ETV Bharat / briefs

ಲಾಟರಿ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ... ಜನರಿಂದ ಬಿತ್ತು ಗೂಸಾ! - undefined

ಲಕ್ಕಿ ಡ್ರಾ ಹೆಸರಿನಲ್ಲಿ ಗದಗ ಜಿಲ್ಲೆಯ ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಸೋಮನಗೌಡ ಪಾಟೀಲ್ ಎಂಬುವವರು ಪ್ರಗತಿ ಬಂಧು ಸಂಸ್ಥೆ ಹೆಸರಿನ ಮೂಲಕ ಲಾಟರಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ಲಕ್ಕಿ ಡ್ರಾದಲ್ಲಿ ಭಾಗವಹಿಸಿದ್ದ ಚೀಟಿ ಹಾಕಿದ್ದ ಜನರು.
author img

By

Published : Jun 13, 2019, 7:45 PM IST

ಗದಗ: ಲಕ್ಕಿ ಡ್ರಾ ಹೆಸರಿನಲ್ಲಿ ಗದಗ ಜಿಲ್ಲೆಯ ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಸೋಮನಗೌಡ ಪಾಟೀಲ್ ಎಂಬುವವರು ಪ್ರಗತಿ ಬಂಧು ಸಂಸ್ಥೆ ಹೆಸರಿನ ಮೂಲಕ ಲಾಟರಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ಪ್ರಗತಿ ಬಂಧು ಸಂಸ್ಥೆ ಎಂಬ ಹೆಸರಿನ ಮೂಲಕ ಜನರಿಗೆ ಮೋಸ

ಪ್ರಗತಿ ಬಂಧು ಹೋಮ್ ಅಪ್ಲಾಯನ್ಸ್ ಸ್ಕೀಮ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ಮೋಸ ಮಾಡಲಾಗಿದೆ. ಜನರಿಗೆ ಕಾರ್, ಟ್ರ್ಯಾಕ್ಟರ್, ಆಟೋ, ಚಿನ್ನಾಭರಣ, ಟಿವಿ, ವಾಶಿಂಗ್ ಮಷಿನ್, ರೇಫ್ರಿಜರೇಟರ್, ಬೈಕ್ ಹೀಗೆ ಹತ್ತಾರು ರೀತಿಯ ಆಕರ್ಷಕ ವಸ್ತುಗಳನ್ನು ನೀಡುವ ಲಾಟರಿ ಸ್ಕೀಮ್ ಮಾಡಿದ್ದಾರೆ.

ಹಳ್ಳಿ ಜನರನ್ನೇ ಟಾರ್ಗೆಟ್ ಮಾಡಿ ಕಡಿಮೆ ಹಣದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕೊಡುವುದಾಗಿ ಹೇಳಿ ನಾಮ ಹಾಕಿದ್ದಾನೆ. ಜಿಲ್ಲೆಯಲ್ಲಿ 59,899 ಸದಸ್ಯರನ್ನು ಈ ಸಂಸ್ಥೆ ಹೊಂದಿದೆ. 1250 ರೂಪಾಯಿ ಸದಸ್ಯತ್ವ ಶುಲ್ಕ ಮಾಡಿದ್ದು, ಆರಂಭದಲ್ಲಿ 650 ರೂಪಾಯಿ ಆರಂಭಿಕ ಶುಲ್ಕ ಎಂದು ವಸೂಲಿ ಮಾಡಲಾಗಿದೆ.

ಹೀಗಾಗಿ ಅಂದಾಜು 3-4 ಕೋಟಿ ಶುಲ್ಕ ವಸೂಲಿಯಾಗಿದೆ ಎನ್ನಲಾಗಿದೆ. ಜೂನ್ 9ರಂದು ಲಾಟರಿ ಆಯ್ಕೆ ಮಾಡಲಾಗಿದೆ. ಆಗ ಯಾರಿಗೂ ಲಕ್ಕಿ ಡ್ರಾನಲ್ಲಿ ನಂಬರ್ ಬಂದಿಲ್ಲ. ಆಗ ಮೋಸ ಅಂತ ಗೊತ್ತಾದ ಬಳಿಕ ಜನರು ಏಜೆಂಟರು ಹಾಗೂ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆಗ ನಾಪತ್ತೆಯಾಗಿದ್ದ ವಂಚಕ ಸೋಮನಗೌಡನನ್ನು ರೋಣ ಪೊಲೀಸರು ಬಂಧಿಸಿದ್ದಾರೆ.

