ETV Bharat / briefs

ಶಿವಮೊಗ್ಗ ಗೆದ್ದೇ ಗೆಲ್ಲುತ್ತೇನೆ ಎಂದ ಬಿಎಸ್​​ವೈ... ಈ ಬಾರಿ ಶಾಕ್​ ಕಾದಿದೆ ಅಂದ್ರು ಕುಮಾರಸ್ವಾಮಿ

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಯಡಿಯೂರಪ್ಪ,  ಸಿಎಂ ಕುಮಾರಸ್ವಾಮಿ ನಡೆಯನ್ನು ತೀವ್ರವಾಗಿ ಖಂಡಿಸಿದರು.

author img

By

Published : Apr 20, 2019, 11:03 AM IST

ಬಿಎಸ್​​ವೈ ವರ್ಸಸ್​ ಹೆಚ್​ಡಿಕೆ

ಹುಬ್ಬಳ್ಳಿ: ನಾನು ನಿನ್ನೆ-ಇಂದು ಅಷ್ಟೇ ಶಿವಮೊಗ್ಗ ಪ್ರಚಾರಕ್ಕೆ ಹೋಗಿದ್ದೇನೆ. ರಾಘವೇಂದ್ರ 1 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಐಟಿ ದಾಳಿ ವಿರುದ್ಧ ಅಧಿಕಾರದಲ್ಲಿರುವವರೇ ಪ್ರತಿಭಟನೆ ಮಾಡಿರುವುದು ನಾಚಿಕೆಗೇಡಿನ ವಿಷಯ. ಮೇಲಾಗಿ ಅವರು ಎಷ್ಟು ಹೆದರಿದ್ದಾರೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ತೋರಿಸುತ್ತದೆ ಎಂದು ಹರಿಹಾಯ್ದರು.

ಬಿಎಸ್​​ವೈ ವರ್ಸಸ್​ ಹೆಚ್​ಡಿಕೆ

ಇನ್ನು ಮಂಡ್ಯದಲ್ಲಿ ನಿಖಿಲ್​ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಟಫ್​ ಫೈಟ್​ ಕೊಟ್ಟಿದ್ದಾರೆ. ಅವರು ಗೆಲ್ಲುವ ವಿಶ್ವಾಸ ಇದೆ. ನಿಖಿಲ್​ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಇನ್ನು ಡೈರಿ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಮನೆಯಲ್ಲಿ ಸಿಕ್ಕಿರುವ ಡೈರಿ ಫೋಟೋ ಕಾಪಿಗಳೇ ನಕಲಿ. ಈ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸಿ ಅದು ತಮ್ಮ ಕೈ ಬರಹ ಅಲ್ಲ ಎಂಬುದನ್ನು ಹೇಳಿದ್ದಾರೆ. ಇದು ಮೊದಲು ಡೈರಿನೇ ಅಲ್ಲ ಆದರೆ 2-3 ಸೀಟುಗಳು ಆಗಿವೆ ಎಂದು ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಏಟು

ಇದೇ ವೇಳೆ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ಒಡೆಯಲು ಗೃಹ ಸಚಿವ ಎಂ.ಬಿ. ಪಾಟೀಲ್​ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಚು ರೂಪಿಸಿದ್ದರು ಎಂದು ಆರೋಪಿಸಿದರು.

ಕುಮಾರಸ್ವಾಮಿ ತಿರುಗೇಟು

ಮತ್ತೊಂದೆಡೆ ಸಂದರ್ಶನ ನೀಡಿರುವ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಸೋಲುವುದು ನಿಶ್ಚಿತ. ಅಲ್ಲಿ ಬಿಗ್​ ಶಾಕ್​ ಕಾದಿದೆ ಎಂದು ಟಾಂಗ್​ ಕೊಟ್ಟಿದ್ದಾರೆ. ಇನ್ನೊಂದೆಡೆ ಮೋದಿ ವಿರುದ್ಧವೂ ಹರಿಹಾಯ್ದಿದ್ದಾರೆ. ನಾವು ಬಡವರ ಮಧ್ಯದಿಂದಲೇ ಆಯ್ಕೆ ಆಗಿ ಬಂದಿದ್ದೇವೆ. ಜನರ ಸಂಕಷ್ಟಗಳು ತಮಗೂ ಗೊತ್ತಿದೆ.

