ETV Bharat / city

ಖುಷಿ ಪಡಬೇಕೋ, ದುಃಖ ಪಡಬೇಕೋ ಗೊತ್ತಾಗುತ್ತಿಲ್ಲ: ಜೈಲಿನಿಂದ ಬಿಡುಗಡೆ ಬಳಿಕ ಸಂಪತ್‌ ಕುಮಾರ್ ದೇಸಾಯಿ ಭಾವುಕ

ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಖುಷಿ ಪಡಬೇಕೋ ಅಥವಾ ನಮ್ಮ ಸರ್ಕಾರವೇ ನಮ್ಮನ್ನು ಒಳಗೆ ಹಾಕಿತು ಅಂತಾ ದುಃಖ ಪಡಬೇಕೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಯುವ ಘಟಕದ‌ ಜಿಲ್ಲಾಧ್ಯಕ್ಷ ಸಂಪತ್‌ ಕುಮಾರ್ ದೇಸಾಯಿ ಭಾವುಕರಾದರು.

author img

By

Published : Jan 12, 2022, 11:50 AM IST

Sampath Kumar Desai
ಕರ್ನಾಟಕ ನವ ನಿರ್ಮಾಣ ಸೇನೆ ಯುವ ಘಟಕದ‌ ಜಿಲ್ಲಾಧ್ಯಕ್ಷ ಸಂಪತ್‌ ಕುಮಾರ್ ದೇಸಾಯಿ

ಬೆಳಗಾವಿ: ಎಂಇಎಸ್ ಮುಖಂಡನಿಗೆ ಕಪ್ಪು ಮಸಿ ಬಳಿದು ಜೈಲು ಪಾಲಾಗಿದ್ದ ನಾಲ್ವರು ಕನ್ನಡ ಹೋರಾಟಗಾರರು ನಿನ್ನೆಯಷ್ಟೇ(ಮಂಗಳವಾರ) ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ನವ ನಿರ್ಮಾಣ ಸೇನೆ ಯುವ ಘಟಕದ‌ ಜಿಲ್ಲಾಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ, ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಖುಷಿ ಪಡಬೇಕೋ ಅಥವಾ ನಮ್ಮ ಸರ್ಕಾರವೇ ನಮ್ಮನ್ನು ಒಳಗೆ ಹಾಕಿತು ಅಂತಾ ದುಃಖ ಪಡಬೇಕೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಭಾವುಕರಾದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಸಂಪತ್‌ ಕುಮಾರ್ ದೇಸಾಯಿ

ಎಂಇಎಸ್ ಪುಂಡರು ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು ಸುಟ್ಟು ಹಾಕಿದರು. ಎಂಇಎಸ್ ಎಷ್ಟೇ ಪುಂಡಾಟಿಕೆ ಪ್ರದರ್ಶಿಸಿದರೂ ಅದನ್ನು ಎದುರಿಸಲು ಸಿದ್ದರಿದ್ದೇವೆ. ಕನ್ನಡ ಪರ ಹೋರಾಟಗಾರರಿಗೆ ಜೈಲು ಸೇರೋದು ಸಾಮಾನ್ಯ. ಮುಂದೆ ಎಷ್ಟೇ ಕಷ್ಟ ಆದರೂ ಕನ್ನಡಪರ ಹೋರಾಟ ಬಿಡುವುದಿಲ್ಲ. ಜೈಲು ಸೇರಿದ ಮರುದಿನವೇ ನಮ್ಮ ವಿರುದ್ಧ 307 ಕೇಸ್ ದಾಖಲಾಗಿದ್ದು ಗೊತ್ತಾಯ್ತು ಎಂದರು.