ಇಂತಹ ಮೋಸದ ಜಾಲಕ್ಕೆ ಸಾರ್ವಜನಿಕರು ಸಿಲುಕಬಾರದು. ಅಂತಹ ಘಟನೆಗಳು ನಡೆದರೆ ಅವುಗಳನ್ನು ಪೊಲೀಸ್​ ಇಲಾಖೆಗೆ ತಿಳಿಸಬೇಕು ಎಂದು ಗದಗ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ ಜೋಶಿ ಹೇಳಿದ್ದಾರೆ.

ಗದಗ: ಲಕ್ಕಿ ಡ್ರಾ ಹೆಸರಿನಲ್ಲಿ ಗದಗ ಜಿಲ್ಲೆಯ ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಸೋಮನಗೌಡ ಪಾಟೀಲ್ ಎಂಬುವವರು ಪ್ರಗತಿ ಬಂಧು ಸಂಸ್ಥೆ ಹೆಸರಿನ ಮೂಲಕ ಲಾಟರಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ಪ್ರಗತಿ ಬಂಧು ಸಂಸ್ಥೆ ಎಂಬ ಹೆಸರಿನ ಮೂಲಕ ಜನರಿಗೆ ಮೋಸ

ಪ್ರಗತಿ ಬಂಧು ಹೋಮ್ ಅಪ್ಲಾಯನ್ಸ್ ಸ್ಕೀಮ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ಮೋಸ ಮಾಡಲಾಗಿದೆ. ಜನರಿಗೆ ಕಾರ್, ಟ್ರ್ಯಾಕ್ಟರ್, ಆಟೋ, ಚಿನ್ನಾಭರಣ, ಟಿವಿ, ವಾಶಿಂಗ್ ಮಷಿನ್, ರೇಫ್ರಿಜರೇಟರ್, ಬೈಕ್ ಹೀಗೆ ಹತ್ತಾರು ರೀತಿಯ ಆಕರ್ಷಕ ವಸ್ತುಗಳನ್ನು ನೀಡುವ ಲಾಟರಿ ಸ್ಕೀಮ್ ಮಾಡಿದ್ದಾರೆ.

ಹಳ್ಳಿ ಜನರನ್ನೇ ಟಾರ್ಗೆಟ್ ಮಾಡಿ ಕಡಿಮೆ ಹಣದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕೊಡುವುದಾಗಿ ಹೇಳಿ ನಾಮ ಹಾಕಿದ್ದಾನೆ. ಜಿಲ್ಲೆಯಲ್ಲಿ 59,899 ಸದಸ್ಯರನ್ನು ಈ ಸಂಸ್ಥೆ ಹೊಂದಿದೆ. 1250 ರೂಪಾಯಿ ಸದಸ್ಯತ್ವ ಶುಲ್ಕ ಮಾಡಿದ್ದು, ಆರಂಭದಲ್ಲಿ 650 ರೂಪಾಯಿ ಆರಂಭಿಕ ಶುಲ್ಕ ಎಂದು ವಸೂಲಿ ಮಾಡಲಾಗಿದೆ.

ಹೀಗಾಗಿ ಅಂದಾಜು 3-4 ಕೋಟಿ ಶುಲ್ಕ ವಸೂಲಿಯಾಗಿದೆ ಎನ್ನಲಾಗಿದೆ. ಜೂನ್ 9ರಂದು ಲಾಟರಿ ಆಯ್ಕೆ ಮಾಡಲಾಗಿದೆ. ಆಗ ಯಾರಿಗೂ ಲಕ್ಕಿ ಡ್ರಾನಲ್ಲಿ ನಂಬರ್ ಬಂದಿಲ್ಲ. ಆಗ ಮೋಸ ಅಂತ ಗೊತ್ತಾದ ಬಳಿಕ ಜನರು ಏಜೆಂಟರು ಹಾಗೂ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆಗ ನಾಪತ್ತೆಯಾಗಿದ್ದ ವಂಚಕ ಸೋಮನಗೌಡನನ್ನು ರೋಣ ಪೊಲೀಸರು ಬಂಧಿಸಿದ್ದಾರೆ.

