ಕೋಯಿಕ್ಕೋಡ್(ಕೇರಳ) : ದೇಶದ ಸಶಸ್ತ್ರ ಪಡೆಗಳನ್ನು ಸೇರಲು ಮೊದಲ ಹೆಜ್ಜೆ ಎಂದು ಪರಿಗಣಿಸಲ್ಪಡುವ ಭಾರತದ ಅತಿದೊಡ್ಡ ಸಮವಸ್ತ್ರಧಾರಿ ವಿದ್ಯಾರ್ಥಿ ಪಡೆ ಎಂದರೆ ಅದು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ). ಇಂತಹ ಪ್ರಮುಖ ಪಡೆಯೊಂದು ಸದ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈ ಪಡೆಯನ್ನು ನಿಧಾನವಾಗಿ ಬಲಹೀನ ಪಡಿಸುವ ಪ್ರಯತ್ನಗಳು ಮರೆಯಲ್ಲಿ ನಡೆಯುತ್ತಿವೆ. ಇದೇ ನವೆಂಬರ್ 22 ರಂದು 74 ನೇ ಸಂಸ್ಥಾಪನಾ ದಿನವನ್ನು ಆಚರಿಸಲು ಹೊರಟಿರುವ ಎನ್ಸಿಸಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸರಿಯಾಗಿ ಗಮನ ಹರಿಸದೇ ಇರುವುದು ದುರಂತ.
ಸರಿಯಾಗಿ ಸಮವಸ್ತ್ರ ಸಿಗದೆ ಪರದಾಡುವ ಕೆಡೆಟ್ಗಳು: ಪ್ರತಿ ವರ್ಷ, ದೇಶದಲ್ಲಿ ಸುಮಾರು 15 ಲಕ್ಷ ಕೆಡೆಟ್ಗಳು ಎನ್ಸಿಸಿಗೆ ಸೇರುತ್ತಾರೆ. ಕೇರಳದಲ್ಲಿ ಸುಮಾರು 1 ಲಕ್ಷ ಕೆಡೆಟ್ಗಳು ಎನ್ಸಿಸಿಗೆ ಸೇರುತ್ತಾರೆ. ಆದರೆ, ಇತ್ತೀಚಿನವರೆಗೂ ಎನ್ಸಿಸಿಯ ಎಲ್ಲ ಕೆಡೆಟ್ಗಳು ತಮ್ಮ ಸಮವಸ್ತ್ರ ಉಚಿತವಾಗಿ ಪಡೆಯುತ್ತಿದ್ದರು.
ಆದರೆ, ಏಕರೂಪದ ಖರೀದಿಗಾಗಿ ಸೇನಾ ಮಟ್ಟದಲ್ಲಿ ನಡೆದ ಟೆಂಡರ್ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಬಂದಾಗ ಈ ಸಮವಸ್ತ್ರ ವಿತರಣೆಯನ್ನು ನಿಲ್ಲಿಸಲಾಯಿತು. ಆಗ ಕೇಂದ್ರ ಸರ್ಕಾರವು ಸಮವಸ್ತ್ರ ಖರೀದಿಗಾಗಿ ವಿದ್ಯಾರ್ಥಿಗಳ ಖಾತೆಗೆ 3,800 ಜಮಾ ಮಾಡುವುದಾಗಿ ಹೇಳಿತು. ಆದರೆ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಲ್ಲಿನ ನ್ಯೂನತೆಗಳನ್ನು ಪರಿಗಣಿಸಿ ಈ ಆದೇಶ ಹಿಂಪಡೆಯಲಾಯಿತು.
ಈ ಬಳಿಕ ಎನ್ಸಿಸಿ ಅಧಿಕಾರಿಗಳು ಸಮವಸ್ತ್ರ ವನ್ನು ವಿತರಿಸಲು ಆರಂಭಿಸಿದರು. ಈ ಸಮವಸ್ತ್ರದ ಹೊಲಿಗೆಗೆ ಪ್ರತಿ ವಿದ್ಯಾರ್ಥಿಗಳಿಂದ 698 ರೂ. ಪಡೆದು ವಿದ್ಯಾರ್ಥಿಗಳ ಖಾತೆಗೆ ಸಂದಾಯ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅನೇಕ ಸಂದರ್ಭಗಳಲ್ಲಿ ಮರುಪಾವತಿಯಾಗಿಲ್ಲ ಎಂದು ಕೆಡೆಟ್ಗಳ ಪೋಷಕರು ಹೇಳುತ್ತಾರೆ. ಜೊತೆಗೆ ಸಮವಸ್ತ್ರದ ಭಾಗವಾದ ಬೂಟುಗಳು ಮತ್ತು ಇತರ ಸಾಮಗ್ರಿಗಳು ಸಮರ್ಪಕವಾಗಿ ಪೂರೈಕೆ ಯಾಗುತ್ತಿರಲಿಲ್ಲ.
