ETV Bharat / briefs

ಲೋಕಸಭೆ ಚುನಾವಣೆಯಲ್ಲಿ ಮಕಾಡೆ ಮಲಗಿದ ಮಹಾನ್‍ ನಾಯಕರು! - etv bharata

ರಾಜ್ಯದ ಲೋಕಸಭಾ ಚುನಾವಣೆಯ ಫಲಿತಾಂಶ ಹಿರಿಯ ನಾಯರ ನಿದ್ದೆಗೆಡಸಿದೆ. ಕಾಂಗ್ರೆಸ್​ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೋಯ್ಲಿ, ಕೆ.ಎಚ್.ಮುನಿಯಪ್ಪ ಹಾಗೂ ಜೆಡಿಎಸ್​ ವರಿಷ್ಠ ದೇವೇಗೌಡ ಸೇರಿದಂತೆ ಘಟಾನುಘಟಿಗಳಾದ ನಾಲ್ವರ ರಾಜಕೀಯ ಭವಿಷ್ಯಕ್ಕೆ ಮಂಕು ಕವಿದಿದೆ.

ಸೋಲುಂಡ ಹಿರಿಯ ನಾಯಕರು
author img

By

Published : May 24, 2019, 2:04 AM IST

ಬೆಂಗಳೂರು: ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪ್ರಭಾವ ಬೀರಿದ ಪ್ರಧಾನಿ ನರೇಂದ್ರ ಮೋದಿ ಸುನಾಮಿ ಅಲೆಗೆ ರಾಜ್ಯದ ನಾಲ್ವರು ಘಟಾನುಘಟಿಗಳು ಸೋತು ಸುಣ್ಣವಾಗಿದ್ದಾರೆ. ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಸೋಲನ್ನೆ ಅನುಭವಿಸದೆ ಸೋಲಿಲ್ಲದ ಸರದಾರರು ಎಂದು ಬಿರುದು ಪಡೆದಿದ್ದ ನಾಲ್ವರು ಸಂಸದರು ಈ ಸಾರಿ ಮಕಾಡೆ ಮಲಗಿದ್ದಾರೆ.

ಬಹುತೇಕ ಎಲ್ಲರದ್ದೂ ಇದು ಕಡೆಯ ಚುನಾವಣೆ ಎನ್ನುವುದು ಗಮನಾರ್ಹ ಸಂಗತಿ. 1972ರಿಂದ ಇಲ್ಲಿಯವರೆಗೂ 9 ಸಾರಿ ಶಾಸಕರಾಗಿ ಹಾಗೂ 2009ರಿಂದ ಎರಡು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿ ಬಿಸಿಲ ನಾಡಲ್ಲಿ ತಮ್ಮದೇ ವರ್ಚಸ್ಸು ಬೆಳೆಸಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಸಮರದಲ್ಲಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಡಾ.ಉಮೇಶ್‍ ಜಿ. ಜಾಧವ್‍ ವಿರುದ್ಧ 95,168 ಮತಗಳ ಅಂತರದ ಹೀನಾಯ ಸೋಲನ್ನು ಕಂಡಿದ್ದಾರೆ.

ಮೋದಿ, ಅಮಿತ್ ಶಾ ರಂತಹ ಬಿಜೆಪಿಯ ಚಾಣಕ್ಯರು ಕಲಬುರ್ಗಿಯಲ್ಲಿ ಜಾಧವ್​ ಪರ ಭರ್ಜರಿ ಪ್ರಚಾರ ಮಾಡಿದ್ದರು. ಇವರಿಗೆ ಪ್ರತಿಯಾಗಿ ಮಲ್ಲಿಕಾರ್ಜುನ ಖರ್ಗೆ ಕೂಡಾ ಸಾಕಷ್ಟು ಸಮಾವೇಶಗಳನ್ನು ಮಾಡಿದ್ದರು. ಈ ಬಾರಿಯ ಜನಾಭಿಪ್ರಾಯ ಅವರ ಸತತ ಗೆಲುವಿನ ಓಟಕ್ಕೆ ತಡೆ ನೀಡಿದೆ.

