ETV Bharat / bharat

ಶ್ರದ್ಧಾಳ ಹತ್ಯೆ ರೀತಿಯಲ್ಲಿ ಪತ್ನಿಯನ್ನೇ ಕೊಲೆಗೈದ ಪತಿ: ಮೂವರು ಆರೋಪಿಗಳ ಬಂಧನ..!

author img

By

Published : Mar 1, 2023, 7:53 PM IST

ಕಾನ್ಪುರದಲ್ಲಿ ಶ್ರದ್ಧಾಳ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಪತಿಯೇ ಪತ್ನಿಯನ್ನು ತುಂಡರಿಸಿ ಕೊಲೆ ಮಾಡಿರುವ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Kanpur police
ಪತ್ನಿಯ ಕೊಲೆಗೈದಿದ್ದ ಮೂವರ ಬಂಧನ

ಕಾನ್ಪುರ (ಉತ್ತರ ಪ್ರದೇಶ): ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ಶ್ರದ್ಧಾಳನ್ನು ಹಲವು ತುಂಡುಗಳಾಗಿ ಕತ್ತರಿಸಿದ ಹತ್ಯೆ ಮಾಡಿದ ರೀತಿಯಲ್ಲೇ ಕಾನ್ಪುರದ ಸಾಧ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಅಂತಹುದೇ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಹೌದು, ಶ್ರದ್ಧಾಳ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಪತಿಯೇ ಪತ್ನಿಯನ್ನು ತುಂಡರಿಸಿದ ಕೊಲೆ ಮಾಡಿರುವ ಮತ್ತೊಂದು ಪ್ರಕರಣ ಜರುಗಿದೆ.

ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಕತ್ತರಿಸಿದ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ದಕ್ಷಿಣ ಡಿಸಿಪಿ ಹೇಳಿದ್ದೇನು?: ಫೆಬ್ರವರಿ 24ರಂದು ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ದೇಹ ತೀವ್ರವಾಗಿ ಛಿದ್ರವಾಗಿದ್ದು, ಪ್ಲಾಸ್ಟಿಕ್ ಚೀಲಗಳಲ್ಲಿ ರಸ್ತೆಬದಿ ಬಿದ್ದಿತ್ತು. ಪ್ರಕರಣದ ಬೆನ್ನುಬಿದ್ದ ಪೊಲೀಸರು, ಫತೇಪುರದ ಜೆಹಾನಾಬಾದ್‌ನ ದ್ವಾರಿಕಾಪುರ ಜಟ್‌ನ ನಿವಾಸಿ ಶಾಲು ಎಂದು ಮೃತರ ಗುರುತು ಪತ್ತೆ ಹಚ್ಚಲಾಗಿದೆ. ಮಹಿಳೆ ಶಾಲು ಮನೆಯಿಂದ ನಾಪತ್ತೆಯಾಗಿತ್ತು. ತನಿಖೆಯ ನಂತರ ಆಕೆಯ ಪತಿ ಹಾಗೂ ಘಟನೆಯ ಪ್ರಮುಖ ಆರೋಪಿ ರಾಮಸಾಗರ್ ಹರಿತವಾದ ಆಯುಧದಿಂದ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದರ ಬಳಿಕ ಅವರ ಸಹೋದರರಾದ ಶಿವಸಾಗರ್ ಮತ್ತು ವಿದ್ಯಾಸಾಗರ್ ಮತ್ತು ಆಟೋ ಚಾಲಕರಾದ ಮೋನು ಮತ್ತು ನೀರಜ್ ತಿವಾರಿ ಅವರೊಂದಿಗೆ ಮೃತ ದೇಹವನ್ನು ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ರಸ್ತೆಬದಿಯಲ್ಲಿ ಎಸೆದಿದ್ದಾರೆ ಎಂದು ದಕ್ಷಿಣ ಡಿಸಿಪಿ ಸಲ್ಮಾನ್ ತಾಜ್ ಪಾಟೀಲ್ ಮಾಹಿತಿ ನೀಡಿದರು.

ಪ್ರಮುಖ ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸ್​: ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಪೊಲೀಸರು ವಿದ್ಯಾಸಾಗರ್, ಮೋನು ಮತ್ತು ನೀರಜ್ ಅವರನ್ನು ಬಂಧಿಸಿದ್ದಾರೆ. ಎಲ್ಲರೂ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಮುಖ ಆರೋಪಿ ರಾಮ್‌ಸಾಗರ್‌ ತಲೆಮರಿಸಿಕೊಂಡಿದ್ದಾನೆ. ಬಂಧಿತ ಆರೋಪಿಗಳನ್ನು ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿದ್ದು, ಅವರ ಹೇಳಿಕೆಗಳ ಆಧಾರದ ಮೇಲೆ ರಾಮಸಾಗರ್‌ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದಕ್ಷಿಣ ಡಿಸಿಪಿ ತಿಳಿಸಿದರು.