ಇಂತಹ ಮೋಸದ ಜಾಲಕ್ಕೆ ಸಾರ್ವಜನಿಕರು ಸಿಲುಕಬಾರದು. ಅಂತಹ ಘಟನೆಗಳು ನಡೆದರೆ ಅವುಗಳನ್ನು ಪೊಲೀಸ್​ ಇಲಾಖೆಗೆ ತಿಳಿಸಬೇಕು ಎಂದು ಗದಗ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ ಜೋಶಿ ಹೇಳಿದ್ದಾರೆ.

Intro:ಗದಗ
ಆಂಕರ್: ಐಎಂಎ ಕಂಪನಿ ವಂಚನೆ ಪ್ರಕರಣ ರಾಜ್ಯದಲ್ಲಿ ಈಗ ಭಾರಿ ಸದ್ದು ಮಾಡ್ತಾಯಿದೆ. ಅದೇ ಮಾದರಿಯಲ್ಲಿ ಬಡ ಜನ್ರಿಗೆ ಟೋಪಿ ಹಾಕಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಆತ ಬಡ ಜನ್ರಿಗೆ ಬಣ್ಣ ಬಣ್ಣದ ಕನಸು ಬಿತ್ತಿ ಹಚ್ಚಿ ನೈಸಾಗಿ ಹಣ ವಸೂಲಿ ಮಾಡಿದ್ದ. ಕಾರ್, ಚಿನ್ನಾಭರಣ, ಟ್ರ್ಯಾಕ್ಟರ್, ಆಟೋ ಕಡಿಮೆ ಹಣದಲ್ಲಿ ಕೊಡ್ತೀನಿ ಅಂತ ಒಂದಲ್ಲ ಎರಡಲ್ಲ ಕೋಟಿ ಕೋಟಿ ವಸೂಲಿ ಮಾಡಿದ್ದ. ಲಕ್ಕಿ ಡ್ರಾ ಹೆಸರಲ್ಲಿ ಭಾರಿ ಗೋಲಮಾಲ್ ಮಾಡಿದ್ದ ಭೂಪ ನಾಪತ್ತೆಯಾಗಿದ್ದ. ಆ ಲಕ್ಕಿ ‌ಆಸಾಮಿಗೆ ರೋಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆತ ರಾತ್ರೋರಾತ್ರಿ ಕೊಟ್ಯಾಧಿಪತಿ ಆಗಲು ಹೋಗಿ ಜೈಲಿನಲ್ಲಿ ಒಂದು..ಎರಡು.. ಮೂರು.. ಅಂತಾ ಕಂಬಿ ಎನಿಸುತ್ತಿದ್ದಾನೆ.
Body:ಹೌದು ... ಈಗ ರಾಜ್ಯದಲ್ಲಿ ಐಎಂಎ ಕಂಪನಿ ವಂಚನೆ ಪ್ರಕರಣ ಭಾರಿ ಸದ್ದು ಮಾಡ್ತಾಯಿದೆ. ರಾಜ್ಯದಲ್ಲಿ ಲಾಟರಿ ನಿಷೇಧ ಇದೆ. ಆದ್ರೂ ಗದಗ ಜಿಲ್ಲೆಯಲ್ಲಿ ಲಕ್ಕಿ ಡ್ರಾ ಹೆಸರಲ್ಲಿ ಜನ್ರಿಗೆ ಭಾರಿ ಪ್ರಮಾಣದಲ್ಲಿ ಮೋಸ ನಡೆದಿದೆ. ಈ ಕುರಿತು ಜೂನ್ ೯ ರಂದು ಕೋಟ್ಯಾಂತರ ವ್ಯವಹಾರದ ಲಕ್ಕಿ ಡ್ರಾ ಹಗರಣ ಬಗ್ಗೆ ವರದಿ ಪ್ರಸಾರ ಮಾಡಲಾಗಿತ್ತು. ಈ ಫೋಟೋದಲ್ಲಿ ಇರೋ ಆಸಾಮಿಯೇ ಜನ್ರಿಗೆ ಮೋಸ ಮಾಡಿದ್ದು, ಈ ವಂಚಕನ ಹೆಸರು ಸೋಮನಗೌಡ ಪಾಟೀಲ್. ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ನಿವಾಸಿ. ಗದಗ ಜಿಲ್ಲೆಯ ರೋಣ ಪಟ್ಟಣದ ಪ್ರಗತಿ ಬಂಧು ಸಂಸ್ಥೆ, ಪ್ರಗತಿ ಬಂಧು ಹೋಮ್ ಅಪ್ಲಾಯನ್ಸ್ ಸ್ಕೀಮ್ ಹೆಸರಲ್ಲಿ ಜನ್ರಿಗೆ ಕೋಟಿ ಕೋಟಿ ಪಂಗನಾಮ ಹಾಕಿದೆ. ಜನ್ರಿಗೆ ಕಾರ್, ಟ್ರ್ಯಾಕ್ಟರ್, ಆಟೋ, ಚಿನ್ನಾಭರಣ, ಟಿವಿ, ವಾಶಿಂಗ್ ಮಷಿನ್, ರೆಫ್ರೀಜರೇಟರ್, ಬೈಕ್ ಹೀಗೆ ಹತ್ತಾರು ರೀತಿಯ ಆಕರ್ಷಕ ವಸ್ತುಗಳ ನೀಡುವ ಲಾಟರಿ ಸ್ಕೀಮ್ ಮಾಡಿದ್ದಾರೆ. ಹಳ್ಳಿ ಜನ್ರನ್ನೇ ಟಾರ್ಗೆಟ್ ಮಾಡಿದ ಆಸಾಮಿ ಕಡಿಮೆ ಹಣದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕೊಡುವುದಾಗಿ ಹೇಳಿ ಪಂಗನಾಮ ಹಾಕಿದ್ದಾನೆ. ಬಣ್ಣ ಬಣ್ಣದ ಆಸೆಗೆ ಮರುಳಾದ ಜನ್ರು ಸದಸ್ಯತ್ವ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 59,899 ಸದಸ್ಯರನ್ನು ಈ ಸಂಸ್ಥೆ ಮಾಡಿದೆ. ೧೨೫೦ ಸದಸ್ಯತ್ವ ಶುಲ್ಕ ಮಾಡಿದ್ದು ಆರಂಭದಲ್ಲಿ ೬೫೦ ವಸೂಲಿ ಮಾಡಿದ್ದಾನೆ. ಹೀಗಾಗಿ ಅಂದಾಜು ೩-೪ ಕೋಟಿ ಎನ್ನಲಾಗಿದೆ. ಜೂನ್ ೯ ರಂದು ಲಾಟರಿ ಆಯ್ಕೆ ಮಾಡಲಾಗಿದೆ. ಆಗ ಯಾರಿಗೂ ಲಕ್ಕಿ ಡ್ರಾದಲ್ಲಿ ನಂಬರ್ ಬಂದಿಲ್ಲ. ಆಗ ಮೋಸ ಅಂತ ಗೋತ್ತಾದ ಬಳಿಕ ಜನ್ರು ಏಜೆಂಟರು ಹಾಗೂ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ರು. ಆಗ ನಾಪತ್ತೆಯಾಗಿದ್ದ ಖಥರ್ನಾಕ ಆಸಾಮಿ ಸೋಮನಗೌಡಗೆ ರೋಣ ಪೊಲೀಸರು ಬೇಟೆಯಾಡಿದ್ದಾರೆ. ಮಾಡಬಾರದ್ರು ಮಾಡಿದ ಲಕ್ಕಿ ಆಸಾಮಿ ಜೈಲು ಸೇರಿದ್ದಾನೆ. ಜನ್ರು ಕೂಡ ಇಂಥ‌ ಮೋಸದ ಜಾಲಕ್ಕೆ ಒಳಗಾಗಬಾರ್ದು. ಇಂಥ ಹಣ ವಸೂಲಿ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿ ಅಂತ ಎಸ್ಪಿ ಮನವಿ ಮಾಡಿದ್ದಾರೆ..
ಬೈಟ್-೦೧: ಶ್ರೀನಾಥ್ ಜೋಶಿ, ಎಸ್ಪಿ ಗದಗ.