ಇನ್ನೊಂದೆಡೆ ಇದು ಕಡೆಯ ಚುನಾವಣೆ ಎಂದೇ ಹೇಳಿಕೊಂಡು ಕೋಲಾರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಚ್‍.ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ವಿರುದ್ಧ ಹೀನಾಯ ಸೋಲುಂಡಿದ್ದಾರೆ. 71 ವರ್ಷದ ಈ ಹಿರಿಯ ಕಾಂಗ್ರೆಸ್​ ನಾಯಕ ಸತತ 7 ಬಾರಿ ಕೋಲಾರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಈ ಸಾರಿ ಸ್ವಪಕ್ಷೀಯರೇ ಕೈಕೊಟ್ಟ ಹಿನ್ನೆಲೆ ಅವರಿಗೆ ಮುನಿಸ್ವಾಮಿ ವಿರುದ್ಧ 2,10,021 ಮತಗಳ ಅಂತರದ ಹೀನಾಯ ಸೋಲು ಎದುರಾಗಿದೆ.

ಮಾಜಿ ಸಿಎಂಗೆ ಆಘಾತ:

ಕಳೆದ ಎರಡು ಅವಧಿಯಿಂದ ಚಿಕ್ಕಬಳ್ಳಾಪುರದಿಂದ ಗೆಲ್ಲುತ್ತಿದ್ದ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಅಕ್ಷರ ಸಹ ನೆಲಕಚ್ಚಿದ್ದಾರೆ. ಸತತ ಸೋಲು ಕಂಡಿದ್ದ ಮಾಜಿ ಸಚಿವ ಬಿ.ಎನ್‍.ಬಚ್ಚೇಗೌಡ ಜಯಭೇರಿ ಬಾರಿಸಿದ್ದಾರೆ. ಇವರಿಗೂ ಇದು ಕಡೆಯ ಲೋಕಸಭೆ ಚುನಾವಣೆ ಸ್ಪರ್ಧೆ ಆಗಿತ್ತು ಎನ್ನುವುದ ವಿಶೇಷ. ಬಚ್ಚೇಗೌಡರ ವಿರುದ್ಧ ಒಟ್ಟು 1,82,110 ಮತಗಳ ಅಂತರದ ಹೀನಾಯ ಸೋಲು ಕಂಡಿದ್ದಾರೆ.

ಇವರ ಸಾಲಿನಲ್ಲೆ ಸಾಗಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ ವರಿಷ್ಠ ಹೆಚ್‍.ಡಿ. ದೇವೇಗೌಡ ಕೂಡ ಕ್ಷೇತ್ರ ಬದಲಿಸಿ ಸೋಲು ಕಂಡಿದ್ದಾರೆ. ಕಡೆಯವರೆಗೂ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲ ಹೊಂದಿದ್ದ ಅವರು ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್‍ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರಿನಿಂದ ಕಣಕ್ಕಿಳಿದಿದ್ದರು. ಆದರೆ, ಮಾಜಿ ಸಿಎಂ ಬಿ.ಎಸ್‍. ಯಡಿಯೂರಪ್ಪ ಆಪ್ತರಾದ ಮಾಜಿ ಸಂಸದ ಜಿ.ಎಸ್.ಬಸವರಾಜ್‍ ವಿರುದ್ಧ 13,339 ಮತಗಳ ಅಂತರದಿಂದ ಸೋತಿದ್ದಾರೆ. 86ರ ಇಳಿ ವಯಸ್ಸಿನ, ಅತ್ಯಂತ ಹಿರಿಯ ಉಮೇದುವಾರ ಎನ್ನುವ ಹೆಗ್ಗಳಿಕೆ ಕೂಡ ಹೊಂದಿದ್ದರು.

ಈ ಬಾರಿಯೂ ಮೋದಿ ಅಲೆಯಲ್ಲಿ ಅನುಭವಿ ಹಾಗೂ ಸೋಲೇ ಕಾಣದ ನಾಯಕರು ಕೊಚ್ಚಿ ಹೋಗಿದ್ದಾರೆ.

ಬೆಂಗಳೂರು: ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪ್ರಭಾವ ಬೀರಿದ ಪ್ರಧಾನಿ ನರೇಂದ್ರ ಮೋದಿ ಸುನಾಮಿ ಅಲೆಗೆ ರಾಜ್ಯದ ನಾಲ್ವರು ಘಟಾನುಘಟಿಗಳು ಸೋತು ಸುಣ್ಣವಾಗಿದ್ದಾರೆ. ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಸೋಲನ್ನೆ ಅನುಭವಿಸದೆ ಸೋಲಿಲ್ಲದ ಸರದಾರರು ಎಂದು ಬಿರುದು ಪಡೆದಿದ್ದ ನಾಲ್ವರು ಸಂಸದರು ಈ ಸಾರಿ ಮಕಾಡೆ ಮಲಗಿದ್ದಾರೆ.

