ETV Bharat / bharat

ದುಷ್ಟಶಕ್ತಿಗಳ ಪೀಡೆ ತೊಲಗಿಸಲು ಮರಗಳೊಂದಿಗೆ ಮದುವೆ.. ಬುಡಕಟ್ಟು ಜನರ ವಿಶಿಷ್ಟ ಆಚರಣೆ!

author img

By

Published : Jan 18, 2023, 5:58 PM IST

ಬುಡಕಟ್ಟು ಸಮುದಾಯಗಳಲ್ಲಿ ಸಾಕಷ್ಟು ವಿಚಿತ್ರ ಸಂಪ್ರದಾಯಗಳನ್ನು ಆಚರಣೆ ಮಾಡಲಾಗುತ್ತದೆ. ಕಾಲುವೆ ಹಾಗೂ ಮರಗಳೊಂದಿಗೆ ಚಿಕ್ಕ ಮಕ್ಕಳ ಮದುವೆ ಮಾಡಿಸುವುದು ಕೂಡ ಒಂದು. ದುಷ್ಟ ಶಕ್ತಿಗಳ ಅಪಾಯವನ್ನು ದೂರ ಮಾಡಲು ಹೀಗೆ ಮಾಡಲಾಗುತ್ತದೆಯಂತೆ.

Jharkhand Tribals marry kids to culverts or trees to ward off evils
Jharkhand Tribals marry kids to culverts or trees to ward off evils

ಜಮ್‌ಶೆಡ್‌ಪುರ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯದಲ್ಲಿ ಮಕ್ಕಳನ್ನು ಕಾಲುವೆ ಅಥವಾ ಮರದೊಂದಿಗೆ ಮದುವೆ ಮಾಡುವ ಹಳೆಯ ಸಂಪ್ರದಾಯವು ಚಾಲ್ತಿಯಲ್ಲಿದೆ. ಗ್ರಾಮಸ್ಥರ ಪ್ರಕಾರ, ಮಗುವಿಗೆ ಮತ್ತು ಭವಿಷ್ಯದಲ್ಲಿ ಸಂಗಾತಿಗೆ ದೀರ್ಘಾಯುಷ್ಯಕ್ಕಾಗಿ ಇಂಥದೊಂದು ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಒಡಿಶಾ ಮತ್ತು ಬಂಗಾಳದ ಗಡಿಗಳಿಗೆ ಹತ್ತಿರದಲ್ಲಿ ವಾಸಿಸುವ ಜಾರ್ಖಂಡ್ ರಾಜ್ಯದ ಜನರಲ್ಲಿ ಈ ಸಂಪ್ರದಾಯ ಹೆಚ್ಚಾಗಿ ಪ್ರಚಲಿತವಾಗಿದೆ. ಮಕರ ಸಂಕ್ರಾಂತಿಯ ನಂತರದ ಎರಡನೇ ದಿನ ಇಂಥ ವಿವಾಹ ಏರ್ಪಡಿಸಲಾಗುತ್ತದೆ. ಮಕರ ಸಂಕ್ರಾಂತಿ ನಂತರ ಎರಡನೇ ದಿನವು ಧಾರ್ಮಿಕ ಆಚರಣೆಗಳಿಗಾಗಿ ಮಂಗಳಕರ ದಿನ ಎಂದು ಬುಡಕಟ್ಟು ಜನ ನಂಬುತ್ತಾರೆ.

ಮಕ್ಕಳ ಆಯ್ಕೆ ಹೇಗೆ?: ಮಗುವಿಗೆ ಮೊದಲ ಎರಡು ಮೇಲಿನ ಹಲ್ಲುಗಳು ಕಾಣಿಸಿಕೊಂಡಾಗ ಅಂಥ ಮಕ್ಕಳನ್ನು ಈ ಆಚರಣೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಮೊದಲಿಗೆ ಕೆಳಗಿನ ಎರಡು ಹಲ್ಲು ಮೂಡುತ್ತವೆ. ಇವು ಕಾಣಿಸಿ 4 ರಿಂದ 8 ವಾರಗಳ ನಂತರ ಮೇಲಿನ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಮೇಲಿನ ಹಲ್ಲುಗಳೇ ಮೊದಲು ಕಾಣಿಸಿಕೊಂಡರೆ ಅಂಥ ಮಕ್ಕಳಿಗೆ ಕಾಲುವೆ ಅಥವಾ ಮರದೊಂದಿಗೆ ವಿವಾಹ ಮಾಡಲಾಗುತ್ತದೆ.

