ETV Bharat / bharat

ಸಂಜಯ್​ ರಾವುತ್​ ಇಂದು ಇಡಿ ವಿಚಾರಣೆಗೆ ಹಾಜರಾಗ್ತಾರಾ?

author img

By

Published : Jun 28, 2022, 9:21 AM IST

Updated : Jun 28, 2022, 9:29 AM IST

ಭಾನುವಾರ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ರಾವುತ್​, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಮರಾಠಿಯಲ್ಲಿ ಜೀವಂತ ಶವ ಎಂಬುದು ಒಂದು ಪದ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು.

ಸಂಜಯ್​ ರಾವುತ್​ ಇಂದು ಇಡಿ ವಿಚಾರಣೆಗೆ ಹಾಜರಾಗುತ್ತಾರಾ?
ಸಂಜಯ್​ ರಾವುತ್​ ಇಂದು ಇಡಿ ವಿಚಾರಣೆಗೆ ಹಾಜರಾಗುತ್ತಾರಾ?

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ ಸಂಭವಿಸಿರುವ ನಡುವೆ, ಶಿವಸೇನಾ ನಾಯಕ ಸಂಜಯ್​ ರಾವುತ್​ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿದೆ. ಕೆಲಸ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗಲ್ಲ ಎಂದು ಸಂಜಯ್​ ರಾವತ್ ನಿನ್ನೆಯೇ ಹೇಳಿದ್ದಾರೆ. ಹಾಗಾಗಿ ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಸಂಜಯ್​ ರಾವುತ್​ ವಿಚಾರಣೆಗೆ ಹಾಜರಾಗದಿದ್ದರೆ ಇಡಿ ಏನು ಮಾಡುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಬಂಡಾಯ ಶಾಸಕರನ್ನು ಉದ್ದೇಶಿಸಿ ಸಂಜಯ್​ ರಾವುತ್ ಟ್ವೀಟ್ ಸಮರ ಸಾರಿದ್ದಾರೆ. ಅಜ್ಞಾನವು ಒಂದು ರೀತಿಯ ಸಾವು.. ಮತ್ತು ಅಜ್ಞಾನ ಎಂಬುದು ಚಲಿಸುವ ಶವದಂತೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಇಂತಹದ್ದೇ ಹೇಳಿಕೆಗಳನ್ನು ಸಂಜಯ್​ ರಾವುತ್​ ನೀಡುತ್ತಿದ್ದಾರೆ. ಭಾನುವಾರ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ರಾವುತ್​, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಮರಾಠಿಯಲ್ಲಿ ಜೀವಂತ ಶವ ಎಂಬುದು ಒಂದು ಪದ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು.

ಏನಿದು ಪ್ರಕರಣ: ಗೋರೆಗಾಂವ್‌ನ ಪತ್ರಾಚಲ್ ಜಮೀನು ಪ್ರಕರಣದಲ್ಲಿ ಸಂಜಯ್ ರಾವುತ್​ ವಿರುದ್ಧ 1,034 ಕೋಟಿ ರೂ.ಗಳ ಅಕ್ರಮ ಎಸಗಲಾಗಿದೆ ಎಂಬ ಆರೋಪ ಇದೆ. ಇಲ್ಲಿನ ಅಕ್ರಮ ಹಣದಲ್ಲಿ ರಾವುತ್​ ಅವರು ಅಲಿಬಾಗ್ ನಲ್ಲಿ ಜಮೀನು ಖರೀದಿಸಿದ್ದರು ಎಂದು ಹೇಳಲಾಗಿದೆ. ಸಂಜಯ್ ರಾವುತ್ ಅವರ ಆಪ್ತ ಸ್ನೇಹಿತ ಪ್ರವೀಣ್ ರಾವುತ್ ಅವರನ್ನು ಪತ್ರಾಚಲ ಭೂ ಹಗರಣ ಪ್ರಕರಣದಲ್ಲಿ ಇಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಇದನ್ನು ಓದಿ:ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್.. ಮನವೊಲಿಸಿದ ಶರದ್ ಪವಾರ್​

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ ಸಂಭವಿಸಿರುವ ನಡುವೆ, ಶಿವಸೇನಾ ನಾಯಕ ಸಂಜಯ್​ ರಾವುತ್​ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿದೆ. ಕೆಲಸ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗಲ್ಲ ಎಂದು ಸಂಜಯ್​ ರಾವತ್ ನಿನ್ನೆಯೇ ಹೇಳಿದ್ದಾರೆ. ಹಾಗಾಗಿ ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಸಂಜಯ್​ ರಾವುತ್​ ವಿಚಾರಣೆಗೆ ಹಾಜರಾಗದಿದ್ದರೆ ಇಡಿ ಏನು ಮಾಡುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಬಂಡಾಯ ಶಾಸಕರನ್ನು ಉದ್ದೇಶಿಸಿ ಸಂಜಯ್​ ರಾವುತ್ ಟ್ವೀಟ್ ಸಮರ ಸಾರಿದ್ದಾರೆ. ಅಜ್ಞಾನವು ಒಂದು ರೀತಿಯ ಸಾವು.. ಮತ್ತು ಅಜ್ಞಾನ ಎಂಬುದು ಚಲಿಸುವ ಶವದಂತೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಇಂತಹದ್ದೇ ಹೇಳಿಕೆಗಳನ್ನು ಸಂಜಯ್​ ರಾವುತ್​ ನೀಡುತ್ತಿದ್ದಾರೆ. ಭಾನುವಾರ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ರಾವುತ್​, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಮರಾಠಿಯಲ್ಲಿ ಜೀವಂತ ಶವ ಎಂಬುದು ಒಂದು ಪದ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು.

ಏನಿದು ಪ್ರಕರಣ: ಗೋರೆಗಾಂವ್‌ನ ಪತ್ರಾಚಲ್ ಜಮೀನು ಪ್ರಕರಣದಲ್ಲಿ ಸಂಜಯ್ ರಾವುತ್​ ವಿರುದ್ಧ 1,034 ಕೋಟಿ ರೂ.ಗಳ ಅಕ್ರಮ ಎಸಗಲಾಗಿದೆ ಎಂಬ ಆರೋಪ ಇದೆ. ಇಲ್ಲಿನ ಅಕ್ರಮ ಹಣದಲ್ಲಿ ರಾವುತ್​ ಅವರು ಅಲಿಬಾಗ್ ನಲ್ಲಿ ಜಮೀನು ಖರೀದಿಸಿದ್ದರು ಎಂದು ಹೇಳಲಾಗಿದೆ. ಸಂಜಯ್ ರಾವುತ್ ಅವರ ಆಪ್ತ ಸ್ನೇಹಿತ ಪ್ರವೀಣ್ ರಾವುತ್ ಅವರನ್ನು ಪತ್ರಾಚಲ ಭೂ ಹಗರಣ ಪ್ರಕರಣದಲ್ಲಿ ಇಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಇದನ್ನು ಓದಿ:ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್.. ಮನವೊಲಿಸಿದ ಶರದ್ ಪವಾರ್​

Last Updated : Jun 28, 2022, 9:29 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.