ETV Bharat / briefs

ಪಿಲಿಕುಳ ಉದ್ಯಾನದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್ - Pilikula latest news

’’ಈ ಹಿಂದಿನಿಂದಲೂ ಪ್ರಾಣಿ-ಪಕ್ಷಿಗಳನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಉನ್ನತೀಕರಿಸಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.

Pilikula
Pilikula
author img

By

Published : Jun 11, 2020, 11:04 AM IST

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್ ಮಾಡುವ ವ್ಯವಸ್ಥೆ ಹಿಂದಿನಿಂದಲೂ ಇದೆ. ಇದರ ಉನ್ನತೀಕರಿಸಲು ಪ್ರತ್ಯೇಕ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಪಿಲಿಕುಳ ಉದ್ಯಾನವನಕ್ಕೆ ದೇಶ, ವಿದೇಶದ ಮೃಗಾಲಯದಿಂದ ಪ್ರಾಣಿ - ಪಕ್ಷಿಗಳನ್ನು ಕರೆ ತರಲಾಗುತ್ತದೆ. ಹೀಗೆ ತಂದ ಪ್ರಾಣಿ - ಪಕ್ಷಿಗಳನ್ನು ನೇರವಾಗಿ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುವುದಿಲ್ಲ. ತಪಾಸಣೆ ನಡೆಸಿ ಎರಡು ತಿಂಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ಯಾವುದೇ ರೋಗ ಲಕ್ಷಣ ಇಲ್ಲ ಎಂದು ಬಳಿಕ ಮೃಗಾಲಯಕ್ಕೆ ಬಿಡಲಾಗುತ್ತದೆ.

ಈ ಕುರಿತು ಮಾತನಾಡಿದ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ, ’’ಈ ಹಿಂದಿನಿಂದಲೂ ಪ್ರಾಣಿ-ಪಕ್ಷಿಗಳನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಉನ್ನತೀಕರಿಸಲಾಗುತ್ತಿದೆ. ಇದಕ್ಕಾಗಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಕೊರೊನಾ ಕಾರಣದಿಂದ ಹೆಚ್ಚಿನ ಜಾಗ್ರತೆಯನ್ನು ಮಾಡಬೇಕಾಗುತ್ತದೆ’’ ಎಂದು ತಿಳಿಸಿದರು.

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್ ಮಾಡುವ ವ್ಯವಸ್ಥೆ ಹಿಂದಿನಿಂದಲೂ ಇದೆ. ಇದರ ಉನ್ನತೀಕರಿಸಲು ಪ್ರತ್ಯೇಕ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಪಿಲಿಕುಳ ಉದ್ಯಾನವನಕ್ಕೆ ದೇಶ, ವಿದೇಶದ ಮೃಗಾಲಯದಿಂದ ಪ್ರಾಣಿ - ಪಕ್ಷಿಗಳನ್ನು ಕರೆ ತರಲಾಗುತ್ತದೆ. ಹೀಗೆ ತಂದ ಪ್ರಾಣಿ - ಪಕ್ಷಿಗಳನ್ನು ನೇರವಾಗಿ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುವುದಿಲ್ಲ. ತಪಾಸಣೆ ನಡೆಸಿ ಎರಡು ತಿಂಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ಯಾವುದೇ ರೋಗ ಲಕ್ಷಣ ಇಲ್ಲ ಎಂದು ಬಳಿಕ ಮೃಗಾಲಯಕ್ಕೆ ಬಿಡಲಾಗುತ್ತದೆ.

ಈ ಕುರಿತು ಮಾತನಾಡಿದ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ, ’’ಈ ಹಿಂದಿನಿಂದಲೂ ಪ್ರಾಣಿ-ಪಕ್ಷಿಗಳನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಉನ್ನತೀಕರಿಸಲಾಗುತ್ತಿದೆ. ಇದಕ್ಕಾಗಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಕೊರೊನಾ ಕಾರಣದಿಂದ ಹೆಚ್ಚಿನ ಜಾಗ್ರತೆಯನ್ನು ಮಾಡಬೇಕಾಗುತ್ತದೆ’’ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.