ETV Bharat / briefs

ಶಿವಮೊಗ್ಗ: ಊಟವಿಲ್ಲದೆ ಪರದಾಡುತ್ತಿದ್ದ ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದ ಅಧಿಕಾರಿಗಳು - beggars to the refugee center

ಕೊರೊನಾ ಕರ್ಫ್ಯೂ ಪರಿಣಾಮ ಊಟ, ನೀರು ಇಲ್ಲದೆ ಭಿಕ್ಷುಕರು ಇರುವುದನ್ನು ಗಮನಿಸಿದ ಪೊಲೀಸ್ ವರಿಷ್ಠಾಧಿಕಾರಿ 15ಕ್ಕೂ ಹೆಚ್ಚು ಭಿಕ್ಷುಕರನ್ನು ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.

beggars
beggars
author img

By

Published : Apr 28, 2021, 8:32 PM IST

ಶಿವಮೊಗ್ಗ: ಕೊರೊನಾ ಕರ್ಫ್ಯೂನಿಂದಾಗಿ ಊಟ ಇಲ್ಲದೇ ಓಡಾಡುತ್ತಿದ್ದ ಭಿಕ್ಷುಕರನ್ನು ಅಧಿಕಾರಿಗಳು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳಿಸಿದ್ದಾರೆ.

ಕೊರೊನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾಗಿ ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿದ್ದವರು ಲಾಕ್​ಡೌನ್ ಪರಿಣಾಮ ಊಟ, ನೀರು ಇಲ್ಲದೆ ಇರುವುದನ್ನು ಗಮನಿಸಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಅವರು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸುವಂತೆ ಸೈಬರ್ ಕ್ರೈಂ ಇನ್ಸ್​ಪೆಕ್ಟರ್ ಕೆ.ಟಿ ಗುರುರಾಜ್ ಅವರಿಗೆ ತಿಳಿಸಿದ್ದಾರೆ.

ಹಾಗಾಗಿ ಇನ್ಸ್​ಪೆಕ್ಟರ್ ಗುರುರಾಜ್ ಪುನರ್ವಸತಿ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿ, 15ಕ್ಕೂ ಹೆಚ್ಚು ಭಿಕ್ಷುಕರನ್ನು ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಒಟ್ಟಾರೆಯಾಗಿ ಭಿಕ್ಷುಕರ ಹಸಿವನ್ನು ಕಂಡ ಅಧಿಕಾರಿಗಳು ಅವರಿಗೆ ಸ್ಥಳೀಯ ನಿರಾಶ್ರಿತರ ಕೇಂದ್ರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ: ಕೊರೊನಾ ಕರ್ಫ್ಯೂನಿಂದಾಗಿ ಊಟ ಇಲ್ಲದೇ ಓಡಾಡುತ್ತಿದ್ದ ಭಿಕ್ಷುಕರನ್ನು ಅಧಿಕಾರಿಗಳು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳಿಸಿದ್ದಾರೆ.

ಕೊರೊನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾಗಿ ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿದ್ದವರು ಲಾಕ್​ಡೌನ್ ಪರಿಣಾಮ ಊಟ, ನೀರು ಇಲ್ಲದೆ ಇರುವುದನ್ನು ಗಮನಿಸಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಅವರು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸುವಂತೆ ಸೈಬರ್ ಕ್ರೈಂ ಇನ್ಸ್​ಪೆಕ್ಟರ್ ಕೆ.ಟಿ ಗುರುರಾಜ್ ಅವರಿಗೆ ತಿಳಿಸಿದ್ದಾರೆ.

ಹಾಗಾಗಿ ಇನ್ಸ್​ಪೆಕ್ಟರ್ ಗುರುರಾಜ್ ಪುನರ್ವಸತಿ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿ, 15ಕ್ಕೂ ಹೆಚ್ಚು ಭಿಕ್ಷುಕರನ್ನು ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಒಟ್ಟಾರೆಯಾಗಿ ಭಿಕ್ಷುಕರ ಹಸಿವನ್ನು ಕಂಡ ಅಧಿಕಾರಿಗಳು ಅವರಿಗೆ ಸ್ಥಳೀಯ ನಿರಾಶ್ರಿತರ ಕೇಂದ್ರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.