ETV Bharat / business

ಬ್ಯಾಂಕ್​ಗಳ ವಿಲೀನದಿಂದ ಒಂದು ಶಾಖೆಯೂ ಮುಚ್ಚುವುದಿಲ್ಲ: ಕೆನರಾ ಬ್ಯಾಂಕ್ ಎಂಡಿ ಅಭಯ - ಬ್ಯಾಂಕ್​ಗಳ ವಿಲೀನ

ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 10 ರಾಷ್ಟ್ರೀಯ ಬ್ಯಾಂಕ್​ಗಳ ವಿಲೀನದಲ್ಲಿ ಕೆನರಾ, ಸಿಂಡಿಕೇಟ್​ ಹಾಗೂ ಕಾರ್ಪೊರೇಷನ್​ ಬ್ಯಾಂಕ್​ಗಳು ಸಹ ಒಳಗೊಂಡಿವೆ. ಹೀಗಾಗಿ, ಕಡಿಮೆ ದೂರ ಅಂತರದಲ್ಲಿರುವ ಕೆನರಾ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳ ಶಾಖೆಗಳು ಮುಚ್ಚಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಸಾಂದರ್ಭಿಕ ಚಿತ್ರ
author img

By

Published : Sep 3, 2019, 3:23 PM IST

ಬೆಂಗಳೂರು: ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯಿಂದ ಕೆನರಾ ಮತ್ತು ಸಿಂಡಿಕೇಟ್​​ ಬ್ಯಾಂಕ್​ಗಳ ಯಾವುದೇ ಶಾಖೆಗಳು ಮುಚ್ಚುವುದಿಲ್ಲ ಎಂದು ಕೆನರಾ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಆರ್. ಎ. ಶಂಕರ ನಾರಾಯಣನ್ ಅವರು ಭರವಸೆ ನೀಡಿದ್ದಾರೆ.

ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 10 ರಾಷ್ಟ್ರೀಯ ಬ್ಯಾಂಕ್​ಗಳ ವಿಲೀನದಲ್ಲಿ ಕೆನರಾ, ಸಿಂಡಿಕೇಟ್​ ಹಾಗೂ ಕಾರ್ಪೊರೇಷನ್​ ಬ್ಯಾಂಕ್​ಗಳು ಸಹ ಒಳಗೊಂಡಿವೆ. ಹೀಗಾಗಿ, ಕಡಿಮೆ ದೂರ ಅಂತರದಲ್ಲಿರುವ ಕೆನರಾ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳ ಶಾಖೆಗಳು ಮುಚ್ಚಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಬ್ಯಾಂಕ್​ಗಳ ವಿಲೀನ ಬಗ್ಗೆ ಮಾತನಾಡಿದ ಕೆನರಾ ಬ್ಯಾಂಕ್ ಎಂಡಿ

ವಿಲೀನ ಪ್ರಕ್ರಿಯೆ ಪ್ರಸ್ತಾವನೆಯಲ್ಲಿ ಕೇವಲ ಬ್ಯಾಂಕ್​ಗಳ ಜೋಡಣೆ ಇದೆ. ಆದರೆ, ಶಾಖೆಗಳ ಮುಚ್ಚುವಿಕೆ ಇಲ್ಲ. ಬ್ಯಾಂಕ್​ಗಳ ಯಾವುದೇ ಸಿಬ್ಬಂದಿಗೆ ಉದ್ಯೋಗ ಕಳೆದುಕೊಳ್ಳುವ ಕುರಿತು ಆತಂಕ ಪಡಬೇಕಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ಕೆನರಾ ಬ್ಯಾಂಕ್​ನಲ್ಲಿ 58,000 ಹಾಗೂ ಸಿಂಡಿಕೇಟ್ ಬ್ಯಾಂಕ್​ನಲ್ಲಿ 30,000 ಉದ್ಯೋಗಿಗಳು ಸೇರಿ ಒಟ್ಟು 98,000 ನೌಕರರು ಇದ್ದಾರೆ. ವಿಲೀನದ ಬಳಿಕವೂ ಉಭಯ ಬ್ಯಾಂಕ್​ಗಳಲ್ಲಿ ಸಿಬ್ಬಂದಿ ಯಥಾವತ್ತಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಮತ್ತೆ ವಿಜಯಾ ಬ್ಯಾಂಕ್ ವಿಲೀನ ಆಗಿದ್ದಾಗಲೂ ಯಾವುದೇ ಶಾಖೆಗಳು ಮುಚ್ಚಿರಲಿಲ್ಲ. ಯಾವೊಬ್ಬ ಸಿಬ್ಬಂದಿಯನ್ನೂ ಕೆಲಸದಿಂದ ವಜಾ ಮಾಡಿರಲಿಲ್ಲ ಎಂದು ವಿವರಣೆ ನೀಡಿದರು.

