ETV Bharat / bharat

Coonoor Chopper Crash: ಆರು ಹುತಾತ್ಮರ ಗುರುತು ಪತ್ತೆ, ಪಾರ್ಥಿವ ಶರೀರ ರವಾನೆ

author img

By

Published : Dec 11, 2021, 9:56 AM IST

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ನಡೆದ ವಾಯುಪಡೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಆರು ಮಂದಿ ಹುತಾತ್ಮ ಯೋಧರ ಗುರುತು ಪತ್ತೆಯಾಗಿದ್ದು, ದೆಹಲಿಯ ಕಂಟೋನ್ಮೆಂಟ್​ನಲ್ಲಿ ಗೌರವ ಸಲ್ಲಿಸಲಾಗಿದೆ.

Mortal remains of 6 killed in IAF chopper crash identified
Coonoor Chopper Crash: ಆರು ಮಂದಿಯ ಗುರುತು ಪತ್ತೆ, ಪಾರ್ಥಿವ ಶರೀರ ರವಾನೆ

ನವದೆಹಲಿ: ತಮಿಳುನಾಡಿನಲ್ಲಿ ನಡೆದ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ 13 ಮಂದಿಯಲ್ಲಿ ನಾಲ್ವರು ಐಎಎಫ್ ಮತ್ತು ಇಬ್ಬರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ.

ಎಲ್ಲಾ ನಾಲ್ವರು ವಾಯುಪಡೆ ಸಿಬ್ಬಂದಿ ಗುರುತಿಸುವಿಕೆ ಪೂರ್ಣಗೊಂಡಿದೆ. ಸೇನಾ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಪಾರ್ಥಿವ ಶರೀರವನ್ನು ವಿಮಾನದಲ್ಲಿ ಹುತಾತ್ಮರ ಸ್ವಗ್ರಾಮಗಳಿಗೆ ಕಳುಹಿಸಲಾಗುತ್ತದೆ.

ಅದಕ್ಕೂ ಮುನ್ನ ದೆಹಲಿ ಕಂಟೋನ್ಮೆಂಟ್​​​ನಲ್ಲಿರುವ ಬೇಸ್ ಆಸ್ಪತ್ರೆಯಲ್ಲಿ ಹುತಾತ್ಮರ ಪಾರ್ಥಿವ ಶರೀರವಿರುವ ಕಾಫಿನ್​ಗಳ ಮೇಲೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಲಾಗುತ್ತದೆ. ನಂತರ ಅವರ ಸ್ವಗ್ರಾಮಗಳಿಗೆ ರವಾನಿಸಲಾಗುತ್ತದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಹುತಾತ್ಮರ ವಿವರ ಮತ್ತು ಅವರ ಸ್ಥಳ, ಪಾರ್ಥಿವ ಶರೀರ ತಲುಪುವ ಸಮಯ ಹೀಗಿದೆ..

1. ವಿಂಗ್ ಕಮಾಂಡರ್​ ಚೌಹಾಣ್ ಆಗ್ರಾದವರಾಗಿದ್ದು, ಬೆಳಗ್ಗೆ 9.45ಕ್ಕೆ ಪಾರ್ಥಿವ ಶರೀರ ಆಗ್ರಾ ತಲುಪಲಿದೆ.

2. ಜೂನಿಯರ್ ವಾರೆಂಟ್ ಆಫೀಸರ್ ಪ್ರದೀಪ್ ಅವರ ಪಾರ್ಥಿವ ಶರೀರ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಸೂಲೂರು ತಲುಪಲಿದೆ.

3. ಸ್ಕ್ವಾಡ್ರನ್ ಲೀಡರ್ ಕುಲದೀಪ್ ಅವರ ಪಾರ್ಥಿವ ಶರೀರನ್ನು ರಾಜಸ್ಥಾನದ ಪಿಲಾನಿಗೆ ಬೆಳಗ್ಗೆ 11.45ಕ್ಕೆ ತಲುಪಲಿದೆ.

4. ಜೂನಿಯರ್ ವಾರೆಂಟ್ ಆಫೀಸರ್ ಪ್ರತಾಪ್ ದಾಸ್ ಅವರ ಪಾರ್ಥಿವ ಶರೀರ ಭುವನೇಶ್ವರಕ್ಕೆ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ.

5. ಲ್ಯಾನ್ಸ್​ ನಾಯ್ಕ್ ಸಾಯಿ ತೇಜಾ ಅವರ ಪಾರ್ಥಿವ ಶರೀರ 12.30ಕ್ಕೆ ಬೆಂಗಳೂರು ತಲುಪಲಿದೆ.

6.ಲ್ಯಾನ್ಸ್​ ನಾಯ್ಕ್ ವಿವೇಕ್ ಕುಮಾರ್ ಪಾರ್ಥಿವ ಶರೀರ ಬೆಳಗ್ಗೆ 11.30ಕ್ಕೆ ಹಿಮಾಚಲ ಪ್ರದೇಶದ ಗಗ್ಗಲ್ ತಲುಪಲಿದೆ.

