ETV Bharat / bharat

ರಾಜಸ್ಥಾನದಲ್ಲಿ ಮತ್ತೆ ಹಕ್ಕಿ ಜ್ವರ ಭೀತಿ.. ಎಲ್ಲೆಂದರಲ್ಲಿ ಸತ್ತು ಬಿದ್ದ 300ಕ್ಕೂ ಹೆಚ್ಚು ಪಾರಿವಾಳಗಳು!

author img

By

Published : Mar 29, 2021, 11:32 AM IST

ರಾಜಸ್ಥಾನದಲ್ಲಿ ಮತ್ತೆ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಸುಮಾರು 300ಕ್ಕೂ ಹೆಚ್ಚು ಪಾರಿವಾಳಗಳು ಹೊಲದಲ್ಲಿ ಸತ್ತು ಬಿದ್ದಿರುವುದು ಇಲ್ಲಿನ ಬಿಕಾನೆರ್​ ಜಿಲ್ಲೆಯಲ್ಲಿ ಕಂಡು ಬಂದಿದೆ.

More than 300 pigeons found dead in Bikaner  Pigeons found dead in Bikaner  Dead pigeon bikaner  Bikaner Bird Flu  300ಕ್ಕೂ ಹೆಚ್ಚು ಪಾರಿವಾಳಗಳು ಸಾವು,  ಬಿಕಾನೆರ್​ನಲ್ಲಿ 300ಕ್ಕೂ ಹೆಚ್ಚು ಪಾರಿವಾಳಗಳು  ಬಿಕಾನೆರ್​ ಪಾರಿವಾಳ ಸಾವು ಸುದ್ದಿ  ಬಿಕಾನೆರ್​ ಸುದ್ದಿ
ಎಲ್ಲಂದ್ರಲ್ಲೇ ಸತ್ತು ಬಿದ್ವು 300ಕ್ಕೂ ಹೆಚ್ಚು ಪಾರಿವಾಳಗಳು

ಬಿಕಾನೆರ್: 300 ಕ್ಕೂ ಹೆಚ್ಚು ಪಾರಿವಾಳಗಳು ನಿಗೂಢವಾಗಿ ಸತ್ತು ಬಿದ್ದಿರುವ ಘಟನೆ ಶ್ರೀಕೋಲಾಯತ್​ ತಾಲೂಕಿನ ರೋಹಿ ಗ್ರಾಮದಲ್ಲಿ ನಡೆದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹಕ್ಕಿಜ್ವರದ ಆತಂಕ ಆವರಿಸಿದೆ.

ರೋಹಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಪಾರಿವಾಳಗಳು ಶವವಾಗಿ ಪತ್ತೆಯಾದ ನಂತರ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎಲ್ಲಂದ್ರಲ್ಲೇ ಸತ್ತು ಬಿದ್ವು 300ಕ್ಕೂ ಹೆಚ್ಚು ಪಾರಿವಾಳಗಳು

ಪಾರಿವಾಳಗಳ ಸಾವಿಗೆ ಹಕ್ಕಿಜ್ವರವೇ ಕಾರಣವಿರಬಹುದು ಎಂದು ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಈ ಪಾರಿವಾಳಗಳು ಮೃತಪಟ್ಟಿರುವುದರ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಭಾನುವಾರ ಸಂಜೆ ತನಕ ಯಾವುದೇ ಮಾಹಿತಿ ಇರಲಿಲ್ಲ.

ಈ ಪ್ರದೇಶದಲ್ಲಿ ಆಡು ಮೇಯಿಸುತ್ತಿದ್ದಾಗ ಕುರಿಗಾಹಿಗಳು ಮೃತ ಪಾರಿವಾಳಗಳನ್ನು ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಮೃತ ಪಾರಿವಾಳಗಳ ರಾಶಿ ನೋಡಿ ದಿಗ್ಭ್ರಾಂತಿಗೊಳಗಾದರು. ನಂತರ ಈ ಘಟನೆಯ ಮಾಹಿತಿಯನ್ನು ಅರಣ್ಯ ಇಲಾಖೆಗೆ ರವಾನಿಸಿದರು.

ಮೃತ ಪಾರಿವಾಳಗಳ ಮಾದರಿಗಳನ್ನು ಪರಿಶೀಲಿಸಿದ ನಂತರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.

ಬಿಕಾನೆರ್: 300 ಕ್ಕೂ ಹೆಚ್ಚು ಪಾರಿವಾಳಗಳು ನಿಗೂಢವಾಗಿ ಸತ್ತು ಬಿದ್ದಿರುವ ಘಟನೆ ಶ್ರೀಕೋಲಾಯತ್​ ತಾಲೂಕಿನ ರೋಹಿ ಗ್ರಾಮದಲ್ಲಿ ನಡೆದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹಕ್ಕಿಜ್ವರದ ಆತಂಕ ಆವರಿಸಿದೆ.

ರೋಹಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಪಾರಿವಾಳಗಳು ಶವವಾಗಿ ಪತ್ತೆಯಾದ ನಂತರ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎಲ್ಲಂದ್ರಲ್ಲೇ ಸತ್ತು ಬಿದ್ವು 300ಕ್ಕೂ ಹೆಚ್ಚು ಪಾರಿವಾಳಗಳು

ಪಾರಿವಾಳಗಳ ಸಾವಿಗೆ ಹಕ್ಕಿಜ್ವರವೇ ಕಾರಣವಿರಬಹುದು ಎಂದು ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಈ ಪಾರಿವಾಳಗಳು ಮೃತಪಟ್ಟಿರುವುದರ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಭಾನುವಾರ ಸಂಜೆ ತನಕ ಯಾವುದೇ ಮಾಹಿತಿ ಇರಲಿಲ್ಲ.

ಈ ಪ್ರದೇಶದಲ್ಲಿ ಆಡು ಮೇಯಿಸುತ್ತಿದ್ದಾಗ ಕುರಿಗಾಹಿಗಳು ಮೃತ ಪಾರಿವಾಳಗಳನ್ನು ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಮೃತ ಪಾರಿವಾಳಗಳ ರಾಶಿ ನೋಡಿ ದಿಗ್ಭ್ರಾಂತಿಗೊಳಗಾದರು. ನಂತರ ಈ ಘಟನೆಯ ಮಾಹಿತಿಯನ್ನು ಅರಣ್ಯ ಇಲಾಖೆಗೆ ರವಾನಿಸಿದರು.

ಮೃತ ಪಾರಿವಾಳಗಳ ಮಾದರಿಗಳನ್ನು ಪರಿಶೀಲಿಸಿದ ನಂತರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.