ಈ ಸಂಪ್ರದಾಯದ ಕುರಿತಾಗಿ ಮಾತನಾಡಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಸಾರಿ ಸಿಂಗ್ ಸದರ್, ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸಲು ಕುಟುಂಬದವರು ಎಲ್ಲ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಮದುವೆ ಮಾಡುತ್ತಾರೆ. ಜೀವನದಲ್ಲಿ ಎದುರಾಗಬಹುದಾದ ಅಶುಭ ಘಟನೆಗಳಿಂದ ಮಗುವನ್ನು ರಕ್ಷಿಸಲು ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.

ಮಗುವಿಗೆ ಮೇಲಿನ ಎರಡು ಹಲ್ಲುಗಳು ಮೊದಲು ಮೂಡುವುದನ್ನು ನಾವು ಮಗುವಿಗೆ ದುರದೃಷ್ಟ ಎಂದು ಪರಿಗಣಿಸುತ್ತೇವೆ. ನನ್ನ ಮೊಮ್ಮಗನಿಗೂ ಹೀಗೆ ಮೇಲಿನ ಹಲ್ಲುಗಳೇ ಮೊದಲು ಬಂದಿದ್ದವು. ಈ ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ, ಅವರ ನಿಯಮಿತ ಮದುವೆ ಸಂಪ್ರದಾಯದಂತೆ ನಡೆಯುತ್ತದೆ. ಹೀಗೆ ಮೇಲಿನ ಹಲ್ಲು ಮೊದಲಿಗೆ ಮೂಡಿದ ಮಕ್ಕಳು ಬೆಳೆದ ನಂತರ ಅಥವಾ ಅವರ ಸಂಗಾತಿ ಚಿಕ್ಕ ವಯಸ್ಸಿನಲ್ಲಿಯೇ ಸಾಯುವುದನ್ನು ನಮ್ಮ ಹಿರಿಯರು ಗಮನಿಸಿದ್ದಾರೆ.

ಆದ್ದರಿಂದ, ಮಕ್ಕಳು 5 ವರ್ಷ ವಯಸ್ಸನ್ನು ತಲುಪುವ ಮೊದಲು ಒಂದು ಕಾಲುವೆ ಅಥವಾ ಮರಕ್ಕೆ ಮದುವೆ ಮಾಡುತ್ತಾರೆ. ಅವರ ಜ್ಯೋತಿಷ್ಯದಲ್ಲಿರುವ ದುಷ್ಟಶಕ್ತಿಗಳನ್ನು ನಿವಾರಿಸಲು ಇದನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪರಸ್ನಾಥ್ ಬೆಟ್ಟ ರಕ್ಷಣೆಗಾಗಿ ಆದಿವಾಸಿಗಳ ಹೋರಾಟ: 'ಮರಂಗ್ ಬರು' ಎಂದು ಕರೆಯಲಾಗುವ ಜಾರ್ಖಂಡ್‌ನ ಪರಸ್ನಾಥ್ ಬೆಟ್ಟಗಳ ರಕ್ಷಣೆಗಾಗಿ ಮಂಗಳವಾರದಿಂದ ಒಂದು ತಿಂಗಳ ಅವಧಿಯ ಆಂದೋಲನವನ್ನು ಪ್ರಾರಂಭಿಸುವುದಾಗಿ ಆದಿವಾಸಿ ಸೆಂಗೆಲ್ ಅಭಿಯಾನ್ (ASA) ಘೋಷಿಸಿದೆ. ಮಂಗಳವಾರದಿಂದ ಪ್ರಾರಂಭವಾಗುವ ತನ್ನ ಯಾತ್ರೆಯು ಜೈನ ಸಮುದಾಯದ ಹಿಡಿತದಿಂದ ಮರಂಗ್ ಬರುವನ್ನು ಉಳಿಸುವ ಗುರಿಯನ್ನು ಹೊಂದಿದೆ ಎಂದು ಎಎಸ್​ಎ ಹೇಳಿದೆ. ಜೈನರು ಮತ್ತು ಆದಿವಾಸಿಗಳು ಈ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ ಮತ್ತು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜೈನರು ಇದನ್ನು ಪರಸ್ನಾಥ್ ಬೆಟ್ಟ ಎಂದು ಕರೆದರೆ, ಆದಿವಾಸಿಗಳು ಇದನ್ನು ಮರಂಗ್ ಬರು ಎಂದು ಕರೆಯುತ್ತಾರೆ.

