ETV Bharat / bharat

ತಂದೆಯ ಜೀವನಾಧರಿಸಿ ಮಗನಿಂದಲೇ PhD: 2016ರಿಂದಲೂ ನಡೆದಿದೆ ಸಂಶೋಧನೆ - ರೇಷ್ಮಾಲಾಲ್​ ಜಂಗಡೆ

ತಂದೆ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ಮಗನೋರ್ವ ಸಂಶೋಧನೆ ಮಾಡ್ತಿದ್ದು, ಈ ತಿಂಗಳಲ್ಲಿ ಅವರಿಗೆ ಪಿಹೆಚ್​ಡಿ ಸಹ ಸಿಗಲಿದೆ.

Chhattisgarh freedom fighter Reshamlal Jangde
Chhattisgarh freedom fighter Reshamlal Jangde
author img

By

Published : Apr 7, 2022, 9:35 PM IST

ರಾಯ್ಪುರ್​(ಛತ್ತೀಸ್​ಗಢ): ವಿವಿಧ ವಿಷಯ, ಜನಪ್ರಿಯ ವ್ಯಕ್ತಿ, ವಿದ್ವಾಂಸರ ಮೇಲೆ ಪಿಹೆಚ್​​ಡಿ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಮಗ ತನ್ನ ತಂದೆಯ ಜೀವನಾಧರಿಸಿ ಸಂಶೋಧನೆ ಮಾಡಲು ಮುಂದಾಗಿದ್ದು, ಕೆಲ ದಿನಗಳಲ್ಲೇ ಪ್ರಬಂಧ ಮಂಡನೆ ಮಾಡಲಿದ್ದಾರೆ. ಛತ್ತೀಸ್​ಗಢದ ರಾಜಧಾನಿ ರಾಯ್ಪುರ್​​ದಲ್ಲಿ ವಾಸವಾಗಿರುವ ಹೇಮಚಂದ್ರ ಜಂಗ್ಡೆ ತಮ್ಮ ತಂದೆ ದಿವಂಗತ ರೇಷ್ಮಾಲಾಲ್​ ಜಂಗಡೆ ಮೇಲೆ ಪಿಹೆಚ್​ಡಿ ಮಾಡ್ತಿದ್ದಾರೆ.


ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್ ಜಂಗಡೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಮಗ ಹೇಮಚಂದ್ರ ಜಂಗಡೆ ಇದೀಗ ತಮ್ಮ ತಂದೆಯ ಜೀವನದ ವಿವಿಧ ವಿಚಾರಗಳನ್ನಿಟ್ಟುಕೊಂಡು ಪಿಹೆಚ್​ಡಿ ಮಾಡ್ತಿದ್ದಾರೆ.

ರವಿಶಂಕರ್​ ಶುಕ್ಲಾ ವಿಶ್ವವಿದ್ಯಾಲಯದಿಂದ ಈ ಸಂಶೋಧನೆ ಮಾಡ್ತಿದ್ದು, ಇದೇ ತಿಂಗಳು ಪೂರ್ಣಗೊಳ್ಳಲಿದೆ ಎಂದು ಹೇಮಚಂದ್ರ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.2014ರಲ್ಲಿ ರೇಷ್ಮಾಲಾಲ್ ಜಂಗಡೆ ತೀರಿಕೊಂಡಿದ್ದು, ಅವರು ಮಾಡಿರುವ ಸಾಮಾಜಮುಖಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಮಚಂದ್ರ ಹೇಳಿದ್ದಾರೆ.

ಇದನ್ನೂ ಓದಿ: 'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್‌ ಅವರನ್ನೊಮ್ಮೆ ನೋಡಿ!

