು ವೃರಲ್ ಆಗುತ್ತಿವೆ.

ಈಗಾಗಲೇ ಕಾಗವಾಡ ಹಾಗೂ ಅಥಣಿ ಮತಕ್ಷೇತ್ರದ ಜನರಲ್ಲಿ ಇವರಿಬ್ಬರು ಚುನಾವಣೆಯಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಹೇಳಿಕೆಗಳನ್ನು ಕೊಡುತ್ತಾ ಬಂದವರು ಈಗ ಇವರಿಬ್ಬರು ಕೂಡಿ ಮುಂಬೈಗೆ ಯಾಕೆ ಹೋದರು ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಅದರಂತೆ ಶ್ರೀಮಂತ ಪಾಟೀಲ ಎದೆ ನೋವಿನ ತೊಂದರೆಯಿಂದ ಮುಂಬೈಗೆ ಹೋದರು. ಆದರೆ, ವಿಮಾನ ನಿಲ್ದಾಣದಲ್ಲಿ ಏಕೆ ಲಕ್ಷ್ಮಣ ಸವದಿ ಬೇಟಿಯಾದರು. ಬೇಟಿ ಆಗಿ ಅವರ ಜೊತೆ ಮುಂಬೈಗೆ ಹೋಗುವ ಅವಶ್ಯಕತೆ ಆದರು ಏನಿತ್ತು. ಎಂಬ ಹತ್ತು ಹಲವಾರು ಪ್ರಶ್ನೆಗಳು ಈ ಎರಡು ಕ್ಷೇತ್ರಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರು ಬೇಟಿ ಈಗ ಯಕ್ಷ ಪ್ರಶ್ನೆಯಾಗಿದೆ?

ಪೋಟೋ 1 : ಶ್ರೀಮಂತ ಪಾಟೀಲ - ಕಾಗವಾಡ ಶಾಸಕ

ಪೋಟೋ 2 : ಲಕ್ಷ್ಮಣ ಸವದಿ - ಅಥಣಿ ಮಾಜಿ ಶಾಸಕ

ಪೋಟೋ 3, 4 ಮತ್ತು 5 : ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೋಗಳು



Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.