ಬೆಂಗಳೂರು: ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯಿಂದ ಕೆನರಾ ಮತ್ತು ಸಿಂಡಿಕೇಟ್​​ ಬ್ಯಾಂಕ್​ಗಳ ಯಾವುದೇ ಶಾಖೆಗಳು ಮುಚ್ಚುವುದಿಲ್ಲ ಎಂದು ಕೆನರಾ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಆರ್. ಎ. ಶಂಕರ ನಾರಾಯಣನ್ ಅವರು ಭರವಸೆ ನೀಡಿದ್ದಾರೆ.

ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 10 ರಾಷ್ಟ್ರೀಯ ಬ್ಯಾಂಕ್​ಗಳ ವಿಲೀನದಲ್ಲಿ ಕೆನರಾ, ಸಿಂಡಿಕೇಟ್​ ಹಾಗೂ ಕಾರ್ಪೊರೇಷನ್​ ಬ್ಯಾಂಕ್​ಗಳು ಸಹ ಒಳಗೊಂಡಿವೆ. ಹೀಗಾಗಿ, ಕಡಿಮೆ ದೂರ ಅಂತರದಲ್ಲಿರುವ ಕೆನರಾ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳ ಶಾಖೆಗಳು ಮುಚ್ಚಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಬ್ಯಾಂಕ್​ಗಳ ವಿಲೀನ ಬಗ್ಗೆ ಮಾತನಾಡಿದ ಕೆನರಾ ಬ್ಯಾಂಕ್ ಎಂಡಿ

ವಿಲೀನ ಪ್ರಕ್ರಿಯೆ ಪ್ರಸ್ತಾವನೆಯಲ್ಲಿ ಕೇವಲ ಬ್ಯಾಂಕ್​ಗಳ ಜೋಡಣೆ ಇದೆ. ಆದರೆ, ಶಾಖೆಗಳ ಮುಚ್ಚುವಿಕೆ ಇಲ್ಲ. ಬ್ಯಾಂಕ್​ಗಳ ಯಾವುದೇ ಸಿಬ್ಬಂದಿಗೆ ಉದ್ಯೋಗ ಕಳೆದುಕೊಳ್ಳುವ ಕುರಿತು ಆತಂಕ ಪಡಬೇಕಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ಕೆನರಾ ಬ್ಯಾಂಕ್​ನಲ್ಲಿ 58,000 ಹಾಗೂ ಸಿಂಡಿಕೇಟ್ ಬ್ಯಾಂಕ್​ನಲ್ಲಿ 30,000 ಉದ್ಯೋಗಿಗಳು ಸೇರಿ ಒಟ್ಟು 98,000 ನೌಕರರು ಇದ್ದಾರೆ. ವಿಲೀನದ ಬಳಿಕವೂ ಉಭಯ ಬ್ಯಾಂಕ್​ಗಳಲ್ಲಿ ಸಿಬ್ಬಂದಿ ಯಥಾವತ್ತಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಮತ್ತೆ ವಿಜಯಾ ಬ್ಯಾಂಕ್ ವಿಲೀನ ಆಗಿದ್ದಾಗಲೂ ಯಾವುದೇ ಶಾಖೆಗಳು ಮುಚ್ಚಿರಲಿಲ್ಲ. ಯಾವೊಬ್ಬ ಸಿಬ್ಬಂದಿಯನ್ನೂ ಕೆಲಸದಿಂದ ವಜಾ ಮಾಡಿರಲಿಲ್ಲ ಎಂದು ವಿವರಣೆ ನೀಡಿದರು.