ಇದನ್ನೂ ಓದಿ: ಕೊಡಗಿನ ವಿಶಿಷ್ಠ ಸಂಸ್ಕೃತಿಯ ಪ್ರತೀಕ ಕೋವಿ ಹಬ್ಬ ಆಚರಣೆ.. ಕೊಡವರ ಧಾರ್ಮಿಕ ಸಂಕೇತ ಈ ಬಂದೂಕು

ಜಮ್‌ಶೆಡ್‌ಪುರ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯದಲ್ಲಿ ಮಕ್ಕಳನ್ನು ಕಾಲುವೆ ಅಥವಾ ಮರದೊಂದಿಗೆ ಮದುವೆ ಮಾಡುವ ಹಳೆಯ ಸಂಪ್ರದಾಯವು ಚಾಲ್ತಿಯಲ್ಲಿದೆ. ಗ್ರಾಮಸ್ಥರ ಪ್ರಕಾರ, ಮಗುವಿಗೆ ಮತ್ತು ಭವಿಷ್ಯದಲ್ಲಿ ಸಂಗಾತಿಗೆ ದೀರ್ಘಾಯುಷ್ಯಕ್ಕಾಗಿ ಇಂಥದೊಂದು ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಒಡಿಶಾ ಮತ್ತು ಬಂಗಾಳದ ಗಡಿಗಳಿಗೆ ಹತ್ತಿರದಲ್ಲಿ ವಾಸಿಸುವ ಜಾರ್ಖಂಡ್ ರಾಜ್ಯದ ಜನರಲ್ಲಿ ಈ ಸಂಪ್ರದಾಯ ಹೆಚ್ಚಾಗಿ ಪ್ರಚಲಿತವಾಗಿದೆ. ಮಕರ ಸಂಕ್ರಾಂತಿಯ ನಂತರದ ಎರಡನೇ ದಿನ ಇಂಥ ವಿವಾಹ ಏರ್ಪಡಿಸಲಾಗುತ್ತದೆ. ಮಕರ ಸಂಕ್ರಾಂತಿ ನಂತರ ಎರಡನೇ ದಿನವು ಧಾರ್ಮಿಕ ಆಚರಣೆಗಳಿಗಾಗಿ ಮಂಗಳಕರ ದಿನ ಎಂದು ಬುಡಕಟ್ಟು ಜನ ನಂಬುತ್ತಾರೆ.

ಮಕ್ಕಳ ಆಯ್ಕೆ ಹೇಗೆ?: ಮಗುವಿಗೆ ಮೊದಲ ಎರಡು ಮೇಲಿನ ಹಲ್ಲುಗಳು ಕಾಣಿಸಿಕೊಂಡಾಗ ಅಂಥ ಮಕ್ಕಳನ್ನು ಈ ಆಚರಣೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಮೊದಲಿಗೆ ಕೆಳಗಿನ ಎರಡು ಹಲ್ಲು ಮೂಡುತ್ತವೆ. ಇವು ಕಾಣಿಸಿ 4 ರಿಂದ 8 ವಾರಗಳ ನಂತರ ಮೇಲಿನ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಮೇಲಿನ ಹಲ್ಲುಗಳೇ ಮೊದಲು ಕಾಣಿಸಿಕೊಂಡರೆ ಅಂಥ ಮಕ್ಕಳಿಗೆ ಕಾಲುವೆ ಅಥವಾ ಮರದೊಂದಿಗೆ ವಿವಾಹ ಮಾಡಲಾಗುತ್ತದೆ.

ಈ ಸಂಪ್ರದಾಯದ ಕುರಿತಾಗಿ ಮಾತನಾಡಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಸಾರಿ ಸಿಂಗ್ ಸದರ್, ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸಲು ಕುಟುಂಬದವರು ಎಲ್ಲ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಮದುವೆ ಮಾಡುತ್ತಾರೆ. ಜೀವನದಲ್ಲಿ ಎದುರಾಗಬಹುದಾದ ಅಶುಭ ಘಟನೆಗಳಿಂದ ಮಗುವನ್ನು ರಕ್ಷಿಸಲು ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.