ಸಿಗದ ಸಮರ್ಪಕ ಉತ್ತರ; ಈ ಸಮಸ್ಯೆಗಳು ಮುಂದುವರೆದಾಗ, ಕೆಲವು ಶಾಲೆಗಳು ಎನ್ಸಿಸಿ ಕೆಡೆಟ್ಗಳಿಗೆ ಸಮವಸ್ತ್ರ ಖರೀದಿಸಲು 2000 ರೂ ಪಾವತಿಸುವಂತೆ ಸೂಚಿಸಿದ್ದವು. ಈ ಮೂಲಕ ಖಾಸಗಿ ಸಂಸ್ಥೆಯು ಸಮವಸ್ತ್ರ ಹಾಗೂ ಇತರ ಸಾಮಗ್ರಿಗಳನ್ನು ಪೂರೈಸಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಆದರೆ, ಎನ್ಸಿಸಿ ಪ್ರಧಾನ ಕಚೇರಿಯಲ್ಲಿ ವಿಚಾರಿಸಿದಾಗ , ಎನ್ಸಿಸಿ ಇಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ತಿಳಿದುಬಂದಿದೆ. ಈ ಸಮವಸ್ತ್ರದ ಪೂರೈಕೆಯ ಬಗ್ಗೆ ಕೇಳಿದರೆ ಎನ್ಸಿಸಿ ಅಧಿಕಾರಿಗಳಿಂದ ಯಾವುದೇ ಸಮರ್ಪಕ ಉತ್ತರ ಇಲ್ಲ.
ಇನ್ನು ಎನ್ಸಿಸಿ ಸೇರುವ ಬಡ ವಿದ್ಯಾರ್ಥಿಗಳು ಸಮವಸ್ತ್ರ ಖರೀದಿಸಲಾಗದೇ ಕಂಗಾಲಾಗಿದ್ದಾರೆ. ಅಲ್ಲದೇ ಕೆಡೆಟ್ಗಳಿಗೆ ಪರೇಡ್ಗಳು ಪ್ರಾರಂಭವಾಗುವಾಗ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗುತ್ತದೆ. ಪರೇಡ್ ಸಮಯದಲ್ಲಿ ಕೆಡೆಟ್ಗಳು ತಮ್ಮ ಪಾದಗಳನ್ನು ಬಲವಾಗಿ ನೆಲಕ್ಕೆ ಅಪ್ಪಳಿಸುವುದರಿಂದ ತಲೆ ಮತ್ತು ಬೆನ್ನು ಮೂಳೆಯ ಗಾಯಗಳನ್ನು ತಡೆಗಟ್ಟಲು ಬೂಟುಗಳು ಸಹ ಅತ್ಯಗತ್ಯವಾಗಿದೆ.
ಕೇರಳದಲ್ಲಿ, ಎನ್ಸಿಸಿ ಕೆಡೆಟ್ಗಳನ್ನು 8 ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಜೂನ್ ತಿಂಗಳಲ್ಲಿ ಪ್ರಾರಂಭವಾಗಿ ಜುಲೈನಲ್ಲಿ ಕೊನೆಗೊಳ್ಳುತ್ತದೆ. ಆದರೆ, ಅಗ್ನಿಪಥ್ ಯೋಜನೆ ಪ್ರಾರಂಭವಾದ ಬಳಿಕ ಕೇಂದ್ರ ಸರ್ಕಾರವು ಎನ್ಸಿಸಿಯನ್ನು ಕಡೆಗಣಿಸಿದೆ ಎಂದು ತಜ್ಞರು ಹೇಳುತ್ತಾರೆ.
ಎನ್ಸಿಸಿ ಸದ್ಯ ಗಂಭೀರ ಸಮಸ್ಯೆ ಎದುರಿಸುತ್ತಿದೆ : ಎನ್ಸಿಸಿ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಇದು ಸ್ಟೂಡೆಂಟ್ ಪೊಲೀಸ್ ಕೆಡೆಟ್ಗಳಿಂದ (ಎಸ್ಪಿಸಿ) ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಎಸ್ಪಿಸಿ ಪೊಲೀಸ್ ಅಧಿಕಾರಿಗಳಿಂದ ಸಂಪೂರ್ಣ ತರಬೇತಿ ಪಡೆಯುತ್ತಿದೆ. ಆದರೆ, ಎನ್ಸಿಸಿಯಲ್ಲಿ ಹಾಗಾಗುತ್ತಿಲ್ಲ. ಅಲ್ಲದೇ ಸದ್ಯ ಎನ್ಸಿಸಿಯಲ್ಲಿ ಕಿಟ್ಗಳ ಲಭ್ಯತೆ ಸಮಸ್ಯೆಯಾಗಿ ಪರಿಣಮಿಸಿದೆ. ಕೆಡೆಟ್ಗಳಿಗೆ ಬೇಕಾದ ಬಟ್ಟೆ, ಬೂಟುಗಳು, ಬೆಲ್ಟ್ಗಳು ಮತ್ತು ಇತರ ವಸ್ತುಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಎಂದು ಎನ್ಸಿಸಿ ಹಿರಿಯ ಅಧಿಕಾರಿ ಜಯರಾಜನ್ ಕಲ್ಪಕಸ್ಸೇರಿ ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿಗಳನ್ನು ಪದೇ ಪದೆ ವರ್ಗಾವಣೆ ಮಾಡುವುದರಿಂದ ಪಡೆಯೂ ದುರ್ಬಲಗೊಳ್ಳುತ್ತಿದೆ. ಜೊತೆಗೆ ಅಗ್ನಿಪಥ್ ಯೋಜನೆ ಜಾರಿಯಿಂದ ಎನ್ಸಿಸಿಗೆ ಸ್ಕೋಪ್ ಕಡಿಮೆಯಾಗುತ್ತಿದೆ . ಅಲ್ಲದೇ ಇದೇ ಪರಿಸ್ಥಿತಿ ಮುಂದುವರೆದರೆ ಎನ್ಸಿಸಿಗೆ ಸೇರಲು ಮುಂದೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕುಸಿಯಲಿದೆ ಎಂದು ಹೇಳಿದರು.
ಓದಿ : ಹೆಚ್ಚಾಯ್ತು 'ಮಂಕಿಪಾಕ್ಸ್' ಹಾವಳಿ: ಜಾಗತಿಕ ತುರ್ತುಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