ETV Bharat / bharat

ಸಿಲ್ಲಿ ಫೈಟ್​​.. ಕ್ರೀಂಬನ್​ನಲ್ಲಿ ಕ್ರೀಂ ಇಲ್ಲವೆಂದು ಬೇಕರಿ ಮಾಲೀಕನ ಮೇಲೆ ಹಲ್ಲೆ ಮಾಡಿದ ಗ್ಯಾಂಗ್

author img

By

Published : May 26, 2022, 5:15 PM IST

ಕೇರಳದ ಬೇಕರಿಯೊಂದರಲ್ಲಿ ಬನ್​ ತಿನ್ನಲು ಬಂದ ಗ್ಯಾಂಗ್​ ಕ್ರೀಂ ಕಡಿಮೆ ಎಂದು ಜಗಳ ತೆಗೆದು ಬೇಕರಿ ಮಾಲೀಕ ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

no-cream-in-cream-buns-bakery
ಬೇಕರಿ ಮಾಲೀಕನ ಮೇಲೆ ಹಲ್ಲೆ ಮಾಡಿದ ಗ್ಯಾಂಗ್

ಕೊಟ್ಟಾಯಂ(ಕೇರಳ): ಬನ್​, ಐಸ್​ಕ್ರೀಂಗಾಗಿ ಮಕ್ಕಳು ಜಗಳ ಮಾಡಿದ್ದು ನೋಡಿದ್ದೇವೆ. ಆದರೆ, ಇಲ್ಲೊಂದು ಗ್ಯಾಂಗ್​ ಬನ್​ನಲ್ಲಿ ಕ್ರೀಂ ಕಡಿಮೆ ಇದೆ ಎಂದು ವಾದಿಸಿ ಬೇಕರಿ ಮಾಲೀಕ ಮತ್ತು ಆಕೆಯ ಪತ್ನಿ, ಮಗುವಿನ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಕೊಟ್ಟಾಯಂನ ವೈಕಂ ಸರ್ಕಾರಿ ಆಸ್ಪತ್ರೆಯ ಬಳಿಯ ಬೇಕರಿಯಲ್ಲಿ ಈ ಹೊಡೆದಾಟ ನಡೆದಿದೆ. 6 ಜನರ ಗ್ಯಾಂಗ್​ ಒಂದು ಬೇಕರಿ ಬಂದು ಟೀ ಮತ್ತು ಕ್ರೀಂ ಬನ್​ ಆರ್ಡರ್​ ಮಾಡಿದೆ. ಈ ವೇಳೆ, ಕ್ರೀಂ ಬನ್​ನಲ್ಲಿ ಕ್ರೀಂ ಕಡಿಮೆ ಇದೆ ಎಂದು ವರಾತೆ ತೆಗೆದಿದ್ದಾರೆ. ಇದಲ್ಲದೇ ಬೇಕರಿ ಮಾಲೀಕನ ಮೇಲೆ ಈ ಕುರಿತಾಗಿ ಹಲ್ಲೆ ಮಾಡಿದ್ದಾರೆ.

ಈ ವೇಳೆ ಬೇಕರಿ ಮಾಲೀಕನ ಪತ್ನಿ ಮತ್ತು ಮಗು ತಡೆಯಲು ಬಂದಾಗ ಅವರ ಮೇಲೂ ಗ್ಯಾಂಗ್​ ಹಲ್ಲೆ ಮಾಡಿದೆ. ಇದಲ್ಲದೇ, ಅಲ್ಲಿಯೇ ಇದ್ದ ಮತ್ತೋರ್ವ ಗ್ರಾಹಕನೂ ಕೂಡ ಗಲಭೆಯಲ್ಲಿ ಗಾಯಗೊಂಡಿದ್ದಾನೆ. ಗಲಾಟೆಯಲ್ಲಿ ಗ್ಯಾಂಗ್​ ಅಂಗಡಿಗೂ ಭಾಗಶಃ ಹಾನಿ ಮಾಡಿದೆ.

