ETV Bharat / bharat

ಹೆಲ್ಮೆಟ್​ ಜಾಗೃತಿಗೆ ಏಂಜೆಲೋ ಮ್ಯಾಥ್ಯೂಸ್​ 'ಟೈಂ ಔಟ್​' ಬಳಕೆ: ಒಡಿಶಾ ಸಾರಿಗೆ ಅಧಿಕಾರಿಗಳ ಸೃಜನಶೀಲತೆಗೆ ಮೆಚ್ಚುಗೆ

author img

By ETV Bharat Karnataka Team

Published : Nov 8, 2023, 7:32 PM IST

ಒಡಿಶಾ ಸಾರಿಗೆ ಇಲಾಖೆ ಅಧಿಕಾರಿಗಳು ಜನರಲ್ಲಿ ಹೆಲ್ಮೆಟ್​ ಜಾಗೃತಿ ಮೂಡಿಸಲು ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್​ರ ಟೈಂ ಔಟ್​ ಪ್ರಸಂಗವನ್ನು ಬಳಸಿಕೊಂಡಿದ್ದಾರೆ.

ಏಂಜೆಲೋ ಮ್ಯಾಥ್ಯೂಸ್​ ಟೈಂ ಔಟ್​
ಏಂಜೆಲೋ ಮ್ಯಾಥ್ಯೂಸ್​ ಟೈಂ ಔಟ್​

ಭುವನೇಶ್ವರ (ಒಡಿಶಾ) : ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್‌ಟಿಎ) ಶ್ರೀಲಂಕಾ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್‌ರ 'ಟೈಂ ಔಟ್​' ಅನ್ನು ಬಳಸಿಕೊಂಡಿದೆ. ಹೆಲ್ಮೆಟ್​ ಇಲ್ಲದೇ ಸಂಚಾರ ನಡೆಸಿದಲ್ಲಿ ನಿಮ್ಮ ಟೈಂ ಕೂಡ್​ ಔಟ್​ ಆಗಲಿದೆ ಎಂದು ಉದಾಹರಿಸಿದೆ.

ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್​ ಖಾತೆಯಲ್ಲಿ ಮ್ಯಾಥ್ಯೂಸ್​ರ ಚಿತ್ರಗಳನ್ನು ಹಂಚಿಕೊಂಡಿರುವ ಎಸ್​ಟಿಎ #CWC23 #RoadSafety ಹ್ಯಾಷ್​ಟ್ಯಾಗ್​ ಹಾಕಲಾಗಿದ್ದು, ನೀವು ಹೀಗೆ ವಿಕೆಟ್ ಕಳೆದುಕೊಳ್ಳಬೇಡಿ. ಸುರಕ್ಷಿತವಾಗಿ ದೊಡ್ಡ ಇನಿಂಗ್ಸ್​ ಆಡಿ. ಯಾವಾಗಲೂ ಐಎಸ್​ಐ ಪ್ರಮಾಣೀಕೃತ ಹೆಲ್ಮೆಟ್ ಅನ್ನು ಧರಿಸಿ ಮತ್ತು ಅದರ ಪಟ್ಟಿಯನ್ನು ಕಟ್ಟಿಕೊಳ್ಳಿ. ಜೊತೆಗೆ ನಿಮ್ಮವರ ಸುರಕ್ಷತೆ ಬಗ್ಗೆಯೂ ಎಚ್ಚರ ವಹಿಸಿ. ಅದು ಆನ್​ ಫೀಲ್ಡ್ ಅಥವಾ ಆಫ್ ಫೀಲ್ಡ್ ಯಾವುದೇ ಆಗಿರಲಿ ಹೆಲ್ಮೆಟ್​ ಕಡ್ಡಾಯವಾಗಿರಲಿ ಎಂದು ಸಲಹೆ ನೀಡಿದೆ.