ಬಹುತೇಕ ಎಲ್ಲರದ್ದೂ ಇದು ಕಡೆಯ ಚುನಾವಣೆ ಎನ್ನುವುದು ಗಮನಾರ್ಹ ಸಂಗತಿ. 1972ರಿಂದ ಇಲ್ಲಿಯವರೆಗೂ 9 ಸಾರಿ ಶಾಸಕರಾಗಿ ಹಾಗೂ 2009ರಿಂದ ಎರಡು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿ ಬಿಸಿಲ ನಾಡಲ್ಲಿ ತಮ್ಮದೇ ವರ್ಚಸ್ಸು ಬೆಳೆಸಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಸಮರದಲ್ಲಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಡಾ.ಉಮೇಶ್‍ ಜಿ. ಜಾಧವ್‍ ವಿರುದ್ಧ 95,168 ಮತಗಳ ಅಂತರದ ಹೀನಾಯ ಸೋಲನ್ನು ಕಂಡಿದ್ದಾರೆ.

ಮೋದಿ, ಅಮಿತ್ ಶಾ ರಂತಹ ಬಿಜೆಪಿಯ ಚಾಣಕ್ಯರು ಕಲಬುರ್ಗಿಯಲ್ಲಿ ಜಾಧವ್​ ಪರ ಭರ್ಜರಿ ಪ್ರಚಾರ ಮಾಡಿದ್ದರು. ಇವರಿಗೆ ಪ್ರತಿಯಾಗಿ ಮಲ್ಲಿಕಾರ್ಜುನ ಖರ್ಗೆ ಕೂಡಾ ಸಾಕಷ್ಟು ಸಮಾವೇಶಗಳನ್ನು ಮಾಡಿದ್ದರು. ಈ ಬಾರಿಯ ಜನಾಭಿಪ್ರಾಯ ಅವರ ಸತತ ಗೆಲುವಿನ ಓಟಕ್ಕೆ ತಡೆ ನೀಡಿದೆ.

ಇನ್ನೊಂದೆಡೆ ಇದು ಕಡೆಯ ಚುನಾವಣೆ ಎಂದೇ ಹೇಳಿಕೊಂಡು ಕೋಲಾರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಚ್‍.ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ವಿರುದ್ಧ ಹೀನಾಯ ಸೋಲುಂಡಿದ್ದಾರೆ. 71 ವರ್ಷದ ಈ ಹಿರಿಯ ಕಾಂಗ್ರೆಸ್​ ನಾಯಕ ಸತತ 7 ಬಾರಿ ಕೋಲಾರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಈ ಸಾರಿ ಸ್ವಪಕ್ಷೀಯರೇ ಕೈಕೊಟ್ಟ ಹಿನ್ನೆಲೆ ಅವರಿಗೆ ಮುನಿಸ್ವಾಮಿ ವಿರುದ್ಧ 2,10,021 ಮತಗಳ ಅಂತರದ ಹೀನಾಯ ಸೋಲು ಎದುರಾಗಿದೆ.

ಮಾಜಿ ಸಿಎಂಗೆ ಆಘಾತ:

ಕಳೆದ ಎರಡು ಅವಧಿಯಿಂದ ಚಿಕ್ಕಬಳ್ಳಾಪುರದಿಂದ ಗೆಲ್ಲುತ್ತಿದ್ದ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಅಕ್ಷರ ಸಹ ನೆಲಕಚ್ಚಿದ್ದಾರೆ. ಸತತ ಸೋಲು ಕಂಡಿದ್ದ ಮಾಜಿ ಸಚಿವ ಬಿ.ಎನ್‍.ಬಚ್ಚೇಗೌಡ ಜಯಭೇರಿ ಬಾರಿಸಿದ್ದಾರೆ. ಇವರಿಗೂ ಇದು ಕಡೆಯ ಲೋಕಸಭೆ ಚುನಾವಣೆ ಸ್ಪರ್ಧೆ ಆಗಿತ್ತು ಎನ್ನುವುದ ವಿಶೇಷ. ಬಚ್ಚೇಗೌಡರ ವಿರುದ್ಧ ಒಟ್ಟು 1,82,110 ಮತಗಳ ಅಂತರದ ಹೀನಾಯ ಸೋಲು ಕಂಡಿದ್ದಾರೆ.