ಹುಬ್ಬಳ್ಳಿ: ನಾನು ನಿನ್ನೆ-ಇಂದು ಅಷ್ಟೇ ಶಿವಮೊಗ್ಗ ಪ್ರಚಾರಕ್ಕೆ ಹೋಗಿದ್ದೇನೆ. ರಾಘವೇಂದ್ರ 1 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಐಟಿ ದಾಳಿ ವಿರುದ್ಧ ಅಧಿಕಾರದಲ್ಲಿರುವವರೇ ಪ್ರತಿಭಟನೆ ಮಾಡಿರುವುದು ನಾಚಿಕೆಗೇಡಿನ ವಿಷಯ. ಮೇಲಾಗಿ ಅವರು ಎಷ್ಟು ಹೆದರಿದ್ದಾರೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ತೋರಿಸುತ್ತದೆ ಎಂದು ಹರಿಹಾಯ್ದರು.

ಬಿಎಸ್​​ವೈ ವರ್ಸಸ್​ ಹೆಚ್​ಡಿಕೆ

ಇನ್ನು ಮಂಡ್ಯದಲ್ಲಿ ನಿಖಿಲ್​ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಟಫ್​ ಫೈಟ್​ ಕೊಟ್ಟಿದ್ದಾರೆ. ಅವರು ಗೆಲ್ಲುವ ವಿಶ್ವಾಸ ಇದೆ. ನಿಖಿಲ್​ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಇನ್ನು ಡೈರಿ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಮನೆಯಲ್ಲಿ ಸಿಕ್ಕಿರುವ ಡೈರಿ ಫೋಟೋ ಕಾಪಿಗಳೇ ನಕಲಿ. ಈ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸಿ ಅದು ತಮ್ಮ ಕೈ ಬರಹ ಅಲ್ಲ ಎಂಬುದನ್ನು ಹೇಳಿದ್ದಾರೆ. ಇದು ಮೊದಲು ಡೈರಿನೇ ಅಲ್ಲ ಆದರೆ 2-3 ಸೀಟುಗಳು ಆಗಿವೆ ಎಂದು ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಏಟು

ಇದೇ ವೇಳೆ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ಒಡೆಯಲು ಗೃಹ ಸಚಿವ ಎಂ.ಬಿ. ಪಾಟೀಲ್​ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಚು ರೂಪಿಸಿದ್ದರು ಎಂದು ಆರೋಪಿಸಿದರು.

ಕುಮಾರಸ್ವಾಮಿ ತಿರುಗೇಟು

ಮತ್ತೊಂದೆಡೆ ಸಂದರ್ಶನ ನೀಡಿರುವ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಸೋಲುವುದು ನಿಶ್ಚಿತ. ಅಲ್ಲಿ ಬಿಗ್​ ಶಾಕ್​ ಕಾದಿದೆ ಎಂದು ಟಾಂಗ್​ ಕೊಟ್ಟಿದ್ದಾರೆ. ಇನ್ನೊಂದೆಡೆ ಮೋದಿ ವಿರುದ್ಧವೂ ಹರಿಹಾಯ್ದಿದ್ದಾರೆ. ನಾವು ಬಡವರ ಮಧ್ಯದಿಂದಲೇ ಆಯ್ಕೆ ಆಗಿ ಬಂದಿದ್ದೇವೆ. ಜನರ ಸಂಕಷ್ಟಗಳು ತಮಗೂ ಗೊತ್ತಿದೆ.