ಹೆಲ್ಮೆಟ್‌ಗಳ ಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿರುವ ಸಾರಿಗೆ ಅಧಿಕಾರಿಗಳು, ಕಳಪೆ ಗುಣಮಟ್ಟದ ಹೆಲ್ಮೆಟ್​ಗಳು ನಿಮ್ಮ ವಿಕೆಟ್​ (ಪ್ರಾಣ)ಗೆ ಸಂಚಕಾರ ತರುತ್ತವೆ. ಹೀಗಾಗಿ ಸಂಚಾರ ಮಾಡುವಾಗ ಉತ್ತಮ ಗುಣಮಟ್ಟದ ಶಿರಸ್ತ್ರಾಣಗಳನ್ನು ಬಳಸಬೇಕು. ಇದಕ್ಕೆ ಉದಾಹರಣೆ ನವೆಂಬರ್ 6 ರಂದು ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್ ಅವರ ವಿಕೆಟ್​ ಸಾಕ್ಷಿ ಎಂಬಂತೆ ಅವರ ಎರಡು ಫೋಟೋಗಳನ್ನು ಹಂಚಿಕೊಂಡಿದೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂಸ್ ಅವರ ಹೆಲ್ಮೆಟ್‌ನ ಪಟ್ಟಿಯು ಕಟ್​ ಆಗಿದ್ದರಿಂದ ನಿಗದಿತ 2 ನಿಮಿಷ ಕಳೆದರೂ ಬ್ಯಾಟ್​ ಮಾಡಲು ಆಗಮಿಸದ ಕಾರಣ ಅವರನ್ನು ಟೈಂ ಔಟ್​ ಎಂದು ಘೋಷಿಸಲಾಯಿತು. ಇದನ್ನೇ ಸಾರಿಗೆ ಅಧಿಕಾರಿಗಳು ಮಾರ್ಮಿಕವಾಗಿ ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ.

ಸೃಜನಶೀಲತೆಗೆ ಮೆಚ್ಚುಗೆ: ಸಾರಿಗೆ ಅಧಿಕಾರಿಗಳು ಕ್ರಿಕೆಟ್​ನ ಘಟನೆಯನ್ನು ಮಾದರಿಯಾಗಿ ನೀಡಿದ್ದಕ್ಕೆ ಸೃಜನಶೀಲತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತರಹೇವಾರಿ ಕಮೆಂಟ್​ ಮಾಡಿದ್ದಾರೆ. ಒಬ್ಬ ಬಳಕೆದಾರ ನಾವು ಹೆಲ್ಮೆಟ್ ಧರಿಸಿದ್ದರೂ, ಕೆಟ್ಟ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಕಮೆಂಟ್​ ಮಾಡಿದ್ದಾರೆ.

ಜನರಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಒಡಿಶಾ ಸಾರಿಗೆ ಅಧಿಕಾರಿಗಳು ಪ್ರಚಲಿತ ಘಟನೆಗಳನ್ನು ಉದಾಹರಿಸುವುದು ಇದೇ ಮೊದಲಲ್ಲ. ಇಂತಹ ಸೃಜನಾತ್ಮಕ ವಿಧಾನವನ್ನು ಬಳಸಿದ ಉದಾಹರಣೆಗಳಿವೆ. ಈ ಹಿಂದೆ ಹೆಲ್ಮೆಟ್ ಬಳಕೆ ಜಾಗೃತಿ ಮೂಡಿಸಲು ಸಕ್ಸಸ್​ಫುಲ್​ ಸಿನಿಮಾಗಳಾದ ಬಾಹುಬಲಿ, ಪುಷ್ಪ ಮತ್ತು ಆರ್​ಆರ್​ಆರ್​ನ ಘಟನಾವಳಿಗಳನ್ನು ಬಳಸಿಕೊಂಡಿದ್ದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದೇಶದಲ್ಲಿ ರಸ್ತೆ ಅಪಘಾತಗಳ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರದಲ್ಲಿ ಒಡಿಶಾದಲ್ಲಿ 2022 ರಲ್ಲಿ 11,663 ಅಪಘಾತಗಳಲ್ಲಿ 5,467 ಸಾವುಗಳು ದಾಖಲಾಗಿವೆ. ಈ ಪೈಕಿ 2,498 ಮಂದಿ ದ್ವಿಚಕ್ರ ವಾಹನ ಸವಾರರು ಇದ್ದಾರೆ. ಇಷ್ಟು ಸಾವುಗಳಲ್ಲಿ 1795 ಜನರು ಹೆಲ್ಮೆಟ್ ಧರಿಸದ ಕಾರಣ ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಹಣಕ್ಕಾಗಿ ಪ್ರಶ್ನೆ ಕೇಸ್​: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶಿಸಿದೆ.. ಬಿಜೆಪಿ