Intro:ಬೈಟ್: ಶಂಕರ ನಾರಾಯಣನ್, ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಕೆನರಾ ಬ್ಯಾಂಕ್)


Body:ಬೆಂಗಳೂರು: ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ವಿಲೀನದ ಹಿನ್ನಲೆಯಲ್ಲಿ ಉಭಯ ಬ್ಯಾಂಕ್ ಉದ್ಯೋಗಿಗಳು ಕಡಿಮೆ ದೂರದಲ್ಲಿರುವ ಬ್ಯಾಂಕ್ ಶಾಖೆಗಳು ಮುಚ್ಚುತವೇ ಎಂದು ಆತಂಕ ಪಟ್ಟಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಆರ್ ಎ ಶಂಕರ ನಾರಾಯಣನ್ ಈ ವಿಲೀನದಲ್ಲಿ ಯಾವುದೇ ಬ್ಯಾಂಕ್ ಶಾಖೆಗಳನ್ನ ಮುಚ್ಚುವ ಪ್ರಸ್ತಾವನೆ ಇಲ್ಲಾ, ಹೀಗಾಗಿ ಬ್ಯಾಂಕ್ ಉದ್ಯೋಗಿಗಳ ಕೆಲಸಕ್ಕೆ ಕುತ್ತು ಬರುವುದಿಲ್ಲ ಎಂದು ಆಶ್ವಾಸನೆಯನ್ನು ನೀಡಿದರು.

ಕೆನರಾ ಬ್ಯಾಂಕ್ ನಲ್ಲಿ 58,000 ಹಾಗೂ ಸಿಂಡಿಕೇಟ್ ಬ್ಯಾಂಕ್ ನಲ್ಲಿ 30,000 ಉದ್ಯೋಗಿಗಳು ಇದ್ದಾರೆ, ಒಟ್ಟಾರೆಯಾಗಿ 98,000 ಉದ್ಯೋಗಿಗಳು ಉಭಯ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಲೀನದಲ್ಲಿ ಯಾವುದೇ ಶಾಖೆಗಳ ಸ್ಥಗಿತಗೊಳಿಸಕ್ಕೆ ಪ್ರಸ್ತಾವನೆ ಇಲ್ಲ, ಈ ಹಿಂದೆಯೂ ಕೂಡ ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಮತ್ತೆ ವಿಜಯ ಬ್ಯಾಂಕ್ ವಿಲೀನದಲ್ಲೂ ಯಾವುದೇ ಶಾಖೆಗಳನ್ನು ಮುಚಲಿಲ್ಲಾ ಹಾಗೂ ಉದ್ಯೋಗಿಗಳ ಕೆಲಸವನ್ನು ವಜಾ ಮಾಡಲಿಲ್ಲಾ. ಬ್ಯಾಂಕ್ ನ ಬಲವರ್ಧನೆಯನ್ನು ಪ್ರಾದೇಶಿಕ ,ಕೇಂದ್ರ ಹಾಗೂ ಕಾರ್ಪೊರೇಟ್ ನಲ್ಲಿ ವಿಲೀನದ ಬಳಿಕ ಮಾಡಬಹುದೇ ಹೊರತು ಸ್ಟಾಫ್ ಗಳನ್ನು ಕಡಿತ ಮಾಡುವುದಿಲ್ಲ ಎಂಬ ಪೂರ್ಣ ಭರವಸೆ ಇದೆ ಎಂದು ಸ್ಪಷ್ಟಿಸಿದರು.

ಬ್ಯಾಂಕ್ ಖಾತೆದಾರರಿಗೆ ಈ ವಿಲೀನದಲ್ಲಿ ಬ್ಯಾಂಕ್ ನ ಸೇವಾಗಳು ಬಹಳ ಬೇಗ ಸಿಗಲಿದೆ. ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಒಂದೇ ಪ್ರಾಂತ್ಯದಿಂದ ಹೊಮ್ಮಿದ ಕಾರಣ ಹಾಗೂ ಒಂದೇ ಸಂಸ್ಕೃತಿ ಹೊಂದಿರುವ ಕಾರಣ ಉಭಯ ಬ್ಯಾಂಕ್ ಸಿಬ್ಬಂದಿ ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ ಎಂದು ಹೇಳಿದರು.




Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.