ಇದಾದ ಬಳಿಕ ಇಬ್ಬರೂ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಬೇಕರಿ ಮಾಲೀಕರು ಮತ್ತು ಕುಟುಂಬದವರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ಯಾಂಗ್​ ದೂರಿದ್ದರೆ, ಕ್ರೀಂ ಬನ್​ ವಿಚಾರಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೇಕರಿ ಮಾಲೀಕ ಕೇಸ್​ ದಾಖಲಿಸಿದ್ದಾನೆ. ಪೊಲೀಸರು ಎರಡೂ ಕಡೆಯ ದೂರುಗಳನ್ನು ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಓದಿ: ಗೊಂದಲ ಸೃಷ್ಟಿಸಿದ ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆ ವದಂತಿ: ಮಸೀದಿ ಸಮಿತಿ ವಾದ

ಕೊಟ್ಟಾಯಂ(ಕೇರಳ): ಬನ್​, ಐಸ್​ಕ್ರೀಂಗಾಗಿ ಮಕ್ಕಳು ಜಗಳ ಮಾಡಿದ್ದು ನೋಡಿದ್ದೇವೆ. ಆದರೆ, ಇಲ್ಲೊಂದು ಗ್ಯಾಂಗ್​ ಬನ್​ನಲ್ಲಿ ಕ್ರೀಂ ಕಡಿಮೆ ಇದೆ ಎಂದು ವಾದಿಸಿ ಬೇಕರಿ ಮಾಲೀಕ ಮತ್ತು ಆಕೆಯ ಪತ್ನಿ, ಮಗುವಿನ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಕೊಟ್ಟಾಯಂನ ವೈಕಂ ಸರ್ಕಾರಿ ಆಸ್ಪತ್ರೆಯ ಬಳಿಯ ಬೇಕರಿಯಲ್ಲಿ ಈ ಹೊಡೆದಾಟ ನಡೆದಿದೆ. 6 ಜನರ ಗ್ಯಾಂಗ್​ ಒಂದು ಬೇಕರಿ ಬಂದು ಟೀ ಮತ್ತು ಕ್ರೀಂ ಬನ್​ ಆರ್ಡರ್​ ಮಾಡಿದೆ. ಈ ವೇಳೆ, ಕ್ರೀಂ ಬನ್​ನಲ್ಲಿ ಕ್ರೀಂ ಕಡಿಮೆ ಇದೆ ಎಂದು ವರಾತೆ ತೆಗೆದಿದ್ದಾರೆ. ಇದಲ್ಲದೇ ಬೇಕರಿ ಮಾಲೀಕನ ಮೇಲೆ ಈ ಕುರಿತಾಗಿ ಹಲ್ಲೆ ಮಾಡಿದ್ದಾರೆ.

ಈ ವೇಳೆ ಬೇಕರಿ ಮಾಲೀಕನ ಪತ್ನಿ ಮತ್ತು ಮಗು ತಡೆಯಲು ಬಂದಾಗ ಅವರ ಮೇಲೂ ಗ್ಯಾಂಗ್​ ಹಲ್ಲೆ ಮಾಡಿದೆ. ಇದಲ್ಲದೇ, ಅಲ್ಲಿಯೇ ಇದ್ದ ಮತ್ತೋರ್ವ ಗ್ರಾಹಕನೂ ಕೂಡ ಗಲಭೆಯಲ್ಲಿ ಗಾಯಗೊಂಡಿದ್ದಾನೆ. ಗಲಾಟೆಯಲ್ಲಿ ಗ್ಯಾಂಗ್​ ಅಂಗಡಿಗೂ ಭಾಗಶಃ ಹಾನಿ ಮಾಡಿದೆ.

ಇದಾದ ಬಳಿಕ ಇಬ್ಬರೂ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಬೇಕರಿ ಮಾಲೀಕರು ಮತ್ತು ಕುಟುಂಬದವರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ಯಾಂಗ್​ ದೂರಿದ್ದರೆ, ಕ್ರೀಂ ಬನ್​ ವಿಚಾರಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೇಕರಿ ಮಾಲೀಕ ಕೇಸ್​ ದಾಖಲಿಸಿದ್ದಾನೆ. ಪೊಲೀಸರು ಎರಡೂ ಕಡೆಯ ದೂರುಗಳನ್ನು ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಓದಿ: ಗೊಂದಲ ಸೃಷ್ಟಿಸಿದ ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆ ವದಂತಿ: ಮಸೀದಿ ಸಮಿತಿ ವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.