ಭುವನೇಶ್ವರ (ಒಡಿಶಾ) : ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್‌ಟಿಎ) ಶ್ರೀಲಂಕಾ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್‌ರ 'ಟೈಂ ಔಟ್​' ಅನ್ನು ಬಳಸಿಕೊಂಡಿದೆ. ಹೆಲ್ಮೆಟ್​ ಇಲ್ಲದೇ ಸಂಚಾರ ನಡೆಸಿದಲ್ಲಿ ನಿಮ್ಮ ಟೈಂ ಕೂಡ್​ ಔಟ್​ ಆಗಲಿದೆ ಎಂದು ಉದಾಹರಿಸಿದೆ.

ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್​ ಖಾತೆಯಲ್ಲಿ ಮ್ಯಾಥ್ಯೂಸ್​ರ ಚಿತ್ರಗಳನ್ನು ಹಂಚಿಕೊಂಡಿರುವ ಎಸ್​ಟಿಎ #CWC23 #RoadSafety ಹ್ಯಾಷ್​ಟ್ಯಾಗ್​ ಹಾಕಲಾಗಿದ್ದು, ನೀವು ಹೀಗೆ ವಿಕೆಟ್ ಕಳೆದುಕೊಳ್ಳಬೇಡಿ. ಸುರಕ್ಷಿತವಾಗಿ ದೊಡ್ಡ ಇನಿಂಗ್ಸ್​ ಆಡಿ. ಯಾವಾಗಲೂ ಐಎಸ್​ಐ ಪ್ರಮಾಣೀಕೃತ ಹೆಲ್ಮೆಟ್ ಅನ್ನು ಧರಿಸಿ ಮತ್ತು ಅದರ ಪಟ್ಟಿಯನ್ನು ಕಟ್ಟಿಕೊಳ್ಳಿ. ಜೊತೆಗೆ ನಿಮ್ಮವರ ಸುರಕ್ಷತೆ ಬಗ್ಗೆಯೂ ಎಚ್ಚರ ವಹಿಸಿ. ಅದು ಆನ್​ ಫೀಲ್ಡ್ ಅಥವಾ ಆಫ್ ಫೀಲ್ಡ್ ಯಾವುದೇ ಆಗಿರಲಿ ಹೆಲ್ಮೆಟ್​ ಕಡ್ಡಾಯವಾಗಿರಲಿ ಎಂದು ಸಲಹೆ ನೀಡಿದೆ.