420 ವಂಚನೆ ಪ್ರಕರಣ ಹಾಗೂ ಲಾಟರಿ ನಿಷೇಧ ಕಾಯ್ದೆ ಅಡಿ ಪ್ರಕರಣ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಕಾನೂನು ಬಾಹಿರ ಚಟುವಟಿಕೆಗೆ ರೋಣ ಶಿಕ್ಷಣ ಇಲಾಖೆ ಗುರುಭವನ ಬಾಡಿಗೆ ನೀಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಗದಗ ಜಿಲ್ಲೆಯ ಬಹುತೇಕ ಹಳ್ಳಿಗಳ ಜನ ಸದಸ್ಯರು ಆಗಿದ್ದು, ಇದ್ರಲ್ಲಿ ಭಾರಿ ಗೋಲಮಾಲ್ ನಡೆದಿದೆ‌ ಅಂತ ಆರೋಪಿಸಿದ್ದಾರೆ. ನಮ್ಮ ಹಣ ನಮಗೆ ಕೊಡಿಸಿ ಅಂತ ಏಜೆಂಟರಿಗೆ ಬೆನ್ನು ಬಿದ್ದಾರೆ. ಸಾವಿರಾರು ಲಕ್ಕಿ ಕೂಪನ ಸದಸ್ಯತ್ವ ಮಾಡಿದ್ದು, ಸುಮಾರು 3-4 ಕೋಟಿ ರೂಪಾಯಿ ವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ರಾಜ್ಯದಲ್ಲಿ ಲಾಟರಿ ನಿಷೇದವಿದ್ದರೂ ರೋಣ ಪಟ್ಟಣದಲ್ಲಿ ರಾಜಾರೋಷವಾಗಿ ನಡೆದಿದೆ‌. ಲಕ್ಕಿ ಮೋಸ ಗೋತ್ತಾಗುತ್ತಿದ್ದಂತೆ ಅಂದು ಸಾಕಷ್ಟು ಸದಸ್ಯರು ರೊಚ್ಚಿಗೆದ್ದಿದ್ರು. ಲಕ್ಕಿ ಡ್ರಾ ಮಾಲೀಕರಿಗೆ ಹಾಗೂ ಏಜೆಂಟರಿಗೆ ಮನಸ್ಸೋಇಚ್ಛೆ ತರಾಟೆಗೆ ತೆಗೆದುಕೊಂಡ್ರು. ಮೋಸಗಾರನಿಗೆ ಪೊಲೀಸರು ಬಲೆ ಹಾಕಿದ್ದು, ಹಣ ವಾಪಸ ಬರುವ ಆಸೆ ಹುಟ್ಟಿಸಿದೆ. ಹೀಗಾಗಿ ಹಣ ಕೊಡಿಸಬೇಕು ಅಂತಿದ್ದಾರೆ.
Conclusion:ಬಣ್ಣದ ಮಾತಿಗೆ ‌ಮೋಸ ಹೋದ ಜನ್ರು ಈಗ ಕಾರು ಇಲ್ಲ, ಟ್ರ್ಯಾಕ್ಟರು, ಟಿವಿ, ವಾಶಿಂಗ್ ಮಷಿನ್, ಹಣವೂ ಇಲ್ಲದೇ ಕೈ ಕೈ ಹಿಚುಕಿಕೊಳ್ತಾಯಿದ್ದಾರೆ. ಏನೇ ಇರಲಿ ಜನ್ರಿಗೆ ತಿರುಪತಿ ನಾಮ ಹಾಕಿದ ಲಕ್ಕಿ ಆಸಾಮಿ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಮೋಸ ಹೋಗೋ ಜನ್ರು ಇರೋವರೆಗೆ ಮೋಸ ಮಾಡೋರು ಇದ್ದೇ ಇರ್ತಾರೆ. ಜನ್ರು ಹುಷಾರ್ ಆಗಬೇಕು..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.