ಗ್ರಾಮದಲ್ಲಿ ಭಾರೀ ಸಂಚಲನ: ಬುಧವಾರ ಈ ಘಟನೆ ಬೆಳಕಿಗೆ ಬಂದ ತಕ್ಷಣ ಗ್ರಾಮಸ್ಥರೆಲ್ಲರೂ ಬೆಚ್ಚಿಬಿದ್ದಾರೆ. ಪತಿ ರಾಮಸಾಗರ ಮತ್ತು ಆತನ ಪತ್ನಿ ಶಾಲು ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು ಎಂದು ಜನ ಹೇಳುತ್ತಿದ್ದರು. ರಾಮಸಾಗರ್ ತನ್ನ ಪತ್ನಿ ಶಾಲುಗಳನ್ನು ಒಂದು ವರ್ಷದ ಹಿಂದೆ ರಾಯ್ ಬರೇಲಿಯಿಂದ ಅಪಹರಿಸಿ, ತನ್ನೊಂದಿಗೆ ವಾಸಿಸಲು ಪ್ರಾರಂಭಿಸಿದ್ದ ಎಂದು ರಾಮಸಾಗರ್ ತಾಯಿ ತಿಳಿಸಿದ್ದಾರೆ. ರಾಮಸಾಗರ್ ಇಷ್ಟೊಂದು ಕ್ರೂರವಾಗಿ ಕೊಲ್ಲುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮಹಿಳೆಯ ಶವವನ್ನು ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಎಸೆದಿರುವ ಬಗ್ಗೆ ಮಾಹಿತಿ ದೊರೆತ ನಂತರ ಗ್ರಾಮದಲ್ಲಿ ಭಾರೀ ಸಂಚಲನ ಉಂಟಾಗಿದೆ.

ಇದನ್ನೂ ಓದಿ: ದೇಶದೊಳಗೆ ನುಗ್ಗಿದ್ದ ವ್ಯಕ್ತಿ "ಡೇಂಜರಸ್​ ಅಲ್ಲ": ಎನ್​ಐಎಗೆ ಬಂದಿದ್ದು ಸುಳ್ಳು ಇಮೇಲ್​, ತನಿಖೆಯಲ್ಲಿ ದೃಢ

ಕಾನ್ಪುರ (ಉತ್ತರ ಪ್ರದೇಶ): ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ಶ್ರದ್ಧಾಳನ್ನು ಹಲವು ತುಂಡುಗಳಾಗಿ ಕತ್ತರಿಸಿದ ಹತ್ಯೆ ಮಾಡಿದ ರೀತಿಯಲ್ಲೇ ಕಾನ್ಪುರದ ಸಾಧ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಅಂತಹುದೇ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಹೌದು, ಶ್ರದ್ಧಾಳ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಪತಿಯೇ ಪತ್ನಿಯನ್ನು ತುಂಡರಿಸಿದ ಕೊಲೆ ಮಾಡಿರುವ ಮತ್ತೊಂದು ಪ್ರಕರಣ ಜರುಗಿದೆ.

ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಕತ್ತರಿಸಿದ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ದಕ್ಷಿಣ ಡಿಸಿಪಿ ಹೇಳಿದ್ದೇನು?: ಫೆಬ್ರವರಿ 24ರಂದು ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ದೇಹ ತೀವ್ರವಾಗಿ ಛಿದ್ರವಾಗಿದ್ದು, ಪ್ಲಾಸ್ಟಿಕ್ ಚೀಲಗಳಲ್ಲಿ ರಸ್ತೆಬದಿ ಬಿದ್ದಿತ್ತು. ಪ್ರಕರಣದ ಬೆನ್ನುಬಿದ್ದ ಪೊಲೀಸರು, ಫತೇಪುರದ ಜೆಹಾನಾಬಾದ್‌ನ ದ್ವಾರಿಕಾಪುರ ಜಟ್‌ನ ನಿವಾಸಿ ಶಾಲು ಎಂದು ಮೃತರ ಗುರುತು ಪತ್ತೆ ಹಚ್ಚಲಾಗಿದೆ. ಮಹಿಳೆ ಶಾಲು ಮನೆಯಿಂದ ನಾಪತ್ತೆಯಾಗಿತ್ತು. ತನಿಖೆಯ ನಂತರ ಆಕೆಯ ಪತಿ ಹಾಗೂ ಘಟನೆಯ ಪ್ರಮುಖ ಆರೋಪಿ ರಾಮಸಾಗರ್ ಹರಿತವಾದ ಆಯುಧದಿಂದ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದರ ಬಳಿಕ ಅವರ ಸಹೋದರರಾದ ಶಿವಸಾಗರ್ ಮತ್ತು ವಿದ್ಯಾಸಾಗರ್ ಮತ್ತು ಆಟೋ ಚಾಲಕರಾದ ಮೋನು ಮತ್ತು ನೀರಜ್ ತಿವಾರಿ ಅವರೊಂದಿಗೆ ಮೃತ ದೇಹವನ್ನು ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ರಸ್ತೆಬದಿಯಲ್ಲಿ ಎಸೆದಿದ್ದಾರೆ ಎಂದು ದಕ್ಷಿಣ ಡಿಸಿಪಿ ಸಲ್ಮಾನ್ ತಾಜ್ ಪಾಟೀಲ್ ಮಾಹಿತಿ ನೀಡಿದರು.

ಪ್ರಮುಖ ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸ್​: ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಪೊಲೀಸರು ವಿದ್ಯಾಸಾಗರ್, ಮೋನು ಮತ್ತು ನೀರಜ್ ಅವರನ್ನು ಬಂಧಿಸಿದ್ದಾರೆ. ಎಲ್ಲರೂ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಮುಖ ಆರೋಪಿ ರಾಮ್‌ಸಾಗರ್‌ ತಲೆಮರಿಸಿಕೊಂಡಿದ್ದಾನೆ. ಬಂಧಿತ ಆರೋಪಿಗಳನ್ನು ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿದ್ದು, ಅವರ ಹೇಳಿಕೆಗಳ ಆಧಾರದ ಮೇಲೆ ರಾಮಸಾಗರ್‌ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದಕ್ಷಿಣ ಡಿಸಿಪಿ ತಿಳಿಸಿದರು.

ಗ್ರಾಮದಲ್ಲಿ ಭಾರೀ ಸಂಚಲನ: ಬುಧವಾರ ಈ ಘಟನೆ ಬೆಳಕಿಗೆ ಬಂದ ತಕ್ಷಣ ಗ್ರಾಮಸ್ಥರೆಲ್ಲರೂ ಬೆಚ್ಚಿಬಿದ್ದಾರೆ. ಪತಿ ರಾಮಸಾಗರ ಮತ್ತು ಆತನ ಪತ್ನಿ ಶಾಲು ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು ಎಂದು ಜನ ಹೇಳುತ್ತಿದ್ದರು. ರಾಮಸಾಗರ್ ತನ್ನ ಪತ್ನಿ ಶಾಲುಗಳನ್ನು ಒಂದು ವರ್ಷದ ಹಿಂದೆ ರಾಯ್ ಬರೇಲಿಯಿಂದ ಅಪಹರಿಸಿ, ತನ್ನೊಂದಿಗೆ ವಾಸಿಸಲು ಪ್ರಾರಂಭಿಸಿದ್ದ ಎಂದು ರಾಮಸಾಗರ್ ತಾಯಿ ತಿಳಿಸಿದ್ದಾರೆ. ರಾಮಸಾಗರ್ ಇಷ್ಟೊಂದು ಕ್ರೂರವಾಗಿ ಕೊಲ್ಲುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮಹಿಳೆಯ ಶವವನ್ನು ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಎಸೆದಿರುವ ಬಗ್ಗೆ ಮಾಹಿತಿ ದೊರೆತ ನಂತರ ಗ್ರಾಮದಲ್ಲಿ ಭಾರೀ ಸಂಚಲನ ಉಂಟಾಗಿದೆ.

ಇದನ್ನೂ ಓದಿ: ದೇಶದೊಳಗೆ ನುಗ್ಗಿದ್ದ ವ್ಯಕ್ತಿ "ಡೇಂಜರಸ್​ ಅಲ್ಲ": ಎನ್​ಐಎಗೆ ಬಂದಿದ್ದು ಸುಳ್ಳು ಇಮೇಲ್​, ತನಿಖೆಯಲ್ಲಿ ದೃಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.