ETV Bharat / bharat

ಅಯ್ಯೋ ದೇವರೇ.. ಚಿತ್ತೂರಿನಲ್ಲಿ ಹೊತ್ತಿ ಉರಿದ ಕಾರು.. ಮಗು ಸೇರಿ ಏಳು ಮಂದಿ ದುರ್ಮರಣ

author img

By

Published : Dec 5, 2021, 4:33 PM IST

Updated : Dec 5, 2021, 10:31 PM IST

ಚಿತ್ತೂರಿನ ಪುತಲಪಟ್ಟು-ನಾಯ್ಡುಪೇಟೆ ಹೆದ್ದಾರಿಯ ಅಗರಾಳ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಉರುಳಿ ಬಿದ್ದಿದ್ದರಿದಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಾರಿಲ್ಲಿನಲ್ಲಿದ್ದ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

road acciden
ಚಿತ್ತೂರಿನಲ್ಲಿ ಹೊತ್ತಿ ಉರಿದ ಕಾರು

ಚಿತ್ತೂರು : ಚಿತ್ತೂರು ಜಿಲ್ಲೆಯಲ್ಲಿ ಘೋರ ರಸ್ತೆ ಅಪಘಾತವೊಂದರಲ್ಲಿ ಕಾರೊಂದು ಹೊತ್ತಿ ಉರಿದು ಮಗು ಸೇರಿ ಏಳು ಮಂದಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಭಾನುವಾರ ನಡೆದಿದೆ.

ಪುತಲಪಟ್ಟು-ನಾಯ್ಡುಪೇಟೆ ಹೆದ್ದಾರಿಯ ಅಗರಾಳ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಉರುಳಿ ಬಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಾರಿನಲ್ಲಿದ್ದ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರು ಅದೃಷ್ಟವಶಾತ್​ ಬದುಕುಳಿದಿದ್ದಾರೆ. ತೀವ್ರ ಸುಟ್ಟ ಗಾಯಗಳೊಂದಿಗೆ ತಿರುಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: 'ನಿಮ್ಮ ಮಕ್ಕಳ ಮೇಲೆ ನೀವು ಲಾಠಿ ಬೀಸ್ತೀರಾ'.. ಯೋಗಿ ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಮತ್ತೆ ಗರಂ

ಮೃತರು ವಿಜಯನಗರ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದ ಕಾರಿನ ಸಂಖ್ಯೆ ಎಪಿ39 ಎಚ್ಎ 4003 ಎಂದು ಗುರುತಿಸಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಚಿತ್ತೂರು : ಚಿತ್ತೂರು ಜಿಲ್ಲೆಯಲ್ಲಿ ಘೋರ ರಸ್ತೆ ಅಪಘಾತವೊಂದರಲ್ಲಿ ಕಾರೊಂದು ಹೊತ್ತಿ ಉರಿದು ಮಗು ಸೇರಿ ಏಳು ಮಂದಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಭಾನುವಾರ ನಡೆದಿದೆ.

ಪುತಲಪಟ್ಟು-ನಾಯ್ಡುಪೇಟೆ ಹೆದ್ದಾರಿಯ ಅಗರಾಳ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಉರುಳಿ ಬಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಾರಿನಲ್ಲಿದ್ದ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರು ಅದೃಷ್ಟವಶಾತ್​ ಬದುಕುಳಿದಿದ್ದಾರೆ. ತೀವ್ರ ಸುಟ್ಟ ಗಾಯಗಳೊಂದಿಗೆ ತಿರುಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: 'ನಿಮ್ಮ ಮಕ್ಕಳ ಮೇಲೆ ನೀವು ಲಾಠಿ ಬೀಸ್ತೀರಾ'.. ಯೋಗಿ ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಮತ್ತೆ ಗರಂ

ಮೃತರು ವಿಜಯನಗರ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದ ಕಾರಿನ ಸಂಖ್ಯೆ ಎಪಿ39 ಎಚ್ಎ 4003 ಎಂದು ಗುರುತಿಸಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.

Last Updated : Dec 5, 2021, 10:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.