Intro:Body:

ಶಿವಮೊಗ್ಗ ಗೆದ್ದೇ ಗೆಲ್ಲುತ್ತೇನೆ ಎಂದ ಬಿಎಸ್​​ವೈ... ಈ ಬಾರಿ ಶಾಕ್​ ಕಾದಿದೆ ಅಂದ್ರು ಕುಮಾರಸ್ವಾಮಿ 

ಹುಬ್ಬಳ್ಳಿ:  ನಾನು ನಿನ್ನೆ ಇಂದು ಅಷ್ಟೇ ಶಿವಮೊಗ್ಗ ಪ್ರಚಾರಕ್ಕೆ ಹೋಗಿದ್ದೇನೆ. ರಾಘವೇಂದ್ರ 1 ಲಕ್ಷಕ್ಕೂ ಹೆಚ್ಚು ಅಂತದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 



ಮಾಧ್ಯಮವೊಂದಕ್ಕೆ ಖಾಸಗಿ ಸಂದರ್ಶನ ನೀಡಿದ ಯಡಿಯೂರಪ್ಪ,  ಸಿಎಂ ಕುಮಾರಸ್ವಾಮಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಐಟಿ ದಾಳಿ  ವಿರುದ್ಧ ಅಧಿಕಾರದಲ್ಲಿರುವವರೇ ಪ್ರತಿಭಟನೆ ಮಾಡಿರುವುದು ನಾಚಿಕೆಗೇಡಿನ ವಿಷಯ. ಮೇಲಾಗಿ ಅವರು ಎಷ್ಟು ಹೆದರಿದ್ದಾರೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ತೋರಿಸುತ್ತದೆ ಎಂದು ಹರಿಹಾಯ್ದರು.  



ಇನ್ನು ಮಂಡ್ಯದಲ್ಲಿ ನಿಖಿಲ್​ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಟಫ್​ ಫೈಟ್​ ಕೊಟ್ಟಿದ್ದಾರೆ.  ಅವರು ಗೆಲ್ಲುವ ವಿಶ್ವಾಸ ಇದೆ. ನಿಖಿಲ್​ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.  ಇನ್ನು ಡೈರಿ ಬಗ್ಗೆ ಮಾತನಾಡಿದ ಅವರು,  ಡಿಕೆಶಿ ಮನೆಯಲ್ಲಿ ಸಿಕ್ಕಿರುವ ಡೈರಿ ಫೋಟೋ ಕಾಪಿಗಳೇ ನಕಲಿ. ಈ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸಿ ಅದು ತಮ್ಮ ಕೈ ಬರಹ ಅಲ್ಲ ಎಂಬುದನ್ನು ಹೇಳಿದ್ದಾರೆ.  ಇದು ಮೊದಲು ಡೈರಿನೇ ಅಲ್ಲ ಆದರೆ 2-3 ಸೀಟುಗಳು ಆಗಿವೆ ಎಂದು ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ.  



ಇದೇ ವೇಳೆ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ಒಡೆಯಲು ಗೃಹ ಸಚಿವ ಎಂ.ಬಿ. ಪಾಟೀಲ್​ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಚು ರೂಪಿಸಿದ್ದರು ಎಂದು ಆರೋಪಿಸಿದರು. 



ಮತ್ತೊಂದೆಡೆ ಸಂದರ್ಶನ ನೀಡಿರುವ  ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಸೋಲುವುದು ನಿಶ್ಚಿತ. ಅಲ್ಲಿ ಬಿಗ್​ ಶಾಕ್​ ಕಾದಿದೆ ಎಂದು  ಟಾಂಗ್​ ಕೊಟ್ಟಿದ್ದಾರೆ.   ಇನ್ನೊಂದೆಡೆ ಮೋದಿ ವಿರುದ್ಧವೂ ಹರಿಹಾಯ್ದಿದ್ದಾರೆ.  ನಾವು ಬಡವರ ಮಧ್ಯದಿಂದಲೇ ಆಯ್ಕೆ ಆಗಿ ಬಂದಿದ್ದೇವೆ. ಜನರ ಸಂಕಷ್ಟಗಳು ತಮಗೂ ಗೊತ್ತಿದೆ.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.