ETV Bharat / bharat

ಪಂಜಾಬ್ ವಿತ್ತ ಸಚಿವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಗುತ್ತಿಗೆ ನೌಕರರನ್ನು ತೆರವುಗೊಳಿಸಿದ ಪೊಲೀಸರು

author img

By

Published : Dec 4, 2021, 8:05 PM IST

ಕೆಲ ದಿನಗಳಿಂದಲೂ ಪಂಜಾಬ್​​ನ ವಿವಿಧ ಭಾಗದಲ್ಲಿ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್ ಸರ್ಕಾರದ ವಿರುದ್ಧ ನೌಕರರು ಆಕ್ರೋಶ ಹೊರಹಾಕುತ್ತಿದ್ದಾರೆ.

Punjab Police remove contractual employees from the spot
ಗುತ್ತಿಗೆ ನೌಕರನ್ನು ತೆರವುಗೊಳಿಸಿದ ಪೊಲೀಸರು

ಬಟಿಂಡಾ (ಪಂಜಾಬ್​​): ರಾಜ್ಯ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್ ಅವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಗುತ್ತಿಗೆ ನೌಕರರನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಪಂಜಾಬ್​​ನ ವಿವಿಧೆಡೆ ಗುತ್ತಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಂಜಾಬ್ ವಿತ್ತ ಸಚಿವರಿಗೆ ಘೇರಾವ್ ಹಾಕಲು ನೆರೆದಿದ್ದ ಗುತ್ತಿಗೆ ನೌಕರರನ್ನು ತೆರವುಗೊಳಿಸಿದ ಪೊಲೀಸರು

ಇದೀಗ ರಾಜ್ಯ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್​ ಅವರು ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ನೌಕರರು ಘೇರಾವ್​ ಹಾಕಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾ ನಿರತ ನೌಕರರನ್ನು ತೆರವುಗೊಳಿಸಿದರು. ಜೊತೆಗೆ ಕೆಲವರನ್ನು ವಶಕ್ಕೆ ಪಡೆದರು. ಈ ವೇಳೆ ಪಂಜಾಬ್ ಸರ್ಕಾರದ ವಿರುದ್ಧ ನೌಕರರು ಘೋಷಣೆ ಕೂಗಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರದೊಂದಿಗೆ ಮಾತುಕತೆ.. ಮಾಹಿತಿ ನೀಡಿದ ಸಂಯುಕ್ತ ಕಿಸಾನ್​​ ಮೋರ್ಚಾ

ಬಟಿಂಡಾ (ಪಂಜಾಬ್​​): ರಾಜ್ಯ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್ ಅವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಗುತ್ತಿಗೆ ನೌಕರರನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಪಂಜಾಬ್​​ನ ವಿವಿಧೆಡೆ ಗುತ್ತಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಂಜಾಬ್ ವಿತ್ತ ಸಚಿವರಿಗೆ ಘೇರಾವ್ ಹಾಕಲು ನೆರೆದಿದ್ದ ಗುತ್ತಿಗೆ ನೌಕರರನ್ನು ತೆರವುಗೊಳಿಸಿದ ಪೊಲೀಸರು

ಇದೀಗ ರಾಜ್ಯ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್​ ಅವರು ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ನೌಕರರು ಘೇರಾವ್​ ಹಾಕಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾ ನಿರತ ನೌಕರರನ್ನು ತೆರವುಗೊಳಿಸಿದರು. ಜೊತೆಗೆ ಕೆಲವರನ್ನು ವಶಕ್ಕೆ ಪಡೆದರು. ಈ ವೇಳೆ ಪಂಜಾಬ್ ಸರ್ಕಾರದ ವಿರುದ್ಧ ನೌಕರರು ಘೋಷಣೆ ಕೂಗಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರದೊಂದಿಗೆ ಮಾತುಕತೆ.. ಮಾಹಿತಿ ನೀಡಿದ ಸಂಯುಕ್ತ ಕಿಸಾನ್​​ ಮೋರ್ಚಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.