ETV Bharat / bharat

ಕೋವಿಡ್​ನಿಂದ ಸಾವು, ಅಂತ್ಯಕ್ರಿಯೆ ನಡೆಸಿ ನಾಲ್ಕು ದಿನ; ತಂದೆ ಸಾವಿನ ಬಗ್ಗೆ ಮಗನಿಗೆ ಮಾಹಿತಿ ನೀಡದ ಆಸ್ಪತ್ರೆ! - ಆಸ್ಪತ್ರೆ ನಿರ್ಲಕ್ಷ್ಯ

ಕೊರೊನಾ ವೈರಸ್​ನಿಂದ ಸಾವನ್ನಪ್ಪಿರುವ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆ ನಡೆಸಿರುವ ಆಸ್ಪತ್ರೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP man death
UP man death
author img

By

Published : Apr 24, 2021, 5:33 PM IST

ಪ್ರಯಾಗ್​ರಾಜ್​( ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದೀಗ ಅಂತಹ ಘಟನೆ ಉತ್ತರ ಪ್ರದೇಶದಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ.

ಮಹಾಮಾರಿ ಕೊರೊನಾ ವೈರಸ್​ ತಗುಲಿದ್ದ ಕಾರಣ 82 ವರ್ಷದ ಮೋತಿಲಾಲ್​​ ಅವರನ್ನ ಏಪ್ರಿಲ್​​ 13ರಂದು ಕೋವಿಡ್ ಕೇರ್​ ಸೆಂಟರ್​ಗೆ ದಾಖಲು ಮಾಡಲಾಗಿತ್ತು. ಏಪ್ರಿಲ್​ 21ರವರೆಗೆ ಕುಟುಂಬಸ್ಥರು ನೀಡುತ್ತಿದ್ದ ಆಹಾರ, ಹಣ್ಣಿನ ರಸ ಹಾಗೂ ಬಟ್ಟೆಯನ್ನ ಆಸ್ಪತ್ರೆ ಸಿಬ್ಬಂದಿ ಆತನಿಗೆ ನೀಡುತ್ತಿದ್ದರು. ಇದಾದ ಬಳಿಕ ಆತ ಆಹಾರ ಹಾಗೂ ಬಟ್ಟೆ ನಿರಾಕರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ, ತಂದೆಯೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

ಆದರೆ, ಕೋವಿಡ್​ ವಾರ್ಡ್​ನಲ್ಲಿ ತಮ್ಮ ತಂದೆ ಇಲ್ಲದಿರುವುದನ್ನ ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿದಾಗ ಚಿಕಿತ್ಸೆಗೆ ಸ್ಪಂದಿಸದೇ ಅವರು ಏಪ್ರಿಲ್​ 17ರಂದು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಜತೆಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈಗಾಗಲೇ ಅವರ ಅಂತ್ಯಕ್ರಿಯೆ ಸಹ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

UP man
ವ್ಯಕ್ತಿಯ ಮರಣ ಪ್ರಮಾಣ ಪತ್ರ

ಇದನ್ನೂ ಓದಿ: ಗರ್ಲ್​ಫ್ರೆಂಡ್​ ಕದ್ದ 'ರೆಮ್ಡೆಸಿವಿರ್' ಕಾಳ ಸಂತೆಯಲ್ಲಿ ಮಾರಾಟ.. ನರ್ಸಿಂಗ್​ ಸಿಬ್ಬಂದಿ ಅರೆಸ್ಟ್​!

ಆಸ್ಪತ್ರೆ ನಿರ್ಲಕ್ಷ್ಯದಿಂದ ತಂದೆ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿರುವುದಕ್ಕೆ ಕುಟುಂಬದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ತಮ್ಮ ತಂದೆ ಸಾವಿಗೆ ಆಸ್ಪತ್ರೆ ನೇರ ಹೊಣೆಯಾಗಿದ್ದು, ಇದಕ್ಕೆ ನ್ಯಾಯ ದೊರಕಿಸುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಪ್ರಯಾಗ್​ರಾಜ್​( ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದೀಗ ಅಂತಹ ಘಟನೆ ಉತ್ತರ ಪ್ರದೇಶದಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ.

ಮಹಾಮಾರಿ ಕೊರೊನಾ ವೈರಸ್​ ತಗುಲಿದ್ದ ಕಾರಣ 82 ವರ್ಷದ ಮೋತಿಲಾಲ್​​ ಅವರನ್ನ ಏಪ್ರಿಲ್​​ 13ರಂದು ಕೋವಿಡ್ ಕೇರ್​ ಸೆಂಟರ್​ಗೆ ದಾಖಲು ಮಾಡಲಾಗಿತ್ತು. ಏಪ್ರಿಲ್​ 21ರವರೆಗೆ ಕುಟುಂಬಸ್ಥರು ನೀಡುತ್ತಿದ್ದ ಆಹಾರ, ಹಣ್ಣಿನ ರಸ ಹಾಗೂ ಬಟ್ಟೆಯನ್ನ ಆಸ್ಪತ್ರೆ ಸಿಬ್ಬಂದಿ ಆತನಿಗೆ ನೀಡುತ್ತಿದ್ದರು. ಇದಾದ ಬಳಿಕ ಆತ ಆಹಾರ ಹಾಗೂ ಬಟ್ಟೆ ನಿರಾಕರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ, ತಂದೆಯೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

ಆದರೆ, ಕೋವಿಡ್​ ವಾರ್ಡ್​ನಲ್ಲಿ ತಮ್ಮ ತಂದೆ ಇಲ್ಲದಿರುವುದನ್ನ ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿದಾಗ ಚಿಕಿತ್ಸೆಗೆ ಸ್ಪಂದಿಸದೇ ಅವರು ಏಪ್ರಿಲ್​ 17ರಂದು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಜತೆಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈಗಾಗಲೇ ಅವರ ಅಂತ್ಯಕ್ರಿಯೆ ಸಹ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

UP man
ವ್ಯಕ್ತಿಯ ಮರಣ ಪ್ರಮಾಣ ಪತ್ರ

ಇದನ್ನೂ ಓದಿ: ಗರ್ಲ್​ಫ್ರೆಂಡ್​ ಕದ್ದ 'ರೆಮ್ಡೆಸಿವಿರ್' ಕಾಳ ಸಂತೆಯಲ್ಲಿ ಮಾರಾಟ.. ನರ್ಸಿಂಗ್​ ಸಿಬ್ಬಂದಿ ಅರೆಸ್ಟ್​!

ಆಸ್ಪತ್ರೆ ನಿರ್ಲಕ್ಷ್ಯದಿಂದ ತಂದೆ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿರುವುದಕ್ಕೆ ಕುಟುಂಬದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ತಮ್ಮ ತಂದೆ ಸಾವಿಗೆ ಆಸ್ಪತ್ರೆ ನೇರ ಹೊಣೆಯಾಗಿದ್ದು, ಇದಕ್ಕೆ ನ್ಯಾಯ ದೊರಕಿಸುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.