ಹೆಲ್ಮೆಟ್‌ಗಳ ಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿರುವ ಸಾರಿಗೆ ಅಧಿಕಾರಿಗಳು, ಕಳಪೆ ಗುಣಮಟ್ಟದ ಹೆಲ್ಮೆಟ್​ಗಳು ನಿಮ್ಮ ವಿಕೆಟ್​ (ಪ್ರಾಣ)ಗೆ ಸಂಚಕಾರ ತರುತ್ತವೆ. ಹೀಗಾಗಿ ಸಂಚಾರ ಮಾಡುವಾಗ ಉತ್ತಮ ಗುಣಮಟ್ಟದ ಶಿರಸ್ತ್ರಾಣಗಳನ್ನು ಬಳಸಬೇಕು. ಇದಕ್ಕೆ ಉದಾಹರಣೆ ನವೆಂಬರ್ 6 ರಂದು ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್ ಅವರ ವಿಕೆಟ್​ ಸಾಕ್ಷಿ ಎಂಬಂತೆ ಅವರ ಎರಡು ಫೋಟೋಗಳನ್ನು ಹಂಚಿಕೊಂಡಿದೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂಸ್ ಅವರ ಹೆಲ್ಮೆಟ್‌ನ ಪಟ್ಟಿಯು ಕಟ್​ ಆಗಿದ್ದರಿಂದ ನಿಗದಿತ 2 ನಿಮಿಷ ಕಳೆದರೂ ಬ್ಯಾಟ್​ ಮಾಡಲು ಆಗಮಿಸದ ಕಾರಣ ಅವರನ್ನು ಟೈಂ ಔಟ್​ ಎಂದು ಘೋಷಿಸಲಾಯಿತು. ಇದನ್ನೇ ಸಾರಿಗೆ ಅಧಿಕಾರಿಗಳು ಮಾರ್ಮಿಕವಾಗಿ ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ.

ಸೃಜನಶೀಲತೆಗೆ ಮೆಚ್ಚುಗೆ: ಸಾರಿಗೆ ಅಧಿಕಾರಿಗಳು ಕ್ರಿಕೆಟ್​ನ ಘಟನೆಯನ್ನು ಮಾದರಿಯಾಗಿ ನೀಡಿದ್ದಕ್ಕೆ ಸೃಜನಶೀಲತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತರಹೇವಾರಿ ಕಮೆಂಟ್​ ಮಾಡಿದ್ದಾರೆ. ಒಬ್ಬ ಬಳಕೆದಾರ ನಾವು ಹೆಲ್ಮೆಟ್ ಧರಿಸಿದ್ದರೂ, ಕೆಟ್ಟ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಕಮೆಂಟ್​ ಮಾಡಿದ್ದಾರೆ.

ಜನರಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಒಡಿಶಾ ಸಾರಿಗೆ ಅಧಿಕಾರಿಗಳು ಪ್ರಚಲಿತ ಘಟನೆಗಳನ್ನು ಉದಾಹರಿಸುವುದು ಇದೇ ಮೊದಲಲ್ಲ. ಇಂತಹ ಸೃಜನಾತ್ಮಕ ವಿಧಾನವನ್ನು ಬಳಸಿದ ಉದಾಹರಣೆಗಳಿವೆ. ಈ ಹಿಂದೆ ಹೆಲ್ಮೆಟ್ ಬಳಕೆ ಜಾಗೃತಿ ಮೂಡಿಸಲು ಸಕ್ಸಸ್​ಫುಲ್​ ಸಿನಿಮಾಗಳಾದ ಬಾಹುಬಲಿ, ಪುಷ್ಪ ಮತ್ತು ಆರ್​ಆರ್​ಆರ್​ನ ಘಟನಾವಳಿಗಳನ್ನು ಬಳಸಿಕೊಂಡಿದ್ದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದೇಶದಲ್ಲಿ ರಸ್ತೆ ಅಪಘಾತಗಳ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರದಲ್ಲಿ ಒಡಿಶಾದಲ್ಲಿ 2022 ರಲ್ಲಿ 11,663 ಅಪಘಾತಗಳಲ್ಲಿ 5,467 ಸಾವುಗಳು ದಾಖಲಾಗಿವೆ. ಈ ಪೈಕಿ 2,498 ಮಂದಿ ದ್ವಿಚಕ್ರ ವಾಹನ ಸವಾರರು ಇದ್ದಾರೆ. ಇಷ್ಟು ಸಾವುಗಳಲ್ಲಿ 1795 ಜನರು ಹೆಲ್ಮೆಟ್ ಧರಿಸದ ಕಾರಣ ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಹಣಕ್ಕಾಗಿ ಪ್ರಶ್ನೆ ಕೇಸ್​: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶಿಸಿದೆ.. ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.