ಇದನ್ನೂ ಓದಿ: ಹೆಲಿಕಾಪ್ಟರ್​ ಪತನ: ಶೌರ್ಯಚಕ್ರ ಪುರಸ್ಕೃತ ಕ್ಯಾ.​​ವರುಣ್​​ ಸಿಂಗ್​​​ ಆರೋಗ್ಯ ಸ್ಥಿತಿ ಸ್ಥಿರ, ಆದ್ರೂ ಗಂಭೀರ

ನವದೆಹಲಿ: ತಮಿಳುನಾಡಿನಲ್ಲಿ ನಡೆದ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ 13 ಮಂದಿಯಲ್ಲಿ ನಾಲ್ವರು ಐಎಎಫ್ ಮತ್ತು ಇಬ್ಬರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ.

ಎಲ್ಲಾ ನಾಲ್ವರು ವಾಯುಪಡೆ ಸಿಬ್ಬಂದಿ ಗುರುತಿಸುವಿಕೆ ಪೂರ್ಣಗೊಂಡಿದೆ. ಸೇನಾ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಪಾರ್ಥಿವ ಶರೀರವನ್ನು ವಿಮಾನದಲ್ಲಿ ಹುತಾತ್ಮರ ಸ್ವಗ್ರಾಮಗಳಿಗೆ ಕಳುಹಿಸಲಾಗುತ್ತದೆ.

ಅದಕ್ಕೂ ಮುನ್ನ ದೆಹಲಿ ಕಂಟೋನ್ಮೆಂಟ್​​​ನಲ್ಲಿರುವ ಬೇಸ್ ಆಸ್ಪತ್ರೆಯಲ್ಲಿ ಹುತಾತ್ಮರ ಪಾರ್ಥಿವ ಶರೀರವಿರುವ ಕಾಫಿನ್​ಗಳ ಮೇಲೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಲಾಗುತ್ತದೆ. ನಂತರ ಅವರ ಸ್ವಗ್ರಾಮಗಳಿಗೆ ರವಾನಿಸಲಾಗುತ್ತದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಹುತಾತ್ಮರ ವಿವರ ಮತ್ತು ಅವರ ಸ್ಥಳ, ಪಾರ್ಥಿವ ಶರೀರ ತಲುಪುವ ಸಮಯ ಹೀಗಿದೆ..

1. ವಿಂಗ್ ಕಮಾಂಡರ್​ ಚೌಹಾಣ್ ಆಗ್ರಾದವರಾಗಿದ್ದು, ಬೆಳಗ್ಗೆ 9.45ಕ್ಕೆ ಪಾರ್ಥಿವ ಶರೀರ ಆಗ್ರಾ ತಲುಪಲಿದೆ.

2. ಜೂನಿಯರ್ ವಾರೆಂಟ್ ಆಫೀಸರ್ ಪ್ರದೀಪ್ ಅವರ ಪಾರ್ಥಿವ ಶರೀರ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಸೂಲೂರು ತಲುಪಲಿದೆ.

3. ಸ್ಕ್ವಾಡ್ರನ್ ಲೀಡರ್ ಕುಲದೀಪ್ ಅವರ ಪಾರ್ಥಿವ ಶರೀರನ್ನು ರಾಜಸ್ಥಾನದ ಪಿಲಾನಿಗೆ ಬೆಳಗ್ಗೆ 11.45ಕ್ಕೆ ತಲುಪಲಿದೆ.

4. ಜೂನಿಯರ್ ವಾರೆಂಟ್ ಆಫೀಸರ್ ಪ್ರತಾಪ್ ದಾಸ್ ಅವರ ಪಾರ್ಥಿವ ಶರೀರ ಭುವನೇಶ್ವರಕ್ಕೆ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ.

5. ಲ್ಯಾನ್ಸ್​ ನಾಯ್ಕ್ ಸಾಯಿ ತೇಜಾ ಅವರ ಪಾರ್ಥಿವ ಶರೀರ 12.30ಕ್ಕೆ ಬೆಂಗಳೂರು ತಲುಪಲಿದೆ.

6.ಲ್ಯಾನ್ಸ್​ ನಾಯ್ಕ್ ವಿವೇಕ್ ಕುಮಾರ್ ಪಾರ್ಥಿವ ಶರೀರ ಬೆಳಗ್ಗೆ 11.30ಕ್ಕೆ ಹಿಮಾಚಲ ಪ್ರದೇಶದ ಗಗ್ಗಲ್ ತಲುಪಲಿದೆ.

ಇದನ್ನೂ ಓದಿ: ಹೆಲಿಕಾಪ್ಟರ್​ ಪತನ: ಶೌರ್ಯಚಕ್ರ ಪುರಸ್ಕೃತ ಕ್ಯಾ.​​ವರುಣ್​​ ಸಿಂಗ್​​​ ಆರೋಗ್ಯ ಸ್ಥಿತಿ ಸ್ಥಿರ, ಆದ್ರೂ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.