ಮಗುವಿಗೆ ಮೇಲಿನ ಎರಡು ಹಲ್ಲುಗಳು ಮೊದಲು ಮೂಡುವುದನ್ನು ನಾವು ಮಗುವಿಗೆ ದುರದೃಷ್ಟ ಎಂದು ಪರಿಗಣಿಸುತ್ತೇವೆ. ನನ್ನ ಮೊಮ್ಮಗನಿಗೂ ಹೀಗೆ ಮೇಲಿನ ಹಲ್ಲುಗಳೇ ಮೊದಲು ಬಂದಿದ್ದವು. ಈ ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ, ಅವರ ನಿಯಮಿತ ಮದುವೆ ಸಂಪ್ರದಾಯದಂತೆ ನಡೆಯುತ್ತದೆ. ಹೀಗೆ ಮೇಲಿನ ಹಲ್ಲು ಮೊದಲಿಗೆ ಮೂಡಿದ ಮಕ್ಕಳು ಬೆಳೆದ ನಂತರ ಅಥವಾ ಅವರ ಸಂಗಾತಿ ಚಿಕ್ಕ ವಯಸ್ಸಿನಲ್ಲಿಯೇ ಸಾಯುವುದನ್ನು ನಮ್ಮ ಹಿರಿಯರು ಗಮನಿಸಿದ್ದಾರೆ.

ಆದ್ದರಿಂದ, ಮಕ್ಕಳು 5 ವರ್ಷ ವಯಸ್ಸನ್ನು ತಲುಪುವ ಮೊದಲು ಒಂದು ಕಾಲುವೆ ಅಥವಾ ಮರಕ್ಕೆ ಮದುವೆ ಮಾಡುತ್ತಾರೆ. ಅವರ ಜ್ಯೋತಿಷ್ಯದಲ್ಲಿರುವ ದುಷ್ಟಶಕ್ತಿಗಳನ್ನು ನಿವಾರಿಸಲು ಇದನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪರಸ್ನಾಥ್ ಬೆಟ್ಟ ರಕ್ಷಣೆಗಾಗಿ ಆದಿವಾಸಿಗಳ ಹೋರಾಟ: 'ಮರಂಗ್ ಬರು' ಎಂದು ಕರೆಯಲಾಗುವ ಜಾರ್ಖಂಡ್‌ನ ಪರಸ್ನಾಥ್ ಬೆಟ್ಟಗಳ ರಕ್ಷಣೆಗಾಗಿ ಮಂಗಳವಾರದಿಂದ ಒಂದು ತಿಂಗಳ ಅವಧಿಯ ಆಂದೋಲನವನ್ನು ಪ್ರಾರಂಭಿಸುವುದಾಗಿ ಆದಿವಾಸಿ ಸೆಂಗೆಲ್ ಅಭಿಯಾನ್ (ASA) ಘೋಷಿಸಿದೆ. ಮಂಗಳವಾರದಿಂದ ಪ್ರಾರಂಭವಾಗುವ ತನ್ನ ಯಾತ್ರೆಯು ಜೈನ ಸಮುದಾಯದ ಹಿಡಿತದಿಂದ ಮರಂಗ್ ಬರುವನ್ನು ಉಳಿಸುವ ಗುರಿಯನ್ನು ಹೊಂದಿದೆ ಎಂದು ಎಎಸ್​ಎ ಹೇಳಿದೆ. ಜೈನರು ಮತ್ತು ಆದಿವಾಸಿಗಳು ಈ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ ಮತ್ತು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜೈನರು ಇದನ್ನು ಪರಸ್ನಾಥ್ ಬೆಟ್ಟ ಎಂದು ಕರೆದರೆ, ಆದಿವಾಸಿಗಳು ಇದನ್ನು ಮರಂಗ್ ಬರು ಎಂದು ಕರೆಯುತ್ತಾರೆ.

ಇದನ್ನೂ ಓದಿ: ಕೊಡಗಿನ ವಿಶಿಷ್ಠ ಸಂಸ್ಕೃತಿಯ ಪ್ರತೀಕ ಕೋವಿ ಹಬ್ಬ ಆಚರಣೆ.. ಕೊಡವರ ಧಾರ್ಮಿಕ ಸಂಕೇತ ಈ ಬಂದೂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.