ETV Bharat / bharat

Tokyo Olympic ಪದಕ ಗೆದ್ರೆ ತಮಿಳುನಾಡು ಸರ್ಕಾರದಿಂದ ಬಂಪರ್​ ಬಹುಮಾನ

author img

By

Published : Jun 27, 2021, 1:10 PM IST

Updated : Jun 27, 2021, 2:48 PM IST

Tokyo Olympic​ಗೆ ತಮಿಳುನಾಡಿನಿಂದ ದೋಣಿ ಓಟ ಸ್ಪರ್ಧೆಯಲ್ಲಿ ನೇತ್ರಾ ಕುಮನಾನ್, ವರುಣ್ ಥಕ್ಕರ್, ಕೆ.ಸಿ.ಗಣಪತಿ, ಟೇಬಲ್ ಟೆನ್ನಿಸ್​​ನಲ್ಲಿ ಜಿ.ಸತೀಶನ್​, ಎ. ಶರತ್​ ಕಮಲ್​, ​ಫೆನ್ಸಿಂಗ್​​ನಲ್ಲಿ ಭವಾನಿ ದೇವಿ ಆಯ್ಕೆಯಾಗಿದ್ದಾರೆ. ಇವರು ಗೆದ್ದು ಬಂದರೆ ತಲಾ ಮೂರು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ.

Tamil Nadu announces Rs 3 cr for athletes who win gold in Tokyo Olympics
ಟೋಕಿಯೋ ಒಲಿಂಪಿಕ್​ನಲ್ಲಿ ಗೆದ್ದರೆ 3 ಕೋಟಿ ರೂಪಾಯಿ: ತಮಿಳುನಾಡು ಸರ್ಕಾರ ಘೋಷಣೆ

ಚೆನ್ನೈ(ತಮಿಳುನಾಡು): ಮುಂಬರುವ ಟೋಕಿಯೊ ಒಲಿಂಪಿಕ್​​ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮೂರು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭರ್ಜರಿ ಆಫರ್​ ಘೋಷಿಸಿದ್ದಾರೆ.

ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ರೀಡಾಪಟುಗಳಿಗೆ ವಿಶೇಷ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್ ಜುಲೈ 23ರಿಂದ ಜಪಾನ್​ನ ಟೋಕಿಯೊದಲ್ಲಿ ಆರಂಭವಾಗುವ​ ಒಲಿಂಪಿಕ್​​ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮೂರು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಇದರ ಜೊತೆಗೆ ಬೆಳ್ಳಿಯ ಪದಕ ಗೆದ್ದವರಿಗೆ ಎರಡು ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದು ಸ್ಟಾಲಿನ್​​ ಘೋಷಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ-ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ

ಟೋಕಿಯೊ ಒಲಿಂಪಿಕ್​​ಗೆ ತಮಿಳುನಾಡಿನಿಂದ ದೋಣಿ ಓಟ ಸ್ಪರ್ಧೆಯಲ್ಲಿ ನೇತ್ರಾ ಕುಮನಾನ್, ವರುಣ್ ಥಕ್ಕರ್, ಕೆ.ಸಿ. ಗಣಪತಿ, ಟೇಬಲ್ ಟೆನ್ನಿಸ್​​ನಲ್ಲಿ ಜಿ.ಸತೀಶನ್​, ಎ. ಶರತ್​ ಕಮಲ್​, ​ಫೆನ್ಸಿಂಗ್​​ನಲ್ಲಿ ಭವಾನಿ ದೇವಿ ಮತ್ತು ಪ್ಯಾರಾ ಒಲಿಂಪಿಕ್​​ ಹೈಜಂಪ್​ನಲ್ಲಿ ಟಿ.ಮಾರಿಯಪ್ಪನ್ ಭಾಗವಹಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಟೋಕಿಯೊ ಒಲಿಂಪಿಕ್​ನಲ್ಲಿ ಭಾಗವಹಿಸುವ ಅಥ್ಲಿಟ್​ಗಳಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿತ್ತು.

ಚೆನ್ನೈ(ತಮಿಳುನಾಡು): ಮುಂಬರುವ ಟೋಕಿಯೊ ಒಲಿಂಪಿಕ್​​ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮೂರು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭರ್ಜರಿ ಆಫರ್​ ಘೋಷಿಸಿದ್ದಾರೆ.

ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ರೀಡಾಪಟುಗಳಿಗೆ ವಿಶೇಷ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್ ಜುಲೈ 23ರಿಂದ ಜಪಾನ್​ನ ಟೋಕಿಯೊದಲ್ಲಿ ಆರಂಭವಾಗುವ​ ಒಲಿಂಪಿಕ್​​ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮೂರು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಇದರ ಜೊತೆಗೆ ಬೆಳ್ಳಿಯ ಪದಕ ಗೆದ್ದವರಿಗೆ ಎರಡು ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದು ಸ್ಟಾಲಿನ್​​ ಘೋಷಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ-ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ

ಟೋಕಿಯೊ ಒಲಿಂಪಿಕ್​​ಗೆ ತಮಿಳುನಾಡಿನಿಂದ ದೋಣಿ ಓಟ ಸ್ಪರ್ಧೆಯಲ್ಲಿ ನೇತ್ರಾ ಕುಮನಾನ್, ವರುಣ್ ಥಕ್ಕರ್, ಕೆ.ಸಿ. ಗಣಪತಿ, ಟೇಬಲ್ ಟೆನ್ನಿಸ್​​ನಲ್ಲಿ ಜಿ.ಸತೀಶನ್​, ಎ. ಶರತ್​ ಕಮಲ್​, ​ಫೆನ್ಸಿಂಗ್​​ನಲ್ಲಿ ಭವಾನಿ ದೇವಿ ಮತ್ತು ಪ್ಯಾರಾ ಒಲಿಂಪಿಕ್​​ ಹೈಜಂಪ್​ನಲ್ಲಿ ಟಿ.ಮಾರಿಯಪ್ಪನ್ ಭಾಗವಹಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಟೋಕಿಯೊ ಒಲಿಂಪಿಕ್​ನಲ್ಲಿ ಭಾಗವಹಿಸುವ ಅಥ್ಲಿಟ್​ಗಳಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿತ್ತು.

Last Updated : Jun 27, 2021, 2:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.