ಇವರ ಸಾಲಿನಲ್ಲೆ ಸಾಗಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ ವರಿಷ್ಠ ಹೆಚ್‍.ಡಿ. ದೇವೇಗೌಡ ಕೂಡ ಕ್ಷೇತ್ರ ಬದಲಿಸಿ ಸೋಲು ಕಂಡಿದ್ದಾರೆ. ಕಡೆಯವರೆಗೂ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲ ಹೊಂದಿದ್ದ ಅವರು ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್‍ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರಿನಿಂದ ಕಣಕ್ಕಿಳಿದಿದ್ದರು. ಆದರೆ, ಮಾಜಿ ಸಿಎಂ ಬಿ.ಎಸ್‍. ಯಡಿಯೂರಪ್ಪ ಆಪ್ತರಾದ ಮಾಜಿ ಸಂಸದ ಜಿ.ಎಸ್.ಬಸವರಾಜ್‍ ವಿರುದ್ಧ 13,339 ಮತಗಳ ಅಂತರದಿಂದ ಸೋತಿದ್ದಾರೆ. 86ರ ಇಳಿ ವಯಸ್ಸಿನ, ಅತ್ಯಂತ ಹಿರಿಯ ಉಮೇದುವಾರ ಎನ್ನುವ ಹೆಗ್ಗಳಿಕೆ ಕೂಡ ಹೊಂದಿದ್ದರು.

ಈ ಬಾರಿಯೂ ಮೋದಿ ಅಲೆಯಲ್ಲಿ ಅನುಭವಿ ಹಾಗೂ ಸೋಲೇ ಕಾಣದ ನಾಯಕರು ಕೊಚ್ಚಿ ಹೋಗಿದ್ದಾರೆ.

Intro:newsBody:ಲೋಕಸಭೆ ಚುನಾವಣೆಯಲ್ಲಿ ಮಕಾಡೆ ಮಲಗಿನ ಮಹಾನ್‍ ನಾಯಕರು!