ನಮ್ಮ ತಂದೆ ರೇಷ್ಮಾಲಾಲ್​ ತಮ್ಮ ಇಡೀ ಜೀವನವನ್ನು ಬಡವರು, ದೀನದಲಿತ, ಶೋಷಿತ ಮಕ್ಕಳ ಉನ್ನತಿಗಾಗಿ ಮುಡಿಪಾಗಿಟ್ಟಿದ್ದು, 2016ರಿಂದ ಅವರ ಮೇಲೆ ಸಂಶೋಧನೆ ಮಾಡಲು ಮುಂದಾಗಿದ್ದೇನೆ. ಕೋವಿಡ್​ನಿಂದಾಗಿ ಮಾಹಿತಿ ಕಲೆ ಹಾಕಲು ಸ್ವಲ್ಪ ವಿಳಂಬವಾಯಿತು ಎಂದಿದ್ದಾರೆ. ರೇಷ್ಮಾಲಾಲ್​ 1950ರಿಂದ 1991ರವರೆಗೆ ನಾಲ್ಕು ಸಲ ಸಂಸದರಾಗಿ ಆಯ್ಕೆಯಾಗಿದ್ದು,ಅನೇಕ ರೀತಿಯ ಜನಪ್ರಿಯ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದು, ಸಾಧ್ಯವಾದ ಎಲ್ಲ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ರಾಯ್ಪುರ್​(ಛತ್ತೀಸ್​ಗಢ): ವಿವಿಧ ವಿಷಯ, ಜನಪ್ರಿಯ ವ್ಯಕ್ತಿ, ವಿದ್ವಾಂಸರ ಮೇಲೆ ಪಿಹೆಚ್​​ಡಿ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಮಗ ತನ್ನ ತಂದೆಯ ಜೀವನಾಧರಿಸಿ ಸಂಶೋಧನೆ ಮಾಡಲು ಮುಂದಾಗಿದ್ದು, ಕೆಲ ದಿನಗಳಲ್ಲೇ ಪ್ರಬಂಧ ಮಂಡನೆ ಮಾಡಲಿದ್ದಾರೆ. ಛತ್ತೀಸ್​ಗಢದ ರಾಜಧಾನಿ ರಾಯ್ಪುರ್​​ದಲ್ಲಿ ವಾಸವಾಗಿರುವ ಹೇಮಚಂದ್ರ ಜಂಗ್ಡೆ ತಮ್ಮ ತಂದೆ ದಿವಂಗತ ರೇಷ್ಮಾಲಾಲ್​ ಜಂಗಡೆ ಮೇಲೆ ಪಿಹೆಚ್​ಡಿ ಮಾಡ್ತಿದ್ದಾರೆ.


ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್ ಜಂಗಡೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಮಗ ಹೇಮಚಂದ್ರ ಜಂಗಡೆ ಇದೀಗ ತಮ್ಮ ತಂದೆಯ ಜೀವನದ ವಿವಿಧ ವಿಚಾರಗಳನ್ನಿಟ್ಟುಕೊಂಡು ಪಿಹೆಚ್​ಡಿ ಮಾಡ್ತಿದ್ದಾರೆ.

ರವಿಶಂಕರ್​ ಶುಕ್ಲಾ ವಿಶ್ವವಿದ್ಯಾಲಯದಿಂದ ಈ ಸಂಶೋಧನೆ ಮಾಡ್ತಿದ್ದು, ಇದೇ ತಿಂಗಳು ಪೂರ್ಣಗೊಳ್ಳಲಿದೆ ಎಂದು ಹೇಮಚಂದ್ರ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.2014ರಲ್ಲಿ ರೇಷ್ಮಾಲಾಲ್ ಜಂಗಡೆ ತೀರಿಕೊಂಡಿದ್ದು, ಅವರು ಮಾಡಿರುವ ಸಾಮಾಜಮುಖಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಮಚಂದ್ರ ಹೇಳಿದ್ದಾರೆ.

ಇದನ್ನೂ ಓದಿ: 'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್‌ ಅವರನ್ನೊಮ್ಮೆ ನೋಡಿ!

ನಮ್ಮ ತಂದೆ ರೇಷ್ಮಾಲಾಲ್​ ತಮ್ಮ ಇಡೀ ಜೀವನವನ್ನು ಬಡವರು, ದೀನದಲಿತ, ಶೋಷಿತ ಮಕ್ಕಳ ಉನ್ನತಿಗಾಗಿ ಮುಡಿಪಾಗಿಟ್ಟಿದ್ದು, 2016ರಿಂದ ಅವರ ಮೇಲೆ ಸಂಶೋಧನೆ ಮಾಡಲು ಮುಂದಾಗಿದ್ದೇನೆ. ಕೋವಿಡ್​ನಿಂದಾಗಿ ಮಾಹಿತಿ ಕಲೆ ಹಾಕಲು ಸ್ವಲ್ಪ ವಿಳಂಬವಾಯಿತು ಎಂದಿದ್ದಾರೆ. ರೇಷ್ಮಾಲಾಲ್​ 1950ರಿಂದ 1991ರವರೆಗೆ ನಾಲ್ಕು ಸಲ ಸಂಸದರಾಗಿ ಆಯ್ಕೆಯಾಗಿದ್ದು,ಅನೇಕ ರೀತಿಯ ಜನಪ್ರಿಯ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದು, ಸಾಧ್ಯವಾದ ಎಲ್ಲ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.