ಡಿ. 3 ರಂದು ಎಂಇಎಸ್ ಪುಂಡರು ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವ್ ಮಾಡುತ್ತಿದ್ದರು. ಜೈ ಮಹಾರಾಷ್ಟ್ರ ಅಂತಾ ಕನ್ನಡಿಗರ ಬಗ್ಗೆ ಅವಹೇಳನ ಮಾಡಿರುವ ವಿಡಿಯೋ ಹರಿಬಿಟ್ಟಿದ್ದರು. ನಾವು ನಾಲ್ಕು ಜನ ಸೇರಿ ಎರಡು ಡಬ್ಬಿ ಮಸಿ ತಗೆದುಕೊಂಡು ಹೋಗಿ ಅವರಿಗೆ ಬುದ್ದಿ ಕಲಿಸಲು ಮಸಿ ಬಳಿದೆವು. ಅಲ್ಲಿ ಹೋದಾಗ ನಮ್ಮ ಹತ್ತಿರ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 63 ಮಂದಿ ವಿರುದ್ಧ ಮೂರನೇ ಎಫ್​ಐಆರ್ ದಾಖಲು

ಬೆಳಗಾವಿ: ಎಂಇಎಸ್ ಮುಖಂಡನಿಗೆ ಕಪ್ಪು ಮಸಿ ಬಳಿದು ಜೈಲು ಪಾಲಾಗಿದ್ದ ನಾಲ್ವರು ಕನ್ನಡ ಹೋರಾಟಗಾರರು ನಿನ್ನೆಯಷ್ಟೇ(ಮಂಗಳವಾರ) ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ನವ ನಿರ್ಮಾಣ ಸೇನೆ ಯುವ ಘಟಕದ‌ ಜಿಲ್ಲಾಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ, ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಖುಷಿ ಪಡಬೇಕೋ ಅಥವಾ ನಮ್ಮ ಸರ್ಕಾರವೇ ನಮ್ಮನ್ನು ಒಳಗೆ ಹಾಕಿತು ಅಂತಾ ದುಃಖ ಪಡಬೇಕೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಭಾವುಕರಾದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಸಂಪತ್‌ ಕುಮಾರ್ ದೇಸಾಯಿ

ಎಂಇಎಸ್ ಪುಂಡರು ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು ಸುಟ್ಟು ಹಾಕಿದರು. ಎಂಇಎಸ್ ಎಷ್ಟೇ ಪುಂಡಾಟಿಕೆ ಪ್ರದರ್ಶಿಸಿದರೂ ಅದನ್ನು ಎದುರಿಸಲು ಸಿದ್ದರಿದ್ದೇವೆ. ಕನ್ನಡ ಪರ ಹೋರಾಟಗಾರರಿಗೆ ಜೈಲು ಸೇರೋದು ಸಾಮಾನ್ಯ. ಮುಂದೆ ಎಷ್ಟೇ ಕಷ್ಟ ಆದರೂ ಕನ್ನಡಪರ ಹೋರಾಟ ಬಿಡುವುದಿಲ್ಲ. ಜೈಲು ಸೇರಿದ ಮರುದಿನವೇ ನಮ್ಮ ವಿರುದ್ಧ 307 ಕೇಸ್ ದಾಖಲಾಗಿದ್ದು ಗೊತ್ತಾಯ್ತು ಎಂದರು.

ಡಿ. 3 ರಂದು ಎಂಇಎಸ್ ಪುಂಡರು ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವ್ ಮಾಡುತ್ತಿದ್ದರು. ಜೈ ಮಹಾರಾಷ್ಟ್ರ ಅಂತಾ ಕನ್ನಡಿಗರ ಬಗ್ಗೆ ಅವಹೇಳನ ಮಾಡಿರುವ ವಿಡಿಯೋ ಹರಿಬಿಟ್ಟಿದ್ದರು. ನಾವು ನಾಲ್ಕು ಜನ ಸೇರಿ ಎರಡು ಡಬ್ಬಿ ಮಸಿ ತಗೆದುಕೊಂಡು ಹೋಗಿ ಅವರಿಗೆ ಬುದ್ದಿ ಕಲಿಸಲು ಮಸಿ ಬಳಿದೆವು. ಅಲ್ಲಿ ಹೋದಾಗ ನಮ್ಮ ಹತ್ತಿರ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 63 ಮಂದಿ ವಿರುದ್ಧ ಮೂರನೇ ಎಫ್​ಐಆರ್ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.