ETV Bharat / bharat

ಮದುವೆಯಾದರೂ ಪ್ರೇಮಾಂಕುರ: ಆತ್ಮಹತ್ಯೆಗೆ ಶರಣಾದ ವಿಧವೆ, ವಿವಾಹಿತ

author img

By

Published : Mar 26, 2022, 3:43 PM IST

ಮಹಾರಾಷ್ಟ್ರದ ಸತಾರಾದಲ್ಲಿ ವಿವಾಹಿತ ಪುರುಷ ಹಾಗೂ ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Widow commits suicide by hanging with a married man
Widow commits suicide by hanging with a married man

ಸತಾರಾ(ಮಹಾರಾಷ್ಟ್ರ): ಆಕೆ ಪತಿಯನ್ನು ಕಳೆದುಕೊಂಡಿರುವ ಮಹಿಳೆ, ಈತ ವಿವಾಹಿತ. ಆದ್ರೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಷ್ಟು ದಿನ ಇವರಿಬ್ಬರ ಮಧ್ಯೆದ ಸಂಬಂಧ ಮುಂದುವರಿದಿತ್ತು. ಆದ್ರೆ ಈಗ ವಿಧವೆ ಮತ್ತು ವಿವಾಹಿತ ಪುರುಷ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಊರ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನ ಶೋಭಾ ಪವಾರ್​(36) ಮತ್ತು ಪ್ರಕಾಶ್​ ನಿಕಂ(49) ಎಂದು ಗುರುತಿಸಲಾಗಿದೆ.

ಮೃತರನ್ನ ಪಟಾನ್​​ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ವಿವಾಹಿತರು. ಕಳೆದ ಕೆಲ ವರ್ಷಗಳ ಹಿಂದೆ ಶೋಭಾಳ ಪತಿ ಸಾವನ್ನಪ್ಪಿದ್ದು, ಇದಾದ ಬಳಿಕ ಕೆಲಸದ ನಿಮಿತ್ತ ಮುಂಬೈಗೆ ಹೋಗಿ ಉಳಿದುಕೊಂಡಿದ್ದಳು. ಮಾರ್ಚ್​ 20ರಂದು ಊರಿಗೆ ವಾಪಸ್​ ಆಗಿರುವ ಶೋಭಾ ಮಾರ್ಚ್​ 22ರಂದು ಪಟಾನ್​ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದಳು. ವಾಪಸ್​ ಬಾರದ ಕಾರಣ ಕುಟುಂಬಸ್ಥರು ಹುಡುಕಾಟದಲ್ಲಿ ತೊಡಗಿದ್ದರು. ಇದರ ಬೆನ್ನಲ್ಲೇ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಹಿಜಾಬ್​ ಧರಿಸುತ್ತಿದ್ದ ಪ್ರಾಂಶುಪಾಲೆಗೆ ಕಿರುಕುಳ ಆರೋಪ.. ಮನನೊಂದು ರಾಜೀನಾಮೆ!?

ಲಭ್ಯವಾಗಿರುವ ಮಾಹಿತಿ ಪ್ರಕಾರ ಶೋಭಾ ನೇರವಾಗಿ ಪ್ರಕಾಶ್​ ಮನೆಗೆ ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಕೆಲ ಹೊತ್ತು ಮಾತುಕತೆ ನಡೆದಿದೆ. ಇದಾದ ಬಳಿಕ ಇಬ್ಬರು ಮನೆಯಿಂದ ಹೊರ ನಡೆದಿದ್ದು, ಊರ ಹೊರಗಿನ ಮರದಲ್ಲಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೃತ ಪ್ರಕಾಶ್ ಸಹೋದರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಇನ್ಸ್​ಪೆಕ್ಟರ್​ ಚೌಖುಂಡೆ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ.

ಸತಾರಾ(ಮಹಾರಾಷ್ಟ್ರ): ಆಕೆ ಪತಿಯನ್ನು ಕಳೆದುಕೊಂಡಿರುವ ಮಹಿಳೆ, ಈತ ವಿವಾಹಿತ. ಆದ್ರೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಷ್ಟು ದಿನ ಇವರಿಬ್ಬರ ಮಧ್ಯೆದ ಸಂಬಂಧ ಮುಂದುವರಿದಿತ್ತು. ಆದ್ರೆ ಈಗ ವಿಧವೆ ಮತ್ತು ವಿವಾಹಿತ ಪುರುಷ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಊರ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನ ಶೋಭಾ ಪವಾರ್​(36) ಮತ್ತು ಪ್ರಕಾಶ್​ ನಿಕಂ(49) ಎಂದು ಗುರುತಿಸಲಾಗಿದೆ.

ಮೃತರನ್ನ ಪಟಾನ್​​ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ವಿವಾಹಿತರು. ಕಳೆದ ಕೆಲ ವರ್ಷಗಳ ಹಿಂದೆ ಶೋಭಾಳ ಪತಿ ಸಾವನ್ನಪ್ಪಿದ್ದು, ಇದಾದ ಬಳಿಕ ಕೆಲಸದ ನಿಮಿತ್ತ ಮುಂಬೈಗೆ ಹೋಗಿ ಉಳಿದುಕೊಂಡಿದ್ದಳು. ಮಾರ್ಚ್​ 20ರಂದು ಊರಿಗೆ ವಾಪಸ್​ ಆಗಿರುವ ಶೋಭಾ ಮಾರ್ಚ್​ 22ರಂದು ಪಟಾನ್​ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದಳು. ವಾಪಸ್​ ಬಾರದ ಕಾರಣ ಕುಟುಂಬಸ್ಥರು ಹುಡುಕಾಟದಲ್ಲಿ ತೊಡಗಿದ್ದರು. ಇದರ ಬೆನ್ನಲ್ಲೇ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಹಿಜಾಬ್​ ಧರಿಸುತ್ತಿದ್ದ ಪ್ರಾಂಶುಪಾಲೆಗೆ ಕಿರುಕುಳ ಆರೋಪ.. ಮನನೊಂದು ರಾಜೀನಾಮೆ!?

ಲಭ್ಯವಾಗಿರುವ ಮಾಹಿತಿ ಪ್ರಕಾರ ಶೋಭಾ ನೇರವಾಗಿ ಪ್ರಕಾಶ್​ ಮನೆಗೆ ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಕೆಲ ಹೊತ್ತು ಮಾತುಕತೆ ನಡೆದಿದೆ. ಇದಾದ ಬಳಿಕ ಇಬ್ಬರು ಮನೆಯಿಂದ ಹೊರ ನಡೆದಿದ್ದು, ಊರ ಹೊರಗಿನ ಮರದಲ್ಲಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೃತ ಪ್ರಕಾಶ್ ಸಹೋದರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಇನ್ಸ್​ಪೆಕ್ಟರ್​ ಚೌಖುಂಡೆ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.