ಬೆಂಗಳೂರು: ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪ್ರಭಾವ ಬೀರಿದ ಪ್ರಧಾನಿ ನರೇಂದ್ರ ಮೋದಿ ಸುನಾಮಿ ಅಲೆಗೆ ರಾಜ್ಯದ ನಾಲ್ವರು ಗಟಾನುಘಟಿಗಳು ಸೋತು ಸುಣ್ಣವಾಗಿದ್ದಾರೆ.
ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಿಂದ, ಸತತವಾಗಿ ಗೆಲ್ಲುತ್ತಾ ಬಂದಿದ್ದ ನಾಲ್ವರು ಸಂಸದರು ಈ ಸಾರಿ ಸೋತಿದ್ದಾರೆ. ಬಹುತೇಕ ಎಲ್ಲರದ್ದೂ ಇದು ಕಡೆಯ ಚುನಾವಣೆ ಎನ್ನುವುದು ಗಮನಾರ್ಹ ಸಂಗತಿ.
ಲೋಕಸಭೆ ಕಾಂಗ್ರೆಸ್ ನಾಯಕನಿಗೆ ಕಹಿ
ಕಲಬುರುಗಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 1972ರಿಂದ ಇಲ್ಲಿಯವರೆಗೂ 9 ಸಾರಿ ಶಾಸಕರಾಗಿ 2009ರಿಂದ ಎರಡು ಸಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿ ಸಾಧನೆ ಮಾಡಿದ್ದರು. 77 ವರ್ಷ ಪ್ರಾಯದ ಮಲ್ಲಿಕಾರ್ಜುನ ಖರ್ಗೆ ಪಾಲಿಗೆ ಬಹುತೇಕ ಈ ಸಾರಿಯದ್ದು ಕಡೆಯ ಚುನಾವಣೆಯಾಗಿತ್ತು. ಆದರೆ ಪ್ರತಿಸ್ಪರ್ಧಿಯಾಗಿ ತಮ್ಮದೇ ಪಕ್ಷದಲ್ಲಿದ್ದು, ಮುನಿಸಿಕೊಂಡು ಆಚೆ ಹೋಗಿ ಬಿಜೆಪಿಯಿಂದ ತಮ್ಮ ವಿರುದ್ಧವೇ ಸ್ಪರ್ಧಿಸಿದ್ದ ಡಾ. ಉಮೇಶ್‍ ಜಿ. ಜಾದವ್‍ ವಿರುದ್ಧ 95,168 ಮತಗಳ ಅಂತರದಹೀನಾಯ ಸೋಲನ್ನು ಕಂಡಿದ್ದಾರೆ. ಜನಬೆಂಬಲ ಕಳೆದುಕೊಂಡಿದ್ದ ಖರ್ಗೆ ಈ ಸಾರಿ ಪ್ರಭಲ ಸ್ಪರ್ಧೆ ಎದುರಿಸಿದ್ದರು. ಗೆಲುವು ಕಷ್ಟ ಎನ್ನುವುದನ್ನು ಅರಿತು ಸಾಕಷ್ಟು ಸಮಾವೇಶಗಳನ್ನು ಕೂಡ ಮಾಡಿದ್ದರು. ಆದರೆ ಯಾವುದೂ ಫಲಕೊಟ್ಟಿಲ್ಲ. ಸೋಲು ಇವರ ಪಾಲಿಗೆ ಎದುರಾಗಿದೆ.
ಮಾಜಿ ಸಚಿವರಿಗೆ ಆಘಾತ
ಇನ್ನೊಂದೆಡೆ ಈ ಸಾರಿ ಕಡೆಯ ಚುನಾವಣೆ ಎಂದೇ ಹೇಳಿಕೊಂಡು ಕೋಲಾರದಿಂದ ಮಾಜಿ ಸಚಿವ ಕೆ.ಎಚ್‍. ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಹಾಗೂ ಬೆಂಗಳೂರಿನ ಕಾಡುಗೋಡಿಯ ಕಾರ್ಪೊರೇಟರ್‍ ಆಗಿರುವ ಮುನಿಸ್ವಾಮಿ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. 71 ವರ್ಷದ ಈ ಹಿರಿಯ ಕಾಂಗ್ರೆಸಿಗ ಸತತ ಏಳು ಬಾರಿ ಕೋಲಾರದಿಂದ ಸಂಸತ್‍ಗೆ ಆಯ್ಕೆಯಾಗುತ್ತಾ ಬಂದಿದ್ದರು. ಆದರೆ ಈ ಸಾರಿ ಸ್ವಪಕ್ಷೀಯರೇ ಕೈಕೊಟ್ಟ ಹಿನ್ನೆಲೆ ಅವರಿಗೆ ಮುನಿಸ್ವಾಮಿ ವಿರುದ್ಧ 2,10,021 ಮತಗಳ ಅಂತರದ ಹೀನಾಯ ಸೋಲು ಎದುರಾಗಿದೆ. ಎಂಟನೇ ಹಾಗೂ ಕಡೆಯ ಬಾರಿ ಲೋಕಸಭೆಗೆ ತೆರಳುವ ಕನಸು ಕಂಡಿದ್ದ ಇವರ ಆಸೆ ನುಚ್ಚು ನೂರಾಗಿದೆ.
ಮಾಜಿ ಸಿಎಂಗೆ ಆಘಾತ
ಕಳೆದ ಎರಡು ಅವಧಿಯಿಂದ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದು ಗೆಲ್ಲುತ್ತಿದ್ದ ಮಾಜಿ ಸಿಎಂ ಡಾ. ಎಂ. ವೀರಪ್ಪ ಮೊಯ್ಲಿ ಸೋಲುಂಡಿದ್ದಾರೆ. ತಮ್ಮ ವಿರುದ್ಧವೇ ಸತತ ಸೋಲು ಕಂಡಿದ್ದ ಮಾಜಿ ಸಚಿವ ಬಿ.ಎನ್‍. ಬಚ್ಚೇಗೌಡ ವಿರುದ್ಧ ಈ ಸಾರಿ ಸೋತಿದ್ದಾರೆ. ಇವರ ಪಾಲಿಗೆ ಇದು ಕಡೆಯ ಲೋಕಸಭೆ ಚುನಾವಣೆ ಸ್ಪರ್ಧೆ ಆಗಿತ್ತು. ಕ್ಷೇತ್ರ ಬದಲಿಸುವ ಪ್ರಯತ್ನವನ್ನು ಸಾಕಷ್ಟು ಮಾಡಿದ್ದರೂ, ಉಡುಪಿ-ಚಿಕ್ಕಮಗಳೂರಿನಿಂದ ಟಿಕೆಟ್‍ ಕೊಡಲು ಕಾಂಗ್ರೆಸ್ ನಿರಾಕರಿಸಿತ್ತು. ಅಲ್ಲದೇ ಅಲ್ಲಿಂದ ಜೆಡಿಎಸ್‍ಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಿತ್ತು. 79 ವರ್ಷ ಪ್ರಾಯದ ಇವರು ಬಚ್ಚೇಗೌಡರ ವಿರುದ್ಧ ಒಟ್ಟಾರೆ 1,82,110 ಮತಗಳ ಅಂತರದ ಹೀನಾಯ ಸೋಲು ಕಂಡಿದ್ದಾರೆ. ಎರಡು ಅವಧಿಗೆ ಚಿಕ್ಕಬಳ್ಳಾಪುರದಿಂದ ಆಯ್ಕೆಯಾಗಿ ಮೂರನೇ ಅವಕಾಶಕ್ಕೆ ಎದುರುನೋಡುತ್ತಿದ್ದರು. ಆದರೆ ಹೀನಾಯ ಸೋಲು ಅವರ ರಾಜಕೀಯ ಬದುಕಿನ ಕಡೆಯ ಸ್ಪರ್ಧೆಯನ್ನು ಕಹಿಯಾಗಿಸಿದೆ.
ದೊಡ್ಡಗೌಡರ ಪಥನ
ಮೇಲಿನ ಮೂವರು ಕಾಂಗ್ರೆಸ್‍ ನಾಯಕರಾದರೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ ವರಿಷ್ಠ ಎಚ್‍.ಡಿ. ದೇವೇಗೌಡ ಕೂಡ ಕ್ಷೇತ್ರ ಬದಲಿಸಿ ಸೋಲು ಕಂಡಿದ್ದಾರೆ. ಕಡೆಯವರೆಗೂ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲ ಹೊಂದಿದ್ದ ಅವರು ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್‍ ರೇವಣ್ಣಗೆ ಬಿಟ್ಟುಕೊಟ್ಟಿದ್ದರು. ತಾವು ತುಮಕೂರಿನಿಂದ ಕಣಕ್ಕಿಳಿದಿದ್ದರು. ಆದರೆ ಮಾಜಿ ಸಿಎಂ ಬಿ.ಎಸ್‍. ಯಡಿಯೂರಪ್ಪ ಆಪ್ತರಾದ ಮಾಜಿ ಸಂಸದ ಜಿ.ಎಸ್. ಬಸವರಾಜ್‍ ವಿರುದ್ಧ 13339 ಮತಗಳ ಅಂತರದಿಂದ ಸೋಲುಂಡಿದ್ದಾರೆ. 86 ವರ್ಷ ಪ್ರಾಯದ ರಾಜ್ಯದ ಅತ್ಯಂತ ಹಿರಿಯ ಉಮೇದುವಾರ ಎನ್ನುವ ಹೆಗ್ಗಳಿಕೆ ಕೂಡ ಹೊಂದಿದ್ದರು. ಆದರೆ ಬಸವರಾಜ್‍ ವಿರುದ್ಧ ಸೋತು ನಿರಾಶರಾಗಿದ್ದಾರೆ. ನೀರಿನ ವಿಚಾರದಲ್ಲಿ ತುಮಕೂರು ಜಿಲ್ಲೆಯ ಜನ ಇವರ ವಿರುದ್ಧ ಮುನಿಸಿಕೊಂಡಿದ್ದರಿಂದ ಈ ಸೋಲು ಎದುರಾಯಿತು.
ಒಟ್ಟಾರೆ ಈ ಸಾರಿಯ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ದೊಡ್ಡ ದೊಡ್ಡವರೆಲ್ಲಾ ಕೊಚ್ಚಿ ಹೋಗಿದ್ದಾರೆ. ರಾಜ್ಯದಿಂದಲೂ ಪ್ರತಿಷ್ಠಿತ ವ್ಯಕ್ತಿಗಳಾಗಿ ಕಣಕ್ಕಿಳಿದಿದ್ದ,ಹಲವು ವರ್ಷಗಳಿಂದ ಬೇರೂರಿದ್ದ ನಾಯಕರಿಗೆ ಮತದಾರ ಸೋಲಿನ ರುಚಿ ತೋರಿಸಿದ್ದಾರೆ. ನಾಲ್ವರೂ ನಾಯಕರು ಸೋಲಿನ ಮೂಲಕ ತಮ್ಮ ರಾಜಕೀಯ ಬದುಕನ್ನು ಬಹುತೇಕ ಅಂತ್ಯಗೊಳಿಸಿಕೊಂಡಿದ್ದಾರೆ.


Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.